'ಬಿಗ್ ಬಾಸ್ ಕನ್ನಡ 8' ಕಾರ್ಯಕ್ರಮದ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ. ಸೆಕೆಂಡ್ ಇನ್ನಿಂಗ್ಸ್ನಲ್ಲಿ 'ಬಿಗ್ ಬಾಸ್' ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ (ಲೀಡರ್ಸ್ ವರ್ಸಸ್ ಚಾಲೆಂಜರ್ಸ್) ವಿಭಜಿಸಲಾಗಿದೆ. ಲೀಡರ್ಸ್ ಮತ್ತು ಚಾಲೆಂಜರ್ಸ್ ತಂಡಗಳಿಗೆ 'ಬಿಗ್ ಬಾಸ್' ಕುರ್ಚಿ ಪಾಲಿಟಿಕ್ಸ್ ಎಂಬ ಟಾಸ್ಕ್ ನೀಡಿದ್ದರು. 'ಕುರ್ಚಿ ಪಾಲಿಟಿಕ್ಸ್' ಟಾಸ್ಕ್ ಅನ್ವಯ ಎರಡೂ ತಂಡಗಳಿಂದ ತಲಾ ಮೂವರು ಸ್ಪರ್ಧಿಗಳು ಸೀಟಿನ ಮೇಲೆ ಕೂರಬೇಕಿತ್ತು. ಪರಿಣಾಮ, ಮಂಜು ಪಾವಗಡ, ಶಮಂತ್, ಪ್ರಿಯಾಂಕಾ, ನಿಧಿ ಸುಬ್ಬಯ್ಯ, ವೈಷ್ಣವಿ ಗೌಡ ಮತ್ತು ಪ್ರಶಾಂತ್ ಸಂಬರಗಿ ಸೀಟಿನ ಮೇಲೆ ಕೂತರು.
'ಕುರ್ಚಿ ಪಾಲಿಟಿಕ್ಸ್' ಟಾಸ್ಕ್ ಸತತ 38 ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. 38 ಗಂಟೆಗಳಿಗೂ ಹೆಚ್ಚು ಕಾಲ ಕುರ್ಚಿ ಮೇಲೆ ಮಂಜು ಪಾವಗಡ ಮತ್ತು ಪ್ರಶಾಂತ್ ಸಂಬರಗಿ ಕೂತಿದ್ದರು. ತಿಂಡಿಗಾಗಲಿ ಅಥವಾ ಬಾತ್ರೂಮ್ಗಾಗಲಿ ಯಾವುದಕ್ಕೂ ಎದ್ದೇಳದೇ 38 ಗಂಟೆಗಳಿಗೂ ಹೆಚ್ಚು ಕಾಲ ಕುರ್ಚಿ ಮೇಲೆ ಕೂತು ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
ಮೊದಲೇ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ನಡುವೆ ಅಷ್ಟಕಷ್ಟೆ. ಇಬ್ಬರ ನಡುವೆ ಮೊದಲ ಇನ್ನಿಂಗ್ಸ್ನಲ್ಲೇ ಜಟಾಪಟಿ ನಡೆದಿತ್ತು. ಅದು ಈಗಲೂ ಮುಂದುವರೆದಿದ್ದು, ಇಬ್ಬರೂ ಜಿದ್ದಿಗೆ ಬಿದ್ದು ಕುರ್ಚಿ ಮೇಲೆ ಗಂಟೆಗಟ್ಟಲೆ ಕೂತಿದ್ದರು. ಕೊನೆಯಲ್ಲಿ ಕೈ ಮತ್ತು ಕಾಲುಗಳಲ್ಲಿ ಅತೀವ ನೋವು ಕಂಡುಬಂದ ಕಾರಣ ಪ್ರಶಾಂತ್ ಸಂಬರಗಿ ಕುರ್ಚಿಯಿಂದ ಮೇಲೆದ್ದರು. ಕೊನೆಯವರೆಗೂ ಕುರ್ಚಿ ಮೇಲೆ ಕೂತಿದ್ದ ಮಂಜು ಪಾವಗಡ ಗೆದ್ದರು.
ಪ್ರಶಾಂತ್ ಸಂಬರಗಿ ಹೇಳಿದ್ದೇನು?
''ಕೊನೆಯ ಎರಡು ಗಂಟೆಗಳು ತುಂಬಾ ಕಷ್ಟ ಆಯ್ತು. ನೀರು ಕುಡಿದಿರಲಿಲ್ಲ. ಅದರಿಂದ ಡೀಹೈಡ್ರೇಷನ್ ಆಯ್ತು. ತುಂಬಾ ನೋವಾಗಲು ಶುರುವಾಯಿತು. ಕೈ-ಕಾಲು ಅಲುಗಾಡಿಸುತ್ತಿದ್ದರೂ, ಸರಿ ಹೋಗುತ್ತಿರಲಿಲ್ಲ'' ಎಂದು ಕಿಚ್ಚ ಸುದೀಪ್ ಮುಂದೆ ಪ್ರಶಾಂತ್ ಸಂಬರಗಿ ಹೇಳಿದರು.
ಆಗ ''38 ಗಂಟೆ ಮೋಟಿವೇಟ್ ಮಾಡಿದ್ದು ಟಾಸ್ಕ್ ಅಂತ ಹೇಳಿದ್ರಿ. ಎರಡನೇಯದ್ದು ಮಂಜು ಇರಬಹುದಾ..?'' ಎಂದು ಪ್ರಶಾಂತ್ ಸಂಬರಗಿಗೆ ಸುದೀಪ್ ಪ್ರಶ್ನೆ ಮಾಡಿದರು. ಅದಕ್ಕೆ, ''ಮೈಂಡ್ ಗೇಮ್ ಆಡೋಣ ಅಂತ ಆಡಿದೆ. ಅವನು ನನ್ನ ಮೇಲೆಯೇ ಮೈಂಡ್ ಗೇಮ್ ಶುರು ಮಾಡಿದ'' ಅಂತ ಪ್ರಶಾಂತ್ ಸಂಬರಗಿ ಉತ್ತರಿಸಿದರು.
ಮಂಜು ಪಾವಗಡ ಹೇಳಿದ್ದೇನು?
''ಬೇಕಿದ್ದರೆ ಇನ್ನೂ ಎರಡು ದಿನ ಕೂತುಕೊಳ್ಳುತ್ತಿದ್ದೆ ಅಂತ ಹೇಳಿದ್ರಿ. ಅದು ತಮಾಷೆಗಾ?'' ಎಂದು ಮಂಜು ಪಾವಗಡಗೆ ಸುದೀಪ್ ಪ್ರಶ್ನೆ ಮಾಡಿದರು. ಅದಕ್ಕೆ, ''ಎಷ್ಟು ದಿನ ಬೇಕಾದರೂ ಕೂರುತ್ತಿದ್ದೆ. ಪ್ರಶಾಂತ್ ಇರೋದಕ್ಕೋಸ್ಕರ ನಾನು ಕೂತಿದ್ದೆ. ಅವರೂ ಕೂತಿದ್ದು ನಾನಿದ್ದೆ ಎಂಬ ಕಾರಣಕ್ಕೆ'' ಅಂತ ಮಂಜು ಪಾವಗಡ ಹೇಳಿದರು.
'ಕುರ್ಚಿ ಪಾಲಿಟಿಕ್ಸ್' ಟಾಸ್ಕ್ ಸತತ 38 ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. 38 ಗಂಟೆಗಳಿಗೂ ಹೆಚ್ಚು ಕಾಲ ಕುರ್ಚಿ ಮೇಲೆ ಮಂಜು ಪಾವಗಡ ಮತ್ತು ಪ್ರಶಾಂತ್ ಸಂಬರಗಿ ಕೂತಿದ್ದರು. ತಿಂಡಿಗಾಗಲಿ ಅಥವಾ ಬಾತ್ರೂಮ್ಗಾಗಲಿ ಯಾವುದಕ್ಕೂ ಎದ್ದೇಳದೇ 38 ಗಂಟೆಗಳಿಗೂ ಹೆಚ್ಚು ಕಾಲ ಕುರ್ಚಿ ಮೇಲೆ ಕೂತು ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
ಮೊದಲೇ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ನಡುವೆ ಅಷ್ಟಕಷ್ಟೆ. ಇಬ್ಬರ ನಡುವೆ ಮೊದಲ ಇನ್ನಿಂಗ್ಸ್ನಲ್ಲೇ ಜಟಾಪಟಿ ನಡೆದಿತ್ತು. ಅದು ಈಗಲೂ ಮುಂದುವರೆದಿದ್ದು, ಇಬ್ಬರೂ ಜಿದ್ದಿಗೆ ಬಿದ್ದು ಕುರ್ಚಿ ಮೇಲೆ ಗಂಟೆಗಟ್ಟಲೆ ಕೂತಿದ್ದರು. ಕೊನೆಯಲ್ಲಿ ಕೈ ಮತ್ತು ಕಾಲುಗಳಲ್ಲಿ ಅತೀವ ನೋವು ಕಂಡುಬಂದ ಕಾರಣ ಪ್ರಶಾಂತ್ ಸಂಬರಗಿ ಕುರ್ಚಿಯಿಂದ ಮೇಲೆದ್ದರು. ಕೊನೆಯವರೆಗೂ ಕುರ್ಚಿ ಮೇಲೆ ಕೂತಿದ್ದ ಮಂಜು ಪಾವಗಡ ಗೆದ್ದರು.
ಪ್ರಶಾಂತ್ ಸಂಬರಗಿ ಹೇಳಿದ್ದೇನು?
''ಕೊನೆಯ ಎರಡು ಗಂಟೆಗಳು ತುಂಬಾ ಕಷ್ಟ ಆಯ್ತು. ನೀರು ಕುಡಿದಿರಲಿಲ್ಲ. ಅದರಿಂದ ಡೀಹೈಡ್ರೇಷನ್ ಆಯ್ತು. ತುಂಬಾ ನೋವಾಗಲು ಶುರುವಾಯಿತು. ಕೈ-ಕಾಲು ಅಲುಗಾಡಿಸುತ್ತಿದ್ದರೂ, ಸರಿ ಹೋಗುತ್ತಿರಲಿಲ್ಲ'' ಎಂದು ಕಿಚ್ಚ ಸುದೀಪ್ ಮುಂದೆ ಪ್ರಶಾಂತ್ ಸಂಬರಗಿ ಹೇಳಿದರು.
ಆಗ ''38 ಗಂಟೆ ಮೋಟಿವೇಟ್ ಮಾಡಿದ್ದು ಟಾಸ್ಕ್ ಅಂತ ಹೇಳಿದ್ರಿ. ಎರಡನೇಯದ್ದು ಮಂಜು ಇರಬಹುದಾ..?'' ಎಂದು ಪ್ರಶಾಂತ್ ಸಂಬರಗಿಗೆ ಸುದೀಪ್ ಪ್ರಶ್ನೆ ಮಾಡಿದರು. ಅದಕ್ಕೆ, ''ಮೈಂಡ್ ಗೇಮ್ ಆಡೋಣ ಅಂತ ಆಡಿದೆ. ಅವನು ನನ್ನ ಮೇಲೆಯೇ ಮೈಂಡ್ ಗೇಮ್ ಶುರು ಮಾಡಿದ'' ಅಂತ ಪ್ರಶಾಂತ್ ಸಂಬರಗಿ ಉತ್ತರಿಸಿದರು.
ಮಂಜು ಪಾವಗಡ ಹೇಳಿದ್ದೇನು?
''ಬೇಕಿದ್ದರೆ ಇನ್ನೂ ಎರಡು ದಿನ ಕೂತುಕೊಳ್ಳುತ್ತಿದ್ದೆ ಅಂತ ಹೇಳಿದ್ರಿ. ಅದು ತಮಾಷೆಗಾ?'' ಎಂದು ಮಂಜು ಪಾವಗಡಗೆ ಸುದೀಪ್ ಪ್ರಶ್ನೆ ಮಾಡಿದರು. ಅದಕ್ಕೆ, ''ಎಷ್ಟು ದಿನ ಬೇಕಾದರೂ ಕೂರುತ್ತಿದ್ದೆ. ಪ್ರಶಾಂತ್ ಇರೋದಕ್ಕೋಸ್ಕರ ನಾನು ಕೂತಿದ್ದೆ. ಅವರೂ ಕೂತಿದ್ದು ನಾನಿದ್ದೆ ಎಂಬ ಕಾರಣಕ್ಕೆ'' ಅಂತ ಮಂಜು ಪಾವಗಡ ಹೇಳಿದರು.