ಬಿಗ್ ಬಾಸ್ ಕನ್ನಡ ಓಟಿಟಿ ಶೋನಲ್ಲಿ ( Bigg Boss Ott Kannada ) ಜಿಗಿದಂಡ ಎಂದು ಆಟ ನೀಡಲಾಗಿತ್ತು. ಆ ವೇಳೆ ಆಟಕ್ಕೆ ನಿಂತ ಸ್ಪರ್ಧಿಗಳ ಮೇಲೆ ಸೋಪಿನ ನೀರು ಹಾಕಿದ್ರು, ದಿಂಬಿನಿಂದ ಹೊಡೆದ್ರು, ಒದ್ದೆ ಬಟ್ಟೆ ಹಾಕಿದ್ರು ಅಂತೆಲ್ಲ ದೊಡ್ಡ ಮಾರಾಮಾರಿ ಆಗಿದೆ. ತಮ್ಮ ತಂಡದ ಸ್ಪರ್ಧಿಗಳನ್ನು ರಕ್ಷಿಸಲು ಹೋಗಿ, ಆರ್ಯವರ್ಧನ್ ( Aaryavardhan Guruji ) ನನ್ನನ್ನು ದೂಕಿದ್ದಾರೆ ಎಂದು ಉದಯ್ ಸೂರ್ಯ ಆರೋಪ ಮಾಡಿದ್ದಾರೆ. ಉದಯ್ ಸೂರ್ಯ ಅವರು ತನ್ನ ಮೇಲೆ ಹಳೆ ಸಿಟ್ಟು ಇಟ್ಟುಕೊಂಡು ಮತ್ತೆ ಮತ್ತೆ ದೂಕಿದ್ದಾರೆ ಎಂದು ಆರ್ಯವರ್ಧನ್ ಕೂಗಾಡಿದ್ದಾರೆ. ಒಟ್ಟಿನಲ್ಲಿ ಆಟದ ವಿಚಾರವಾಗಿ ಆರ್ಯ, ಉದಯ್ ಮಧ್ಯೆ ದೊಡ್ಡ ಮಟ್ಟದಲ್ಲಿ ಮಾತಿನ ಚಕಮಕಿ ನಡೆದಿದೆ. ಒಂದೇ ಸಮನೆ ಆರ್ಯವರ್ಧನ್ ಗುರೂಜಿ ಕೂಗಾಡಿದ್ದಾರೆ.
ಆರ್ಯವರ್ಧನ್ ಆಕ್ರೋಶ ಹೊರಹಾಕಿದ್ದು ಹೀಗೆ
"ನಾನು ಗೇಮ್ ಆಡ್ತಿದೀನಿ, ನಿಂಗೆ ನಾನು ಬೈದಿಲ್ಲ, ನನಗೆ ಯಾಕೆ ಹೊಡೆಯೋಕೆ ಬಂದೆ, ಹಳೆ ಕೋಪ ಇಟ್ಟುಕೊಂಡು ಬಂದ್ರೆ, ನಾನು ಒಂದುಸಲ ತಳ್ಳಿದ್ರೆ 25 ಅಡಿ ಆಚೆ ಹೋಗ್ತೀಯಾ, ನಾನು ತಳ್ಳಿಲ್ಲ, ಅದನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲ ಇದನ್ನೆಲ್ಲ ಕೋತಿಗಳ ಹತ್ರ ಇಟ್ಕೊಳ್ಳಿ, ತೆಗೆದು ಇಕ್ಕಿದ್ರೆ ಬಾಳೆಯಲ್ಲಿ ತಿಂದುಬಿಡ್ತೀನಿ. ಒಂದು ಬಿಟ್ಟರೆ ತಲೆ, ಮೂಗು ಓಪನ್ ಆಗೋದು, ಕೊಬ್ಬಲ್ಲಿ ಮಾತನಾಡ್ತೀನಿ ಅಂದ್ರೆ ಬಾಡಿಲಿ ಕೊಬ್ಬಿರಬೇಕು. ಬಾಯಿಯನ್ನು ನೆಟ್ಟಗೆ ಇಟ್ಟುಕೊಂಡು ಮಾತನಾಡಿ. ಯಾವನೋ ಮಧ್ಯೆ ಮಾತಾಡೋಕೆ ಬಂದೆ. ನಾನು ಗೇಮ್ ಆಡೋಕೆ ಬಂದ್ರೆ ನನ್ನನ್ನೇ ಟಾರ್ಗೆಟ್ ಮಾಡ್ತಾನೆ. ನನಗೆ ವಯಸ್ಸಾಗಿರಬಹುದು, ದಪ್ಪ ಆಗಿರಬಹುದು, ಯಾವುದರಲ್ಲಿಯೂ ಕಮ್ಮಿ ಇಲ್ಲ. ನಾನು ಕೂಲ್ ಆಗಲ್ಲ, ಬದನೆಕಾಯಿ" ಎಂದು ಆರ್ಯವರ್ಧನ್ ಗುರೂಜಿ ಅವರು ಕೂಗಾಡಿದ್ದಾರೆ.
Bigg Boss Kannada OTT: ಬಿಗ್ ಬಾಸ್ ಮನೆಯಲ್ಲಿ ಜಡೆ ಜಗಳ ಶುರು; ಸ್ಫೂರ್ತಿ ಗೌಡ, ಸೋನು ಗೌಡ ಮಧ್ಯೆ ಬೆಂಕಿ ಹೊತ್ತಿಸಿದ 'ಡವ್ರಾಣಿ'
ಗುರೂಜಿ ಅವತಾರ ಕೇಳಿ ಭಯಬಿದ್ದ ರಾಕೇಶ್ ಅಡಿಗ
ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಮಧ್ಯೆ ಮತ್ತೆ ಮಾತುಕತೆ ನಡೆದಿದೆ. ಆಗ ರಾಕೇಶ್ ಅವರು "ನೀವು ಬಂದಿದ್ದು ಕೂಗಾಡಿದ್ದು ನೋಡಿ ನನಗೆ ಹೊಡೆಯೋಕೆ ಬಂದ್ರಿ ಅಂತ ಭಯಕ್ಕೆ ಬಿದ್ದೆ. ಅಷ್ಟೆಲ್ಲ ಸಿಟ್ಟಾಗಬೇಡಿ" ಎಂದಿದ್ದಾರೆ. ಆಗ ಆರ್ಯವರ್ಧನ್ ನಕ್ಕಿದ್ದಾರೆ.
"ವಯಸ್ಸು ಕೆಲವೊಮ್ಮೆ ಕೋಪ ತರಿಸುತ್ತದೆ" ಎಂದು ಅರ್ಜುನ್ ಅವರು ಆರ್ಯವರ್ಧನ್ ಕೂಗಾಡಿದ್ದರ ಬಗ್ಗೆ ಅಭಿಪ್ರಾಯ ಹೊರಹಾಕಿದ್ದಾರೆ.
Bigg Boss Kannada OTT: ಹುಡುಗಿಯಾಗಿ ತಪ್ಪು ಮಾಡಿದ್ದೀನಿ, ಆದರೆ ಬದುಕೋಕೆ ಅವಕಾಶ ಕೊಡಿ; ಸೋನು ಗೌಡ
ಮಿಮಿಕ್ರಿ ಮಾಡಿದ ಸೋನು ಗೌಡ, ಚೈತ್ರಾ ಹಳ್ಳಿಕೇರಿ
ಚೈತ್ರಾ ಹಳ್ಳಿಕೇರಿ, ಸೋನು ಗೌಡ ಅವರು ಆರ್ಯವರ್ಧನ್ ಮುಂದೆಯೇ ಅವರ ಮಿಮಿಕ್ರಿ ಮಾಡಿದ್ದಾರೆ. ಒಟ್ಟಿನಲ್ಲಿ ಈ ಆಟದಲ್ಲಿ ಕೆಲವರಿಗೆ ಗಾಯ ಆಗಿದೆ. ಜಯಶ್ರೀ ಕೂಗಾಡಿಕೊಂಡು ಕೆಲವರು ನಿಷ್ಠೂರ ಕಟ್ಟಿಕೊಂಡಿದ್ದಾರೆ. ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿ ಜೊತಗೆ ಜಯಶ್ರೀಗೆ ವಾದ ವಿವಾದ ಆಗಿದೆ.
ಆರ್ಯವರ್ಧನ್ ಆಕ್ರೋಶ ಹೊರಹಾಕಿದ್ದು ಹೀಗೆ
"ನಾನು ಗೇಮ್ ಆಡ್ತಿದೀನಿ, ನಿಂಗೆ ನಾನು ಬೈದಿಲ್ಲ, ನನಗೆ ಯಾಕೆ ಹೊಡೆಯೋಕೆ ಬಂದೆ, ಹಳೆ ಕೋಪ ಇಟ್ಟುಕೊಂಡು ಬಂದ್ರೆ, ನಾನು ಒಂದುಸಲ ತಳ್ಳಿದ್ರೆ 25 ಅಡಿ ಆಚೆ ಹೋಗ್ತೀಯಾ, ನಾನು ತಳ್ಳಿಲ್ಲ, ಅದನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲ ಇದನ್ನೆಲ್ಲ ಕೋತಿಗಳ ಹತ್ರ ಇಟ್ಕೊಳ್ಳಿ, ತೆಗೆದು ಇಕ್ಕಿದ್ರೆ ಬಾಳೆಯಲ್ಲಿ ತಿಂದುಬಿಡ್ತೀನಿ. ಒಂದು ಬಿಟ್ಟರೆ ತಲೆ, ಮೂಗು ಓಪನ್ ಆಗೋದು, ಕೊಬ್ಬಲ್ಲಿ ಮಾತನಾಡ್ತೀನಿ ಅಂದ್ರೆ ಬಾಡಿಲಿ ಕೊಬ್ಬಿರಬೇಕು. ಬಾಯಿಯನ್ನು ನೆಟ್ಟಗೆ ಇಟ್ಟುಕೊಂಡು ಮಾತನಾಡಿ. ಯಾವನೋ ಮಧ್ಯೆ ಮಾತಾಡೋಕೆ ಬಂದೆ. ನಾನು ಗೇಮ್ ಆಡೋಕೆ ಬಂದ್ರೆ ನನ್ನನ್ನೇ ಟಾರ್ಗೆಟ್ ಮಾಡ್ತಾನೆ. ನನಗೆ ವಯಸ್ಸಾಗಿರಬಹುದು, ದಪ್ಪ ಆಗಿರಬಹುದು, ಯಾವುದರಲ್ಲಿಯೂ ಕಮ್ಮಿ ಇಲ್ಲ. ನಾನು ಕೂಲ್ ಆಗಲ್ಲ, ಬದನೆಕಾಯಿ" ಎಂದು ಆರ್ಯವರ್ಧನ್ ಗುರೂಜಿ ಅವರು ಕೂಗಾಡಿದ್ದಾರೆ.
Bigg Boss Kannada OTT: ಬಿಗ್ ಬಾಸ್ ಮನೆಯಲ್ಲಿ ಜಡೆ ಜಗಳ ಶುರು; ಸ್ಫೂರ್ತಿ ಗೌಡ, ಸೋನು ಗೌಡ ಮಧ್ಯೆ ಬೆಂಕಿ ಹೊತ್ತಿಸಿದ 'ಡವ್ರಾಣಿ'
ಗುರೂಜಿ ಅವತಾರ ಕೇಳಿ ಭಯಬಿದ್ದ ರಾಕೇಶ್ ಅಡಿಗ
ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಮಧ್ಯೆ ಮತ್ತೆ ಮಾತುಕತೆ ನಡೆದಿದೆ. ಆಗ ರಾಕೇಶ್ ಅವರು "ನೀವು ಬಂದಿದ್ದು ಕೂಗಾಡಿದ್ದು ನೋಡಿ ನನಗೆ ಹೊಡೆಯೋಕೆ ಬಂದ್ರಿ ಅಂತ ಭಯಕ್ಕೆ ಬಿದ್ದೆ. ಅಷ್ಟೆಲ್ಲ ಸಿಟ್ಟಾಗಬೇಡಿ" ಎಂದಿದ್ದಾರೆ. ಆಗ ಆರ್ಯವರ್ಧನ್ ನಕ್ಕಿದ್ದಾರೆ.
"ವಯಸ್ಸು ಕೆಲವೊಮ್ಮೆ ಕೋಪ ತರಿಸುತ್ತದೆ" ಎಂದು ಅರ್ಜುನ್ ಅವರು ಆರ್ಯವರ್ಧನ್ ಕೂಗಾಡಿದ್ದರ ಬಗ್ಗೆ ಅಭಿಪ್ರಾಯ ಹೊರಹಾಕಿದ್ದಾರೆ.
Bigg Boss Kannada OTT: ಹುಡುಗಿಯಾಗಿ ತಪ್ಪು ಮಾಡಿದ್ದೀನಿ, ಆದರೆ ಬದುಕೋಕೆ ಅವಕಾಶ ಕೊಡಿ; ಸೋನು ಗೌಡ
ಮಿಮಿಕ್ರಿ ಮಾಡಿದ ಸೋನು ಗೌಡ, ಚೈತ್ರಾ ಹಳ್ಳಿಕೇರಿ
ಚೈತ್ರಾ ಹಳ್ಳಿಕೇರಿ, ಸೋನು ಗೌಡ ಅವರು ಆರ್ಯವರ್ಧನ್ ಮುಂದೆಯೇ ಅವರ ಮಿಮಿಕ್ರಿ ಮಾಡಿದ್ದಾರೆ. ಒಟ್ಟಿನಲ್ಲಿ ಈ ಆಟದಲ್ಲಿ ಕೆಲವರಿಗೆ ಗಾಯ ಆಗಿದೆ. ಜಯಶ್ರೀ ಕೂಗಾಡಿಕೊಂಡು ಕೆಲವರು ನಿಷ್ಠೂರ ಕಟ್ಟಿಕೊಂಡಿದ್ದಾರೆ. ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿ ಜೊತಗೆ ಜಯಶ್ರೀಗೆ ವಾದ ವಿವಾದ ಆಗಿದೆ.