ಆ್ಯಪ್ನಗರ

Sudeep Bigg Boss 7: "ನಾನು ಸುಮ್ಮನೆ 24 ವರ್ಷ ಇಂಡಸ್ಟ್ರಿಯಲ್ಲಿಲ್ಲ"; ಸುದೀಪ್ ಸಿಟ್ಟಾಗೋದಿಕ್ಕೆ ಕಾರಣ ಏನು?

ಬಿಗ್ ಬಾಸ್ ಮನೆಯಲ್ಲಿ ಕಳೆದ ಕ್ಷಣಗಳು ಪ್ರತಿಯೊಬ್ಬರಿಗೂ ಜೀವನದ ಪಾಠ ಇದ್ದಂತೆ. ಹಾಗೆಯೇ ಆ ಮನೆಯಿಂದ ಹೊರಬರುವಾಗ ಅವರ ಬಗೆಗಿನ ಒಂದಷ್ಟು ವಿಡಿಯೋ ತೋರಿಸಲಾಗತ್ತೆ. ಆ ವಿಡಿಯೋದ ಬಗ್ಗೆ ಸ್ಪರ್ಧಿಯೊಬ್ಬರು ಕಂಪ್ಲೆಂಟ್ ಮಾಡಿದ್ದಾರೆ. ಏನದು?

Vijaya Karnataka Web 29 Oct 2019, 10:18 am
ಬಿಗ್ ಬಾಸ್ ಎರಡನೇ ವಾರದ ಎಲಿಮಿನೇಶನ್ ನಡೆದಿದೆ. ಚೈತ್ರಾ ವಾಸುದೇವನ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಅವರು ಮನೆಯಿಂದ ಹೊರಬರುವಾಗ ವಾಸುಕಿ ವೈಭವ್ ಅವರನ್ನು ಎಲಿಮಿನೇಶನ್‌ಗೆ ಡೈರೆಕ್ಟ್ ನಾಮಿನೇಟ್ ಮಾಡಿದ್ದಾರೆ. ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಮೇಲೆ ಹೇಳಿದ್ದೇನು?
Vijaya Karnataka Web sudeep bigg boss


ಚೈತ್ರಾ ಬಿಗ್ ಬಾಸ್ ಮನೆಯಿಂದ ಹೊರಬರಲು ಕಾರಣ ಏನು?
ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ತುಂಬ ಸೈಲೆಂಟ್ ಆಗಿದ್ದರು. ಯಾರೊಡನೆಯೂ ಜಾಸ್ತಿ ಬೆರೆಯಲಿಲ್ಲ, ಯಾರೊಡನೆಯೂ ದ್ವೇಷ ಕಟ್ಟಿಕೊಳ್ಳಲಿಲ್ಲ. ಅವರು ಮನೆಯಿಂದ ಹೊರಬಂದಿರೋದಿಕ್ಕೆ ಇದೇ ಮುಖ್ಯ ಕಾರಣ ಅಂತ ಚೈತ್ರಾರಿಗೂ ಅನಿಸಿದೆ.

ಚೈತ್ರಾ ವಾಸುದೇವನ್ ಹೇಳಿದ್ದೇನು?

ಚೈತ್ರಾ ವಾಸುದೇವನ್ "ತುಂಬ ಖುಷಿಯಾಗ್ತಿದೆ. ನಾನು ತುಂಬ ಚೆನ್ನಾಗಿ ರೆಡಿಯಾಗ್ತಿದ್ದೆ. ಆದರೆ ಮೇಕಪ್ ಇಲ್ಲದಿರೋ ಕ್ಲಿಪ್ಪಿಂಗ್‌ಗಳನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ನನಗೆ ಇದು ಬೇಜಾರಾಯ್ತು. ಫೈವ್‌ಸ್ಟಾರ್ ಹೋಟೆಲ್ ಬಗ್ಗೆ ಹೇಳಿರೋದು ನನಗೆ ಅಲ್ಲ ಅನಿಸಿತು. ಯಾಕೆಂದರೆ ನಾನು ಯಾರಿಗೂ ಆರ್ಡರ್ ಮಾಡಿಲ್ಲ" ಎಂದು ಸುದೀಪ್ ಬಳಿ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಚೈತ್ರಾರ ಜಗಳದಿಂದ ಸುದೀಪ್‌ಗೆ ಅವಮಾನ!

ಸುದೀಪ್‌ಗೆ ಸಿಟ್ಟು ಬಂದಿದ್ದೇಕೆ?
ಇದವರೆಗೂ ಏಳು ಸೀಸನ್‌ಲ್ಲಿ ಕಣ್ಣೀರು ಹಾಕಿರೋದನ್ನು ನೋಡಿದ್ದೇನೆ, ಖುಷಿಯಾಗಿರೋದನ್ನು ನೋಡಿದ್ದೇನೆ. ಆದರೆ ಮೇಕಪ್‌ ವಿಚಾರಕ್ಕೆ ಬೇಸರ ಮಾಡಿಕೊಂಡಿರೋದು ಫಸ್ಟ್. ನಾನೇ ನಿಮ್ಮ ವಿಟಿ ನೋಡಿ ಖುಷಿಪಟ್ಟಿದ್ದೇನೆ. ಆ ವಿಡಿಯೋ ಯಾವುದೂ ನಂದಲ್ಲ, ಫೈವ್‌ಸ್ಟಾರ್ ಹೋಟೆಲ್ ಬಗ್ಗೆ ಹೇಳಿರೋದು ನನಗೆ ಅಲ್ಲ ಅನ್ನೋದರ ಬಗ್ಗೆ ನಿಮಗೆ ಸ್ಪಷ್ಟನೆ ಕೂಡ ಇಲ್ಲ. ಆದರೆ ಅದರಲ್ಲಿ ತಪ್ಪಿಲ್ಲ. ಎಲ್ಲರಿಗೂ ಈ ರೀತಿಯ ವಿಡಿಯೋ ತೋರಿಸಿದ್ದೇವೆ. ನೀವು ಒಳ್ಳೆಯ ವ್ಯಕ್ತಿ.

ಕಿಶನ್‌ಗೆ "ಬಚ್ಚಾ.. ನೀನು ನನಗೆ ಅಡ್ವೈಸ್ ಮಾಡೋದಿಕ್ಕೆ ಬರಬೇಡ" ಎಂದ ಜೈ ಜಗದೀಶ್ ; ಕಣ್ಣೀರಿಟ್ಟ ಚೈತ್ರಾ ವಾಸುದೇವನ್

ಕೊನೆಯದಾಗಿ ಚೈತ್ರಾ ಬಗ್ಗೆ ಕಿಚ್ಚನ ಮಾತು
ಚೈತ್ರಾ ವಾಸುದೇವನ್ ನಿರೂಪಣೆ ತುಂಬ ಚೆನ್ನಾಗಿರುತ್ತದೆ. ಚೈತ್ರಾ ನಿರೂಪಣೆಯಲ್ಲಿ ಉಚ್ಛಾರ, ಶಬ್ದಭಂಡಾರ, ಸ್ಪಷ್ಟನೆ ತುಂಬ ಚೆನ್ನಾಗಿರುತ್ತದೆ. ಬಿಗ್ ಬಾಸ್ ವೇದಿಕೆಗಿಂತ ದೊಡ್ಡ ವೇದಿಕೆಯಲ್ಲಿ ನಿರೂಪಣೆ ಮಾಡುವ ಅವಕಾಶ ನಿಮ್ಮದಾಗಲಿ ಎಂದು ಸುದೀಪ್ ಅವರು ಚೈತ್ರಾ ವಾಸುದೇವನ್‌ಗೆ ಹರಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ