ಕನ್ನಡ ಕಿರುತೆರೆಯಲ್ಲಿ ಅತೀ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡ 'ಬಿಗ್ ಬಾಸ್' ಶೋ ಫೆಬ್ರವರಿ ತಿಂಗಳಲ್ಲಿ ಆರಂಭಗೊಂಡಿತ್ತು. ಕೊರೊನಾ ಮೊದಲ ಅಲೆ ಮುಗಿದ ಮೇಲೆ ಬಹಳ ಎಚ್ಚರಿಕೆ, ಮುತುವರ್ಜಿಯಿಂದ ಶೋವನ್ನು ಆಯೋಜನೆ ಮಾಡಲಾಗಿತ್ತು. ಅಲ್ಲದೆ, ಶೋಗೆ ಹೋಗುವ ಸ್ಪರ್ಧಿಗಳನ್ನು ವಾರಕ್ಕೂ ಮೊದಲೇ ಕ್ವಾರಂಟೈನ್ ಮಾಡಿ, ಆನಂತರ ಮನೆಯೊಳಗೆ ಕಳುಹಿಸಲಾಗಿತ್ತು. ಆದರೆ, ಕೊರೊನಾ ಎರಡನೇ ಅಲೆಯಿಂದಾಗಿ 100 ದಿನ ನಡೆಯಬೇಕಿದ್ದ ಶೋವನ್ನು 72ನೇ ದಿನಕ್ಕೆ ನಿಲ್ಲಿಸಲಾಯ್ತು. ಮನೆಯಲ್ಲಿದ್ದ ಸ್ಪರ್ಧಿಗಳು ಕಣ್ಣೀರಿಡುತ್ತ ಹೊರಗೆ ಬಂದರು. ಆದರೆ, ಇದೀಗ ಕೇಳಿಬರುತ್ತಿರುವ ಒಂದು ನ್ಯೂಸ್ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದೆ! ಮತ್ತೆ ಶುರುವಾಗಲಿದೆಯೇ ಬಿಗ್ ಬಾಸ್?
ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಬಿಗ್ ಬಾಸ್ ಶೋ ಪುನಃ ಆರಂಭಗೊಳ್ಳುವ ನಿರೀಕ್ಷೆ ಇದೆ. ಪರಿಸ್ಥಿತಿ ಮೊದಲಿನಂತೆ ಆದಕೂಡಲೇ ಅರ್ಧಕ್ಕೆ ನಿಂತ ಬಿಗ್ ಬಾಸ್ ಶೋವನ್ನು ಪೂರ್ಣಗೊಳಿಸುವ ಉದ್ದೇಶವನ್ನು ವಾಹಿನಿ ಇಟ್ಟುಕೊಂಡಿದೆ ಎಂಬ ಸುದ್ದಿ ಕೇಳಿಬಂದಿದೆ. ಒಂದಷ್ಟು ಬದಲಾವಣೆ ಮಾಡಿಕೊಂಡು, ಶೋವನ್ನು ಪುನಃ ಶುರು ಮಾಡುವುದಕ್ಕೆ ವಾಹಿನಿ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಈಚೆಗೆ ಬೆಂಗಳೂರು ಟೈಮ್ಸ್ ಜೊತೆಗೆ ಮಾತನಾಡಿದ್ದ ವೈಷ್ಣವಿ ಗೌಡ, 'ನಾನಂತೂ ಮತ್ತೆ ಶೋ ಯಾವಾಗ ಶುರುವಾಗಲಿದೆ ಎಂದು ಕಾಯುತ್ತಿದ್ದೇನೆ. ಎಲ್ಲವೂ ಮೊದಲಿನಂತೆಯೇ ಸರಿಯಾದರೆ, ಬಹುಶಃ ಶೋ ಶುರುವಾಗಬಹುದು. ಸದ್ಯದ ಪರಿಸ್ಥಿತಿ ಮೇಲೆ ಎಲ್ಲವೂ ನಿರ್ಧರಿತವಾಗಿದೆ' ಎಂದು ಅವರು ಹೇಳಿದ್ದಾರೆ. ಅರವಿಂದ್ ಕೆಪಿ ಕೂಡ, 'ಇದು ತಾತ್ಕಾಕಾಲಿಕ ತಡೆಯಾಗಿದೆ. ಶೋ ಮತ್ತೆ ಆರಂಭಗೊಳ್ಳುವ ಸಾಧ್ಯತೆಗಳಿವೆ' ಎಂದು ವಿಡಿಯೋ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಇಷ್ಟು ದಿನ ವೈಷ್ಣವಿ ಸೇಫ್ ಆಗಿದ್ದೇಗೆ? ಇಲ್ಲಿದೆ ರಘು & ಮಂಜು ವ್ಯಾಖ್ಯಾನ!
ಒಟ್ಟಿನಲ್ಲಿ ಈ ಒಂದು ನ್ಯೂಸ್ ಭಾರಿ ಸಂಚಲನ ಸೃಷ್ಟಿಸಿದೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೋ ಅರ್ಧಕ್ಕೆ ನಿಂತಿದ್ದು. ಹಾಗಾಗಿ, ಇಷ್ಟೂ ಸೀಸನ್ಗಳಲ್ಲಿ 8ನೇ ಸೀಸನ್ ಭಾರಿ ವಿಶೇಷ ಎನಿಸಿಕೊಂಡಿದೆ. ಈಗ ಪುನಃ ಆರಂಭಗೊಂಡರೆ, ಮತ್ತೊಂದಿಷ್ಟು ಹೊಸತನಕ್ಕೆ ನಾಂದಿ ಹಾಡಿದಂತೆ ಆಗಲಿದೆ. ಒಟ್ಟಿನಲ್ಲಿ ಎಲ್ಲವೂ ಕೊರೊನಾ ಎರಡನೇ ಅಲೆಯ ಪರಿಣಾಮದ ಮೇಲೆ ನಿಂತಿದೆ.
'ಬಿಗ್ ಬಾಸ್ ಕನ್ನಡ 8' ಕಾರ್ಯಕ್ರಮಕ್ಕೆ ತಾರ್ಕಿಕ ಅಂತ್ಯ ಸಿಗುತ್ತಾ? ಸುಳಿವು ಕೊಟ್ಟ ಸುದೀಪ್!
ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಬಿಗ್ ಬಾಸ್ ಶೋ ಪುನಃ ಆರಂಭಗೊಳ್ಳುವ ನಿರೀಕ್ಷೆ ಇದೆ. ಪರಿಸ್ಥಿತಿ ಮೊದಲಿನಂತೆ ಆದಕೂಡಲೇ ಅರ್ಧಕ್ಕೆ ನಿಂತ ಬಿಗ್ ಬಾಸ್ ಶೋವನ್ನು ಪೂರ್ಣಗೊಳಿಸುವ ಉದ್ದೇಶವನ್ನು ವಾಹಿನಿ ಇಟ್ಟುಕೊಂಡಿದೆ ಎಂಬ ಸುದ್ದಿ ಕೇಳಿಬಂದಿದೆ. ಒಂದಷ್ಟು ಬದಲಾವಣೆ ಮಾಡಿಕೊಂಡು, ಶೋವನ್ನು ಪುನಃ ಶುರು ಮಾಡುವುದಕ್ಕೆ ವಾಹಿನಿ ನಿರ್ಧಾರ ಮಾಡಿದೆ ಎನ್ನಲಾಗಿದೆ.
ಈಚೆಗೆ ಬೆಂಗಳೂರು ಟೈಮ್ಸ್ ಜೊತೆಗೆ ಮಾತನಾಡಿದ್ದ ವೈಷ್ಣವಿ ಗೌಡ, 'ನಾನಂತೂ ಮತ್ತೆ ಶೋ ಯಾವಾಗ ಶುರುವಾಗಲಿದೆ ಎಂದು ಕಾಯುತ್ತಿದ್ದೇನೆ. ಎಲ್ಲವೂ ಮೊದಲಿನಂತೆಯೇ ಸರಿಯಾದರೆ, ಬಹುಶಃ ಶೋ ಶುರುವಾಗಬಹುದು. ಸದ್ಯದ ಪರಿಸ್ಥಿತಿ ಮೇಲೆ ಎಲ್ಲವೂ ನಿರ್ಧರಿತವಾಗಿದೆ' ಎಂದು ಅವರು ಹೇಳಿದ್ದಾರೆ. ಅರವಿಂದ್ ಕೆಪಿ ಕೂಡ, 'ಇದು ತಾತ್ಕಾಕಾಲಿಕ ತಡೆಯಾಗಿದೆ. ಶೋ ಮತ್ತೆ ಆರಂಭಗೊಳ್ಳುವ ಸಾಧ್ಯತೆಗಳಿವೆ' ಎಂದು ವಿಡಿಯೋ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಇಷ್ಟು ದಿನ ವೈಷ್ಣವಿ ಸೇಫ್ ಆಗಿದ್ದೇಗೆ? ಇಲ್ಲಿದೆ ರಘು & ಮಂಜು ವ್ಯಾಖ್ಯಾನ!
ಒಟ್ಟಿನಲ್ಲಿ ಈ ಒಂದು ನ್ಯೂಸ್ ಭಾರಿ ಸಂಚಲನ ಸೃಷ್ಟಿಸಿದೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೋ ಅರ್ಧಕ್ಕೆ ನಿಂತಿದ್ದು. ಹಾಗಾಗಿ, ಇಷ್ಟೂ ಸೀಸನ್ಗಳಲ್ಲಿ 8ನೇ ಸೀಸನ್ ಭಾರಿ ವಿಶೇಷ ಎನಿಸಿಕೊಂಡಿದೆ. ಈಗ ಪುನಃ ಆರಂಭಗೊಂಡರೆ, ಮತ್ತೊಂದಿಷ್ಟು ಹೊಸತನಕ್ಕೆ ನಾಂದಿ ಹಾಡಿದಂತೆ ಆಗಲಿದೆ. ಒಟ್ಟಿನಲ್ಲಿ ಎಲ್ಲವೂ ಕೊರೊನಾ ಎರಡನೇ ಅಲೆಯ ಪರಿಣಾಮದ ಮೇಲೆ ನಿಂತಿದೆ.
'ಬಿಗ್ ಬಾಸ್ ಕನ್ನಡ 8' ಕಾರ್ಯಕ್ರಮಕ್ಕೆ ತಾರ್ಕಿಕ ಅಂತ್ಯ ಸಿಗುತ್ತಾ? ಸುಳಿವು ಕೊಟ್ಟ ಸುದೀಪ್!