ಆ್ಯಪ್ನಗರ

ನನ್ನ ಬಾಯ್‌ಫ್ರೆಂಡ್ ಮೈಸೂರಿನವನು, ಅವನ ಕುಟುಂಬಕ್ಕೆ ನಾನು ಧರಿಸುವ ಬಟ್ಟೆಗಳು ಇಷ್ಟವಾಗಲ್ಲ: ರಾಖಿ ಸಾವಂತ್

ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುವ ರಾಖಿ ಸಾವಂತ್ ಅವರು ಪತಿ ರಿತೇಶ್‌ರಿಂದ ದೂರವಾದ ಮೇಲೆ ಕೆಲ ದಿನಗಳ ಕಾಲ ಬೇಸರದಲ್ಲಿದ್ದರು. ಈಗ ರಾಖಿ ಹೊಸ ಬಾಯ್‌ಫ್ರೆಂಡ್ ಹುಡುಕಿಕೊಂಡಿದ್ದಾರೆ. ಅವರು ಮೈಸೂರಿನವರಂತೆ. ರಾಖಿಗೆ ಈಗಾಗಲೇ ಅವರ ಹೊಸ ಬಾಯ್‌ಫ್ರೆಂಡ್ ದುಬಾರಿ ಕಾರ್ ಕೂಡ ಗಿಫ್ಟ್ ನೀಡಿದ್ದಾನಂತೆ. ಆ ಕುರಿತು ರಾಖಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

Authored byಪದ್ಮಶ್ರೀ ಭಟ್ | TIMESOFINDIA.COM 18 May 2022, 11:54 am

ಹೈಲೈಟ್ಸ್‌:

  • ರಿತೇಶ್‌ರಿಂದ ದೂರವಾದಮೇಲೆ ಹೊಸ ಬಾಯ್‌ಫ್ರೆಂಡ್ ಹುಡುಕಿಕೊಂಡ ರಾಖಿ ಸಾವಂತ್
  • ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್ ಆದಿಲ್ ಮೈಸೂರಿನವರಂತೆ
  • ಆದಿಲ್ ಕುಟುಂಬ ತನ್ನನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಆತಂಕದಲ್ಲಿ ರಾಖಿ ಸಾವಂತ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web rakhi sawant
ರಾಖಿ ಸಾವಂತ್‌ಗೆ ಹೊಸ ಬಾಯ್‌ಫ್ರೆಂಡ್ ಸಿಕ್ಕಿದ್ದಾರೆ, ಪತಿ ರಿತೇಶ್‌ರಿಂದ ದೂರವಾದ ಮೇಲೆ ಕೆಲ ದಿನಗಳ ಕಾಲ ಬೇಸರದಲ್ಲಿದ್ದ ಬಹಳ ಬೇಗ ರಾಖಿ ಹೊಸ ಬಾಯ್‌ಫ್ರೆಂಡ್ ಹುಡುಕಿಕೊಂಡಿದ್ದಾರೆ. ಅವರೇ ಆದಿಲ್ ಖಾನ್. ವರ್ಷಗಳ ಹಿಂದೆ ತಾಯಿ ಕ್ಯಾನ್ಸರ್ ಚಿಕಿತ್ಸೆಗೆ ಹಣ ಇಲ್ಲದೆ ಒದ್ದಾಡುತ್ತಿದ್ದ ರಾಖಿ ಈಗ ದುಬಾರಿ ಕಾರ್ ಒಡತಿ. ರಾಖಿಗೆ ಹಣ ಎಲ್ಲಿಂದ ಬಂತು ಎಂದು ಕೆಲವರಿಗೆ ಸಂದೇಹ ಬಂದಿತ್ತು. ಆದಿಲ್ ಅವರೇ ರಾಖಿಗೆ ( Rakhi Sawant ) ಕಾರ್ ಉಡುಗೊರೆಯಾಗಿ ನೀಡಿದ್ದಾರಂತೆ. ಈ ಕುರಿತು ರಾಖಿ ಸಾವಂತ್ ನೀಡಿದ ಸ್ಪಷ್ಟನೆ ಇಲ್ಲಿದೆ.
ರಾಖಿಗೆ ಹೊಸ ಬಾಯ್‌ಫ್ರೆಂಡ್ ಸಿಕ್ಕಿದ್ದೇಗೆ?
ದೇವರೇ ನನಗೆ ಆದಿಲ್‌ರನ್ನು ಕಳಿಸಿಕೊಟ್ಟಿದ್ದಾರೆ. ರಿತೇಶ್ ಜೊತೆ ಬ್ರೇಕಪ್ ಆದಮೇಲೆ ನಾನು ಡಿಪ್ರೆಶನ್‌ಗೆ ಹೋದೆ. ನಮ್ಮ ಭೇಟಿಯಾಗಿ ಒಂದು ತಿಂಗಳೊಳಗೆ ಆದಿಲ್ ನನಗೆ ಪ್ರೇಮ ನಿವೇದನೆ ಮಾಡಿದ್ದಾರೆ. ನನಗಿಂತ ಆದಿಲ್ 6 ವರ್ಷ ಚಿಕ್ಕವರು. ಮಲೈಕಾ ಅರೋರ- ಅರ್ಜುನ್ ಕಪೂರ್, ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ಅವರ ಬಗ್ಗೆ ಆದಿಲ್ ಉದಾಹರಣೆ ನೀಡಿದ್ದಾರೆ. ನನಗೂ ಆದಿಲ್ ಮೇಲೆ ಲವ್ ಹುಟ್ಟಿತು.

ಆದಿಲ್ ಮೈಸೂರಿನ ಹುಡುಗ

ಆದಿಲ್ ಮೈಸೂರಿನ ಹುಡುಗ, ಮುಂಬೈಗೆ ಅವರು ಬಂದು ನನ್ನ ಭೇಟಿ ಮಾಡಿದರು. ಮೈಸೂರಿನಲ್ಲಿ ದುಬಾರಿ ಕಾರ್‌ನ್ನು ಅವರು ನನಗೆ ಉಡುಗೊರೆಯಾಗಿ ನೀಡಿದರು. ಮೈಸೂರಿಗೆ ಕರೆದಾಗ ನಾನು ಅಲ್ಲಿ ಹೋಗಿದ್ದೆ, ನಾನು ಮೈಸೂರಿಗೆ ಹೋದಾಗ ಹೋಟೆಲ್‌ನಲ್ಲಿ ಇದ್ದೆ. ಶೋಗಳಲ್ಲಿ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ಶೈಲೆ ಅವರ ಸಹೋದರ ಆದಿಲ್. ಶೈಲೆ ಅವರಿಂದ ಆದಿಲ್ ನನ್ನ ನಂಬರ್ ತೆಗೆದುಕೊಂಡರು. ಆ ನಂತರ ನಾವಿಬ್ಬರೂ ಮಾತನಾಡಿದೆವು.

ಬಾಲಿವುಡ್ ಸಮಾರಂಭದಲ್ಲಿ ಹಾಜರಿ ಹಾಕೋದರಲ್ಲಿ ರಾಖಿ ಸಾವಂತ್ ಬ್ಯುಸಿ!

ನಾನು ಹಾಕುವ ಬಟ್ಟೆ ಆದಿಲ್ ಕುಟುಂಬಕ್ಕೆ ಇಷ್ಟ ಆಗೋದಿಲ್ಲ ಎಂದ ರಾಖಿ ಸಾವಂತ್

ನಾನು ಮನರಂಜನಾ ಕ್ಷೇತ್ರದಲ್ಲಿ ಇರುವವಳು. ನಮ್ಮ ರಿಲೇಶನ್‌ಶಿಪ್ ವಿರುದ್ಧ ಆದಿಲ್ ಕುಟುಂಬ ಇದೆ. ನಾನು ಹಾಕುವ ಡ್ರೆಸ್ ಯಾವುದೂ ಅವರ ಕುಟುಂಬಕ್ಕೆ ಇಷ್ಟ ಆಗೋದಿಲ್ಲ. ಅಗತ್ಯ ಬಿದ್ದರೆ ನಾನು ನನ್ನ ಉಡುಗೆ ವಿನ್ಯಾಸ ಬದಲಾಯಿಸಿಕೊಳ್ಳುವೆ. ಆದರೆ ಆದಿಲ್ ಮಾತ್ರ ಯಾವುದೇ ರೀತಿಯಲ್ಲಿ ಈ ವಿಷಯದಲ್ಲಿ ಒತ್ತಾಯ ಮಾಡುತ್ತಿಲ್ಲ. ಎಲ್ಲ ಕಡೆಯಿಂದ ಅವನಿಗೆ ಹಿಂಸೆ ಆಗಿದೆ. ಕಷ್ಟದಿಂದ ನನಗೆ ಪ್ರೀತಿ ಸಿಕ್ಕಿದೆ, ಅವನ ಕುಟುಂಬ ನನ್ನನ್ನು ಒಪ್ಪಿಕೊಳ್ಳಲಿ ಎಂದು ಬಯಸುವೆ. ನನ್ನ ಹಳೆ ವಿಡಿಯೋಗಳನ್ನು ಆದಿಲ್ ಕುಟುಂಬ ನೋಡುತ್ತ ಇರಲಿ ಎಂದು ಬಯಸುವುದಿಲ್ಲ. ನನ್ನ ಬಗ್ಗೆ ನಾನು ಒಂದು ಇಮೇಜ್ ಸೃಷ್ಟಿ ಮಾಡಿಕೊಳ್ಳಬೇಕು. ಇವತ್ತು ಎಲ್ಲ ಹುಡುಗಿಯರು ನನ್ನ ರೀತಿಯಲ್ಲಿಯೇ ಬಟ್ಟೆ ಹಾಕುತ್ತಾರೆ.

ರಣ್‌ವೀರ್ ಸಿಂಗ್ ಎತ್ತಿಕೊಂಡು ಸಾಹಸ ಪ್ರದರ್ಶಿಸಿದ 'ಕೆಂಗುಲಾಬಿ' ರಾಖಿ ಸಾವಂತ್‌

ಭಾರತೀಯ ಕಾನೂನಿನ ಪ್ರಕಾರ ನಾನು, ರಿತೇಶ್ ಪತಿ, ಪತ್ನಿಯಲ್ಲ: ರಾಖಿ ಸಾವಂತ್

ನಾನು ರಿತೇಶ್‌ರನ್ನು ಕಾನೂನಾತ್ಮಕವಾಗಿ ಮದುವೆ ಆಗಿರಲಿಲ್ಲ. ಭಾರತೀಯ ಕಾನೂನಿನ ಪ್ರಕಾರ ನಾನು ಅವನ ಪತ್ನಿಯಲ್ಲ. ನಾನು, ರಿತೇಶ್ ದೈಹಿಕವಾಗಿ ಕೂಡ ಒಂದಾಗಿರಲಿಲ್ಲ. ಬಿಗ್ ಬಾಸ್ ಮುಗಿದಮೇಲೆ ರಿತೇಶ್ ಪತ್ನಿ ಅವರ ವಿರುದ್ಧ ಕೆಲ ದೂರು ದಾಖಲಿಸಿದ್ದರು. ಈಗ ರಿತೇಶ್ ಎಲ್ಲಿದ್ದಾರೆ ಅಂತ ಗೊತ್ತಿಲ್ಲ, ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ