ಆ್ಯಪ್ನಗರ

ಮತ್ತೆ ಬಿಗ್ ಬಾಸ್ ಮನೆಗೆ ಭೇಟಿ ನೀಡಿದ 'ಬಿಗ್ ಬಾಸ್ ಕನ್ನಡ ಸೀಸನ್ 7' ಸ್ಪರ್ಧಿ ವಾಸುಕಿ ವೈಭವ್!

ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು 'ಬಿಗ್ ಬಾಸ್ ಕನ್ನಡ ಸೀಸನ್ 7' ಶೋನಲ್ಲಿ ಭಾಗವಹಿಸಿದ್ದರು. ಈಗ ಅವರು ಮತ್ತೆ ಬಿಗ್ ಬಾಸ್ ಮನೆಗೆ ಭೇಟಿ ನೀಡಿದ್ದಾರೆ. ಯಾಕೆ? ಏನು ವಿಶೇಷ? ಇಲ್ಲಿದೆ ಮಾಹಿತಿ

Vijaya Karnataka Web 31 Dec 2020, 5:55 pm
ಬಿಗ್ ಬಾಸ್ ಕನ್ನಡ ಸೀಸನ್ 7 ಮುಗಿದು, ಸೀಸನ್ 8 ಕೂಡ ಆರಂಭ ಮಾಡಲು ದೊಡ್ಡ ಮಟ್ಟದಲ್ಲಿ ತಯಾರಿ ಕೂಡ ನಡೆಯುತ್ತಿದೆ. ಹೀಗಿದ್ದಾಗ 'ಬಿಗ್ ಬಾಸ್ ಕನ್ನಡ ಸೀಸನ್ 7' ಸ್ಪರ್ಧಿ, ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತೆ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.
Vijaya Karnataka Web bigg boss kannada season 7 contestant vasuki vaibhav revisited bigg boss house
ಮತ್ತೆ ಬಿಗ್ ಬಾಸ್ ಮನೆಗೆ ಭೇಟಿ ನೀಡಿದ 'ಬಿಗ್ ಬಾಸ್ ಕನ್ನಡ ಸೀಸನ್ 7' ಸ್ಪರ್ಧಿ ವಾಸುಕಿ ವೈಭವ್!


ಈಗಾಗಲೇ ಒಮ್ಮೆ ಸ್ಪರ್ಧೆಯಲ್ಲಿ ಭಾಗವಹಿಸಿದವರು ಮತ್ತೆ ಹೇಗೆ ಬಿಗ್ ಬಾಸ್‌ಗೆ ಹೋದರು ಎಂಬ ಪ್ರಶ್ನೆ ಕಾಡಬಹುದು. ಅತಿಥಿಯಾಗಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿರಬಹುದು ಎಂದು ಅನಿಸಿರಬಹುದು. ಇಲ್ಲ, ಅವರು ಹೀಗೆಯೇ ಬಿಗ್ ಬಾಸ್‌ ಮನೆಗೆ ಭೇಟಿ ನೀಡಿ ಬಂದಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿರುವ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮಾಹಿತಿ ನೀಡಿರುವ ವಾಸುಕಿ ವೈಭವ್, 'ಮತ್ತೆ ಬಿಗ್ ಬಾಸ್ ಮನೆಗೆ ಒಂದು ವರ್ಷದ ನಂತರದಲ್ಲಿ ಭೇಟಿ ನೀಡಿದ್ದೆ. ಇಂದು ನಿಜಕ್ಕೂ ಕನಸು ಎನಿಸುತ್ತಿದೆ' ಎಂದು ಹೇಳಿದ್ದಾರೆ.

ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ ನಂತರದಲ್ಲಿ ವಾಸುಕಿ ವೈಭವ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿತು. ಬಿಗ್ ಮನೆಯಿಂದ ಹೊರಬಂದ ನಂತರ ಅವರು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದರು. ಇನ್ನು ಅವರನ್ನು ಅರಸಿ ಸಾಕಷ್ಟು ಪ್ರಾಜೆಕ್ಟ್‌ಗಳು ಬಂದವು. ಕೆಲವು ದಿನಗಳ ಹಿಂದೆ 'ನಮ್ಮನೆ ಯುವರಾಣಿ', 'ಗಿಣಿರಾಮ', 'ಹೂಮಳೆ' ಧಾರಾವಾಹಿಯ ಸಂಗಮದಲ್ಲಿ ವಾಸುಕಿ ವೈಭವ್ ಹಾಡು ಹಾಡಿದ್ದರು. ವಾಸುಕಿ ವೈಭವ್ ಜೊತೆಗೆ ಅಂಕಿತಾ ಅಮರ್, ಚಂದನಾ ಅನಂತಕೃಷ್ಣ, ನಯನಾ ನಾಗರಾಜ್ ಹಾಡು ಹಾಡಿದ್ದರು.

'ಈಗಾಗಲೇ ವಾಸುಕಿ ವೈಭವ್ ಬ್ಯಾಂಡ್ ಕೊರೊನಾ ವೈರಸ್ ನಡುವೆಯೂ ಅನೇಕ ಕಡೆ ಕಾರ್ಯಕ್ರಮ ಕೊಡುತ್ತಿರುವುದು ಖುಷಿಯ ವಿಷಯ. ಅವರ 'ಬಡವ ರ್ಯಾಸ್ಕಲ್' ಚಿತ್ರದ ರೀ-ರೆಕಾರ್ಡಿಂಗ್ ಕೆಲಸ ನಡೆಯುತ್ತಿದೆ. ಇನ್ನೂ ಅನೇಕ ಪ್ರಾಜೆಕ್ಟ್‌ಗಳ ಮಾತುಕತೆ ನಡೆಯುತ್ತಿದೆ ಎಂದು ಕೆಲದಿನಗಳ ಹಿಂದೆ ವಾಸುಕಿ ವೈಭವ್ ಹೇಳಿದ್ದಾರೆ.

Also Read-ಧಾರಾವಾಹಿಗಳ ಮಹಾ ಸಂಗಮದಲ್ಲಿ ಭಾಗಿಯಾದ ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ವಾಸುಕಿ ವೈಭವ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ