ಕನ್ನಡ ಚಿತ್ರರಂಗದ ಅನುಭವಿ ಕಲಾವಿದ ಶಂಕರ್ ಅಶ್ವತ್ಥ್. 370ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ನಟ ಕೆ ಎಸ್ ಅಶ್ವತ್ಥ್ ಅವರ ಮಗ ಇವರು. ಸದ್ಯ ಕ್ಯಾಬ್ ಓಡಿಸುತ್ತ, ಸಿನಿಮಾದಲ್ಲಿ ನಟಿಸುತ್ತ ಶಂಕರ್ ದಿನ ಕಳೆಯುತ್ತಿದ್ದಾರೆ.
ಇತ್ತೀಚೆಗೆ ತೆರೆ ಕಂಡ ನಟ ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾದಲ್ಲಿ ನಟಿಸಿದ್ದರು. ಅವಕಾಶ ಸಿಕ್ಕಾಗ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತ, ಅವಕಾಶಗಳು ಇಲ್ಲದಾಗ ಊಬರ್ ಕಾರು ಓಡಿಸುತ್ತ, ಬದುಕಿನ ರಥವನ್ನು ಶಂಕರ್ ಮುಂದೆ ಮುನ್ನಡೆಸುತ್ತಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರು ಈ ಹಿಂದೆ ಡಿ.ಫಾರ್ಮ ಫಸ್ಟ್ ಕ್ಲಾಸ್ನಲ್ಲಿ ಪಾಸ್ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಮೆಡಿಕಲ್ ವ್ಯಾಪಾರದಲ್ಲಿಯೂ ಸೋಲಾಗಿತ್ತು. ಕೌನ್ ಬನೇಗ ಕರೋಡ್ಪತಿಗೆ ಆಯ್ಕೆಯಾಗಿದ್ದರೂ ಅಲ್ಲಿಯೂ ಏನೂ ದಕ್ಕಿರಲಿಲ್ಲ. ತಂದೆಯನ್ನು ಒಪ್ಪಿಸಿ ಸೀರಿಯಲ್ ಮಾಡಿದರೂ ಕೂಡ ಶಂಕರ್ಗೆ ಅಲ್ಲಿಯೂ ಏನೂ ಹುಟ್ಟಲಿಲ್ಲ.
Also Read-ನಟ ಶಂಕರ್ ಅಶ್ವತ್ಥ್ಗೆ 4 ವರ್ಷ ಹಿಂದೆ ಅಪಘಾತ ಆದಾಗ ಕಾಪಾಡಿದ ಆ ಶಕ್ತಿ ಯಾವುದು?
ಕೈಯ್ಯಲ್ಲಾದದ್ದನ್ನು ಮಾಡುತ್ತಲೇ ಶಂಕರ್ ಇಷ್ಟುದಿನ ಕಾಲ ಕಳೆದಿದ್ದಾರೆ. ನಟ ದರ್ಶನ್ ಅವರು ಶಂಕರ್ ಅವರಿಗೆ 'ಯಜಮಾನ' ಚಿತ್ರದಲ್ಲಿ ಅವಕಾಶ ನೀಡಿದ್ದರು. ನಟ ಪುನೀತ್ ಕೂಡ ಶಂಕರ್ ಮನೆಗೆ ಭೇಟಿ ನೀಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹಳೆಯ ಘಟನೆಗಳು, ಈಗಿನ ನಟ-ನಟಿಯರ ಬಗ್ಗೆ ಶಂಕರ್ ಅಶ್ವತ್ಥ್ ಆಗಾಗ ಮೆಚ್ಚುಗೆ ಮಾತುಗಳೊಂದಿಗೆ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗೆ ತೆರೆ ಕಂಡ ನಟ ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾದಲ್ಲಿ ನಟಿಸಿದ್ದರು. ಅವಕಾಶ ಸಿಕ್ಕಾಗ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತ, ಅವಕಾಶಗಳು ಇಲ್ಲದಾಗ ಊಬರ್ ಕಾರು ಓಡಿಸುತ್ತ, ಬದುಕಿನ ರಥವನ್ನು ಶಂಕರ್ ಮುಂದೆ ಮುನ್ನಡೆಸುತ್ತಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರು ಈ ಹಿಂದೆ ಡಿ.ಫಾರ್ಮ ಫಸ್ಟ್ ಕ್ಲಾಸ್ನಲ್ಲಿ ಪಾಸ್ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಮೆಡಿಕಲ್ ವ್ಯಾಪಾರದಲ್ಲಿಯೂ ಸೋಲಾಗಿತ್ತು. ಕೌನ್ ಬನೇಗ ಕರೋಡ್ಪತಿಗೆ ಆಯ್ಕೆಯಾಗಿದ್ದರೂ ಅಲ್ಲಿಯೂ ಏನೂ ದಕ್ಕಿರಲಿಲ್ಲ. ತಂದೆಯನ್ನು ಒಪ್ಪಿಸಿ ಸೀರಿಯಲ್ ಮಾಡಿದರೂ ಕೂಡ ಶಂಕರ್ಗೆ ಅಲ್ಲಿಯೂ ಏನೂ ಹುಟ್ಟಲಿಲ್ಲ.
Also Read-ನಟ ಶಂಕರ್ ಅಶ್ವತ್ಥ್ಗೆ 4 ವರ್ಷ ಹಿಂದೆ ಅಪಘಾತ ಆದಾಗ ಕಾಪಾಡಿದ ಆ ಶಕ್ತಿ ಯಾವುದು?
ಕೈಯ್ಯಲ್ಲಾದದ್ದನ್ನು ಮಾಡುತ್ತಲೇ ಶಂಕರ್ ಇಷ್ಟುದಿನ ಕಾಲ ಕಳೆದಿದ್ದಾರೆ. ನಟ ದರ್ಶನ್ ಅವರು ಶಂಕರ್ ಅವರಿಗೆ 'ಯಜಮಾನ' ಚಿತ್ರದಲ್ಲಿ ಅವಕಾಶ ನೀಡಿದ್ದರು. ನಟ ಪುನೀತ್ ಕೂಡ ಶಂಕರ್ ಮನೆಗೆ ಭೇಟಿ ನೀಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹಳೆಯ ಘಟನೆಗಳು, ಈಗಿನ ನಟ-ನಟಿಯರ ಬಗ್ಗೆ ಶಂಕರ್ ಅಶ್ವತ್ಥ್ ಆಗಾಗ ಮೆಚ್ಚುಗೆ ಮಾತುಗಳೊಂದಿಗೆ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.