ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ನಾಮಿನೇಶನ್ ಪ್ರಕ್ರಿಯೆ ಎದುರಿಸಿದ್ದಾರೆ. ಆ ವೇಳೆ ಸ್ಪರ್ಧಿಗಳ ಬೇಸರವೂ ಹೊರಗೆ ಬಂದಿದೆ. ಬಿಗ್ ಬಾಸ್ ಕನ್ನಡ ಸೀಸನ್ 8 ಅರ್ಧಕ್ಕೆ ನಿಂತಾಗ ಸ್ಪರ್ಧಿಗಳೆಲ್ಲರೂ ಮನೆಯಿಂದ ಹೊರಗಡೆ ಹೋಗಿದ್ದರು. ಆ ವೇಳೆ ಯಾರ ಬಗ್ಗೆ ಯಾರು ಏನು ಮಾತನಾಡಿದ್ದಾರೆ? ಎಂಬುದು ಕೂಡ ಗೊತ್ತಾಗಿದೆ. ಸಂದರ್ಶನಗಳಲ್ಲಿ ಸ್ಪರ್ಧಿಗಳು ಒಬ್ಬರು ಇನ್ನೊಬ್ಬರ ಬಗ್ಗೆ ಮಾತನಾಡಿದ್ದಾರೆ, ವೂಟ್ ಎಪಿಸೋಡ್ ನೋಡಿದ್ದಾರೆ. ನಾಮಿನೇಶನ್ ವೇಳೆ ಹಳೆಯ ಬೇಸರವನ್ನು ಹೊರಹಾಕಿದ್ದಾರೆ. ಆಗ ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಅವರನ್ನು ಮಂಜು ಪಾವಗಡ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಶಾಂತ್ ಸಂಬರಗಿಗೆ ಪ್ರಶ್ನೆ ಮಾಡಿದ ಮಂಜು ಪಾವಗಡ
ಬಿಗ್ ಬಾಸ್ ಇನ್ನೇನು ಮುಗಿಯಲು 2 ವಾರ ಮುಂಚೆ ನನ್ನ ತಪ್ಪುಗಳನ್ನು ನಾನು ತಿದ್ದಿಕೊಂಡೆ, ಇನ್ನೇನು ಕೆಲ ವಾರ ಇದೆ, ಎಲ್ಲರೂ ಚೆನ್ನಾಗಿರೋಣ ಎಂದುಕೊಂಡೆ, ಆ ಮಾತಿನ ಮೇಲೆ ನಿಂತಿದ್ದೇನೆ. ಆಟ ಮುಗಿದ ನಂತರದಲ್ಲಿ ಅವನು ಹಳ್ಳಿ ಹುಡುಗ, ಐಡೆಂಟಟಿ ಆಗ್ತಿದ್ದಾನೆ, ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾನೆ ಅಂತ ಹೇಳೋದು ಎಷ್ಟರ ಮಟ್ಟಿಗೆ ಸರಿ? ಪ್ರಶಾಂತ್ ಸಂಬರಗಿ ಅವರು ಕಿತ್ತೂರು ವಂಶಸ್ಥರು ಅಂತೆ. ಅದು ನಿಜಕ್ಕೂ ಖುಷಿಯಾದ ವಿಚಾರ. ಹೀಗಾಗಿ ಹೆಣ್ಣು ಮಕ್ಕಳಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಮಂಜು ಪಾವಗಡ ಅವರು ಸಂಬರಗಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಚಾರಕ್ಕಾಗಿ ಮಾತನಾಡಬೇಡಿ, ಬೇರೆಯವರಿಗೆ ಮಾತನಾಡೋಕೆ ಬರಲ್ಲ ಅಂತ ಅಲ್ಲ, ಮಾತನಾಡಿ ಪ್ರಯೋಜನ ಇಲ್ಲ ಅಂತ. ಆಟ ಮುಗಿದಮೇಲೆ ಅವರ ಜೀವನವನ್ನು ಅವರು ಕಟ್ಟಿಕೊಳ್ತಾರೆ. ನಾನು ಹಳ್ಳಿ ಹುಡುಗನೇ, ಅದೇ ನನ್ನ ಐಡೆಂಟಟಿ. ನಾನು ಕಲಾವಿದ, 4 ವರ್ಷದಿಂದ ಗುರುತಿಸಿಕೊಂಡಿದ್ದೇನೆ. ನಿಮಗೆ ಏನು ಐಡೆಂಟಟಿ ಇದೆ? ಹೀಗಾಗಿ ಪ್ರಶಾಂತ್ ಸಂಬರಗಿ ಅವರನ್ನು ನಾನು ನಾಮಿನೇಟ್ ಮಾಡಿದ್ದೇನೆ ಎಂದು ಮಂಜು ಪಾವಗಡ ಅವರು ಸಂಬರಗಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ನಲ್ಲಿ 4 ಎಪಿಸೋಡ್ ಕಿಚ್ಚ ಸುದೀಪ್ ಬರದಿದ್ದಾಗ ಪ್ರಯೋಜನ ಆಗಿದ್ದು ಮಂಜು ಪಾವಗಡಗಂತೆ!
ಚಕ್ರವರ್ತಿ ಚಂದ್ರಚೂಡ್ಗೂ ಮಂಜು ತರಾಟೆ
ಚಕ್ರವರ್ತಿ ಚಂದ್ರಚೂಡ್ ಅವರು ಗುಂಪುಗಾರಿಕೆ ಅಂತ ಹೇಳಿದ್ರು, ಇಲ್ಲಿದ್ದಾಗ ಅವರು ಇಲ್ಲಿ ಏನು ಮಾಡಿದ್ರು ಅಂತ ಗೊತ್ತಿದೆ. ದಿವ್ಯಾ ಸುರೇಶ್ರನ್ನು ಮಗಳೇ ಮಗಳೇ ಅಂತ ಕರೆದ್ರು, ಆಮೇಲೆ ಹೊರಗಡೆ ಅವಳು ಕಬ್ಬನ್ಪಾರ್ಕ್ನಲ್ಲಿ ಇದ್ದಳು ಅಂದ್ರು. ಮಗಳೇ ಅನ್ನೋದು ನಿಜ ಆದರೆ ಕಬ್ಬನ್ಪಾರ್ಕ್ನಲ್ಲಿ ಇರ್ತಾಳೆ....ಅಂತ ಹೇಳಿದ್ರೆ ಏನು ಅರ್ಥ. ಅವಶ್ಯಕತೆ ಇಲ್ಲದೆ ಏನೇನೋ ಮಾತನಾಡಿ ನಿಮ್ಮ ವ್ಯಕ್ತಿತ್ವ ಕಳೆದುಕೊಳ್ಳಬೇಡಿ ಎಂದು ಮಂಜು ಪಾವಗಡ ಅವರು ಚಕ್ರವರ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
BBK8: 'ಬಿಗ್ ಬಾಸ್' ಮನೆಯೊಳಗೆ ಮೊದಲ ದಿನವೇ ದಿವ್ಯಾ & ದಿವ್ಯಾ ಜಗಳ ಮಾಡಿಕೊಂಡ್ರಾ?
ಮಂಜು ಮಾತು ಕೇಳಿ ದಿವ್ಯಾ ಸುರೇಶ್ ಫುಲ್ ಖುಷ್
ಮಂಜು ತನ್ನ ಪರವಾಗಿ ಮಾತನಾಡಿದ್ದನ್ನು ಕಂಡು ದಿವ್ಯಾ ಸುರೇಶ್ ಫುಲ್ ಖುಷಿಯಾಗಿದ್ದಾರೆ, ಅಷ್ಟೇ ಅಲ್ಲದೆ ಎಲ್ಲರ ಮುಂದೆ ಬೀಗುತ್ತ ಚಪ್ಪಾಳೆ ಕೂಡ ತಟ್ಟಿದ್ದಾರೆ. ಮಂಜು ಮಾತನಾಡುವಾಗ ಯಾರ ಯಾರ ಎಕ್ಸ್ಪ್ರೆಶನ್ ಹೇಗಿದೆ ಅಂತ ಇಣುಕಿ ನೋಡಿದ್ದು ಕೂಡ ಬಿಗ್ ಬಾಸ್ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
BBK8: 200-300 ಮದುವೆ ಪ್ರಪೋಸಲ್ ಬಂದ್ರೂ ವೈಷ್ಣವಿ ಗೌಡಗೆ ಒಂದೂ ಇಷ್ಟವಾಗಿಲ್ಲ! ಕಾರಣ ಇಲ್ಲಿದೆ
ಪ್ರಶಾಂತ್ ಸಂಬರಗಿಗೆ ಪ್ರಶ್ನೆ ಮಾಡಿದ ಮಂಜು ಪಾವಗಡ
ಬಿಗ್ ಬಾಸ್ ಇನ್ನೇನು ಮುಗಿಯಲು 2 ವಾರ ಮುಂಚೆ ನನ್ನ ತಪ್ಪುಗಳನ್ನು ನಾನು ತಿದ್ದಿಕೊಂಡೆ, ಇನ್ನೇನು ಕೆಲ ವಾರ ಇದೆ, ಎಲ್ಲರೂ ಚೆನ್ನಾಗಿರೋಣ ಎಂದುಕೊಂಡೆ, ಆ ಮಾತಿನ ಮೇಲೆ ನಿಂತಿದ್ದೇನೆ. ಆಟ ಮುಗಿದ ನಂತರದಲ್ಲಿ ಅವನು ಹಳ್ಳಿ ಹುಡುಗ, ಐಡೆಂಟಟಿ ಆಗ್ತಿದ್ದಾನೆ, ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾನೆ ಅಂತ ಹೇಳೋದು ಎಷ್ಟರ ಮಟ್ಟಿಗೆ ಸರಿ? ಪ್ರಶಾಂತ್ ಸಂಬರಗಿ ಅವರು ಕಿತ್ತೂರು ವಂಶಸ್ಥರು ಅಂತೆ. ಅದು ನಿಜಕ್ಕೂ ಖುಷಿಯಾದ ವಿಚಾರ. ಹೀಗಾಗಿ ಹೆಣ್ಣು ಮಕ್ಕಳಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಮಂಜು ಪಾವಗಡ ಅವರು ಸಂಬರಗಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಚಾರಕ್ಕಾಗಿ ಮಾತನಾಡಬೇಡಿ, ಬೇರೆಯವರಿಗೆ ಮಾತನಾಡೋಕೆ ಬರಲ್ಲ ಅಂತ ಅಲ್ಲ, ಮಾತನಾಡಿ ಪ್ರಯೋಜನ ಇಲ್ಲ ಅಂತ. ಆಟ ಮುಗಿದಮೇಲೆ ಅವರ ಜೀವನವನ್ನು ಅವರು ಕಟ್ಟಿಕೊಳ್ತಾರೆ. ನಾನು ಹಳ್ಳಿ ಹುಡುಗನೇ, ಅದೇ ನನ್ನ ಐಡೆಂಟಟಿ. ನಾನು ಕಲಾವಿದ, 4 ವರ್ಷದಿಂದ ಗುರುತಿಸಿಕೊಂಡಿದ್ದೇನೆ. ನಿಮಗೆ ಏನು ಐಡೆಂಟಟಿ ಇದೆ? ಹೀಗಾಗಿ ಪ್ರಶಾಂತ್ ಸಂಬರಗಿ ಅವರನ್ನು ನಾನು ನಾಮಿನೇಟ್ ಮಾಡಿದ್ದೇನೆ ಎಂದು ಮಂಜು ಪಾವಗಡ ಅವರು ಸಂಬರಗಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ನಲ್ಲಿ 4 ಎಪಿಸೋಡ್ ಕಿಚ್ಚ ಸುದೀಪ್ ಬರದಿದ್ದಾಗ ಪ್ರಯೋಜನ ಆಗಿದ್ದು ಮಂಜು ಪಾವಗಡಗಂತೆ!
ಚಕ್ರವರ್ತಿ ಚಂದ್ರಚೂಡ್ಗೂ ಮಂಜು ತರಾಟೆ
ಚಕ್ರವರ್ತಿ ಚಂದ್ರಚೂಡ್ ಅವರು ಗುಂಪುಗಾರಿಕೆ ಅಂತ ಹೇಳಿದ್ರು, ಇಲ್ಲಿದ್ದಾಗ ಅವರು ಇಲ್ಲಿ ಏನು ಮಾಡಿದ್ರು ಅಂತ ಗೊತ್ತಿದೆ. ದಿವ್ಯಾ ಸುರೇಶ್ರನ್ನು ಮಗಳೇ ಮಗಳೇ ಅಂತ ಕರೆದ್ರು, ಆಮೇಲೆ ಹೊರಗಡೆ ಅವಳು ಕಬ್ಬನ್ಪಾರ್ಕ್ನಲ್ಲಿ ಇದ್ದಳು ಅಂದ್ರು. ಮಗಳೇ ಅನ್ನೋದು ನಿಜ ಆದರೆ ಕಬ್ಬನ್ಪಾರ್ಕ್ನಲ್ಲಿ ಇರ್ತಾಳೆ....ಅಂತ ಹೇಳಿದ್ರೆ ಏನು ಅರ್ಥ. ಅವಶ್ಯಕತೆ ಇಲ್ಲದೆ ಏನೇನೋ ಮಾತನಾಡಿ ನಿಮ್ಮ ವ್ಯಕ್ತಿತ್ವ ಕಳೆದುಕೊಳ್ಳಬೇಡಿ ಎಂದು ಮಂಜು ಪಾವಗಡ ಅವರು ಚಕ್ರವರ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
BBK8: 'ಬಿಗ್ ಬಾಸ್' ಮನೆಯೊಳಗೆ ಮೊದಲ ದಿನವೇ ದಿವ್ಯಾ & ದಿವ್ಯಾ ಜಗಳ ಮಾಡಿಕೊಂಡ್ರಾ?
ಮಂಜು ಮಾತು ಕೇಳಿ ದಿವ್ಯಾ ಸುರೇಶ್ ಫುಲ್ ಖುಷ್
ಮಂಜು ತನ್ನ ಪರವಾಗಿ ಮಾತನಾಡಿದ್ದನ್ನು ಕಂಡು ದಿವ್ಯಾ ಸುರೇಶ್ ಫುಲ್ ಖುಷಿಯಾಗಿದ್ದಾರೆ, ಅಷ್ಟೇ ಅಲ್ಲದೆ ಎಲ್ಲರ ಮುಂದೆ ಬೀಗುತ್ತ ಚಪ್ಪಾಳೆ ಕೂಡ ತಟ್ಟಿದ್ದಾರೆ. ಮಂಜು ಮಾತನಾಡುವಾಗ ಯಾರ ಯಾರ ಎಕ್ಸ್ಪ್ರೆಶನ್ ಹೇಗಿದೆ ಅಂತ ಇಣುಕಿ ನೋಡಿದ್ದು ಕೂಡ ಬಿಗ್ ಬಾಸ್ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
BBK8: 200-300 ಮದುವೆ ಪ್ರಪೋಸಲ್ ಬಂದ್ರೂ ವೈಷ್ಣವಿ ಗೌಡಗೆ ಒಂದೂ ಇಷ್ಟವಾಗಿಲ್ಲ! ಕಾರಣ ಇಲ್ಲಿದೆ