ಆ್ಯಪ್ನಗರ

Episode 20 Highlights: ವಾಸುಕಿ ವೈಭವ್‌ರನ್ನು ವರಿಸಿದ ಭೂಮಿ ಶೆಟ್ಟಿ!

ದೀಪಿಕಾಗೆ ಕಾಳು ಹಾಕಕ್ಕೆ ನೋಡಿದ್ರು ಆಗಲಿಲ್ಲ, ಪ್ರಿಯಾಂಕಾಗೂ ಟ್ರೈ ಮಾಡಿದರು, ಆಗಲಿಲ್ಲ ಎಂದು ಜೈ ಜಗದೀಶ್ ಹಾಗೂ ಸುಜಾತಾ ಮಾತನಾಡಿಕೊಂಡರು. ಚಂದನ್ ಆಚಾರ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.

Vijaya Karnataka Web 2 Nov 2019, 11:36 am
ಬಿಗ್ ಬಾಸ್ ಮನೆಯಲ್ಲಿ ಸ್ವಯಂವರದ ಮೂಲಕ ಒಂದು ಮದುವೆ ಕಾರ್ಯಕ್ರಮ ಸಹ ಆಗಿದೆ. ಸ್ವಯಂವರದ ಮೂಲಕ ವಾಸುಕಿ ವೈಭವ್ ಮತ್ತು ಭೂಮಿ ಶೆಟ್ಟಿಗೆ ಮದುವೆ ಮಾಡಲಾಯಿತು. ಇದಕ್ಕೂ ಮುನ್ನ ತಾವು ವರಿಸುವವರು ಹೇಗಿರಬೇಕು ಎಂಬ ಪ್ರಶ್ನೆಗೆ ಒಬ್ಬೊಬ್ಬರು ಒಂದು ಉತ್ತರ ನೀಡಿದರು.
Vijaya Karnataka Web IMG-20191101-WA0002


ನನ್ನನ್ನು ಮದುವೆಯಾಗುವ ಹುಡುಗ ಧೀರ ಶೂರ ಇದೆಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಮಾನವೀಯ ಮನುಷ್ಯನಾಗಿರಬೇಕು. ನನ್ನ ಅರ್ಥ ಮಾಡಿಕೊಳ್ಳಬೇಕು. ಸಮಾನತೆಯ ಭಾವ ಇರಬೇಕು. ದೇಶವಿದೇಶ ಸುತ್ತಲು ಜೊತೆಯಾಗಿ ಬರಬೇಕು ಎಂದು ಹೇಳಿದರು ದೀಪಿಕಾ.

ಯಾರ ರೀತಿಯ ಹಾಡು ಹಾದಬೇಕು ಎಂದಾಗ ಶೃಂಗಾರ ಹಾಡು ಬೇಕು ಎಂದು ಹೇಳಿದಾಗ, ವಾಸುಕಿ ವೈಭವ್ ಅವರು ರಾಜ್‍ಕುಮಾರ್ ಅವರ "ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ" ಹಾಡನ್ನು ಹಾಡಿದರು.

ಇದಕ್ಕಿಂತ ಮೊದಲು "ಪರವಶನಾದೆನು ಅರಿಯುವ ಮುನ್ನವೇ" ಹಾಡಿಗೆ ಸಖತ್ ಸ್ಟೆಪ್ ಹಾಕಿ ಮನೆ ಮಂದಿಯ ಮನಗೆದ್ದರು ಕಿಶನ್‌. ಅವರನ್ನು ಎಲ್ಲರೂ ಅಭಿನಂದಿಸಿದರು. ಡ್ಯಾನ್ಸ್ ಮುಗಿಯುತ್ತಿದ್ದಂತೆ ಪ್ರಿಯಾಂಕಾಗೆ ಹೂಗುಚ್ಛ ನೀಡಿ ಮನೆಯ ಮಹಾರಾಣಿಯ ಮನವನ್ನೂ ಗೆದ್ದರು ಕಿಶನ್.

ಯಾವುದೋ ಈ ಗೊಂಬೆ ಯಾವುದೋ ಹಾಡಿಗೆ ಎಲ್ಲರೂ ಹೆಜ್ಜೆ ಹಾಕಿದರು ಚೆನ್ನಾಗಿತ್ತು. ಎಚ್ ಎಸ್ ವೆಂಕಟೇಶ್ ಮೂರ್ತಿ ಅವರ ವಿರಚಿತ ನಾಟಕ 'ಉರಿಯ ಉಯ್ಯಾಲೆ'ಯನ್ನು ಅದ್ಭುತವಾಗಿ ಪ್ರದರ್ಶಿಸಿದರು ಚೈತ್ರಾ ಕೋಟೂರ್.

ದೀಪಿಕಾಗೆ ಕಾಳು ಹಾಕಕ್ಕೆ ನೋಡಿದ್ರು ಆಗಲಿಲ್ಲ, ಪ್ರಿಯಾಂಕಾಗೂ ಟ್ರೈ ಮಾಡಿದರು, ಆಗಲಿಲ್ಲ ಎಂದು ಜೈ ಜಗದೀಶ್ ಹಾಗೂ ಸುಜಾತಾ ಮಾತನಾಡಿಕೊಂಡರು. ಚಂದನ್ ಆಚಾರ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ