ಆ್ಯಪ್ನಗರ

Episode 48 Highlights: ತನ್ನ ಪ್ರೇಮ ವೈಫಲ್ಯದ ಬಗ್ಗೆ ಬಾಯ್ಬಿಟ್ಟ ದೀಪಿಕಾ ದಾಸ್

ಚೈತ್ರಾ ಕೋಟೂರ್ ವಿಶೇಷ ಚಟುವಟಿಕೆಯಲ್ಲಿ ಗೆದ್ದ ಬಳಿಕ ರಾತ್ರಿ ಔತಣಕ್ಕೆ ಆಯ್ಕೆ ಮಾಡಿಕೊಂಡಿದ್ದು ಚಂದನ್ ಆಚಾರ್‌ರನ್ನು. ಇಬ್ಬರನ್ನು ಸೂಚಿಸಿದ್ದರು ಬಿಗ್ ಬಾಸ್. ಪೃಥ್ವಿ ಹಾಗೂ ಚಂದನ್ ಆಚಾರ್. ಇವರಲ್ಲಿ ಚಂದನ್‌ರನ್ನು ಆಯ್ಕೆ ಮಾಡಿದರು.

Vijaya Karnataka Web 30 Nov 2019, 10:27 am

ಬಿಗ್ ಬಾಸ್ ಮನೆಯಲ್ಲಿ ಒಂದು ಸರ್‌ಪ್ರೈಸ್ ಕಾದಿತ್ತು. ಕಳೆದ 47 ದಿನಗಳಿಂದ ಬೆಳೆಸಿದ್ದ ಗಡ್ಡಕ್ಕೆ ಇಂದು ಮುಕ್ತಿ ಸಿಕ್ಕಿದೆ. ಶೈನ್ ಶೆಟ್ಟಿ ಕೊನೆಗೂ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿಕೊಂಡಿದ್ದಾರೆ. ಈ ಮೂಲಕ ಸೀಕ್ರೆಟ್ ಟಾಸ್ಕ್‌ನಲ್ಲಿ ದೀಪಿಕಾ ದಾಸ್ ಗೆದ್ದಿದ್ದಾರೆ.
Vijaya Karnataka Web ಬಿಗ್ ಬಾಸ್ ಕನ್ನಡ


ಕೊನೆಯದಾಗಿ ಎಂಬಂತೆ ಈವತ್ತಾದರೂ ಗಡ್ಡ ತೆಗೆಯಿರಿ ಎಂದು ಹೇಳಿದರು ದೀಪಿಕಾ. ಇಲ್ಲ ಇಲ್ಲ ಎನ್ನುತ್ತಲೇ ಕೊನೆಗೆ ತಮ್ಮ ಗಡ್ಡವವನ್ನು ತೆಗೆದಿದ್ದಾರೆ. ಅವರನ್ನು ನೋಡಿದ ಮನೆಯ ಸದಸ್ಯರು ಚಕಿತರಾಗಿದ್ದಾರೆ.

ಇಷ್ಟು ದಿನ ಗಡ್ಡದಲ್ಲಿದ್ದ ಶೈನ್ ಶೆಟ್ಟಿ ಈಗ ಕ್ಲೀನ್ ಶೇವ್ ಮಾಡಿಕೊಂಡು ಗುರುತೇ ಸಿಗದಂತಾಗಿದ್ದಾರೆ. ಬಿಗ್ ಬಾಸ್ ಮನೆಗೆ ಹೊಸ ಅತಿಥಿ ಬಂದಂತಿದೆ. ತುಂಬಾ ಚಿಕ್ಕವರಾಗಿ ಕಾಣುತ್ತಿದ್ದೀರ ಎಂದು ದೀಪಿಕಾ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ ಶೈನ್‌ಗೆ.

Episode 47 Highlights: ದೀಪಿಕಾಗೆ ಸ್ನಾನವನ್ನು ಮಾಡುವಾಗ ಸೋಪು ನಾನಾಗಲಾ ಎಂದ ಶೈನ್!

ಚೈತ್ರಾ ಕೋಟೂರ್ ವಿಶೇಷ ಚಟುವಟಿಕೆಯಲ್ಲಿ ಗೆದ್ದ ಬಳಿಕ ರಾತ್ರಿ ಔತಣಕ್ಕೆ ಆಯ್ಕೆ ಮಾಡಿಕೊಂಡಿದ್ದು ಚಂದನ್ ಆಚಾರ್‌ರನ್ನು. ಇಬ್ಬರನ್ನು ಸೂಚಿಸಿದ್ದರು ಬಿಗ್ ಬಾಸ್. ಪೃಥ್ವಿ ಹಾಗೂ ಚಂದನ್ ಆಚಾರ್. ಇವರಲ್ಲಿ ಚಂದನ್‌ರನ್ನು ಆಯ್ಕೆ ಮಾಡಿದರು.

ಔತಣದಲ್ಲಿ ಇಟ್ಟಿದ್ದ ಹೃದಯದ ಆಕಾರದ ಬಲೂನ್ ಹಿಡಿದ ಚೈತ್ರಾ, ನಿಮ್ಮ ಹೃದಯಾನು ಇದೇ ರೀತಿ ಡೆಲಿಕೇಟ್ ಆಗಿದೆಯಾ? ಎಂದಾಗ ನನ್ನ ಹತ್ತರ ಜಗತ್ತಿಗೆ ಕೊಡೋ ಅಷ್ಟೂ ಪ್ರೀತಿ ಇದೆ. ಇಲ್ಲಿ ಕರೆಕ್ಟ್ ಆಗಿ ಉತ್ಖನನ ಮಾಡಿದರೆ ನನ್ನ ಹೃದಯದಲ್ಲಿನ ಪ್ರೀತಿ ಸಿಗುತ್ತದೆ ಎಂದರು ಚಂದನ್ ಆಚಾರ್.

ಕುಂದಾಪುರ ಸ್ಟೈಲ್‌ನಲ್ಲಿ ದೀಪಿಕಾಗೆ ಪ್ರಪೋಸ್ ಮಾಡಿದ ಶೈನ್ ಶೆಟ್ಟಿ

ಮಧ್ಯರಾತ್ರಿ ಡ್ಯುಯೆಟ್ ಹಾಡಿದ ಚೈತ್ರಾ ಕೋಟೂರ್ ಹಾಗೂ ಚಂದನ್ ಆಚಾರ್ ಬಳಿಕ ಚೇತೋಹಾರಿಯಾಗಿ ಕಳೆಯುವುದನ್ನು ಬಿಟ್ಟು ಅದೂ ಇದೂ ಚರ್ಚಿಸುತ್ತಾ ಕಾಲಕಳೆದರು. ನೀನಾಸಂಗೆ ಬಂದಿದ್ದಾಗ ಇದ್ದ ಆ ಚೈತ್ರಾ ಮತ್ತೆ ನೀನಾಗಬೇಕು ಎಂದು ಚಂದನ್ ಹೇಳಿದರು.

ದೀಪಿಕಾ ದಾಸ್ ಲವ್ ಸ್ಟೋರಿ
ಅಚಾನಕ್ ಆಗಿ ಒಬ್ಬರನ್ನು ಮೀಟ್ ಆದೆ. ಅವರು ಮೆಜಿಷಿಯನ್. ನನ್ನ ನಗುವಿನ ಹಿಂದೆ ಒಂದು ಮುಖ ಇದೆ ಎಂದು ಅವರಿಗೆ ಗೊತ್ತಾಯಿತು. ಸ್ವಲ್ಪ ದಿನ ಏನಿಲ್ಲ ಎಂದು ಮುಚ್ಚಿಟ್ಟೆ. ಅದನ್ನು ಹಂಚಿಕೊಂಡೆ. ಅವರು ತುಂಬಾ ಸಪೋರ್ಟಿವ್ ಆಗಿ ನಿಂತರು. ನನ್ನನ್ನು ಅರ್ಥ ಮಾಡಿಕೊಳ್ತಾರೆ, ನಾನು ತುಂಬಾ ನಂಬಿದ್ದೆ. ಸ್ವಲ್ಪ ದಿನಗಳ ಬಳಿಕ ಅವರು ಫೇಕ್ ಅನ್ನಿಸಿತು. ಎರಡು ವರ್ಷಗಳ ಕಾಲ ನನ್ನ ಜೊತೆಗೆ ಅಷ್ಟೇ ಅಲ್ಲದೆ ಇನ್ನೊಬ್ಬ ಹುಡುಗಿಯ ಜೊತೆಗೆ ಅಫೇರ್ ಇತ್ತು. ಇದು ಗೊತ್ತಾಗಿ, ಅವರಿಂದ ದೂರ ಆದೆ. ಈಗಲೂ ಮಾತನಾಡುತ್ತಾರೆ. ಆದರೆ ಲವ್ ಏನೂ ಇಲ್ಲ ಎಂದಿದ್ದಾರೆ ದೀಪಿಕಾ ದಾಸ್.

ಕುರಿ ಪ್ರತಾಪ್, ಹರೀಶ್ ರಾಜ್ ಸಹ ತಮ್ಮ ತಮ್ಮ ಲವ್ ಸ್ಟೋರಿಯನ್ನು ಹೇಳಿಕೊಂಡರು. ಶಿವಾನಂದ ಸರ್ಕಲ್ ಬಳಿ ಹುಡುಗಿಯನ್ನು ಪಟಾಯಿಸಿದ್ದು, ಬಳಿಕ ಆಕೆಯನ್ನೇ ಮದುವೆಯಾಗಿದ್ದಾಗಿ ಹರೀಶ್ ರಾಜ್ ತಮ್ಮ ಲವ್ ಸ್ಟೋರಿ ಹೇಳಿದರೆ. ಕುರಿ ಪ್ರತಾಪ್ ಸಹ ತಾವು ಮದುವೆಯಾದ ಹುಡುಗಿಯ ಬಗ್ಗೆ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ