ಆ್ಯಪ್ನಗರ

Episode 47 Highlights: ದೀಪಿಕಾಗೆ ಸ್ನಾನವನ್ನು ಮಾಡುವಾಗ ಸೋಪು ನಾನಾಗಲಾ ಎಂದ ಶೈನ್!

ನನ್ನ ಗಡ್ಡದ ಹಿಂದೆ ಏನೋ ಕುತಂತ್ರ ನಡೆಯುತ್ತಿದೆ ಎಂದು ಅನುಮಾನಿಸುತ್ತಲೇ ಇದ್ದಾರೆ. ನಾನೇ ಗಡ್ಡ ತೆಗೆಯುತ್ತೀನಿ ಎಂದರೂ ಶೈನ್ ಸಹಕರಿಸುತ್ತಿಲ್ಲ. ಮದುವೆಯಾದ ಬಳಿಕ ದೀಪಿಕಾ ಪಡುಕೋಣೆಯೇ ರಣವೀರ್ ಸಿಂಗ್‌ಗೆ ಗಡ್ಡ ತೆಗೆದದ್ದು ಎಂದು ಹೇಳಿದರು.

Vijaya Karnataka Web 29 Nov 2019, 2:51 pm

ಬಿಗ್ ಬಾಸ್ ನೀಡಿರುವ ಸೀಕ್ರೆಟ್ ಟಾಸ್ಕ್ ಪ್ರಕಾರ ಶೈನ್ ಶೆಟ್ಟಿಯ ಗಡ್ಡಕ್ಕೆ ಕತ್ತರಿ ಹಾಕಿಸಬೇಕಾಗಿದೆ ದೀಪಿಕಾ ದಾಸ್. ಆದರೆ ಎಲ್ಲೂ ಡೌಟ್ ಬಾರದಂತೆ, ವಿಷಯ ತಿಳಿಸದಂತೆ ಅವರ ಗಡ್ಡಕ್ಕೆ ಕತ್ತರಿ ಹಾಕಿಸಬೇಕಾಗಿದೆ ದೀಪಿಕಾ.
Vijaya Karnataka Web ದೀಪಿಕಾ ದಾಸ್


ಈ ಟಾಸ್ಕನ್ನು ಚಾಕಚಕ್ಯತೆಯಿಂದ ನಿಭಾಯಿಸಲು ದೀಪಿಕಾ ಸಮಯ ಸಿಕ್ಕಾಗಲೆಲ್ಲಾ ಪ್ರಯತ್ನಿಸುತ್ತಲೇ ಇದ್ದಾರೆ. ದೀಪಿಕಾ ಕೇಳುತ್ತಿರುವುದನ್ನು ನೋಡಿದರೆ ಶೈನ್ ಶೆಟ್ಟಿಗೆ ಗಡ್ಡನ ಹಿಂದಿನ ಹುನ್ನಾರ ಅರ್ಥವಾದಂತಿದೆ.

Episode 45: ಮನೆ ಮಂದಿಯ ನಿದ್ದೆಗೆಡಿಸಿದ ಕಿಶನ್-ರಕ್ಷಾ ಲವ್ ಸ್ಟೋರಿ!

ನನ್ನ ಗಡ್ಡದ ಹಿಂದೆ ಏನೋ ಕುತಂತ್ರ ನಡೆಯುತ್ತಿದೆ ಎಂದು ಅನುಮಾನಿಸುತ್ತಲೇ ಇದ್ದಾರೆ. ನಾನೇ ಗಡ್ಡ ತೆಗೆಯುತ್ತೀನಿ ಎಂದರೂ ಶೈನ್ ಸಹಕರಿಸುತ್ತಿಲ್ಲ. ಮದುವೆಯಾದ ಬಳಿಕ ದೀಪಿಕಾ ಪಡುಕೋಣೆಯೇ ರಣವೀರ್ ಸಿಂಗ್‌ಗೆ ಗಡ್ಡ ತೆಗೆದದ್ದು ಎಂದು ಹೇಳಿದರು. ಈ ಮಾತು ಪ್ರಿಯಾಂಕಾ ಬಾಯಿಗೆ ಬಿಸಿ ತುಪ್ಪ ಸುರಿದಂತಾಗಿದೆ.

ಜೊತೆಗೆ ಅವರ ಕಣ್ಣಿನ ನೋಟ ನೋಡುತ್ತಾ ಕಳ್ಳಿ ಇವಳು ಕಳ್ಳಿ ಇವಳು ಎಂದು ಹಾಡುತ್ತಾ ಕೆಣಕಿದರು. ಜೊತೆಗೆ ನಾನು ಸ್ನಾನಕ್ಕೆ ಹೋಗ್ತೀನಿ ಎಂದಾಗ ನೀ ಸ್ನಾನ ಮಾಡುವಾಗ ಸೋಪು ನಾನಾಗಲಾ ಎಂದು ಹಾಡಿ ಕೆಟ್ಟದಾಗಿತ್ತಾ? ಎಂದು ಕೇಳಿದ ಶೈನ್. ಇದಕ್ಕೆ ಪ್ರಿಯಾಂಕಾ ತುಂಬಾ ಕೆಟ್ಟದಾಗಿತ್ತು ಎಂದು ನಗುನಗುತ್ತಲೇ ಹೇಳಿದರು.
ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ ರಕ್ಷಾ ಸೋಮಶೇಖರ್ ಹಿನ್ನಲೆ ಏನು ಗೊತ್ತಾ?

ರಕ್ಷಾ ಜೊತೆಗೆ ವಾಸುಕಿ ವೈಭವ್ ಔತಣ ಕೂಟ
ಇನ್ನೊಂದು ಕಡೆ ಬಿಗ್ ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ ರಕ್ಷಾ ಗೆದ್ದಿದ್ದಾರೆ. ಹಾಗಾಗಿ ಇಂದು ರಾತ್ರಿ ಅವರು ಒಬ್ಬ ಅವಿವಾಹಿತ ಪುರುಷನನ್ನು ಔತಣಕ್ಕೆ ಕರೆದುಕೊಂಡು ಹೋಗಬೇಕು. ಎಲ್ಲರೂ ರಕ್ಷಾ ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ಯೋಚಿಸುತ್ತಿರಬೇಕಾರೆ ವಾಸುಕಿ ವೈಭವ್‌ರನ್ನು ಔತಣಕ್ಕೆ ಆಹ್ವಾನಿಸಿದ್ದಾರೆ.

ವಾಸುಕಿಯನ್ನು ರೆಡಿ ಮಾಡಿ ಮುಂದೆ ನಿಂತು ಸ್ವತಃ ಕಿಶನ್ ಔತಣಕ್ಕೆ ಕಳುಹಿಸಿದ. ಒಳ್ಳೆ ಮದುಮಗನ ತರಹ ರೆಡಿಯಾಗಿದ್ದರು. ಆದರೆ ಇವರಿಬ್ಬರ ಡೇಟಿಂಗ್ ಪ್ರಿಯಾಂಕಾ ಹಾಗೂ ಶೈನ್ ಶೆಟ್ಟಿಯಷ್ಟು ರೊಮ್ಯಾಂಟಿಕ್ ಆಗಿರಲಿಲ್ಲ. ಇಬ್ಬರೂ ಪಾರ್ಕಿಗೆ ಬಂದ ಮಕ್ಕಳ ತರಹ ಸಮಯ ಕಳೆದದ್ದು ತಮಾಷೆಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ