ಆ್ಯಪ್ನಗರ

ಬಿಗ್ ಬಾಸ್‌ ಗ್ರ್ಯಾಂಡ್ ಫಿನಾಲೆ ದಿನ ಹೊರಬಿದ್ದ ಮೊದಲನೇ ಸ್ಪರ್ಧಿ ಹೆಸರು ರಿವೀಲ್!

'ಬಿಗ್ ಬಾಸ್ ಕನ್ನಡ ಸೀಸನ್ 7'ರ ಗ್ರ್ಯಾಂಡ್‌ ಫಿನಾಲೆ ನಾಳೆ ನಡೆಯಲಿದೆ. ಯಾರು ಈ ಬಾರಿಯ ಬಿಗ್ ಬಾಸ್ ಟ್ರೋಫಿ ಗೆಲ್ಲಲಿದ್ದಾರೆ ಎಂಬ ಕುತೂಹಲ ಹಲವರಿಗಿದೆ. 18 ಮಂದಿ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಈಗ ಉಳಿದುಕೊಂಡವರು ಕೇವಲ 5 ಮಂದಿ. ಈ ಐದು ಮಂದಿ ಕೂಡ ಪ್ರಬಲ ಸ್ಪರ್ಧಿಗಳೇ. ಈ ಐವರಲ್ಲಿ ಬಿಗ್ ಬಾಸ್ ಕಿರೀಟ ಯಾರ ಮುಡಿಗೇರಲಿದೆ ಎಂಬುದು ಸದ್ಯಕ್ಕಿರುವ ಪ್ರಶ್ನೆ. ಇಂದು ಇಬ್ಬರು ಸ್ಪರ್ಧಿಗಳು ಆಟದಿಂದ ಹೊರಬೀಳಲಿದ್ದಾರೆ, ಯಾರದು?

Vijaya Karnataka Web 1 Feb 2020, 6:16 pm
'ಬಿಗ್ ಬಾಸ್ ಕನ್ನಡ ಸೀಸನ್ 7'ರ ಗ್ರ್ಯಾಂಡ್‌ ಫಿನಾಲೆ ನಾಳೆ ನಡೆಯಲಿದೆ. ಯಾರು ಈ ಬಾರಿಯ ಬಿಗ್ ಬಾಸ್ ಟ್ರೋಫಿ ಗೆಲ್ಲಲಿದ್ದಾರೆ ಎಂಬ ಕುತೂಹಲ ಹಲವರಿಗಿದೆ. 18 ಮಂದಿ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಈಗ ಉಳಿದುಕೊಂಡವರು ಕೇವಲ 5 ಮಂದಿ. ಈ ಐದು ಮಂದಿ ಕೂಡ ಪ್ರಬಲ ಸ್ಪರ್ಧಿಗಳೇ. ಈ ಐವರಲ್ಲಿ ಬಿಗ್ ಬಾಸ್ ಕಿರೀಟ ಯಾರ ಮುಡಿಗೇರಲಿದೆ ಎಂಬುದು ಸದ್ಯಕ್ಕಿರುವ ಪ್ರಶ್ನೆ. ಇಂದು ಇಬ್ಬರು ಸ್ಪರ್ಧಿಗಳು ಆಟದಿಂದ ಹೊರಬೀಳಲಿದ್ದಾರೆ, ಯಾರದು?
Vijaya Karnataka Web bigg boss kannada season 7 grand finale elimination
ಬಿಗ್ ಬಾಸ್‌ ಗ್ರ್ಯಾಂಡ್ ಫಿನಾಲೆ ದಿನ ಹೊರಬಿದ್ದ ಮೊದಲನೇ ಸ್ಪರ್ಧಿ ಹೆಸರು ರಿವೀಲ್!


ಇಂದು ನಡೆಯಲಿದೆ ಎರಡು ಎಲಿಮಿನೇಶನ್

ನಾಳೆ ಮೂರು ಮಂದಿ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ. ಆರಂಭದಲ್ಲಿ ಒಂದು ಎಲಿಮಿನೇಶನ್‌ ಆಗುತ್ತದೆ. ತದನಂತರದಲ್ಲಿ ವೇದಿಕೆ ಮೇಲೆ ಇಬ್ಬರು ಸ್ಪರ್ಧಿಗಳನ್ನು ಕರೆಸಿ ಅವರ ಕೈಹಿಡಿದುಕೊಂಡು ಸುದೀಪ್ ಅವರು ವಿನ್ನರ್ ಯಾರು ಎಂದು ಘೋಷಣೆ ಮಾಡುತ್ತಾರೆ. ಇದರ ಜೊತೆಗೆ ಬಿಗ್ ಬಾಸ್ ಮನೆಗೆ ತೆರಳಿ ಸುದೀಪ್ ಅವರು ಆ ಸ್ಪರ್ಧಿಗಳನ್ನು ವೇದಿಕೆಗೆ ಕರೆದುಕೊಂಡು ಬರುತ್ತಾರೆ ಎಂಬುದು ವಿಶೇಷ. ಇದು ಬಿಗ್ ಬಾಸ್‌ನ ಅಲಿಖಿತ ನಿಯಮ. ಈ ಹಿಂದಿನ ಸೀಸನ್‌ಗಳಲ್ಲಿ ಈ ರೀತಿಯೇ ಆಗಿತ್ತು. ಹೀಗಾಗಿ ಈ ಬಾರಿ ಕೂಡ ಇದೇ ರೀತಿಯೇ ಎಲಿಮಿನೇಶನ್ ಪ್ರಕ್ರಿಯೆ ನಡೆಯಲಿದೆ ಎಂದು ಊಹಿಸಬಹುದು.

ಬಿಗ್ ಬಾಸ್ ಪಯಣದ ಬಗ್ಗೆ ಹರೀಶ್ ರಾಜ್ ಮಾತು

ಹರೀಶ್ ರಾಜ್ ಅವರು ಮಿಡ್ ವೀಕ್ ಎಲಿಮಿನೇಶನ್ ಆಧಾರದ ಮೇಲೆ ಮಿಡ್‌ನೈಟ್ ಅಲ್ಲಿ ಬಿಗ್ ಮನೆಯಿಂದ ಹೊರಬಂದಿದ್ದಾರೆ. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಅವರಿಗೆ ತಮ್ಮ ಬಿಗ್ ಬಾಸ್ ಪಯಣದ ಬಗ್ಗೆ ಮಾತನಾಡುವ ಅವಕಾಶ ಸಿಕ್ಕಿಲ್ಲ. ಹೀಗಾಗಿ ಇಂದು ಹರೀಶ್ ರಾಜ್ ಅವರು ಈ ಬಗ್ಗೆ ಸುದೀಪ್ ಬಳಿ ಮಾತನಾಡುವ ಸಾಧ್ಯತೆ ಹೆಚ್ಚಿದೆ. ಅಷ್ಟೇ ಅಲ್ಲದೆ ಇಂದು ಕೆಲ ಡಾನ್ಸ್ ಪರ್ಫಾಮೆನ್ಸ್ ಕೂಡ ಇದೆ.

ಫಿನಾಲೆ ದಿನ ಹೊರಬಿದ್ದ ಮೊದಲನೇ ಸ್ಪರ್ಧಿ ಭೂಮಿ ಶೆಟ್ಟಿ

ಇಂದು ಮೊದಲ ಸುತ್ತಿನ ಎಲಿಮಿನೇಶನ್‌ನಲ್ಲಿ ಭೂಮಿ ಶೆಟ್ಟಿ ಔಟ್ ಆಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಭೂಮಿ ಆರಂಭದಿಂದಲೂ ಒಳ್ಳೆಯ ಆಟವನ್ನು ಆಡಿದ್ದರು. ಇವರ ಮಾತು, ನಡೆವಳಿಕೆ ಕಂಡು ಚಿಕ್ಕ ಹುಡುಗಿ ಎಂದು ಕೆಲವರು ಕರೆಯುತ್ತಿದ್ದರು. ಹಾಗೆ ನೋಡಿದರೆ ಬಿಗ್ ಬಾಸ್ ಮನೆಯ ಇತರ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದರೆ ಭೂಮಿ ವಯಸ್ಸಿನಲ್ಲಿ ಕಿರಿಯರು. ಫಿಶ್, ಚಿಕನ್ ವಿಚಾರ ಬಂದಾಗ ತನಗೆ ಸಿಕ್ಕಿಲ್ಲ ಎಂದು ಭೂಮಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇವರ ಈ ವರ್ತನೆ ಬಾಲಿಶವಾಗಿತ್ತು ಎಂದು ಹಲವರು ಅಭಿಪ್ರಾಯ ಪಟ್ಟುಕೊಂಡಿದ್ದರು.

Twitter-Colors Kannada

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ