ಆ್ಯಪ್ನಗರ

Episode 89 Highlights: ನ್ಯೂಟನ್ ಮೂರನೇ ನಿಯಮ ಹೇಳಿಕೊಟ್ಟ ದೀಪಿಕಾ ದಾಸ್

ಅಡುಗೆಮನೆಯಲ್ಲಿ ಮೆಣಸಿನಕಾಯಿ ಕಟ್ ಮಾಡು ಎಂದು ಕಿಶನ್‍‌ಗೆ ಪ್ರಿಯಾಂಕಾ ನೀಡಿದಾಗ, ಆಗಲ್ಲ ನಾನು ಕಟ್ ಮಾಡಲ್ಲ ಎಂದ. ಆಗ ಪ್ರಿಯಾಂಕಾ ನನ್ ಕೈಲಿ ಆಗಲ್ಲ ಲೆನ್ಸ್ ಹಾಕ್ಕೋಬೇಕು ಎಂದರು. ಸೀರೆಯಲ್ಲಿ ಮಿಸ್ ಅವತಾರದಲ್ಲಿ ಕಾಣಿಸಿಕೊಂಡ ದೀಪಿಕಾರನ್ನು ಎಲ್ಲರೂ ಸಿಕ್ಕಾಪಟ್ಟೆ ಗೋಳಾಡಿಸಿದರು.

Vijaya Karnataka Web 10 Jan 2020, 12:32 am
ನಾನು ಹೋದರೆ ಅಳ್ತೀಯಾ ತಾನೆ ಎಂದು ದೀಪಿಕಾರನ್ನು ಪ್ರಿಯಾಂಕಾ ಕೇಳಿದಾಗ, ನಾನ್ಯಾಕೆ ಅಳಲಿ ಎಂದರು. ಬಹುಶಃ ನನಗನ್ನಿಸಿದಂತೆ ಕಿಶನ್ ಹೋದರೆ ಏನು ಮಾಡ್ತೀರಾ? ಎಂದೆಲ್ಲಾ ಹೇಳಿ ರೇಗಿಸಿದಳು ಪ್ರಿಯಾಂಕಾ. ಆದರೆ ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎಂಬುದು ಮನೆಯ ಸದಸ್ಯರಿಗೆ ಗೊತ್ತಿಲ್ಲ. ಆದರೆ ಈ ಸಲ ಯಾರೆಲ್ಲಾ ಹೋಗುತ್ತಾರೆ ಎಂದು ದೀಪಿಕಾ ಹಾಗೂ ಪ್ರಿಯಾಂಕಾ ಗಂಭೀರವಾಗಿಯೇ ಚರ್ಚಿಸಿದರು.
Vijaya Karnataka Web bigg boss 7 episode 89 day 88 written updates deepika das teaches newtons third law
Episode 89 Highlights: ನ್ಯೂಟನ್ ಮೂರನೇ ನಿಯಮ ಹೇಳಿಕೊಟ್ಟ ದೀಪಿಕಾ ದಾಸ್


ಶೇ.99ರಷ್ಟು ನಾನು ಸೇಫ್ ಎಂದು ಪ್ರಿಯಾಂಕಾ ಹೇಳಿದಾಗ, ಹೊರಗಡೆ ಹೋಗಲು ಒಂದು ಪರ್ಸೆಂಟ್ ಸಾಕು ಎಂದರು ದೀಪಿಕಾ. ಇದೇ ರೀತಿ ಇವರಿಬ್ಬರ ನಡುವೆ ಚರ್ಚೆ ನಡೆಯುತ್ತಿದ್ದಾಗ ಇಂಗ್ಲಿಷ್ ಬಳಸಿದ್ದಕ್ಕೆ ಬಿಗ್ ಬಾಸ್ "ನಾವಾಡುವ ನುಡಿಯೇ ಕನ್ನಡ ನುಡಿ ಸಿರಿಗನ್ನಡ ನುಡಿ" ಹಾಡನ್ನು ಹಾಕಿ ಎಚ್ಚರಿಸಿದರು.

ಅಡುಗೆಮನೆಯಲ್ಲಿ ಮೆಣಸಿನಕಾಯಿ ಕಟ್ ಮಾಡು ಎಂದು ಕಿಶನ್‍‌ಗೆ ಪ್ರಿಯಾಂಕಾ ನೀಡಿದಾಗ, ಆಗಲ್ಲ ನಾನು ಕಟ್ ಮಾಡಲ್ಲ ಎಂದ. ಆಗ ಪ್ರಿಯಾಂಕಾ ನನ್ ಕೈಲಿ ಆಗಲ್ಲ ಲೆನ್ಸ್ ಹಾಕ್ಕೋಬೇಕು ಎಂದರು. ಸೀರೆಯಲ್ಲಿ ಮಿಸ್ ಅವತಾರದಲ್ಲಿ ಕಾಣಿಸಿಕೊಂಡ ದೀಪಿಕಾರನ್ನು ಎಲ್ಲರೂ ಸಿಕ್ಕಾಪಟ್ಟೆ ಗೋಳಾಡಿಸಿದರು.

ಹತ್ತನೇ ಕ್ಲಾಸ್ ಸೈನ್ಸ್ ಟೀಚರ್ ಆದ ದೀಪಿಕಾ ದಾಸ್

ಹತ್ತನೇ ತರಗತಿಗೆ ಪಾಠ ಹೇಳಲು ಬರುತ್ತಿದ್ದಾರೆ ಸೈನ್ಸ್ ಟೀಚರ್. ಅವರ ಗೆಟಪ್ ನೋಡಿ ಇವರು ಮಿಸ್ ಅಥವಾ ಮಾಡೆಲ್ಲಾ ಎಂದೆಲ್ಲಾ ಕಾಮೆಂಟ್ ಮಾಡಿದರು. ಸೀರೆಯಲ್ಲಿ ಹುಡುಗೀರ ನೋಡಬಾರದು ನಿನ್ನಲ್ಲ ಟೆಂಪರೇಚರ್ ಎಂದು ಅವರನ್ನು ನೋಡಿ ಕಿಶನ್ ಹಾಡಿದರು. ವನ್‌ಗೆ ಹೋಗಬೇಕು ಎಂದು ಶೈನ್ ಶೆಟ್ಟಿ ಹೇಳಿದಾಗ, ತುದೀಲಿ ಇದಿಯಾ ಎಂದು ಕುರಿ ಪ್ರತಾಪ್ ಹೇಳಿದ್ದಕ್ಕೆ ಹೌದು ಎಂದು ಎದ್ದು ಓಡಿದ. ಇದೇ ಸಂದರ್ಭದಲ್ಲಿ ಕ್ಲಾಸ್ ಲೀಡರ್ ಆಗುವವರಿಗೆ ಇರಬೇಕಾದ ಎರಡು ಅರ್ಹತೆಗಳನ್ನು ತಿಳಿಸಿ ಎಂದಾಗ ಒಬ್ಬೊಬ್ಬರು ಒಂದೊಂದು ಹೇಳಿದರು.

ನ್ಯೂಟನ್ ಮೂರನೇ ಲಾ ಹೇಳಿಕೊಟ್ಟ ದೀಪಿಕಾ

ಇಲ್ಲಿ ಎಷ್ಟು ಜನಕ್ಕೆ ನ್ಯೂಟನ್ ಲಾ ಬಗ್ಗೆ ಗೊತ್ತು ಎಂದು ಹೇಳಿ, ಮೂರನೇ ಲಾ ಬಗ್ಗೆ ತಿಳಿದುಕೊಳ್ಳೋಣ ಎಂದಾಗ, ಎಲ್ಲರೂ ಒಂದು ಮತ್ತು ಎರಡನೇ ಲಾ ಬಗ್ಗೆ ಹೇಳಿ ಮೇಡಂ ಎಂದರು. ಇದು ಅರ್ಥ ಆಯಿತಾ? ಎಂದಾಗ ಇದನ್ನು ವಾಸುಕಿ ವಿವರಿಸಿದರು. ಮೇಡಂ ಒಂದು ಬಾಲನ್ನು ಗೋಡೆಗೆ ಜೋರಾಗಿ ಎಸೆದಾಗ ಅದು ಅಷ್ಟೇ ಫೋರ್ಸ್‌ನಲ್ಲಿ ವಾಪಸ್ ಬರುತ್ತದೆ ಎಂದ.

ಕನ್ಫ್ಯೂಸ್ ಮಾಡಿದ ಹರೀಶ್ ರಾಜ್, ಕುರಿ ಪ್ರತಾಪ್

ಬಳಿಕ ಹರೀಶ್ ರಾಜು ನಿಂತುಕೊಂಡು ಮೇಡಂ ಟಮೋಟೋ, ಹಣ್ಣು, ಮೊಟ್ಟೆ ಎಸೆದರೂ ಅಷ್ಟೇ ಫೋರ್ಸ್‌ನಲ್ಲಿ ವಾಪಸ್ ಬರುತ್ತದಾ? ಎಂದ. ಕುರಿ ಪ್ರತಾಪ್ ನಿಂತು ಮೇಡಂ ಜೇಡಿ ಮಣ್ಣನ್ನು ಎಸೆದರೆ ಬರುತ್ತದಾ? ಸಗಣಿ ಎಸೆದರೆ ಬರುತ್ತದಾ? ಎಂದೆಲ್ಲಾ ಕೇಳಿ ಎಲ್ಲರನ್ನೂ ಕನ್ಫ್ಯೂಷನ್ ಮಾಡಿದರು.

ಕನ್ನಡ ಮೇಡಂ ಪರಿಮಳಾ ಆಗಿ ಪ್ರಿಯಾಂಕಾ ಎಂಟ್ರಿ

ಬಳಿಕ ಕನ್ನಡ ಮೇಡಂ ಪರಿಮಳಾ ಆಗಿ ಪ್ರಿಯಾಂಕಾ ಎಂಟ್ರಿ ಕೊಟ್ಟರು. ಈ ಸಂದರ್ಭದಲ್ಲಿ ವಾಸುಕಿಯನ್ನು ಆತುರಕ್ಕೆ ಹುಟ್ಟಿದವನ ತರಹ ಆಡಬೇಡ ಎಂದರು, ಬಳಿಕ ಸಾವರಿಸಿಕೊಂಡು ಆರು ತಿಂಗಳಿಗೆ ಹುಟ್ಟಿದವನ ತರಹ ಆಡಬೇಡ ಎಂದರು ಹರೀಶ್ ರಾಜ್. ಇದಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆಯಿತು. ವಿರುದ್ಧ ಪದಗಳನ್ನು ಬರೆಯುವಂತೆ ಹೇಳಿದರು. ಕಿಶನ್‌ಗೆ ಅತಿವೃಷ್ಟಿ ಪದಕ್ಕೆ ವಿರುದ್ಧ ಪದ ಏನು ಎಂದು ಗೊತ್ತಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಚಟುವಟಿಕೆಯೊಂದನ್ನು ನೀಡಿದರು. ಅದುವೆ ಕಣ್ಣಾಮುಚ್ಚಾಲೆ ಆಟ. ಇದನಂತೂ ಎಲ್ಲರೂ ಸಖತ್ ಎಂಜಾಯ್ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ