Please enable javascript.BBK 10: 'ಬಿಗ್ ಬಾಸ್' ಮನೆಯಲ್ಲಿ ವಿನಯ್ ಗೌಡ ಇರಬೇಕಾ? 'ಡ್ರೋನ್' ಪ್ರತಾಪ್ ಇರಬೇಕಾ? ನಡೀತು ಭಾರಿ ಚರ್ಚೆ! - bigg boss kannada 10 day 16 october 24rd episode vinay gowda safe from elimination - Vijay Karnataka

BBK 10: 'ಬಿಗ್ ಬಾಸ್' ಮನೆಯಲ್ಲಿ ವಿನಯ್ ಗೌಡ ಇರಬೇಕಾ? 'ಡ್ರೋನ್' ಪ್ರತಾಪ್ ಇರಬೇಕಾ? ನಡೀತು ಭಾರಿ ಚರ್ಚೆ!

Authored byಅವಿನಾಶ್ ಜಿ. ರಾಮ್ | Vijaya Karnataka Web 24 Oct 2023, 11:26 pm
Subscribe

Bigg Boss Kannada Season 10 : ಈ ವಾರ 'ಬಿಗ್ ಬಾಸ್‌' ಮನೆಯಲ್ಲಿ ಭಾಗ್ಯಶ್ರೀ, ವಿನಯ್‌ ಗೌಡ, 'ಡ್ರೋನ್' ಪ್ರತಾಪ್, ಕಾರ್ತಿಕ್ ಮಹೇಶ್, ಸ್ನೇಹಿತ್, ಮೈಕೆಲ್, ತನಿಷಾ ಕುಪ್ಪಂಡ ನಾಮಿನೇಟ್ ಆಗಿದ್ದಾರೆ. ನೀತು ವನಜಾಕ್ಷಿ ಅವರು ನೇರವಾಗಿ ನಾಮಿನೇಟ್ ಆಗಿದ್ದರೆ, ಈಶಾನಿಗೆ ಕ್ಯಾಪ್ಟನ್‌ ಕಡೆಯಿಂದ ನಾಮಿನೇಷನ್ ಭಾಗ್ಯ ಸಿಕ್ಕಿದೆ. ಇದೀಗ ಇಷ್ಟು ಮಂದಿಯಲ್ಲಿ ವಿನಯ್‌ ಗೌಡ & 'ಡ್ರೋನ್' ಪ್ರತಾಪ್‌ಗೆ ನಾಮಿನೇಷನ್‌ನಿಂದ ಪಾರಾಗುವ ಅವಕಾಶವನ್ನು ಬಿಗ್ ಬಾಸ್ ನೀಡಿದರು.

ಹೈಲೈಟ್ಸ್‌:

  • ಈ ವಾರ 'ಬಿಗ್ ಬಾಸ್' ಮನೆಯಲ್ಲಿ ಒಟ್ಟು 9 ಮಂದಿ ನಾಮಿನೇಟ್ ಆಗಿದ್ದರು
  • ವಿನಯ್ ಗೌಡ ಮತ್ತು 'ಡ್ರೋನ್' ಪ್ರತಾಪ್‌ಗೆ ನಾಮಿನೇಷನ್‌ನಿಂದ ಪಾರಾಗುವ ಅವಕಾಶ
  • ಮನೆಯ ಸದಸ್ಯರ ಮುಂದೆ ವಿನಯ್ ಗೌಡ ಮತ್ತು 'ಡ್ರೋನ್' ಪ್ರತಾಪ್‌ ಹೇಳಿದ್ದೇನು?

VINAY PRATHAP
'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ, ಜಗಳ ಈಗ ಮಾಮೂಲಾಗಿಬಿಟ್ಟಿದೆ. ಈ ವಾರ ಬರೋಬ್ಬರಿ 9 ಮಂದಿ ನಾಮಿನೇಟ್ ಆಗಿದ್ದರು. ಅದರಲ್ಲೂ ವಿನಯ್‌ ಗೌಡ ಮತ್ತು ಭಾಗ್ಯಶ್ರೀ ಅವರಿಗೆ ತಲಾ ಆರು ಮಂದಿ ನಾಮಿನೇಟ್ ಮಾಡಿದ್ದರು. ಅತೀ ಹೆಚ್ಚು ವೋಟ್ ಕೂಡ ಅವರಿಗೆ ಸಿಕ್ಕಿತ್ತು.
ಭಾಗ್ಯಶ್ರೀ, ವಿನಯ್‌ ಜೊತೆಗೆ 'ಡ್ರೋನ್' ಪ್ರತಾಪ್, ಕಾರ್ತಿಕ್ ಮಹೇಶ್, ನೀತು ವನಜಾಕ್ಷಿ, ಸ್ನೇಹಿತ್, ಮೈಕೆಲ್, ತನಿಷಾ ಕುಪ್ಪಂಡ , ಈಶಾನಿ ಈ ವಾರ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ವಿನಯ್ ಮತ್ತು ಪ್ರತಾಪ್‌ಗೆ ಎಲಿಮಿನೇಷನ್‌ನಿಂದ ಪಾರಾಗುವುದಕ್ಕೆ ಬಿಗ್‌ ಬಾಸ್ ಅವಕಾಶ ನೀಡಿದ್ದರು. ಈ ಇಬ್ಬರು ಸದಸ್ಯರು ಮನೆಯ ಉಳಿದ ಸದಸ್ಯರ ಎದುರು ತಾವೇಕೆ ಈ ಮನೆಯಲ್ಲಿ ಉಳಿಯಬೇಕು ಎಂಬುದರ ಬಗ್ಗೆ ಕಾರಣಗಳನ್ನು ನೀಡಬೇಕಿತ್ತು. ಇಬ್ಬರು ಹೇಳಿದ ಮಾತುಗಳನ್ನು ಗಣನೆಗೆ ತೆಗೆದುಕೊಂಡು, ಒಬ್ಬರನ್ನು ಎಲಿಮಿನೇಷನ್‌ನಿಂದ ಪಾರು ಮಾಡುವ ಅವಕಾಶವನ್ನು ಮನೆಯ ಸದಸ್ಯರಿಗೆ ಬಿಗ್ ಬಾಸ್ ನೀಡಿದರು.

BBK 10: 'ನನ್ನ ಪಕ್ಕದಲ್ಲೇ ಕೂತ ಸ್ನೇಕ್ ಶ್ಯಾಮ್ ಹಾಗೆ ಮಾಡಿದ್ದು ನೋಡಿ ಶಾಕ್ ಆಯ್ತು'- ಗೌರೀಶ್ ಅಕ್ಕಿ ಸಂದರ್ಶನ

ವಿನಯ್ ಗೌಡ ಹೇಳಿದ್ದೇನು?

'ಈ ಮನೆಗೆ ನಾನು ತುಂಬ ಕೊಡುಗೆ ನೀಡಿದ್ದೇನೆ. ಮನೆಯ ಸದಸ್ಯರಿಗೆ ಸಹಾಯ ಮಾಡುತ್ತೇನೆ. ನಾನು ಎಲ್ಲಿಯೂ ಬಚ್ಚಿಟ್ಟುಕೊಳ್ಳುವುದಿಲ್ಲ. ಏನೇ ಇದ್ದರೂ ನಾನು ಎಲ್ಲವನ್ನೂ ನೇರವಾಗಿಯೇ ಹೇಳುತ್ತೇನೆ. ಯಾರ ಹತ್ರ ಸಮಸ್ಯೆ ಇದೆಯೋ, ಅವರ ಬಳಿಯೇ ಬಗೆಹರಿಸಿಕೊಳ್ಳುತ್ತೇನೆ. ನಾನು ಗೊಂದಲ ಮಾಡಿಕೊಳ್ಳುವುದಿಲ್ಲ. ನನ್ನ ನಿರ್ಧಾರಗಳು ಸರಿಯಾಗಿ ಇರುತ್ತವೆ' ಎಂದು ವಿನಯ್ ಗೌಡ ಮನೆಯ ಸದಸ್ಯರ ಎದುರು ಹೇಳಿಕೊಂಡರು.

BBK 10: ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ್ದಕ್ಕೆ ಕಣ್ಣೀರು ಹಾಕಿದ ಪ್ರತಾಪ್; 'ಮನುಷ್ಯರಾ ನೀವೆಲ್ಲ' ಎಂದ ನೆಟ್ಟಿಗರು

ಪ್ರತಾಪ್ ಹೇಳಿದ್ದೇನು?

'ನಾನು ಯಾರ ಮೇಲೂ ರೇಗಾಡುವುದಿಲ್ಲ. ಎಲ್ಲವನ್ನೂ ಸಮಾಧಾನದಿಂದ ಹೇಳುತ್ತೇನೆ. ಯಾರ ಮೇಲೂ ದ್ವೇಷ ಮಾಡಿಕೊಳ್ಳವುದಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುತ್ತೇನೆ. ತಾರತಮ್ಯ ಮಾಡುವುದಿಲ್ಲ. ನಾನು ಇರುವಂತೆಯೇ, ಇಲ್ಲಿಯೂ ಇದ್ದೇನೆ. ಬೇರೆಯವರ ಬಗ್ಗೆ ನನಗೆ ಯೋಚನೆ ಇಲ್ಲ. ಎಲ್ಲರೊಂದಿಗೂ ಚೆನ್ನಾಗಿ ಇರುತ್ತೇನೆ. ಟಾಸ್ಕ್‌ ಅಂತ ಬಂದಾಗ ನಾನು ಚೆನ್ನಾಗಿ ಆಡಿದ್ದೇನೆ. ಎಲ್ಲರ ಜೊತೆಗೆ ನಾನು ಖುಷಿಯಿಂದ ಮಾತಾಡಿದ್ದೇನೆ, ಅಡುಗೆ ಮನೆಯಲ್ಲಿ ಕೆಲಸ ಮಾಡಿದ್ದೇನೆ' ಎಂದು ಪ್ರತಾಪ್ ಹೇಳಿದರು.

BBK 10: ಕಾರ್ತಿಕ್ ವಿಡಿಯೋವನ್ನು ಯಾಕೆ ಪ್ಲೇ ಮಾಡ್ತಿಲ್ಲ? ಬಿಗ್ ಬಾಸ್‌ಗೆ ವಿನಯ್ ಗೌಡ ಪ್ರಶ್ನೆ
ಹೀಗೆ ಇಬ್ಬರು ತಮ್ಮ ಬಗ್ಗೆ ಇಬ್ಬರು ಹೇಳಿಕೊಂಡರು. ಆದರೆ ಆನಂತರ ತಾವೇನೂ ಕೆಲಸ ಮಾಡಿದ್ದೇವೆ ಎಂಬ ವಿಚಾರಗಳ ಬಗ್ಗೆಯೂ ಇಬ್ಬರ ನಡುವೆ ಜೋರು ವಾಗ್ವಾದ ನಡೆಯಿತು. 'ಪ್ರತಾಪ್ ಏನೂ ಮಾಡಿಯೇ ಇಲ್ಲ' ಎಂಬಂತೆ ವಿನಯ್ ಗೌಡ ಮಾತನಾಡಿದರು.

ಇಬ್ಬರ ವಾದ-ಪ್ರತಿವಾದಗಳನ್ನು ಕೇಳಿಸಿಕೊಂಡ ಮನೆಯ ಸದಸ್ಯರು ಒಂದಷ್ಟು ಪ್ರಶ್ನೆಗಳನ್ನು ಪ್ರತಾಪ್‌ಗೆ ಕೇಳಿದರು. ಇನ್ನೊಂದಿಷ್ಟು ಮಂದಿ ಪ್ರತಾಪ್ ಮೇಲೆ ಇದ್ದ ಅಸಮಾಧಾನವನ್ನು ಹೊರಹಾಕಿದರು. 'ನಿಮ್ಮ ಬಗ್ಗೆ ನಾವ್ಯಾರು ಟಾರ್ಗೆಟ್ ಮಾಡಿಲ್ಲ, ಆದರೂ ನೀವು ಅನುಮಾನದಿಂದಲೇ ನೋಡುತ್ತೀರಿ' ಎಂದು ಪ್ರತಾಪ್ ಮೇಲೆ ತುಕಾಲಿ ಸಂತು ಹೇಳಿದರು. ಹಾಗೆಯೇ, ನಮ್ರತಾ ಗೌಡ, ಸ್ನೇಹಿತ್ ಕೂಡ ಪ್ರತಾಪ್‌ ವರ್ತನೆ ಬಗ್ಗೆ ಬೇಸರ ಹೊರಹಾಕಿದರು. ಅಂತಿಮವಾಗಿ ಮನೆಯಲ್ಲಿದ್ದ 12 ಮಂದಿಯೂ ವಿನಯ್‌ಗೆ ವೋಟ್ ಹಾಕಿದರು. ಪ್ರತಾಪ್‌ಗೆ ಒಂದೂ ವೋಟ್‌ ಸಿಗಲಿಲ್ಲ. ಆ ಮೂಲಕ ವಿನಯ್‌ ಗೌಡ ಎಲಿಮಿನೇಷನ್‌ನಿಂದ ಪಾರಾದರು.
ಅವಿನಾಶ್ ಜಿ. ರಾಮ್
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ