ಆ್ಯಪ್ನಗರ

Bigg Boss 6, 24th November, Day 34: ಬಿಗ್‌ ಮನೆಯಿಂದ ಹೊರ ಹೋದ ಎವಿ ರವಿ

ಆರನೇ ವಾರಕ್ಕೆ ಕಾಲಿಟ್ಟ ಬಿಗ್‌ ಬಾಸ್‌ ಆರನೇ ಆವೃತ್ತಿ

Vijaya Karnataka Web 24 Nov 2018, 10:04 pm
ನೋಡು ನೋಡುತ್ತಿದ್ದಂತೆ ಬಿಗ್ ಬಾಸ್ ಆರನೇ ಆವೃತ್ತಿ ಆರನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಎ.ವಿ. ರವಿ ಹೊರ ನಡೆದಿದ್ದಾರೆ.
Vijaya Karnataka Web ಎವಿ ರವಿ
ಎವಿ ರವಿ


35 ದಿನಗಳ ಬಿಗ್‌ ಬಾಸ್ ಜರ್ನಿಯನ್ನು ಮುಗಿಸಿ ಜಿಮ್‌ ರವಿ ಹೊರ ನಡೆದರು.

18 ಸ್ಪರ್ಧಿಗಳ ಬಿಗ್‌ಬಾಸ್ ಮನೆ ಈಗ 13 ಮಂದಿಗೆ ಇಳಿದಿದೆ.

ಶನಿವಾರ ಎಲಿಮಿನೇಷನ್ ರೌಂಡ್ ಇರುವ ಕಾರಣ ಸಹಜವಾಗಿ ಬಿಗ್‌ ಬಾಸ್ ಮನೆಯಲ್ಲಿ ಒಂದು ರೀತಿ ಬಿಗುವಿನ ವಾತಾವರಣ ಆವರಿಸಿತ್ತು. ಬಿಸಿ ಬಿಸಿ ಚರ್ಚೆಗಳು ನಡೆದವು. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದವರು ರಶ್ಮಿ, ಧನರಾಜ್‌, ಮರಳಿ, ರವಿ, ಆಂಡಿ, ಅಕ್ಷತಾ.

ಮೊದಲಿಗೆ ರಶ್ಮಿ, ಧನರಾಜ್‌, ಆಂಡಿ, ಮುರಳಿ ಮತ್ತು ಕೊನೆಯಲ್ಲಿ ಅಕ್ಷತಾ ಪಾಂಡವಪುರ ಸೇಫ್‌ ಆದರು.

ಸುದೀಪ್‌ ಸಂಧಾನ

ಇಡೀ ವಾರದ ನಡೆದಿದ್ದ ವಿವಾದ ಶನಿವಾರ ಎಂದಿನಂತೆ ಭಾರಿ ಚರ್ಚೆಗೆ ಬಂತು. ಶನಿವಾರ ವೇದಿಕೆಗೆ ಬಂದ ಸುದೀಪ್ ಇದನ್ನು ಜಾಗರೂಕತೆಯಿಂದ ನಿಭಾಯಿಸಿದರು.

ಇಡೀ ವಾರದಲ್ಲಿ ಉಂಟಾಗಿದ್ದ ಗೊಂದಲ, ಗದ್ದಲ, ಅಸಮಾಧಾನ, ಭಿನ್ನಾಭಿಪ್ರಾಯಗಳನ್ನು ಸುದೀಪ್‌ ತಮ್ಮದೇ ರೀತಿಯಲ್ಲಿ ತಿಳಿಗೊಳಿಸಿದರು.

ಕೈ ಮುರಿದುಕೊಂಡ ಶಶಿ

ಕವಿತಾಳನ್ನು ಟಾರ್ಗೆಟ್‌ ಮಾಡುತ್ತಿದ್ದಾರೆಂಬ ವಿಷಯದಲ್ಲಿ ಜಯಶ್ರೀ, ಶಶಿ, ಆಂಡಿ ನಡುವೆ ಜೋರು ಜೋರು ಚರ್ಚೆ ನಡೆಯಿತು. ಈ ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಶಶಿ ಗೋಡೆಗೆ ಕೈಯಿಂದ ಜೋರಾಗಿ ಹೊಡೆದಿದ್ದರಿಂದ ಮುರಿದಿದೆ.

ಕೈ ಫ್ರಾಕ್ಚರ್‌ ಆಗಿದ್ದರಿಂದ ಮೂರು ವಾರಗಳ ಕಾಲ ಶಶಿ ಬ್ಯಾಂಡೇಜ್ ಹಾಕಿಕೊಳ್ಳಭೇಕಾಗಿದೆ.

ಈ ನಡುವೆ ಇಡೀ ರಾತ್ರಿ ಮಾತನಾಡಿದ ಶಶಿ, ಕವಿತಾ ಹಲವಾರು ವಿಷಯಗಳ ಮಾತುಕತೆ ನಡೆಸಿದರು.

ಶುಕ್ರವಾರ ಸಾಕಷ್ಟು ಜಗಳಕ್ಕೆ ಕಾರಣವಾಗಿ ಆಂಡಿ ವಿಷಯ ಹಾಗೂ ಶಶಿ ಗೋಡೆಗೆ ಹೊಡೆದ ಕೈ ಮುರಿದುಕೊಂಡಿದ್ದರು.

ಈ ನಡುವೆ ಅಕ್ಷತಾ ಮತ್ತು ರಾಕೇಶ್ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಆಂಡಿ ಪಾಡಿದ ಕಿತಾಪತಿ ಕಾರಣವಾಯಿತು. ಆಂಡಿ-ರಾಕೇಶ್‌ ಮಾತನಾಡುತ್ತಿದ್ದಾಗ ಅಕ್ಷತಾ ಮೆಲ್ಲಗೆ ಬಂದು ಕುಳಿತಿದ್ದು ಅಲ್ಲಿ ಕೆಲವೊಂದು ವಿಷಯ ಪ್ರಸ್ತಾಪವಾಯಿತು. ಅದು ಅಕ್ಷತಾ ಇರಿಸು ಮುರಿಸು ಉಂಟು ಮಾಡಿತು.

ಈ ಹಂತದಲ್ಲಿ ರಾಕೇಶ್ ಕೂಡ ಆಂಡಿ ಜತೆ ಮಾತಿನ ಚಕಮಕಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ