ಆ್ಯಪ್ನಗರ

BBK9: ಬಿಗ್ ಬಾಸ್ ಕನ್ನಡ 9 ಮನೆಯಲ್ಲಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ

ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 9 ಶೋಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಕಾಲಿಟ್ಟಿದ್ದಾರೆ. ಈ ಶೋಗೆ ಬಂದ ಕಾರಣ ಏನು? ಕನ್ನಡಪರ ಹೋರಾಟ, ತಮ್ಮ ಗುಣಗಳೇನು ಎಂದು ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮುಂದೆ ಹೇಳಿಕೊಂಡಿದ್ದಾರೆ.

Authored byಪದ್ಮಶ್ರೀ ಭಟ್ | Vijaya Karnataka Web 24 Sep 2022, 11:33 pm
ಸಾಕಷ್ಟು ವೇದಿಕೆಗಳಲ್ಲಿ ಕನ್ನಡದ ಪರ ಧ್ವನಿ ಎತ್ತಿದ ರೂಪೇಶ್ ರಾಜಣ್ಣ ಅವರು ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 9 ಶೋಗೆ ಕಾಲಿಟ್ಟಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಅವರು ಜಡ್ಜ್ ಆಗಿದ್ದ ಕಾರ್ಯಕ್ರಮದಲ್ಲಿ ಹಾಡು ಹಾಡಿದ್ದ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮುಂದೆ ಮುಖಾಮುಖಿಯಾಗಿದ್ದಾರೆ.
Vijaya Karnataka Web roopesh rajanna


"ನೀವು ಕನ್ನಡದ ಬಗ್ಗೆ ಧ್ವನಿ ಎತ್ತಿದ್ರಿ. ಅದು ಒಮ್ಮೆಯೇ ಏಳು ಕೋಟಿ ಜನರಿಗೆ ಗೊತ್ತಾಯ್ತು. ಬುರ್ಜ್ ಖಲೀಫಾ ಕಟ್ಟಡದ ಮೇಲೆ ಕನ್ನಡದ ಬಾವುಟ ಹಾರಿಸಿದ್ರಿ. ಸಮಸ್ತ ಕರ್ನಾಟಕದ ಪರವಾಗಿ ನಾನು ನಿಮಗೆ ಧನ್ಯವಾದ ಹೇಳುವೆ. ನನಗೆ ಕೋಪ ಜಾಸ್ತಿ, ಅಳೋದು ಕಮ್ಮಿ. ಆದರೆ ಕೋಪ ಬಂದರೆ ಮಾತ್ರ ಯಾರಿಗೂ ಬರದಷ್ಟು ಕೋಪ ಬರತ್ತೆ" ಎಂದಿದ್ದಾರೆ ರೂಪೇಶ್ ರಾಜಣ್ಣ

"ನಾನು ಕನ್ನಡದ ಪರ ಹೋರಾಟ ಮಾಡುತ್ತೇನೆ. ಹಾಗಂತ ಬೇರೆ ಭಾಷೆಯನ್ನು ವಿರೋಧಿಸುತ್ತೇನೆ ಎಂದರ್ಥವಲ್ಲ. ಬೇರೆ ಭಾಷೆಯನ್ನು ಹೇರಿಕೆ ಮಾಡಿದರೆ ಸಹಿಸೋದಿಲ್ಲ" ಎಂದಿದ್ದಾರೆ ರೂಪೇಶ್ ರಾಜಣ್ಣ

BBK9: ನಾನು ಅಳುಮುಂಜಿಯಲ್ಲ, ಮಂಗಳಗೌರಿ ತರ ತ್ಯಾಗ ಮಾಡೋ ಭಾವನೆ ನಂಗಿಲ್ಲ: ಕಾವ್ಯಶ್ರೀ ಗೌಡ

"ನಂದು ಲವ್ ಮ್ಯಾರೇಜ್. ನನ್ನ ಎಲ್ಲ ಹೋರಾಟ, ಕೆಲಸಗಳಿಗೂ ನನ್ನ ಪತ್ನಿ ಸಹಕಾರ ನೀಡಿದ್ದಾಳೆ. ಅದರಿಂದಲೇ ನಾನು ಹೀಗಿರೋದು" ಎಂದಿದ್ದಾರೆ ರೂಪೇಶ್ ರಾಜಣ್ಣ

ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಬಿಗ್ ಬಾಸ್ ಕನ್ನಡ ಓಟಿಟಿ ಸ್ಪರ್ಧಿಗಳಾದ ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ಆರ್ಯವರ್ಧನ್, ರಾಕೇಶ್ ಅಡಿಗ ಭಾಗವಹಿಸಿದ್ದಾರೆ.

BBK9: 15 ದಿನಕ್ಕಿಂತ ಜಾಸ್ತಿ ಮನೆಯಿಂದ ದೂರ ಇರೋದು ಕಷ್ಟ, ಆದ್ರೆ ಬಿಗ್ ಬಾಸ್ ಮನೆಯಲ್ಲಿ ಟ್ರೈ ಮಾಡ್ತೀನಿ: ನೇಹಾ ಗೌಡ

ಹಳೆಯ ಸೀಸನ್‌ಗಳಿಂದ ಅರುಣ್ ಸಾಗರ್, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್ ಭಾಗವಹಿಸಿದ್ದಾರೆ.

BBK9: ಬಿಗ್ ಬಾಸ್ ಮನೆಯಲ್ಲಿ 10 ಬಾರಿ ವರ್ಲ್ಡ್ ಚಾಂಪಿಯನ್ ಪಟ್ಟ ಗೆದ್ದ ಬೈಕ್ ರೈಡರ್ ಐಶ್ವರ್ಯಾ ಪಿಸೆ

ನವಾಜ್, ಮಯೂರಿ, ಕಾವ್ಯಶ್ರೀ ಗೌಡ, ರೂಪೇಶ್ ರಾಜಣ್ಣ, ಐಶ್ವರ್ಯಾ ಪಿಸೆ, ಅಮೂಲ್ಯಾ ಗೌಡ, ನೇಹಾ ಗೌಡ, ದರ್ಶ್ ಚಂದ್ರಪ್ಪ, ವಿನೋದ್ ಗೊಬ್ಬರಗಾಲ ಅವರು ಈ ಶೋನಲ್ಲಿ ನವೀನರಾಗಿ ಭಾಗವಹಿಸಿದ್ದಾರೆ.

ಬಿಗ್ ಬಾಸ್ ಕನ್ನಡ 9 ಶೋ ನಿತ್ಯ ಎಪಿಸೋಡ್ ರಾತ್ರಿ 9 ಗಂಟೆಗೆ ನಿತ್ಯ ಪ್ರಸಾರ ಆಗುವುದು.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ