ಆ್ಯಪ್ನಗರ

BBK 9: ‘ಬಿಗ್ ಬಾಸ್’ ಮನೆಯಲ್ಲಿ ಅರುಣ್ ಸಾಗರ್ ಮಾಡ್ತಿರುವ ಈ ಕೆಲಸ ಯಾರಿಗೂ ಗೊತ್ತಿಲ್ಲ!

‘ಬಿಗ್ ಬಾಸ್’ ಮನೆಯಲ್ಲಿ ಅರುಣ್ ಸಾಗರ್ ಯಾರಿಗೂ ಗೊತ್ತಾಗದ ಹಾಗೆ ಒಂದು ಕೆಲಸವನ್ನ ಮಾಡ್ತಿದ್ದಾರೆ. ಅದೇನಪ್ಪಾ ಅಂದ್ರೆ…

Authored byಹರ್ಷಿತಾ ಎನ್ | Vijaya Karnataka Web 30 Sep 2022, 3:53 pm

ಹೈಲೈಟ್ಸ್‌:

  • ‘ಬಿಗ್ ಬಾಸ್’ ಮನೆಯಲ್ಲಿ ಅರುಣ್ ಸಾಗರ್ - ನವಾಜ್ ಜೋಡಿ
  • ನವಾಜ್‌ಗೆ ಗೈಡ್ ಮಾಡುತ್ತಿದ್ದಾರೆ ಅರುಣ್ ಸಾಗರ್
  • ಅರುಣ್ ಸಾಗರ್‌ರಿಂದಾಗಿ ನವಾಜ್ ‘ಬಿಗ್ ಬಾಸ್’ ಮನೆಯಲ್ಲಿ ಶಾಂತವಾಗಿದ್ದಾರೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bigg boss kannada 9 day 5 arun sagar guides nawaz
BBK 9: ‘ಬಿಗ್ ಬಾಸ್’ ಮನೆಯಲ್ಲಿ ಅರುಣ್ ಸಾಗರ್ ಮಾಡ್ತಿರುವ ಈ ಕೆಲಸ ಯಾರಿಗೂ ಗೊತ್ತಿಲ್ಲ!
‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಎಂಟರ್‌ಟೇನರ್ ಯಾರು ಅಂದ್ರೆ ಎಲ್ಲರೂ ಒಪ್ಪಿಕೊಳ್ಳುವ ಹೆಸರು ‘ಅರುಣ್ ಸಾಗರ್’. ‘’ರೂಲ್ಸ್ ಫಾಲೋ ಮಾಡ್ತಿಲ್ಲ. ಟಾಸ್ಕ್‌ಗಳಲ್ಲಿ ಸೀರಿಯಸ್ ಆಗಿಲ್ಲ’’ ಅಂತ ಯಾರು ಏನೇ ಮಾತನಾಡಿಕೊಂಡರೂ, ಆರುಣ್ ಸಾಗರ್ ಅವರ ಎನರ್ಜಿಯಲ್ಲಿ ಸ್ವಲ್ಪ ಕೂಡ ಕಡಿಮೆ ಆಗಿಲ್ಲ. ‘ಬಿಗ್ ಬಾಸ್’ ಮನೆಯಲ್ಲಿ ಅರುಣ್ ಸಾಗರ್ ಮಸ್ತ್ ಮನರಂಜನೆ ನೀಡುತ್ತಿದ್ದಾರೆ. ಹೀಗಿರುವಾಗಲೇ, ‘ಬಿಗ್ ಬಾಸ್’ ಮನೆಯಲ್ಲಿ ಅರುಣ್ ಸಾಗರ್ ಯಾರಿಗೂ ಗೊತ್ತಾಗದ ಹಾಗೆ ಒಂದು ಕೆಲಸವನ್ನ ಮಾಡ್ತಿದ್ದಾರೆ.
ಅದೇನಪ್ಪಾ ಅಂದ್ರೆ, ಮಾತ್ತೆತ್ತಿದರೆ ಹೊಡೆದಾಕಿಬಿಡ್ತೀನಿ, ಬಡಿದಾಕ್ತೀನಿ ಅಂತ ಹೇಳುವ ನವಾಜ್‌ಗೆ ಧ್ಯಾನ ಮಾಡಿಸಿ ಕೋಪ ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ ಅಂತ ಅರುಣ್ ಸಾಗರ್ ಹೇಳಿಕೊಡುತ್ತಿದ್ದಾರೆ. ಆ ಮೂಲಕ ನವಾಜ್‌ಗೆ ಅರುಣ್ ಸಾಗರ್ ಗೈಡ್ ಆಗಿದ್ದಾರೆ. ಅರುಣ್ ಸಾಗರ್ ಗರಡಿಯಲ್ಲಿ ನವಾಜ್ ಪಳಗುತ್ತಿದ್ದಾರೆ.

BBK 9: ‘ಬಿಗ್ ಬಾಸ್’ ಮನೆಯಲ್ಲಿ ಅಕ್ಕಮಹಾದೇವಿ ವಚನ: ತಾಯಿ ಎಂಬ ಶಕ್ತಿಯನ್ನ ನಮಿಸಬೇಕು ಎಂದ ಅರುಣ್ ಸಾಗರ್

ಜೋಡಿ
ಮೊದಲ ವಾರವೇ ‘ಬಿಗ್ ಬಾಸ್’ ಬಿಗ್ ಟ್ವಿಸ್ಟ್ ಕೊಟ್ಟಿದ್ದರು. ಓರ್ವ ಸೀನಿಯರ್ ಹಾಗೂ ಓರ್ವ ಫ್ರೆಶರ್ ಜೋಡಿಯಾಗಬೇಕಿತ್ತು. ಇದರಲ್ಲಿ ಬಿಸಿ ರಕ್ತದ ಯುವಕ ನವಾಜ್‌ರನ್ನ ಅರುಣ್ ಸಾಗರ್ ಆಯ್ಕೆ ಮಾಡಿಕೊಂಡರು.

BBK 9: ಬಿಗ್ ಬಾಸ್ ಫಲಿತಾಂಶ ಅನೌನ್ಸ್ ಮಾಡುವಾಗ ಏನಾಯ್ತು? ಅರುಣ್ ಸಾಗರ್ ತಪ್ಪಿದ್ಯಾ? ಕಿರುಚಿದ್ದು ಯಾರು?

ಅರುಣ್ ಸಾಗರ್ ಅವರ ‘ಕೆಲಸ’ದ ಬಗ್ಗೆ ವಿನೋದ್ ಗೊಬ್ಬರಗಾಲ ಮಾತು
‘’ಇನ್ನೊಂದು ಮಿರಾಕಲ್ ಗೊತ್ತಾ ಇಲ್ಲಿ… ನಿಮಗ್ಯಾರಿಗೂ ಗೊತ್ತಿಲ್ಲ. ಆದರೆ, ನನಗೆ ಗೊತ್ತು. ಇಲ್ಲೊಂದು ಇದೆ (ನವಾಜ್) ನೋಡಿ.. ನಾನು ಹೊಡೆದು ಹಾಕುತ್ತೇನೆ ಅಂತಿದ್ದವನು (ನವಾಜ್) ಇವತ್ತು ಶಾಂತ ಮೂರ್ತಿಯಾಗಿ ಕೂತಿದ್ದಾನೆ. ಅದಕ್ಕೆ ಕಾರಣ ಅರುಣ್ ಅಣ್ಣ ಮಾಡಿಸುತ್ತಿರುವ ಧ್ಯಾನ. ಈ ಮಾವುತನ ಕಾರಣದಿಂದ ಅವನು (ನವಾಜ್) ಹೀಗಾಗುತ್ತಿದ್ದಾನೆ’’

‘’ಅವನೇ (ನವಾಜ್) ಹೇಳಿದ.. ಇವರ ಜೊತೆ ಸೇರಿದ್ಮೇಲೆ ನಾನು ಹೀಗೆ ಆಗಿದ್ದೇನೆ ಅಂತ.. ಇಲ್ಲಾಂದ್ರೆ, ಎಲ್ಲಿ ಹೊಡೆದಾಡುತ್ತೇನೋ ಅಂತ’’ ಎಂದು ಎಲ್ಲರ ಮುಂದೆಯೇ ವಿನೋದ್ ಗೊಬ್ಬರಗಾಲ ಹೇಳಿದರು.

BBK 9: ಅರುಣ್ ಸಾಗರ್‌ಗೆ ಸಿಕ್ತು ವಿಧೂಷಕ, ನಾಯಕ, ಗೆಳೆಯನ ಪಟ್ಟಿ! ಮಿಕ್ಕವರಿಗೆ ಲಭಿಸಿದ್ದೇನು?

ಅರುಣ್ ಸಾಗರ್ ಹೇಳಿದ್ದೇನು?
‘’ಬಿಗ್ ಬಾಸ್ ಒಂದು ಶೋ ಮಾತ್ರ ಅಲ್ಲ. ನಾನು ಗೆಲ್ಲಬೇಕು, ಕಪ್ ಹಿಡ್ಕೋಬೇಕು ಅಂತ ಅಲ್ಲ. ಬಿಗ್ ಬಾಸ್‌ಗೆ ನಾನು ಬಂದಿರೋದೇ ನನ್ನನ್ನ ನಾನು ಮತ್ತೆ ಕಂಡುಕೊಳ್ಳೋಕೆ. ಇದೆಲ್ಲದಕ್ಕಿಂತ ನಿಮಗೊಂದು ದೊಡ್ಡ ಸ್ಪೇಸ್ ಇದೆ ಇಲ್ಲಿ. ಈ ಸ್ಪೇಸ್ ನಿಮಗೆ ಎಲ್ಲಿ ಸಿಗುತ್ತೆ? ನಾನು ಚಾಲೆಂಜ್ ಮಾಡ್ತೀನಿ.. ಈ ಸ್ಪೇಸ್ ನಿಮಗೆ ಯಾರೂ ಕೊಡಲ್ಲ. ಮೊದಲ ಬಿಗ್ ಬಾಸ್‌ನಲ್ಲಿ ನೀವು ಗೆಲ್ಲಬೇಕಿತ್ತು ನನಗೆ ಎಷ್ಟೋ ಜನ ಹೇಳಿದರು. ನಾನು ತಲೆ ಕೆಡಿಸಿಕೊಳ್ಳಲಿಲ್ಲ. ನಾವು ಗೆಲುವಾಗಿರಬೇಕು ಅಷ್ಟೇ’’ ಎಂದರು ನಟ ಅರುಣ್ ಸಾಗರ್.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ