ಆ್ಯಪ್ನಗರ

BBK 9: ಬೆಳ್ಳಂಬೆಳಗ್ಗೆ ಸ್ಪರ್ಧಿಗಳಿಗೆ ಶಾಕ್ ಕೊಟ್ಟ ‘ಬಿಗ್ ಬಾಸ್’! ಇವತ್ತು ಅಮಾವಾಸ್ಯೆ ಎಂದ ಆರ್ಯವರ್ಧನ್ ಗುರೂಜಿ!

‘ಬಿಗ್ ಬಾಸ್’ ಮನೆಗೆ ಎಂಟ್ರಿಕೊಟ್ಟ 18 ಸ್ಪರ್ಧಿಗಳನ್ನು 9 ಜೋಡಿಗಳಾಗಿ ವಿಭಜಿಸಲಾಗಿದೆ. ಓರ್ವ ನವೀನರು ಹಾಗೂ ಓರ್ವ ಪ್ರವೀಣರು ‘ಜೋಡಿ’ಯಾಗಿ ‘ಬಿಗ್ ಬಾಸ್’ ಕೊಡುವ ಟಾಸ್ಕ್‌ಗಳಲ್ಲಿ ಪರ್ಫಾಮ್ ಮಾಡಬೇಕಿದೆ. ಹೀಗಿರುವಾಗಲೇ, ಎರಡನೇ ದಿನ ಎಲ್ಲಾ 9 ಜೋಡಿಗಳಿಗೆ ‘ಬಿಗ್ ಬಾಸ್’ ಶಾಕ್ ಕೊಟ್ಟಿದ್ದಾರೆ..!

Authored byಹರ್ಷಿತಾ ಎನ್ | Vijaya Karnataka Web 26 Sep 2022, 11:18 pm

ಹೈಲೈಟ್ಸ್‌:

  • ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ವಿಶೇಷ ಟಾಸ್ಕ್
  • ಮೆದುಳಿಗೆ ಸಂಬಂಧಪಟ್ಟ ಆಟಗಳನ್ನ ನೀಡಿದ ‘ಬಿಗ್ ಬಾಸ್’
  • ಸ್ಪರ್ಧಿಗಳಿಗೆ ‘ಶಾಕ್’ ಕೊಟ್ಟ ‘ಬಿಗ್ ಬಾಸ್’

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bigg boss kannada day 2 written update contestants gets task related to brain
BBK 9: ಬೆಳ್ಳಂಬೆಳಗ್ಗೆ ಸ್ಪರ್ಧಿಗಳಿಗೆ ಶಾಕ್ ಕೊಟ್ಟ ‘ಬಿಗ್ ಬಾಸ್’! ಇವತ್ತು ಅಮಾವಾಸ್ಯೆ ಎಂದ ಆರ್ಯವರ್ಧನ್ ಗುರೂಜಿ!
‘ಬಿಗ್ ಬಾಸ್ ಕನ್ನಡ 9’ (Bigg Boss Kannada 9) ಕಾರ್ಯಕ್ರಮ ಆರಂಭಗೊಂಡಿದೆ. ಪ್ರವೀಣರು ಹಾಗೂ ನವೀನರು ನಡುವಿನ ಹಣಾಹಣಿಯಾಗಿರುವ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಮೊದಲ ದಿನವೇ ಬಿಗ್ ಟ್ವಿಸ್ಟ್ ನೀಡಲಾಗಿದೆ. ‘ಬಿಗ್ ಬಾಸ್’ ಮನೆಗೆ ಎಂಟ್ರಿಕೊಟ್ಟ 18 ಸ್ಪರ್ಧಿಗಳನ್ನು 9 ಜೋಡಿಗಳಾಗಿ ವಿಭಜಿಸಲಾಗಿದೆ. ಓರ್ವ ನವೀನರು ಹಾಗೂ ಓರ್ವ ಪ್ರವೀಣರು ‘ಜೋಡಿ’ಯಾಗಿ ‘ಬಿಗ್ ಬಾಸ್’ ಕೊಡುವ ಟಾಸ್ಕ್‌ಗಳಲ್ಲಿ ಪರ್ಫಾಮ್ ಮಾಡಬೇಕಿದೆ. ಹೀಗಿರುವಾಗಲೇ, ಎರಡನೇ ದಿನ ಎಲ್ಲಾ 9 ಜೋಡಿಗಳಿಗೆ ‘ಬಿಗ್ ಬಾಸ್’ ಶಾಕ್ ಕೊಟ್ಟಿದ್ದಾರೆ..!
ಎರಡನೇ ದಿನ ಆಗಿದ್ದೇನು?
ಎರಡನೇ ದಿನ ಬೆಳ್ಳಂಬೆಳಗ್ಗೆ ವೇಕಪ್ ಸಾಂಗ್ ಹಾಕುವ ಬದಲು ಕರೆಂಟ್ ಶಾಕ್‌ನಂತಹ ಭಯಾನಕ ಸದ್ದನ್ನ ‘ಬಿಗ್ ಬಾಸ್’ ಹಾಕಿಬಿಟ್ಟರು. ಒಳ್ಳೆಯ ನಿದ್ದೆಯಲ್ಲಿದ್ದ ಸ್ಪರ್ಧಿಗಳಿಗೆ ಇದು ಅಕ್ಷರಶಃ ಶಾಕ್ ಆಯ್ತು. ಕೂಡಲೆ ಗಾರ್ಡನ್ ಏರಿಯಾಗೆ ಓಡಿಬಂದ ಸ್ಪರ್ಧಿಗಳಿಗೆ ಮತ್ತೊಂದು ಅಚ್ಚರಿ ಎದುರಾಗಿದ್ದು. ಅದೇನಪ್ಪಾ ಅಂದ್ರೆ, ಗಾರ್ಡನ್ ಏರಿಯಾದಲ್ಲಿ ಮೆದುಳಿನ ಬೃಹತ್ ಆಕೃತಿಯನ್ನು ಇಡಲಾಗಿತ್ತು. ಇದನ್ನೆಲ್ಲಾ ಗಮನಿಸಿದ ಆರ್ಯವರ್ಧನ್ ಗುರೂಜಿ (Aryavardhan Guruji) ಹೇಳಿದ್ದು - ‘’ಇವತ್ತು ಅಮಾವಾಸ್ಯೆ ಅಲ್ವಾ?’’ ಅಂತ..!

BBK 9: ಮೊದಲ ವಾರವೇ 12 ಮಂದಿ ನಾಮಿನೇಟ್; ಮನೆಯಿಂದ ಹೊರಹೋಗುವ ಆ ಸ್ಪರ್ಧಿ ಯಾರು?
ವಿಶೇಷ ಟಾಸ್ಕ್ ನೀಡಿದ ‘ಬಿಗ್ ಬಾಸ್’
ಮನುಷ್ಯನ ಭಾವನೆ, ಸಾಮರ್ಥ್ಯ, ಇಚ್ಛಾಶಕ್ತಿ, ನೆನಪು, ಯೋಚನಾ ಶಕ್ತಿ, ಕ್ರಿಯಾಶೀಲತೆ, ತಂತ್ರಗಾರಿಕೆ.. ಎಲ್ಲವನ್ನೂ ಸೆರೆಹಿಡಿಯುವ ಗೂಡು ಮೆದುಳು. ಪ್ರತಿ ಚಲನೆಗೆ ಕಾರಣವಾಗುವುದು ಮೆದುಳು. ಅದ್ಭುತವಾದ ಮೆದುಳಿನ ಕಾರ್ಯಶೀಲನೆಯನ್ನು ಸೆರೆ ಹಿಡಿಯಲು ಸ್ಪರ್ಧಿಗಳಿಗೆ ವಿಶೇಷವಾದ ವಾರದ ಟಾಸ್ಕ್ಅನ್ನು ‘ಬಿಗ್ ಬಾಸ್’ (Bigg Boss) ನೀಡಿದ್ದಾರೆ.

ದೈಹಿಕ ಶಕ್ತಿ, ನೆನಪಿನ ಶಕ್ತಿ, ಸಮಸ್ಯೆ ಪರಿಹರಿಸುವ ಶಕ್ತಿ.. ಎಂಬ ಮೆದುಳಿನ ಮೂರು ಮುಖ್ಯ ವಿಷಯಗಳನ್ನು ಆಧರಿಸಿ ಟಾಸ್ಕ್‌ಗಳು ರೂಪುಗೊಂಡಿದ್ದು, ಇದರ ಅನುಸಾರ ಗಾರ್ಡನ್ ಏರಿಯಾದಲ್ಲಿ ಮೆದುಳಿನ ಆಕಾರವನ್ನ ಇಡಲಾಗಿದೆ. ಈ ವಾರದ ಎಲ್ಲಾ ಟಾಸ್ಕ್‌ಗಳು ಮೆದುಳಿನ ಮೂರು ವಿಭಾಗವನ್ನು ಪ್ರತಿನಿಧಿಸುತ್ತವೆ.

BBK9: 'ಇದೆಲ್ಲ ಬ್ಯಾಡ.. ನಾನ್ ಯಾರತ್ರ ಸಾಲ ತಗೊಂಡ್ರೂ ಹಂಗೆ ಕೊಡಲ್ಲ'; ಪ್ರಶಾಂತ್ ಸಂಬರಗಿಗೆ ರೂಪೇಶ್ ರಾಜಣ್ಣ ವಾರ್ನಿಂಗ್
ಗೇಮ್ ಪ್ಲಾನ್
ಪ್ರತಿ ಟಾಸ್ಕ್‌ನಲ್ಲಿ ಮೂರು ಜೋಡಿ ಭಾಗವಹಿಸಬಹುದು. ಎರಡು ಜೋಡಿ ಆಟವಾಡಿದರೆ, ಮೂರನೇ ಜೋಡಿ ‘ಯಾರು ಗೆಲ್ಲುತ್ತಾರೆ’ ಅಂತ ಪಂದ್ಯ ಕಟ್ಟಬೇಕು. ಗೆಲ್ಲುವ ಜೋಡಿ ಹಾಗೂ ಪಂದ್ಯ ಕಟ್ಟಿ ಸರಿಯಾಗಿ ಊಹಿಸಿದ ಜೋಡಿಗೆ ತಲಾ 1 ಅಂಕ ಲಭಿಸುತ್ತದೆ. ವಾರದ ಕೊನೆಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ ಎರಡು ಜೋಡಿಗಳು ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ.

ಪ್ರಶಾಂತ್ ಸಂಬರಗಿ ಮತ್ತು ವಿನೋದ್ ಗೊಬ್ಬರಗಾಲಗೆ ವಿಶೇಷ ಅಧಿಕಾರ
‘ಬಿಗ್ ಬಾಸ್’ ನೀಡಿದ ಚೊಚ್ಚಲ ಟಾಸ್ಕ್‌ನಲ್ಲಿ ಪ್ರಶಾಂತ್ ಸಂಬರಗಿ ಹಾಗೂ ವಿನೋದ್ ಗೊಬ್ಬರಗಾಲ ಜೋಡಿ ಗೆಲುವು ಸಾಧಿಸಿತು. ಹೀಗಾಗಿ, ಈ ವಾರದ ಪ್ರತಿ ಟಾಸ್ಕ್‌ನಲ್ಲಿ ಯಾರು ಭಾಗವಹಿಸುತ್ತಾರೆ ಎಂಬುದನ್ನು ಪ್ರಶಾಂತ್ ಸಂಬರಗಿ ಹಾಗೂ ವಿನೋದ್ ಗೊಬ್ಬರಗಾಲ ಜೋಡಿ ಆಯ್ಕೆ ಮಾಡಬೇಕಿತ್ತು.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ