ಆ್ಯಪ್ನಗರ

BBK9: ಅದೊಂದು ಗುಣದಿಂದ ಬಿಗ್ ಬಾಸ್ ಮನೆಯಲ್ಲಿ ಗೌರವ ಕಳೆದುಕೊಳ್ತಿದ್ದಾರಾ ಅರುಣ್ ಸಾಗರ್?

Bigg Boss Kannada Season 9 Updates: ಬಿಗ್ ಬಾಸ್ ಕನ್ನಡ ಸೀಸನ್ 9 ಶೋನಲ್ಲಿ ಅರುಣ್ ಸಾಗರ್ ಅವರು ಆಟದ ವಿಚಾರದಲ್ಲಿ ಬೇಜವಾಬ್ದಾರಿ ತೋರಿಸುತ್ತಾರೆ, ಸರಿಯಾಗಿ ಆಟ ಆಡದೆ ಬಿಗ್ ಬಾಸ್‌ಗೆ ಗೌರವ ತೋರಿಸುತ್ತಿಲ್ಲ, ಕಲಾ ನಿರ್ದೇಶಕರಾಗಿ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂದೆಲ್ಲ ಸಹಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

Authored byಪದ್ಮಶ್ರೀ ಭಟ್ | Vijaya Karnataka Web 29 Sep 2022, 11:11 pm

ಹೈಲೈಟ್ಸ್‌:

  • ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್ ಅವರು ಗಂಭೀರವಾಗಿ ಆಟ ಆಡ್ತಿಲ್ವಾ?
  • ಆಟದ ವಿಚಾರದಲ್ಲಿ ಅರುಣ್ ಸಾಗರ್ ಅವರ ನಡೆ ಸಹಸ್ಪರ್ಧಿಗಳಿಗೆ ಬೇಸರ ತಂದಿದೆ
  • ಅರುಣ್ ಸಾಗರ್ ಗೌರವ ಕಳೆದುಕೊಳ್ಳುತ್ತಿದ್ದಾರಾ?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web arun sagar
ಬಿಗ್ ಬಾಸ್ ಕನ್ನಡ ಸೀಸನ್ 9 ಶೋನಲ್ಲಿ ( Bigg Boss Kannada Season 9 ) 70% ಅರುಣ್ ಸಾಗರ್ ಅವರೇ ( Arun Sagar ) ಕಾಣುತ್ತಿದ್ದಾರೆ. ಇವರೆಷ್ಟು ಕ್ರಿಯೇಟಿವ್ ವ್ಯಕ್ತಿ ಆಗಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ದೊಡ್ಮನೆಯಲ್ಲಿ ಸಖತ್ ಮನರಂಜನೆ ನೀಡುತ್ತಿರುವ ಅರುಣ್ ಸಾಗರ್ ಅವರು ಆಟವನ್ನು ಅಷ್ಟು ಗಂಭೀರವಾಗಿ ಪರಿಗಣಿಸದೆ ಗೌರವ ಕಳೆದುಕೊಳ್ಳುತ್ತಿದ್ದಾರಾ?
ಹೌದು, ಕಳೆದ ಎರಡು ದಿನಗಳಿಂದ ಅರುಣ್ ಸಾಗರ್ ಹಾಗೂ ನವಾಜ್ ಜೋಡಿ ಆಟವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಫಿರಮಿಡ್ ಟಾಸ್ಕ್‌ನಲ್ಲಿ ಕೂಡ ಅವರು ಜಾಸ್ತಿ ಪ್ರಯತ್ನ ಮಾಡದೆ ಆಗೋದಿಲ್ಲ ಎಂದು ಕೈ ಕಟ್ಟಿ ಕುಳಿತರು, ಹಾಡು ಹಾಡಿದರು, ದರ್ಶ್ ಚಂದ್ರಪ್ಪ, ಆರ್ಯವರ್ಧನ್ ಅವರನ್ನು ಅಣುಕಿಸಿದರು. ಮಯೂರಿ, ಸಾನ್ಯಾ ಅಯ್ಯರ್ ಅವರು ಈ ಜೋಡಿ ಗೆಲ್ಲುತ್ತದೆ ಎಂದು ಬೆಟ್ ಕಟ್ಟಿ ಕೊನೆಯಪಕ್ಷ ಇವರು ಪ್ರಯತ್ನ ಪಡಲಿಲ್ಲ ಎಂದು ನಿರಾಶೆಗೊಂಡರು.

"ನನಗೆ ಅರುಣ್ ಸಾಗರ್ ಮೇಲೆ ಸಖತ್ ಗೌರವವಿದೆ, ಹೀಗೆಲ್ಲ ಮಾಡಿದರೆ ಹೇಗೆ? ಬಿಗ್ ಬಾಸ್ ಶೋಗೆ ಅವಮಾನ ಮಾಡಿದ ಹಾಗಲ್ವಾ? ಅರುಣ್ ಸರ್ ಈ ತರ ಮಾಡಿ ಗೌರವ ಕಳೆದುಕೊಳ್ತಿದ್ದಾರೆ. ಅರುಣ್ ಸಾಗರ್ ಅವರು ಆರ್ಟ್ ಡೈರೆಕ್ಟರ್ ಅಲ್ವಾ.." ಎಂದು ಸಾನ್ಯಾ ಅಯ್ಯರ್ ಅವರು ಹೇಳಿದ್ದರು. ಮಯೂರಿ ಕೂಡ ಇದೇ ಅಭಿಪ್ರಾಯ ಹೊಂದಿದ್ದರು.

BBK 9: ಅರುಣ್ ಸಾಗರ್‌ಗೆ ಸಿಕ್ತು ವಿಧೂಷಕ, ನಾಯಕ, ಗೆಳೆಯನ ಪಟ್ಟಿ! ಮಿಕ್ಕವರಿಗೆ ಲಭಿಸಿದ್ದೇನು?

ಬಿಗ್ ಬಾಸ್ ಟಾಸ್ಕ್ ಫಲಿತಾಂಶದ ಬಗ್ಗೆ ಮಾತನಾಡುವಾಗ ಮಧ್ಯೆ ಮಾತನಾಡುವ ದುಸ್ಸಾಹಸ ಮಾಡಿದ್ದು ಕೆಲವರಿಗೆ ಬೇಸರ ತಂದಿತ್ತು. ಅಷ್ಟೇ ಅಲ್ಲದೆ ಫಿರಾಮಿಡ್ ಟಾಸ್ಕ್‌ನಲ್ಲಿ ಆಟದ ಅಂಗಳದಿಂದ ಹೊರಗೆ ಬಂದು, ತಮಾಷೆಗೆ ಬಾಗಿಲ ಬಳಿ ನಿಂತು ದರ್ಶ್, ಆರ್ಯವರ್ಧನ್ ಜೋಡಿಯನ್ನು ನೋಡಿದ್ದಾರೆ, ಆಮೇಲೆ ಆಟ ಮುಗಿಸಿದ್ವಿ ಅಂತ ಹೇಳಲು ಗಂಟೆ ಎಲ್ಲಿ ಎಂದು ಹುಡುಕಾಡಿದ್ದಾರೆ. ಇದು ಕೆಲ ಸ್ಪರ್ಧಿಗಳಿಗೆ ಬೇಜವಾಬ್ದಾರಿಯ ವರ್ತನೆ ರೀತಿ ಕಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ.

ಮೂರನೇ ದಿನದ ಟಾಸ್ಕ್‌ನಲ್ಲಿ ಕೂಡ ಅರುಣ್ ಸಾಗರ್ ಅವರ ನಡೆ ರೂಪೇಶ್ ಶೆಟ್ಟಿಗೆ ಬೇಸರ ತಂದಿದೆ. "ನನಗೆ ಇದೆಲ್ಲ ನಗು ಬರಲ್ಲ, ಕೋಪ ಬರತ್ತೆ, ನೋಡಿದೋರಿಗೆ ಹುಚ್ಚರ ತರ ಅನಿಸತ್ತೆ" ಎಂದು ಅನುಪಮಾ ಗೌಡ, ನೇಹಾ ಗೌಡ ಬಳಿ ಹೇಳಿಕೊಂಡಿದ್ದಾರೆ.

BBK 9: ವಾವ್.. ‘ಬಿಗ್ ಬಾಸ್’ ಮನೆಗೆ ಎಂಟ್ರಿಕೊಟ್ಟ ‘ಎಂಟರ್‌ಟೇನರ್’ ಅರುಣ್ ಸಾಗರ್!

ಅನುಪಮಾ ಗೌಡ ಕೂಡ "ಬಿಗ್ ಬಾಸ್‌ನಲ್ಲಿ ಫನ್ ಮಾಡಿ, ಅಗೌರವಿಸಬೇಡಿ. ಇವರಿಗೆಲ್ಲ ಸೀನಿಯರ್ ಅನ್ನೋದು ತಲೆಗೆ ಬಂದಿದೆ" ಎಂದು ಹೇಳಿದ್ದಾರೆ.

ರೂಪೇಶ್ ಶೆಟ್ಟಿ, ಕಾವ್ಯಶ್ರೀ ಗೌಡ ಕೂಡ ಅರುಣ್ ಬಗ್ಗೆ ಮಾತನಾಡಿದ್ದು, "ಆರ್ಯವರ್ಧನ್ ಅವರು ಬಿಗ್ ಬಾಸ್‌ಗೆ ಹೆದರುತ್ತಾರೆ, ಆದರೆ ಅರುಣ್ ಹೆದರಲ್ಲ, ನಾನು ರೂಲ್ಸ್ ಕೇಳಲ್ಲ ಅಂತ ಹೇಳ್ತಾರೆ" ಎಂದು ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 1 ಶೋನಲ್ಲಿ ಭಾಗವಹಿಸಿದ್ದ ಅರುಣ್ ಸಾಗರ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಸಾಕಷ್ಟು ಜನರಿಗೆ ಅರುಣ್ ಗೆಲ್ಲಲಿ ಎಂಬ ಆಶಯವಿತ್ತು. ಆ ಆಸೆ ಈ ಸೀಸನ್‌ನಲ್ಲಿ ನೆರವೇರಲಿದೆಯಾ ಎಂದು ಕಾದು ನೋಡಬೇಕಿದೆ.

ಶುಕ್ರವಾರ ಬಂತೆಂದರೆ ಸಿನಿಮಾ ರಿವ್ಯೂ ಹೇಳುವ ನವಾಜ್ ಅವರು 19ನೇ ವಯಸ್ಸಿಗೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಸದ್ಯ ಎರಡು ಲೈನ್ ರೈಮ್ಸ್ ಸಮೇತ ಪಂಚಿಂಗ್ ಮಾತನಾಡುವ ನವಾಜ್ ದೊಡ್ಮನೆಯಲ್ಲಿ ಜಗಳ ಆಡಲು ಕಾಯತ್ತಿದ್ದಾರಂತೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ