ಆ್ಯಪ್ನಗರ

'ಬಿಗ್‌ ಬಾಸ್‌ ತಮಿಳು ಸೀಸನ್‌ 4' ಟ್ರೋಫಿ ಎತ್ತಿಹಿಡಿದ ನಟ ಆರಿ ಅರ್ಜುನ! ಬಹುಮಾನದ ಮೊತ್ತ ಎಷ್ಟು?

ಕಾಲಿವುಡ್‌ ನಟ ಆರಿ ಅರ್ಜುನ ಅವರು 'ಬಿಗ್‌ ಬಾಸ್‌ ತಮಿಳು ಸೀಸನ್‌ 4'ರ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. ಟ್ರೋಫಿ ಜೊತೆಗೆ 50 ಲಕ್ಷ ರೂ. ಬಹುಮಾನವನ್ನು ಪಡೆದುಕೊಂಡಿರುವ ಅವರಿಗೆ ಎಲ್ಲರಿಂದ ಅಭಿನಂದನೆ ಸಲ್ಲಿಕೆ ಆಗುತ್ತಿದೆ.

Vijaya Karnataka Web 18 Jan 2021, 9:20 am

ಹೈಲೈಟ್ಸ್‌:

  • ಬಿಗ್‌ ಬಾಸ್‌ ತಮಿಳು 4ನೇ ಸೀಸನ್‌ಗೆ ತೆರೆ
  • ನಟ ಆರಿ ಅರ್ಜುನಗೆ ವಿನ್ನರ್‌ ಪಟ್ಟ
  • ರನ್ನರ್‌ ಅಪ್‌ ಆದ ಬಾಲಾಜಿ ಮುರುಗದಾಸ್‌
  • ಆರಿ ಅರ್ಜುನಗೆ ಟ್ರೋಫಿ ಜೊತೆ 50 ಲಕ್ಷ ರೂ.!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಬಿಗ್‌ ಬಾಸ್‌ ಆರಿ ಅರ್ಜುನ
ಭಾರಿ ಕುತೂಹಲ ಮೂಡಿಸಿದ್ದ 'ಬಿಗ್‌ ಬಾಸ್‌ ತಮಿಳು ಸೀಸನ್‌ 4' ಅಂತ್ಯ ಕಂಡಿದ್ದು, ಕಾಲಿವುಡ್‌ ನಟ ಆರಿ ಅರ್ಜುನ ಅವರಿಗೆ ವಿನ್ನರ್‌ ಪಟ್ಟ ಸಿಕ್ಕಿದೆ. ಕಮಲ್‌ ಹಾಸನ್‌ ನಡೆಸಿಕೊಡುತ್ತಿದ್ದ ಈ ವರ್ಣರಂಜಿತ ಕಾರ್ಯಕ್ರಮದ ಫಿನಾಲೆ ಎಪಿಸೋಡ್‌ ಭಾನುವಾರ (ಜ.17) ರಾತ್ರಿ ಪ್ರಸಾರವಾಯಿತು.
ಆರಿ ಅರ್ಜುನ, ಬಾಲಾಜಿ ಮುರುಗದಾಸ್‌, ರಮ್ಯಾ ಪಾಂಡಿಯನ್‌, ರಿಯೋ ರಾಜ್‌, ಸೋಮಶೇಖರ್‌ ಅವರು ಫಿನಾಲೆಯಲ್ಲಿ ಹಣಾಹಣಿ ನಡೆಸಿದ್ದರು. ಅಂತಿಮವಾಗಿ ಆರಿ ಅರ್ಜುನ ಅವರು ಈ ಬಾರಿಯ ಬಿಗ್‌ ಬಾಸ್‌ ಎನಿಸಿಕೊಂಡಿದ್ದಾರೆ. ಅವರಿಗೆ ಬಹುಮಾನವಾಗಿ ಆಕರ್ಷಕ ಟ್ರೋಫಿ ಜೊತೆಗೆ 50 ಲಕ್ಷ ರೂ. ಸಿಗುತ್ತಿದೆ. ಬಾಲಾಜಿ ಮುರುಗದಾಸ್‌ ಅವರು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಕೊರೊನಾ ವೈರಸ್‌ ನಿಯಮಾವಳಿಗಳನ್ನು ಪಾಲಿಸುತ್ತ, 2020ರ ಅ.4ರಂದು ಬಿಗ್‌ ಬಾಸ್‌ ತಮಿಳು 4ನೇ ಸೀಸನ್‌ ಆರಂಭ ಆಗಿತ್ತು. 16 ಮಂದಿ ಸ್ಪರ್ಧಿಗಳು ಈ ಬಾರಿ ದೊಡ್ಮನೆಗೆ ಪ್ರವೇಶ ಪಡೆದಿದ್ದರು. ಅಂತಿಮವಾಗಿ ಆರಿ ಅರ್ಜುನ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. 'ಎಲ್ಲ ಕ್ಷೇತ್ರದಲ್ಲೂ ಪ್ರಾಮಾಣಿಕತೆಯನ್ನು ಗೆಲ್ಲಿಸಿ. ನಾಳೆ ನಮ್ಮದೇ' ಎನ್ನುವ ಮೂಲಕ ಈ ಸೀಸನ್‌ಗೆ ಕಮಲ್‌ ಹಾಸನ್‌ ಅಂತ್ಯ ಹಾಡಿದ್ದಾರೆ.

also read: ಕಿಡ್ನಾಪ್‌, ಕಿರುಕುಳ, ದ್ರೋಹ, ಬ್ರೇಕಪ್‌ ಇತ್ಯಾದಿ! ಬಿಗ್‌ ಬಾಸ್‌ ಸ್ಪರ್ಧಿಗಳು ಬಾಯಿಬಿಟ್ಟ ಕಹಿ ಸತ್ಯಗಳಿವು!

ಇತ್ತೀಚೆಗಷ್ಟೇ 'ಬಿಗ್‌ ಬಾಸ್‌ ತೆಲುಗು ಸೀಸನ್‌ 4' ಕೊನೆಯಾಯ್ತು. ಅದರಲ್ಲಿ ನಟ ಅಭಿಜಿತ್‌ ವಿನ್ನರ್‌ ಪಟ್ಟ ಗಿಟ್ಟಿಸಿಕೊಂಡರು. ಇನ್ನು, 'ಕನ್ನಡ ಬಿಗ್‌ ಬಾಸ್‌ ಸೀಸನ್‌ 8' ಯಾವಾಗ ಆರಂಭ ಆಗಲಿದೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಕೋವಿಡ್‌-19 ಕಾರಣದಿಂದ ಕನ್ನಡ ಬಿಗ್‌ ಬಾಸ್‌ ಹೊಸ ಸೀಸನ್‌ ವಿಳಂಬ ಆಗುತ್ತಲೇ ಇದೆ. ಈಗ ಲಸಿಕೆ ಲಭ್ಯ ಇರುವುದರಿಂದ ಶೀಘ್ರದಲ್ಲೇ ಶೋ ಆರಂಭಗೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದೆ.

also read: ಬಿಗ್‌ ಬಾಸ್‌ ವಿನ್ನರ್‌ ಅಭಿಜಿತ್‌ಗೆ ಕ್ರಿಕೆಟರ್‌ ರೋಹಿತ್‌ ಶರ್ಮಾ ನೀಡಿದ ಮರೆಯಲಾಗದ ವಿಶೇಷ ಗಿಫ್ಟ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ