ಆ್ಯಪ್ನಗರ

ಬಿಗ್ ಬಾಸ್‌ನಿಂದ ಹೊರಬಂದ್ಮೇಲೆ ಮದುವೆ ಸಂಬಂಧ ಸಿಕ್ಕಾಪಟ್ಟೆ ಬಂದಿವೆ ಎಂದ ವೈಷ್ಣವಿ ಗೌಡ!

ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ, ನಟಿ ವೈಷ್ಣವಿ ಅವರ ಗುಣ ಅನೇಕ ಬಿಗ್ ಬಾಸ್ ಪ್ರಿಯರಿಗೆ ಇಷ್ಟವಾಗಿತ್ತು. ಈಗ ಅವರಿಗೆ ಸಿಕ್ಕಾಪಟ್ಟೆ ಮದುವೆ ಸಂಬಂಧಗಳು ಹುಡುಕಿಕೊಂಡು ಬಂದಿವೆಯಂತೆ. ಆ ಬಗ್ಗೆ ವೈಷ್ಣವಿ ಹೇಳಿದ್ದೇನು?

Vijaya Karnataka Web 12 May 2021, 4:58 pm
ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ, 'ಅಗ್ನಿಸಾಕ್ಷಿ' ಧಾರಾವಾಹಿಯ ನಟಿ ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಮೇಲೆ ಫೇಸ್‌ಬುಕ್ ಲೈವ್ ಮೂಲಕ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ ಎಲ್ಲ ಸ್ಪರ್ಧಿಗಳ ಬಗ್ಗೆ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನು ಅವರಿಗೆ ಸಿಕ್ಕಾಪಟ್ಟೆ ಮೆಸೇಜ್ ಬಂದಿದ್ದು, ಮದುವೆ ಪ್ರಪೋಸಲ್ ಕೂಡ ಬಂದಿದೆ.
Vijaya Karnataka Web bigg boss kannada 8 vaishnavi gowda getting more marriage proposal
ಬಿಗ್ ಬಾಸ್‌ನಿಂದ ಹೊರಬಂದ್ಮೇಲೆ ಮದುವೆ ಸಂಬಂಧ ಸಿಕ್ಕಾಪಟ್ಟೆ ಬಂದಿವೆ ಎಂದ ವೈಷ್ಣವಿ ಗೌಡ!


ಫೇವರಿಟ್ ಸ್ಪರ್ಧಿ ಯಾರು?

ಎಲ್ಲರೂ ಒಂದೊಂದು ರೀತಿಯಲ್ಲಿ ತುಂಬ ಇಷ್ಟ. ದಿವ್ಯಾ ಉರುಡುಗ ಅವರು ಕೊನೆ ಕೊನೆಯಲ್ಲಿ ಇಷ್ಟ ಆದ್ರು. ಆರೋಗ್ಯದ ಕಾರಣಕ್ಕೆ ಅವರು ಮನೆಯಿಂದ ಹೊರಹೋಗಿದ್ದು ಬೇಜಾರು ಆಯ್ತು, ತುಂಬ ಮಿಸ್ ಮಾಡಿಕೊಂಡೆ

ಯಾವ ವಿಷಯವನ್ನು ಮನೆಯೊಳಗಡೆ ಮಾಡಬೇಕು ಎಂದುಕೊಂಡಿದ್ರಿ? ಆಯ್ತಾ?

ಶಾಂತಿ ಹರಡಬೇಕು ಎಂದುಕೊಂಡಿದ್ದೆ

ಯಾವ ಒಂದು ವಿಷಯ ಬಿಗ್ ಬಾಸ್ ಮನೆಯಲ್ಲಿ ಮಾಡಬಾರದಾಗಿತ್ತು?

ನನಗೆ ಯಾವ ವಿಷಯವನ್ನು ಬದಲಾಯಿಸಲು ಇಷ್ಟ ಇಲ್ಲ, ಪಶ್ಚಾತ್ತಾಪವೂ ಇಲ್ಲ. ಪಶ್ಚಾತ್ತಾಪ ಇಟ್ಟುಕೊಳ್ಳಲು ಇಷ್ಟ ಇಲ್ಲ

ಬಿಗ್ ಬಾಸ್ ಮನೆಯಲ್ಲಿ ಉತ್ತಮ ಕ್ಷಣ ಯಾವುದು?

ಪ್ರತಿಯೊಂದು ಕ್ಷಣವೂ ಉತ್ತಮವಾಗಿತ್ತು, ಬೇಜಾರಾಗಿರಲಿಲ್ಲ

ಶೂನ್ಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಜೀವನ ಶೂನ್ಯ ಅಂತ ನಾನು ಹೇಳಿದ್ದು ಜನರು ಇಷ್ಟೊಂದು ಮಾತನಾಡ್ತಾರೆ ಅಂತ ಗೊತ್ತಿರಲಿಲ್ಲ. ಹುಟ್ಟುತ್ತ ಏನೂ ತಂದಿರೋದಿಲ್ಲ, ಹೋಗುವಾಗಲೂ ಏನೂ ತಗೊಂಡು ಹೋಗೋದಿಲ್ಲ

ಬಿಗ್ ಬಾಸ್ ಜರ್ನಿ ಮುಗಿಯತ್ತೆ ಅಂದಾಗ ಏನಿ ಅನಿಸಿತು?

ತುಂಬ ಬೇಜಾರಾಯ್ತು, ಎಲ್ಲರೂ ಶಾಕ್‌ನಲ್ಲಿದ್ದರು. ಮುಂದೇನು ಎನ್ನುವ ಪ್ರಶ್ನೆ ಬಂದಿದೆ

ವೈಷ್ಣವಿಗೆ 'ನಿನ್‌ ಗಂಡ ಓಡಿ ಹೋಗ್ತಾನೆ' ಎಂದ ಶುಭಾ; ಆದ್ರೆ ಮದ್ವೆ ಬಗ್ಗೆ 'ಸನ್ನಿಧಿ' ಹೇಳಿದ್ದೇ ಬೇರೆ!

ಎರಡು ಮೂರು ಬಾರಿ ಅಡುಗೆ ವಿಚಾರದಲ್ಲಿ ಪ್ರಶಾಂತ್ ಸಂಬರಗಿ ಮೇಲೆ ಆಪಾದನೆ ಬಂದಾಗ ನೀವು ಯಾಕೆ ಮೌನವಾಗಿದ್ರಿ?

ಎಲ್ಲರೂ ಬದುಕೋದು ಹೊಟ್ಟೆಗಾಗಿ, ಅದೆಲ್ಲ ವೈಯಕ್ತಿಕ ವಿಷಯ. ಸರಿ-ತಪ್ಪು ಎಲ್ಲವೂ ಆಗಿವೆ.

ಬಿಗ್ ಬಾಸ್ ಜರ್ನಿ ಬಗ್ಗೆ ನಿಮ್ಮ ಮಾತು..

ಎಷ್ಟೇ ಕೋಟಿ ದುಡಿದರೂ ಬಿಗ್ ಬಾಸ್ ಜರ್ನಿ ಮತ್ತೆ ಸಿಗದು. ಎಲ್ಲರಿಗೂ ಧನ್ಯವಾದಗಳು

ಹೊರಗಡೆ ಬಂದಮೇಲೆ ಮಾಡಿದ ಮೊದಲ ಕೆಲಸ ಏನು?
ಅಮ್ಮನಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದೆ

"ರಘು ಗೌಡಗೆ ಹೆಂಡ್ತಿ, ಮಗು ಇದೆ, ನನ್ನ-ರಘು ಬಗ್ಗೆ ಈ ರೀತಿ ಮಾತನಾಡಬೇಡಿ ಅಂತ ಶುಭಾ ಪೂಂಜಾ ಬಳಿ ವೈಷ್ಣವಿ ಗೌಡ ಮನವಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ