ಬಿಗ್ ಬಾಸ್ ಮನೆಯಲ್ಲಿ ನಡೆದ ಜಾತ್ರೆಗೆ ಜೋಕರ್ ವೇಷದಲ್ಲಿ ಬಂದಿದ್ದು ಸುದೀಪ್ ಎಂಬುದು ಮನೆಯ ಮಂದಿಗೆ ಗೊತ್ತಾಗಿ ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು. ಬಿಗ್ ಬಾಸ್ ಮನೆಯ ಟಿವಿ ಪರದೆಯಲ್ಲಿ ಸುದೀಪ್ ತಮ್ಮ ಮೇಕಪ್ ಕಳಚುವ ದೃಶ್ಯವನ್ನು ತೋರಿಸಿದಾಗಲಂತೂ ಮನೆಯ ಸದಸ್ಯರು ಹುಚ್ಚೆದ್ದು ಕುಣಿದರು. ಒಟ್ಟಾರೆ ತಮ್ಮನ್ನು ತಾವು ಮೈ ಮರೆತು ಚಿಕ್ಕಮಕ್ಕಳಂತೆ ಕುಣಿದಾಡಿದರು.
ಬಳಿಕ ಸ್ಟೋರ್ ರೋಮಿಗೆ ಒಬ್ಬೊಬ್ಬರಿಗೆ ಒಂದೊಂದು ಉಡುಗೊರೆ ಕಳುಹಿಸಿದ್ದರು ಸುದೀಪ್, ಒಬ್ಬೊಬ್ಬರಿಗೆ ಒಂದೊಂದು ಪ್ರೀತಿಯ ಸಂದೇಶ ನೀಡಿದ್ದರು. ನಿಮ್ಮ ಬದುಕಿನಲ್ಲಿ ಸಿಹಿ ತುಂಬಿರಲಿ, ಜಾರದಿರು ಬಾಲಕ, ನಿಮ್ಮ ಬದುಕೇ ಹಾಡಾಗಲಿ ಎಂದೆಲ್ಲಾ ಬರೆದು ಕಳುಹಿಸಿದ್ದರು. ಈ ಸಂಭ್ರಮವನ್ನು ತಾಳಲಾರದೆ ಚಂದನಾ ಈವತ್ತೇ ನನ್ನನ್ನು ಮನೆಯಿಂದ ಕಳುಹಿಸಿದರೂ ಬೇಜಾರಿಲ್ಲ ಎಂದು ಕ್ಯಾಮೆರಾ ಮುಂದೆ ಹೇಳಿದರು.
ಸುದೀಪ್ ಬಾಡಿ ಲಾಂಗ್ವೇಜ್ ಗೊತ್ತಾಗಲೇ ಇಲ್ಲ. ಅಯ್ಯೋ ನನಗೆ ಗೊತ್ತೇ ಆಗಲಿಲ್ಲ, ಗೋಲ್ಗಪ್ಪ ತಿನ್ನೋದಲ್ಲೇ ಬಿಝಿ ಇದ್ದೆವು, ಹಾಗೆ ಹೀಗೆ ಎಂದೆಲ್ಲಾ ಮಾತನಾಡಿಕೊಂಡರು ಮನೆಯ ಸದಸ್ಯರು. ಒಟ್ಟಾರೆ ಅವರು ಈ ಶಾಕ್ನಿಂದ ಹೊರಬರಲು ಅರ್ಧ ದಿನವೇ ಬೇಕಾಯಿತು. ಅಯ್ಯೋ ಎಂಥಹಾ ಛಾನ್ಸ್ ಮಿಸ್ ಆದೆವು, ನಾನು ಸುಸೂ ಮಾಡುತ್ತಿದ್ದೆ, ಈ ಸಂಭ್ರಮ ನೋಡಿ ಯಾರೋ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರಬೇಕು ಎಂದು ಅರ್ಧದಲ್ಲೇ ಓಡಿ ಬಂದೆ ಎಂದರು ವಾಸುಕಿ ವೈಭವ್.
ಇದು ಸ್ಪೆಷಲ್ ಡೇ, ಥ್ಯಾಂಕೂ ಸೋ ಮಚ್. ಚಿಕ್ಕಮಗು ತರಹ ಆಡ್ತಾ ಇದ್ದೆ, ನನ್ನನ್ನು ನಾನೇ ಮರೆತುಹೋಗಿದ್ದೆ ಎಂದು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ ದೀಪಿಕಾ.
Episode 73 Highlights: ಬಿಗ್ ಬಾಸ್ ಮನೆಗೆ ಮಾರುವೇಷದಲ್ಲಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್!
ಬಿಗ್ ಬಾಸ್ ಮನೆಯಲ್ಲಿ ಇನ್ನೂ ದೀಪಿಕಾ ಹಾಗೂ ಶೈನ್ ಶೆಟ್ಟಿ ನಡುವಿನ ಕೋಳಿ ಜಗಳ ಮುಂದುವರೆದಿದೆ. ಟಾಸ್ಕ್ ಒಂದರಲ್ಲಿ ಶೈನ್ ಗಡ್ಡ ಬೋಳಿಸುವಂತೆ ಮಾಡಿದ್ದು ಇನ್ನೂ ಇಬ್ಬರ ನಡುವೆ ಇದೇ ವಿಚಾರವಾಗಿ ಚೆಲ್ಲಾಟ ನಡೆಯುತ್ತಿದೆ.
ಬಿಗ್ ಬಾಸ್ ನೀಡಿದ ಚಟುವಟಿಕೆಯಲ್ಲಿ ತಮ್ಮ ಜೀವನದ ಒಂದು ಅಪೇಕ್ಷೆಯನ್ನು ತಿಳಿಸಬೇಕಾಗಿತ್ತು. ಅದರಂತೆ ಭೂಮಿ ಶೆಟ್ಟಿ ನಮ್ಮದು ಅವಿಭಕ್ತ ಕುಟುಂಬ, ಈಗ ಯಾವ ರೀತಿ ಖುಷಿಯಾಗಿ ಇದ್ದೀವೋ ಮುಂದೆಯೂ ಅದೇ ರೀತಿ ಇರಬೇಕು ಎಂದು ಬಯಸುತ್ತೇನೆ ಎಂದರು.
ಪ್ರತಿಯೊಬ್ಬರಿಗೂ ಮನೆ ಕಟ್ಟಬೇಕು ಎಂಬ ಆಸೆ ಇತ್ತು. ಆ ರೀತಿ ಮನೆಕಟ್ಟು ಅಪ್ಪ ಅಮ್ಮ ಒಟ್ಟು ಕುಟುಂಬದ ರೀತಿ ಇರಬೇಕು. ಹಬ್ಬ ಹರಿದಿನಗಳನ್ನು ಮಾಡಬೇಕು ಎಂಬ ಆಸೆ ಇದೆ.
ಒಂದು ಇನ್ಫಾರ್ಮಲ್ ಸ್ಕೂಲ್ ಕಟ್ಟಬೇಕು ಎಂಬ ಆಸೆ ಇದೆ. ಅದು ಒಂದು ಚಿಕ್ಕ ಮನೆಯಾದರೂ ಪರವಾಗಿಲ್ಲ, ಒಂದು ಸಂಗೀತ, ನೃತ್ಯ ಕಲುಸುವಂತಾಗಬೇಕು ಎಂಬ ಆಸೆ ಇದೆ ಎಂದರು ವಾಸುಕಿ ವೈಭವ್. ’
ಹಲೋ ಮಿಂಚಿನ ಓಟ ಟಾಸ್ಕ್ ನಡೆಯುತ್ತಿದೆ. ಲಾರಿಗೆ ಲೋಡ್ ತುಂಬಿಸುವ ಟಾಸ್ಕ್ನಲ್ಲಿ ಪುಟಾಣಿ ಪಂಟ್ರು ಗೆದ್ದಿದ್ದಾರೆ. ಪಂಜಾ ಫ್ಯಾಕ್ಟರಿ ಈ ಟಾಸ್ಕ್ನಲ್ಲಿ ಸೋತಿದೆ. ಇದೇ ರೀತಿ ಅಡ್ವಾಂಟೇಜ್ ಟಾಸ್ಕ್ನಲ್ಲೂ ಪುಟಾಣಿ ಪಂಟ್ರು ಗೆದ್ದಿದ್ದಾರೆ.
ಫಿಜಿಕಲ್ ಟಾಸ್ಕ್ಗಳಲ್ಲಿ ವಾಸುಕಿ ಅವರು ಪ್ರಿಯಾಂಕಾರ ಹಿಡಿದಾಗ, ವಾಸುಕಿ ಎಲ್ಲಿ ಮುಟ್ಟುತಾ ಇದ್ದೀರಾ ಎಂದು ಕೂಗಿಕೊಂಡರು. ಟಾಸ್ಕ್ ಎಲ್ಲವೂ ಮುಗಿದ ಬಳಿಕ ವಾಸುಕಿ ಬೇಸರದಿಂದ ಪ್ರಿಯಾಂಕಾ ಬಗ್ಗೆ ಮನೆಯ ಸದಸ್ಯರ ಬಳಿ ಹೇಳಿಕೊಂಡರು. ಬಳಿಕ ಪ್ರಿಯಾಂಕಾಗೂ ಇದೇ ವಿಷಯವನ್ನು ತಿಳಿಸಿದರು. ಬಳಿಕ ಪರಸ್ಪರ ಅಪ್ಪಿ ಕ್ಷಮೆ ಕೋರಿದರು. ವಾಸುಕಿಗೆ ಖಂಡಿತ ಅಂತಹ ಭಾವನೆ ಇಲ್ಲ. ಆದರೆ ಆ ಕ್ಷಣದಲ್ಲಿ ನನ್ನಿಂದ ಆ ರೀತಿ ಮಾತು ಬಂತು ಅಷ್ಟೇ ಎಂದರು.
ಬಳಿಕ ಸ್ಟೋರ್ ರೋಮಿಗೆ ಒಬ್ಬೊಬ್ಬರಿಗೆ ಒಂದೊಂದು ಉಡುಗೊರೆ ಕಳುಹಿಸಿದ್ದರು ಸುದೀಪ್, ಒಬ್ಬೊಬ್ಬರಿಗೆ ಒಂದೊಂದು ಪ್ರೀತಿಯ ಸಂದೇಶ ನೀಡಿದ್ದರು. ನಿಮ್ಮ ಬದುಕಿನಲ್ಲಿ ಸಿಹಿ ತುಂಬಿರಲಿ, ಜಾರದಿರು ಬಾಲಕ, ನಿಮ್ಮ ಬದುಕೇ ಹಾಡಾಗಲಿ ಎಂದೆಲ್ಲಾ ಬರೆದು ಕಳುಹಿಸಿದ್ದರು. ಈ ಸಂಭ್ರಮವನ್ನು ತಾಳಲಾರದೆ ಚಂದನಾ ಈವತ್ತೇ ನನ್ನನ್ನು ಮನೆಯಿಂದ ಕಳುಹಿಸಿದರೂ ಬೇಜಾರಿಲ್ಲ ಎಂದು ಕ್ಯಾಮೆರಾ ಮುಂದೆ ಹೇಳಿದರು.
ಸುದೀಪ್ ಬಾಡಿ ಲಾಂಗ್ವೇಜ್ ಗೊತ್ತಾಗಲೇ ಇಲ್ಲ. ಅಯ್ಯೋ ನನಗೆ ಗೊತ್ತೇ ಆಗಲಿಲ್ಲ, ಗೋಲ್ಗಪ್ಪ ತಿನ್ನೋದಲ್ಲೇ ಬಿಝಿ ಇದ್ದೆವು, ಹಾಗೆ ಹೀಗೆ ಎಂದೆಲ್ಲಾ ಮಾತನಾಡಿಕೊಂಡರು ಮನೆಯ ಸದಸ್ಯರು. ಒಟ್ಟಾರೆ ಅವರು ಈ ಶಾಕ್ನಿಂದ ಹೊರಬರಲು ಅರ್ಧ ದಿನವೇ ಬೇಕಾಯಿತು. ಅಯ್ಯೋ ಎಂಥಹಾ ಛಾನ್ಸ್ ಮಿಸ್ ಆದೆವು, ನಾನು ಸುಸೂ ಮಾಡುತ್ತಿದ್ದೆ, ಈ ಸಂಭ್ರಮ ನೋಡಿ ಯಾರೋ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರಬೇಕು ಎಂದು ಅರ್ಧದಲ್ಲೇ ಓಡಿ ಬಂದೆ ಎಂದರು ವಾಸುಕಿ ವೈಭವ್.
ಇದು ಸ್ಪೆಷಲ್ ಡೇ, ಥ್ಯಾಂಕೂ ಸೋ ಮಚ್. ಚಿಕ್ಕಮಗು ತರಹ ಆಡ್ತಾ ಇದ್ದೆ, ನನ್ನನ್ನು ನಾನೇ ಮರೆತುಹೋಗಿದ್ದೆ ಎಂದು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ ದೀಪಿಕಾ.
Episode 73 Highlights: ಬಿಗ್ ಬಾಸ್ ಮನೆಗೆ ಮಾರುವೇಷದಲ್ಲಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್!
ಬಿಗ್ ಬಾಸ್ ಮನೆಯಲ್ಲಿ ಇನ್ನೂ ದೀಪಿಕಾ ಹಾಗೂ ಶೈನ್ ಶೆಟ್ಟಿ ನಡುವಿನ ಕೋಳಿ ಜಗಳ ಮುಂದುವರೆದಿದೆ. ಟಾಸ್ಕ್ ಒಂದರಲ್ಲಿ ಶೈನ್ ಗಡ್ಡ ಬೋಳಿಸುವಂತೆ ಮಾಡಿದ್ದು ಇನ್ನೂ ಇಬ್ಬರ ನಡುವೆ ಇದೇ ವಿಚಾರವಾಗಿ ಚೆಲ್ಲಾಟ ನಡೆಯುತ್ತಿದೆ.
ಬಿಗ್ ಬಾಸ್ ನೀಡಿದ ಚಟುವಟಿಕೆಯಲ್ಲಿ ತಮ್ಮ ಜೀವನದ ಒಂದು ಅಪೇಕ್ಷೆಯನ್ನು ತಿಳಿಸಬೇಕಾಗಿತ್ತು. ಅದರಂತೆ ಭೂಮಿ ಶೆಟ್ಟಿ ನಮ್ಮದು ಅವಿಭಕ್ತ ಕುಟುಂಬ, ಈಗ ಯಾವ ರೀತಿ ಖುಷಿಯಾಗಿ ಇದ್ದೀವೋ ಮುಂದೆಯೂ ಅದೇ ರೀತಿ ಇರಬೇಕು ಎಂದು ಬಯಸುತ್ತೇನೆ ಎಂದರು.
ಪ್ರತಿಯೊಬ್ಬರಿಗೂ ಮನೆ ಕಟ್ಟಬೇಕು ಎಂಬ ಆಸೆ ಇತ್ತು. ಆ ರೀತಿ ಮನೆಕಟ್ಟು ಅಪ್ಪ ಅಮ್ಮ ಒಟ್ಟು ಕುಟುಂಬದ ರೀತಿ ಇರಬೇಕು. ಹಬ್ಬ ಹರಿದಿನಗಳನ್ನು ಮಾಡಬೇಕು ಎಂಬ ಆಸೆ ಇದೆ.
ಒಂದು ಇನ್ಫಾರ್ಮಲ್ ಸ್ಕೂಲ್ ಕಟ್ಟಬೇಕು ಎಂಬ ಆಸೆ ಇದೆ. ಅದು ಒಂದು ಚಿಕ್ಕ ಮನೆಯಾದರೂ ಪರವಾಗಿಲ್ಲ, ಒಂದು ಸಂಗೀತ, ನೃತ್ಯ ಕಲುಸುವಂತಾಗಬೇಕು ಎಂಬ ಆಸೆ ಇದೆ ಎಂದರು ವಾಸುಕಿ ವೈಭವ್. ’
ಹಲೋ ಮಿಂಚಿನ ಓಟ ಟಾಸ್ಕ್ ನಡೆಯುತ್ತಿದೆ. ಲಾರಿಗೆ ಲೋಡ್ ತುಂಬಿಸುವ ಟಾಸ್ಕ್ನಲ್ಲಿ ಪುಟಾಣಿ ಪಂಟ್ರು ಗೆದ್ದಿದ್ದಾರೆ. ಪಂಜಾ ಫ್ಯಾಕ್ಟರಿ ಈ ಟಾಸ್ಕ್ನಲ್ಲಿ ಸೋತಿದೆ. ಇದೇ ರೀತಿ ಅಡ್ವಾಂಟೇಜ್ ಟಾಸ್ಕ್ನಲ್ಲೂ ಪುಟಾಣಿ ಪಂಟ್ರು ಗೆದ್ದಿದ್ದಾರೆ.
ಫಿಜಿಕಲ್ ಟಾಸ್ಕ್ಗಳಲ್ಲಿ ವಾಸುಕಿ ಅವರು ಪ್ರಿಯಾಂಕಾರ ಹಿಡಿದಾಗ, ವಾಸುಕಿ ಎಲ್ಲಿ ಮುಟ್ಟುತಾ ಇದ್ದೀರಾ ಎಂದು ಕೂಗಿಕೊಂಡರು. ಟಾಸ್ಕ್ ಎಲ್ಲವೂ ಮುಗಿದ ಬಳಿಕ ವಾಸುಕಿ ಬೇಸರದಿಂದ ಪ್ರಿಯಾಂಕಾ ಬಗ್ಗೆ ಮನೆಯ ಸದಸ್ಯರ ಬಳಿ ಹೇಳಿಕೊಂಡರು. ಬಳಿಕ ಪ್ರಿಯಾಂಕಾಗೂ ಇದೇ ವಿಷಯವನ್ನು ತಿಳಿಸಿದರು. ಬಳಿಕ ಪರಸ್ಪರ ಅಪ್ಪಿ ಕ್ಷಮೆ ಕೋರಿದರು. ವಾಸುಕಿಗೆ ಖಂಡಿತ ಅಂತಹ ಭಾವನೆ ಇಲ್ಲ. ಆದರೆ ಆ ಕ್ಷಣದಲ್ಲಿ ನನ್ನಿಂದ ಆ ರೀತಿ ಮಾತು ಬಂತು ಅಷ್ಟೇ ಎಂದರು.