ಆ್ಯಪ್ನಗರ

ನಾಮಿನೇಟ್ ಆಗದೆಯೇ 'ಬಿಗ್ ಬಾಸ್' ಮನೆಯಿಂದ ಹೊರಬಂದ ಗಂಗವ್ವ! ಅದಕ್ಕೆ ಕಾರಣವೇನು?

ತೆಲುಗಿನ 'ಬಿಗ್ ಬಾಸ್ ಸೀಸನ್ 4'ರಲ್ಲಿ ಎಲ್ಲರ ಗಮನಸೆಳೆದ ಸ್ಪರ್ಧಿ ಎಂದರೆ, ಅದು ಗಂಗವ್ವ. ಆದರೆ, ಅವರೀಗ ಐದೇ ವಾರಕ್ಕೆ ಮನೆಯಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣವೇನು? ಅದಕ್ಕೆ ಇಲ್ಲಿದೆ ಉತ್ತರ!

Vijaya Karnataka Web 11 Oct 2020, 5:37 pm
ಈ ಬಾರಿಯ 'ಬಿಗ್ ಬಾಸ್‌' ತೆಲುಗು ಸೀಸನ್‌ 4ರಲ್ಲಿ ಎಲ್ಲರ ಗಮನಸೆಳೆದ ಸ್ಪರ್ಧಿ ಎಂದರೆ, ಅದು ಗಂಗವ್ವ. ಗ್ರಾಮೀಣ ಭಾಗದ ಗಂಗವ್ವ, ಯೂಟ್ಯೂಬ್‌ ಚಾನೆಲ್‌ ಮೂಲಕ ಖ್ಯಾತರಾಗಿದ್ದರು. ಅವರು ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಮನೆಯೊಳಗೆ ಸ್ಪರ್ಧಿಗಳ ಜೊತೆ ಅನ್ಯೋನ್ಯವಾಗಿದ್ದ ಗಂಗವ್ವ, ಈಗ ಏಕಾಏಕಿ ಮನೆಯಿಂದ ಹೊರಬಂದಿದ್ದಾರೆ! 'ಅರೇ, ಗಂಗವ್ವರನ್ನು ಎಲಿಮಿನೇಟ್ ಮಾಡಲಾಯಿತೇ' ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಆ ರೀತಿ ಏನೂ ಆಗಿಲ್ಲ!
Vijaya Karnataka Web bigg boss gangavva


ಅನಾರೋಗ್ಯದಿಂದ ಹೊರಬಂದ ಗಂಗವ್ವ
ಗಂಗವ್ವಗೆ ಈಗ 59 ವರ್ಷ ವಯಸ್ಸು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರಲಾಗಿದೆ. ಐದು ವಾರಗಳ ಕಾಲ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಗಂಗವ್ವಗೆ ಮನೆಯ ಸದಸ್ಯರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವದಿಂದ ಬೀಳ್ಕೊಟ್ಟಿದ್ದಾರೆ. ಜೊತೆಗೆ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ಇಷ್ಟು ದಿನ ಬಿಗ್‌ ಬಾಸ್‌ ಮನೆಯೊಳಗೆ ಇರಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಗಂಗವ್ವ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ನಟ ನಾಗಾರ್ಜುನ ನೀಡಿದ್ರು ಭರವಸೆ
ಗಂಗವ್ವ ಬಿಗ್‌ ಬಾಸ್‌ಗೆ ಹೋಗಲು ಮುಖ್ಯ ಕಾರಣ, ಮನೆ ಕಟ್ಟಿಸಿಕೊಳ್ಳುವುದಾಗಿತ್ತು. ಶೋನಿಂದ ಹಣ ಬಂದರೆ, ತಮ್ಮ ಹಳ್ಳಿಯಲ್ಲಿ ಒಂದು ಮನೆ ಕಟ್ಟಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದರು. ಆದರೀಗ ಶೋನಿಂದ ಅರ್ಧಕ್ಕೆ ಅವರು ಹೊರಬಂದಿದ್ದಾರೆ. ಹಾಗಾದರೆ, ಮನೆ ಕಟ್ಟಿಸುವ ಕನಸು? ಆ ಕನಸನ್ನು ನನಸು ಮಾಡಲು ನಾಗಾರ್ಜುನ ಮುಂದಾಗಿದ್ದಾರೆ. ಗಂಗವ್ವಗೆ ಮನೆ ಕಟ್ಟಿಸಿಕೊಳ್ಳಲು ಬೇಕಾದ ಸಹಾಯವನ್ನು ಮಾಡುವುದಕ್ಕೆ ಅವರು ಮನಸ್ಸು ಮಾಡಿದ್ದಾರೆ.

ಸ್ಪರ್ಧಿಗಳ ಬಗ್ಗೆ ಏನ್‌ ಹೇಳಿದ್ರು ಗಂಗವ್ವ?
ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳ ಬಗ್ಗೆ ಗಂಗವ್ವ ಒಂದಷ್ಟು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಹಾರಿಕಾ ಸ್ವಲ್ಪ ಮೂಡಿ.. ಸೋಹೈಲ್‌ಗೆ ಕೋಪ ಜಾಸ್ತಿ.. ಅಖಿಲ್‌ ನನ್ನ ನೆಚ್ಚಿನ ಸ್ಪರ್ಧಿ, ಆತನನ್ನು ದತ್ತು ಪಡೆಯುವೆ.. ಅಮ್ಮ ರಾಜಶೇಖರ್ ಈ ಮನೆಯ ಬೆಳಕು... ಮೋನಲ್‌ ತುಂಬ ಮುಗ್ಧೆ ಮತ್ತು ಶ್ರಮಜೀವಿ.. ನೋಯೆಲ್‌ ಬೇಗ ಮದುವೆ ಆಗು.. ಲಾಸ್ಯಾ ಜಾಗ್ರತೆ ವಹಿಸಬೇಕು..' ಎಂದು ಗಂಗವ್ವ, ಎಲ್ಲರಿಗೂ ಶುಭ ಕೋರಿದ್ದಾರೆ.

ಮಗಳನ್ನು ಕಳೆದುಕೊಂಡ ಬಿಗ್‌ ಬಾಸ್‌ ಸ್ಪರ್ಧಿ ಗಂಗವ್ವನ ನೋವಿನ ಕಥೆ ಕೇಳಿ ಎಲ್ಲರೂ ಕಣ್ಣೀರಿಟ್ಟರು!

ಯಾರು ಈ ಗಂಗವ್ವ?

ಯೂಟ್ಯೂಬ್‌ ಕ್ಷೇತ್ರಕ್ಕೆ 2016ರಲ್ಲಿ ಕಾಲಿಟ್ಟ ಗಂಗವ್ವ, ಅದಕ್ಕೂ ಮೊದಲು ಅವರು ಸಾಮಾನ್ಯ ಮಹಿಳೆಯಂತೆ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಅವರ ಅಳಿಯ ಶ್ರೀಕಾಂತ್‌ ಶ್ರೀರಾಮ್‌ ಒಂದು ಯೂಟ್ಯೂಬ್‌ ಚಾನಲ್‌ ಶುರು ಮಾಡಿದ್ದರು. ಹಳ್ಳಿ ಜೀವನವನ್ನು ತೋರಿಸುವ ಆ ಚಾನಲ್‌ನಲ್ಲಿ ಗಂಗವ್ವ ಮೊದಲ ಬಾರಿಗೆ ಕಾಣಿಸಿಕೊಂಡರು. ಅಲ್ಲಿ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತು. ಈಗ ಆ ಚಾನಲ್‌ಗೆ ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್‌ ಇದ್ದಾರೆ! ಅಷ್ಟಕ್ಕೂ ಗಂಗವ್ವ ಇಷ್ಟೊಂದು ಪಾಪ್ಯುಲರ್‌ ಆಗಲು ಕಾರಣ ಅವರ ಭಾಷೆ. ತೆಲಂಗಾಣದ ಅಪ್ಪಟ ಗ್ರಾಮೀಣ ತೆಲುಗು ಭಾಷೆಯನ್ನು ಅವರು ಮಾತನಾಡುತ್ತಾರೆ. ಇದು ಜನರಿಗೆ ಸಖತ್‌ ಇಷ್ಟ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ