ಆ್ಯಪ್ನಗರ

ಮೊದಲ ದಿನ ಬಿಗ್ ಬಾಸ್ ಮನೆಯಲ್ಲಿ ಸಂಯಮ ಮೆರೆದವರು

ಬೆಂಗಳೂರಿನ ಮೊದಲ ಡ್ರ್ಯಾಗ್ ಕ್ವೀನ್ ಆಡಂ ಪಾಶಾ ಅವರಿಗೆ ಸ್ವಲ್ಪ ಭಾಷೆ ಸಮಸ್ಯೆ ಇದ್ದರೂ ಇದ್ದುದ್ದರಲ್ಲಿ ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಅವರು ಪ್ರಾಮಾಣಿಕ ಪ್ರಯತ್ನವನ್ನೇ ಮಾಡಿದ್ದಾರೆ.

Vijaya Karnataka Web 23 Oct 2018, 6:13 pm
ಬಿಗ್ ಬಾಸ್ ಮನೆ ಎಂದರೆ ಅಲ್ಲಿ ಜಗಳ, ಗುಂಪುಗಾರಿಕೆ, ಸ್ಟ್ರಾಟಜಿ, ಪ್ಲಾನ್, ಮಾತು, ವಾದ ವಿವಾದಗಳೇ ಜಾಸ್ತಿ. ಅದರಲ್ಲೂ ಕೆಲವರಂತೂ ಮಾತನಾಡುವುದಕ್ಕೇ ಬಂದಿದ್ದು ಎಂಬಂತೆ ವರ್ತಿಸುತ್ತಾರೆ. ಬಿಗ್ ಬಾಸ್ ಕನ್ನಡ 6ನೇ ಸೀಸನ್‌ನಲ್ಲಿ ಮೊದಲ ದಿನವೇ ಇದು ವೀಕ್ಷಕರ ಅನುಭವಕ್ಕೆ ಬಂದಿದೆ.
Vijaya Karnataka Web rajesh1


ರ‍್ಯಾಪಿಡ್ ರಶ್ಮಿ, ಆಂಡ್ರೂ, ಸೋನು ಪಾಟೀಲ್, ಜಯಶ್ರೀ ತಾವು ವಾಚಾಳಿಗಳು ಎಂಬುದನ್ನು ಮೊದಲ ದಿನವೇ ತೋರಿಸಿದ್ದಾರೆ. ಇವರೆಲ್ಲ ಸುಖಾಸುಮ್ಮನೆ ಮಾತನಾಡಿ ಮೊದಲ ದಿನದ ಎಪಿಸೋಡ್‌ ಮುಂದಕ್ಕೆ ಕೊಂಡೊಯ್ದರು ಎಂಬುದನ್ನು ಬಿಟ್ಟರೆ ಮನೆಯಲ್ಲಿ ಯಾವುದೇ ವಿಚಾರಗಳು ಚರ್ಚೆಯಾಗಲಿಲ್ಲ.

ಬೆಂಗಳೂರಿನ ಮೊದಲ ಡ್ರ್ಯಾಗ್ ಕ್ವೀನ್ ಆಡಂ ಪಾಶಾ ಅವರಿಗೆ ಸ್ವಲ್ಪ ಭಾಷೆ ಸಮಸ್ಯೆ ಇದ್ದರೂ ಇದ್ದುದ್ದರಲ್ಲಿ ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಅವರು ಪ್ರಾಮಾಣಿಕ ಪ್ರಯತ್ನವನ್ನೇ ಮಾಡಿದ್ದಾರೆ. ಆದರೆ ಇವರು ಮನೆಯಲ್ಲಿ ಎಷ್ಟು ದಿನ ಉಳಿಯುತ್ತಾರೆ ಎಂಬುದೇ ಪ್ರಶ್ನಾರ್ಥಕ.

ಉಳಿದ ಸ್ಪರ್ಧಿಗಳಾದ ಎಂಜೆ ರಾಜೇಶ್, ಮುರಳಿ, ಶಶಿಕುಮಾರ್, ಆನಂದ್ ಮಾಲಗತ್ತಿ, ನಯನ ಪುಟ್ಟಸ್ವಾಮಿ, ಧನರಾಜ್ ಅವರು ಮೊದಲ ದಿನ ಸಂಯಮ ಮೆರೆದಿದ್ದಾರೆ. ಅದರಲ್ಲೂ ರಾಜೇಶ್, ಮುರಳಿ, ಆನಂದ್, ಶಶಿ ಮಾತುಗಾರರಾದರೂ ಅನಗತ್ಯ ಮಾತಿಗೆ ಮನೆಯಲ್ಲಿ ಅವಕಾಶ ಮಾಡಿಕೊಡಲಿಲ್ಲ. ಮೊದಲ ದಿನ ಗಮನಸೆಳೆದ ಸಂಗತಿಗಳಲ್ಲಿ ಇದೂ ಒಂದು ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ