ಆ್ಯಪ್ನಗರ

Bigg Boss OTT Kannada: ಒಂದಿನ ದೆವ್ವಕ್ಕೆ ಲೈನ್ ಹೊಡೆಯಲು ಹೋಗಿದ್ದ ಆರ್ಯವರ್ಧನ್ ಗುರೂಜಿ ಆಸ್ತಿ ಎಷ್ಟು ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ನಾನು ಮೂರು ಬಾರಿ ದೆವ್ವ ನೋಡಿದ್ದೇನೆ, ಅಷ್ಟೇ ಅಲ್ಲದೆ ಒಮ್ಮೆ ಸುಂದರವಾದ ದೆವ್ವಕ್ಕೆ ಲೈನ್ ಹೊಡೆಯಲು ಹೋಗಿದ್ದೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ನಾನು 5000 ಕೋಟಿ ರೂಪಾಯಿ ಒಡೆಯ ಎಂದಿದ್ದಾರೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Authored byಪದ್ಮಶ್ರೀ ಭಟ್ | Vijaya Karnataka Web 10 Aug 2022, 12:41 pm

ಹೈಲೈಟ್ಸ್‌:

  • ಮೂರು ಬಾರಿ ನಾನು ದೆವ್ವ ನೋಡಿರುವೆ ಎಂದ ಆರ್ಯವರ್ಧನ್ ಗುರೂಜಿ
  • ನಾನು ಸುಂದರವಾದ ದೆವ್ವಕ್ಕೆ ಲೈನ್ ಹೊಡೆಯಲು ಹೋಗಿದ್ದೆ ಎಂದ ಆರ್ಯವರ್ಧನ್
  • ಆರ್ಯವರ್ಧನ್ ಗುರೂಜಿಯ ಆಸ್ತಿ ಒಟ್ಟೂ 5000 ಕೋಟಿ ರೂಪಾಯಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web aryavrdhan guruji
ಮನುಷ್ಯರಿಗೆ ಲೈನ್ ಹೊಡೆದಿದ್ದು ಕೇಳಿರುತ್ತೀರಿ, ಆದರೆ ದೆವ್ವಕ್ಕೆ ಲೈನ್ ಹೊಡೆದಿರೋದನ್ನು ಬಿಗ್ ಬಾಸ್ ಮನೆಯಲ್ಲಿ ( Bigg Boss Ott Kannada ) ಆರ್ಯವರ್ಧನ್ ಗುರೂಜಿ ( Aryavardhan Guruji ) ಅವರು ಹೇಳಿದ ನಂತರವೇ ನಿಮಗೆಲ್ಲ ಗೊತ್ತಾಗಿರುತ್ತದೆ ಅಲ್ಲವೇ!
ನಾನು ಯಾರು ಎಂಬ ಟಾಸ್ಕ್ ವೇಳೆ ಆರ್ಯವರ್ಧನ್ ಗುರೂಜಿ ಅವರು ದೆವ್ವಕ್ಕೆ ಲೈನ್ ಹೊಡೆದ ಕಥೆ ಹೇಳಿದ್ದಾರೆ

ನನ್ನ ಮಾವನಿಗೂ ಎಣ್ಣೆ ತಂದುಕೊಡ್ತೀನಿ

ನಂಬರ್ ಅಂದರೆ ನಾನು, ನಾನು ಅಂದರೆ ನಂಬರ್. ನಾನು ಹೇಳಿದೆ ಅಂತ ಆಗತ್ತೋ, ಆಗತ್ತೋ ಅಂತ ಹೇಳುತ್ತೇನೋ ಅದು ಅಭಿಮಾನಿ ದೇವರಿಗೆ ಗೊತ್ತು. ನಾನು ಜಗತ್ತಿನಲ್ಲಿ ಏನೂ ಕಷ್ಟಪಟ್ಟಿಲ್ಲ. ನಾನು ಎದುರಿಸೋದು ಕಷ್ಟ ಅಲ್ಲ, ಸವಾಲು ಅಂತ ಹೇಳಲು ಬಯಸುವೆ. ಎಲ್ಲರಿಗೂ ಕಷ್ಟ ಇರುತ್ತವೆ, ಅದನ್ನೆಲ್ಲ ಸವಾಲಿನ ರೀತಿ ಎದುರಿಸಬೇಕು. ನಾನು ನನ್ನ ಮನೆಯಲ್ಲಿ ಅತ್ತೆ ಮಾವನನ್ನು ಕೂಡ ದೇವರ ತರ ನೋಡಿಕೊಳ್ಳುತ್ತೇನೆ. ನನ್ನ ಮಾವನಿಗೆ ಎಣ್ಣೆ ಬೇಕು ಅಂದರೆ ಎಣ್ಣೆ ತಂದುಕೊಡುವೆ

Bigg Boss Kannada OTT: ಬಿಗ್ ಬಾಸ್ ಕನ್ನಡ ಓಟಿಟಿ ಶೋನ ಮೊದಲ ಸ್ಪರ್ಧಿ ಆರ್ಯವರ್ಧನ್ ಗುರೂಜಿ; ಇದು ಅಧಿಕೃತ

ದೆವ್ವಕ್ಕೆ ಲೈನ್ ಹೊಡೆದಿದ್ದೆ
ಬೇಕರಿಯಲ್ಲಿ ಆಗ ಕೆಲಸ ಮಾಡುತ್ತಿದ್ದೆ. ನನಗೆ ಸಿನಿಮಾ ನೋಡುವ ಹುಚ್ಚು ಹೆಚ್ಚಿತ್ತು. ಊರ್ವಶಿ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ವಿಲ್ಸನ್ ಗಾರ್ಡನ್‌ನಲ್ಲಿ ಸೈಕಲ್ ಮೇಲೆ ನಾನು, ನನ್ನ ಗೆಳೆಯನ ಜೊತೆ ಹೋಗಿದ್ದೆ. ನಾನು ದೆವ್ವಕ್ಕೆ ಲೈನ್ ಹೊಡೆದಿದ್ದೆ. ಆ ದೆವ್ವ ತುಂಬ ಸುಂದರವಾಗಿತ್ತು. ಬಜಾರ್‌ನಲ್ಲಿ ಎಲ್ಲವೂ ಸಿಗತ್ತೆ, ದೆವ್ವವೂ ಸಿಗತ್ತೆ ಅನ್ನೋದು ಮುಖ್ಯ ವಿಚಾರ.

3 ಬಾರಿ ದೆವ್ವ ನೋಡಿದೆ

ಒಂದು ಹುಡುಗಿ ನೋಡಿದೆವು, ಕೂದಲು ಹಾರಾಡುತ್ತಿತ್ತು. ಅವಳು ಸುಂದರವಾಗಿ ಧರೆಯಿಂದ ಇಳಿದಹಾಗೆ ಲಕಲಕ ಅಂತಿದ್ದಾಳೆ. ಅವಳು ತುಂಬ ಚೆನ್ನಾಗಿದ್ದಳು. ನೋಡಿ ಎಷ್ಟು ಚೆಂದ ಹುಡುಗಿ ಅಂತ ಅಂದುಕೊಂಡೆವು. ಹಿಂದೆ ಹೋಗಿ ನೋಡಿದರೆ ಅವಳಿಗೆ ಕಾಲೇ ಇಲ್ಲ. ನಾವಿಬ್ಬರೂ ಎದ್ವಾ ಬಿದ್ವಾ ಅಂತ ಓಡಿದೆವು. ಇಲ್ಲಿಯವರೆಗೂ ನಾನು 3 ಬಾರಿ ದೆವ್ವ ನೋಡಿದ್ದೇನೆ.

Aryavardhan Guruji: ‘ಬಿಗ್ ಬಾಸ್’ ಮನೆಯೊಳಗೆ ಆರ್ಯವರ್ಧನ್ ಗುರೂಜಿಗೆ ದೇವಿಯಿಂದ ಬಲಗಡೆ ಹೂವಿನ ಪ್ರಸಾದ!

ಇನ್ನು ಯಾರಿಗೂ ದುಡ್ಡು ಕೊಡಲ್ಲ

ಒಬ್ಬನೇ ರೂಮ್‌ನಲ್ಲಿ ಇರೋದು ನನ್ನ ಹತ್ತಿರ ಆಗೋದೇ ಇಲ್ಲ, ಬಿಗ್ ಬಾಸ್‌ನಲ್ಲಿ ನನ್ನ ಒಬ್ಬನನ್ನೇ ಬಿಟ್ಟು ಹೋದರೆ ಅಲ್ಲೋಲ ಕಲ್ಲೋಲ ಆಗಿಬಿಡತ್ತೆ. ನಮ್ಮನ್ನು ಯಾರೂ ಹೆದರಿಸಲು ಆಗೋದಿಲ್ಲ, ಅವೆಲ್ಲ ನಮ್ಮ ಗ್ರಹಗಳು. ಯಾರಿಂದ ಏನೇ ಆದರೂ ಅದು ಮನುಷ್ಯನಿಂದ ಅಲ್ಲ, ಗ್ರಹಗಳಿಂದ. ಕೇಳಿ ಕೇಳಿದವರಿಗೆ ನಾನು ದುಡ್ಡು ಕೊಟ್ಟು ತಪ್ಪು ಮಾಡಿದ್ದೇನೆ. ಚಿತ್ರರಂಗದಲ್ಲಿರುವ ಎಷ್ಟೋ ನಿರ್ದೇಶಕರು, ನಿರ್ಮಾಪಕರಿಗೆ ನಾನು ಹಣ ಕೊಟ್ಟಿದ್ದೇನೆ. ಆ ತಪ್ಪನ್ನು ಇನ್ನೆಂದೂ ಮಾಡಲ್ಲ

5000 ಕೋಟಿ ರೂಪಾಯಿ ಆಸ್ತಿ ಇದೆ

ಬೇಲೂರು ಹಾಸನದ ಮಧ್ಯೆ 40 ಎಕರೆ ಜಾಗ ಇದೆ. ಅಲ್ಲಿ ಮಾವು, ನೆಲ್ಲಿ ಮರಗಳು ಇವೆ. ಇವತ್ತು ಎಲ್ಲರೂ ದುಡ್ಡು ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ, ಆದರೆ ನಮಗೆ ಹಳ್ಳಿ ಬೋರ್. ಹಾಸನದ ಸುತ್ತ ಇರೋದೆಲ್ಲ ನಮ್ಮದೆ ಆಸ್ತಿ. ಒಂದಷ್ಟು ದುಡ್ಡಿನ ಬಗ್ಗೆ ಸಹೋದರಿಯರು ಕೇಸ್ ಹಾಕಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ನಾನು ಮನೆ ಬಿಟ್ಟು ಬಂದರೂ ಕೂಡ, ನನಗೆ ಆಸ್ತಿ ಪಾಲು ಕೊಟ್ಟಿದ್ದಾರೆ. ಏನಿಲ್ಲ ಅಂದರೂ ನಮ್ಮದು 5000 ಕೋಟಿ ರೂಪಾಯಿ ಆಸ್ತಿ ಇದೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ