ಆ್ಯಪ್ನಗರ

Episode 45: ಮನೆ ಮಂದಿಯ ನಿದ್ದೆಗೆಡಿಸಿದ ಕಿಶನ್-ರಕ್ಷಾ ಲವ್ ಸ್ಟೋರಿ!

ಮನೆಯ ಎಲ್ಲಾ ಮಹಿಳಾ ಸದಸ್ಯರು ಏನೋ ಕಳೆದುಕೊಂಡಂತಿದೆ. ಇದಕ್ಕೆ ಕಾರಣ ರಕ್ಷಾರ ಎಂಟ್ರಿ. ಮನೆ ಮಂದಿರ ಸದಸ್ಯರ ನಡುವೆ ಈ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ.

Vijaya Karnataka Web 27 Nov 2019, 12:16 pm
ಮೆಂಟಲ್ ಹೋಜಾವಾ ಎಂಬ ಹಾಡಿನ ಮೂಲಕ ಮನೆ ಮಂದಿಯನ್ನು ನಿದ್ದೆಯಿಂದ ಎಬ್ಬಿಸಿದರು ಬಿಗ್ ಬಾಸ್. ಬಹುತೇಕ ಈ ಹಾಡಿನ ರೀತಿಯೇ ಇದೆ ಬಿಗ್ ಬಾಸ್ ಮನೆ ಮಂದಿಯ ಪರಿಸ್ಥಿತಿ. ಇದಕ್ಕೆ ಕಾರಣ ವೈಲ್ಡ್ ಕಾರ್ಡ್ ಎಂಟ್ರಿ ನೀಡಿರುವ ರಕ್ಷಾ ಆಗಮನ.
Vijaya Karnataka Web ಬಿಗ್ ಬಾಸ್ ಕನ್ನಡ


ಮನೆಯ ಎಲ್ಲಾ ಮಹಿಳಾ ಸದಸ್ಯರು ಏನೋ ಕಳೆದುಕೊಂಡಂತಿದೆ. ಇದಕ್ಕೆ ಕಾರಣ ರಕ್ಷಾರ ಎಂಟ್ರಿ. ಮನೆ ಮಂದಿರ ಸದಸ್ಯರ ನಡುವೆ ಈ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ.

Sujatha Elimination: ಬಿಗ್ ಬಾಸ್ ಮನೆಯ ಅನ್ನಪೂರ್ಣೇಶ್ವರಿ ಸುಜಾತಾ ಹೇಳಿದ್ದೇನು?

ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಲಗ್ಜುರಿ ಬಜೆಟ್ ಟಾಸ್ಕ್ ಲಗ್ಜುರಿ 'ಗೆಲ್ಲೋದೊಂದೇ ಗುರಿ' ನೀಡಿದ್ದಾರೆ. ಅಡುಗೆಮನೆಯಲ್ಲಿ ಹೀಗೇ ತಮಾಷೆಗೆ ಚರ್ಚೆ ನಡೆಯುತ್ತಿರಬೇಕಾದರೆ ಕಿಶನ್‌ರನ್ನು ಎಲ್ಲರೂ ರೇಗಿಸುತ್ತಿದ್ದರು. ಹಾಗಿದ್ದರೆ ಚಂದನಾ ನಿನಗೇನು ಆಗಬೇಕು ಎಂದಾಗ ಲೈಫ್ ಲಾಂಗ್ ನಿನ್ನ ತಂಗಿ ತರಹ ನೋಡಿಕೊಳ್ತೀನಿ ಎಂದು ಮನೆ ಮಂದಿಯ ಕೈಯಲ್ಲಿ ಉಗಿಸಿಕೊಂಡಿದ್ದಾನೆ ಕಿಶನ್.

Episode 44 Highlights: ಬಿಗ್ ಮನೆಯಲ್ಲಿ ಶುರುವಾಯ್ತು ಹೊಸ ಲವ್ ಸ್ಟೋರಿ!

ಮನೆ ಮಂದಿಯ ನಿದ್ದೆ ಕೆಡಿಸಿದ ಕಿಶನ್-ರಕ್ಷಾರ ಲವ್ ಸ್ಟೋರಿ
ಇನ್ನೊಂದು ಕಡೆ ರಕ್ಷಾ ಅಳುತ್ತಿದ್ದಾರೆ ಎಂದು ಹೇಳಿ ಕಿಶನ್‌ರನ್ನು ಗೋಳಾಡಿಸಿದರು. ಒಟ್ಟಾರೆ ರಕ್ಷಾ ಬಂದು ಎರಡು ದಿನ ಆಗುತ್ತಿದ್ದರೂ ಇನ್ನೂ ಮನೆಯಲ್ಲಿ ಅವರ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಒಟ್ಟಾರೆ ತನ್ನ ಮತ್ತು ರಕ್ಷಾರ ನಡುವೆ ಬ್ರೇಕಪ್ ಆಗಲು ಕಾರಣ ಏನು, ಎತ್ತ ಎಂಬುದನ್ನು ಚೆಂದದ ಕಥೆ ಕಟ್ಟಿ ಹೇಳಿದ್ದಾರೆ ಕಿಶನ್. ಅದನ್ನು ಮನೆ ಮಂದಿ ಸಂಪೂರ್ಣ ನಂಬಿದ್ದಾರೆ. ಇದು ಇವರಿಬ್ಬರೂ ಆಡುತ್ತಿರುವ ಟಾಸ್ಕ್ ಎಂಬುದು ಎಲ್ಲೂ ಅನುಮಾನ ಬಂದಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಮ್ಯಾಜಿಕ್ ಶೋ
ಬಿಗ್ ಬಾಸ್ ಮನೆಗೆ ಜಾದೂಗಾರರಾದ ಕುದ್ರೋಳಿ ಗಣೇಶ್ ಬಂದು ರಂಜಿಸಿದರು. ಈ ಮ್ಯಾಜಿಕ್ ಶೋ ನೋಡುತ್ತಾ ನೋಡುತ್ತಾ ಮೈರೆತ ಮನೆಗೆ ಮಂದಿಗೆ ಕೊನೆಯಲ್ಲಿ ಬಿಗ್ ಬಾಸ್ ಒಂದು ಶಾಕನ್ನೂ ಕೊಟ್ಟರು. ಅದೇನು ಎಂದರೆ ಮತ್ತೆ ಚೈತ್ರಾ ಕೋಟೂರ್ ಅವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿಸಿದ್ದಾರೆ.

ಒಟ್ಟಾರೆ ಮನೆಯ ಸದಸ್ಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ ಬಿಗ್ ಬಾಸ್. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಂದು ಶಾಕ್ ಕೊಟ್ಟರೆ, ಈಗ ಚೈತ್ರಾ ಕೋಟೂರ್ ಅವರನ್ನು ಮನೆಗೆ ಕಳುಹಿಸಿ ಇನ್ನೊಂದು ಶಾಕ್ ಕೊಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ