ಆ್ಯಪ್ನಗರ

Episode 24 Highlights: 'ರಣರಂಗ'ವಾಯಿತು ಬಿಗ್ ಬಾಸ್ ಮನೆ

ಜೈ ಜಗದೀಶ್ ಅವರು ಚೈತ್ರಾ ಕೋಟೂರ್ ಅವರ ಕಡೆಗೆ ತೆಂಗಿನಕಾಯಿ ಎಸೆದಿದ್ದು ಮನೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಚೈತ್ರಾ ಕೋಟೂರ್ ಅವರು ಎಸೆಯಿರಿ ನೋಡೋಣ ಎಂದು ಜೈ ಜಗದೀಶ್ ಅವರನ್ನು ದಬಾಯಿಸಿ ಕೇಳುತ್ತಿದ್ದರು.

Vijaya Karnataka Web 5 Nov 2019, 11:55 pm
ಬಿಗ್ ಬಾಸ್ ಮನೆ ಈ ವಾರ ಅಕ್ಷರಶಃ ರಣರಂಗವಾಯಿತು. ಇದಕ್ಕೆ ಕಾರಣವಾಗಿದ್ದು ಬಿಗ್ ಬಾಸ್ ನೀಡಿದ ಲಗ್ಜುರಿ ಬಜೆಟ್ ಟಾಸ್ಕ್. ಈ ಟಾಸ್ಕ್ ಹೆಸರು 'ರಣರಂಗ'. ಅದರಂತೆ ಮನೆಯ ಸದಸ್ಯರ ನಡುವೆ ಎರಡು ತಂಡಗಳನ್ನಾಗಿ ರಚಿಸಲಾಯಿತು.
Vijaya Karnataka Web ಬಿಗ್‌ಬಾಸ್ ಕನ್ನಡ


ತಲಾ ಏಳು ಮಂದಿಯಂತೆ ದೀಪಿಕಾ ಹಾಗೂ ಭೂಮಿ ಶೆಟ್ಟಿ ನಾಯಕತ್ವದಲ್ಲಿ ತಂಡಗಳು ರಚನೆಯಾದವು. ಈ ಟಾಸ್ಕ್‌ನಲ್ಲಿ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದೂ ಆಯಿತು. ಆಟದಲ್ಲಿ ದೈಹಿಕವಾಗಿ ಕೆಲವರು ಪೆಟ್ಟು ಮಾಡಿಕೊಂಡಿದ್ದೂ ಆಯಿತು.

ಮುಖ್ಯವಾಗಿ ಜೈ ಜಗದೀಶ್ ಅವರು ಚೈತ್ರಾ ಕೋಟೂರ್ ಅವರ ಕಡೆಗೆ ತೆಂಗಿನಕಾಯಿ ಎಸೆದಿದ್ದು ಮನೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಚೈತ್ರಾ ಕೋಟೂರ್ ಅವರು ಎಸೆಯಿರಿ ನೋಡೋಣ ಎಂದು ಜೈ ಜಗದೀಶ್ ಅವರನ್ನು ದಬಾಯಿಸಿ ಕೇಳುತ್ತಿದ್ದರು.

ಇದರಿಂದ ರೊಚ್ಚಿಗೆದ್ದ ಜೈ ಜಗದೀಶ್ ತೆಂಗಿನಕಾಯನ್ನು ಜೋರಾಗಿ ಚೈತ್ರಾ ಕೋಟೂರ್ ಕಡೆಗೆ ಎಸೆದೇ ಬಿಟ್ಟರು. ಬಳಿಕ ನಿಮಗೆ ಬೀಳಬಾರದು ಅಂತಲೇ ಎಸೆದದ್ದು ಎಂದರು. ಒಂದು ವೇಳೆ ತೆಂಗಿನಕಾಯಿ ಬಿದ್ದಿದ್ದರೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ರಾದ್ಧಾಂತವೇ ಆಗುತ್ತಿತ್ತು.

ರಣರಂಗ ಟಾಸ್ಕ್‌ನಲ್ಲಿ ಪ್ರಿಯಾಂಕಾ ಮೇಲೆ ಶೈನ್ ಶೆಟ್ಟಿ ಬಲವಾಗಿ ಬಿದ್ದರು. ಕೆಲವು ಸಲ ಪ್ರಿಯಾಂಕಾ ಅವರ ತಲೆಗೂ ಪೆಟ್ಟು ಬಿತ್ತು. ಇವೆಲ್ಲವನ್ನೂ ಸಹಿಕೊಂಡರು. ಸಿಕ್ಕಾಪಟ್ಟೆ ಮಾತಿನ ಜಗಳ, ಕಿರುಚಾಟ ಮನೆಯಲ್ಲಿ ನಡೆಯಿತು.

ಇನ್ನೊಂದು ಕಡೆ ಚೈತ್ರಾ ಕೋಟೂರ್ ಕ್ಯಾಮೆರಾ ಮುಂದೆ ನಿಂತು, ಬಿಗ್ ಬಾಸ್ ನಾನು ನಿಜವಾಗಿಯೂ ನಾನು ನಾನಾಗಿಲ್ಲ. ನನ್ನಲ್ಲಿ ಏನೋ ಬದಲಾವಣೆ ಕಾಣುತ್ತಿದೆ. ಮನೆಯಿಂದ ಹೊರಗಿದ್ದಾಗ ಯಾರಿಗೂ ಕೇರ್ ಮಾಡುತ್ತಿರಲಿಲ್ಲ ನಾನು ಎಂದೆಲ್ಲಾ ಮಾತನಾಡಿದರು. ಬಳಿಕ ಕ್ಯಾಮೆರಾ ಮುಂದೆ ಕಣ್ಣೀರನ್ನೂ ಇಟ್ಟರು.

ಬಿಗ್ ಬಾಸ್ ಮನೆಯ ಸದಸ್ಯರಿಗೆ ಕೆಲವು ವಸ್ತುಗಳನ್ನು ತೋರಿಸಿ ಅದರ ಹೆಸರನ್ನು ಕನ್ನಡಲ್ಲಿ ಹೇಳುವಂತೆ ಟಾಸ್ಕ್ ನೀಡಲಾಗಿತ್ತು. ಬಹುತೇಕರಿಗೆ ಕನ್ನಡ ಪದಗಳು ಗೊತ್ತೇ ಆಗಲಿಲ್ಲ. ಶಿರಸ್ತ್ರಾಣ, ಸೀಸದ ಕಡ್ಡಿ, ಕೈವಾರ, ನಿಘಂಟು, ಪಂಕ ಎಂಬ ಕನ್ನಡ ಪದಗಳು ಗೊತ್ತಿರಲಿಲ್ಲ ಎಂಬುದು ಬೇಸರದ ಸಂಗತಿ.

ಕಳೆದ ವಾರ ಕದ್ದುಮುಚ್ಚಿ ಚಾಕೋಲೇಟ್‍ಗಳನ್ನು ತಿನ್ನುತ್ತಿದ್ದ ಭೂಮಿ ಶೆಟ್ಟಿಗೆ ಸುದೀಪ್ ಎಚ್ಚರಿಸಿದ್ದರು. ಆದರೆ ಅವರು ಈ ವಾರವೂ ಅದನ್ನೇ ಮುಂದುವರೆಸಿದ್ದಾರೆ. ಸಕ್ಕರೆ ತಿನ್ನುವುದು, ಚಾಕೋಲೇಟ್‌ಗಳನ್ನು ಸವಿಯುವ ಕೆಲಸ ಮುಂದುವರೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ