ಆ್ಯಪ್ನಗರ

ಬಿಗ್ ಬಾಸ್ ಮನೆಯಲ್ಲೂ ಚಂದನ್ ಆಚಾರ್ ಜಗಳ; ಈ ಕಡೆ ಹೊರಗಡೆಯೂ ಸಿಕ್ಕಾಪಟ್ಟೆ ಸೌಂಡ್

ಚಂದನ್ ಆಚಾರ್ ಬಿಗ್ ಬಾಸ್ ಕನ್ನಡ ಸೀನಸ್‌ 7ರಲ್ಲಿ ಅವರ ನಡವಳಿಕೆಯಿಂದ ಎಲ್ಲರ ಗಮನಸೆಳೆದಿದ್ದಾರೆ. ಅವರೇನು? ಅವರ ಗುಣ ಏನು? ಎಂದು ಬಿಗ್ ಬಾಸ್ ಮನೆಯ ಸದಸ್ಯರಿಗೆ ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ, ಏಕೆ ಹೀಗೆ?

Vijaya Karnataka Web 5 Nov 2019, 2:09 pm
ಚಂದನ್ ಆಚಾರ್ ಬಿಗ್ ಬಾಸ್ ಮನೆಯಲ್ಲಿ ತುಂಬ ವಿಭಿನ್ನವಾದ ವ್ಯಕ್ತಿ. ಯಾರೊಡನೆಯೂ ಅವರು ಬೆರೆಯೋದಿಲ್ಲ. ಅವರ ಧ್ಯಾನ, ಜಪ, ಯೋಗಗಳನ್ನು ಮಾಡೋದು ಬಿಗ್ ಬಾಸ್ ಮನೆಯ ಸದಸ್ಯರಿಗೆ ತುಂಬ ವಿಭಿನ್ನವಾಗಿ, ವಿಶಿಷ್ಟವಾಗಿ ಕಾಣುತ್ತಿದೆ. ಚಂದನ್ ಕ್ಯಾಮೆರಾ ಮುಂದೆ ಬಂದು ಧ್ಯಾನ್ ಮಾಡೋದು ಫೂಟೇಜ್‌ಗೋಸ್ಕರ ಅಂತ ಜೈ ಜಗದೀಶ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸಮಯ ಸಿಕ್ಕಾಗಲೆಲ್ಲ ಜಗಳ ಆಡೋದಿಕ್ಕೆ ಚಂದನ್ ಕಾಯುತ್ತಿರುತ್ತಾರೆ ಎಂಬುದು ಬಿಗ್ ಬಾಸ್ ಸ್ಪರ್ಧಿಗಳ ಆರೋಪವೂ ಹೌದು.
Vijaya Karnataka Web chandan achar starer magalavara raja dina movie song release soon
ಬಿಗ್ ಬಾಸ್ ಮನೆಯಲ್ಲೂ ಚಂದನ್ ಆಚಾರ್ ಜಗಳ; ಈ ಕಡೆ ಹೊರಗಡೆಯೂ ಸಿಕ್ಕಾಪಟ್ಟೆ ಸೌಂಡ್


ಚಂದನ್ ಮತ್ತು ಭೂಮಿ ನಡುವೆ ಮಾತಿನ ಚಕಮಕಿ
ಚಂದನ್ ಆಚಾರ್ ಬಾಸ್ಕೆಟ್‌ನಲ್ಲಿರುವ ಬಟ್ಟೆಯನ್ನು ಹೇಳದೆ ತೆಗೆದಿಟ್ಟಿದ್ದಕ್ಕೆ ಭೂಮಿ ಶೆಟ್ಟಿ ಬೇಸರ ಮಾಡಿಕೊಂಡಿದ್ದರು. ಬಟ್ಟೆಗಳನ್ನು ಬಾಸ್ಕೆಟ್‌ನಿಂದ ಹೊರತೆಗೆದಮೇಲೆ ಹೇಳಬೇಕಿತ್ತು ನೀವು ಎಂದು ರಾಯಲ್ ಶೆಟ್ರು ಹೇಳಿದ್ದಾರೆ. ಈ ಮಾತನ್ನು ಕೇಳಿದ ಚಂದನ್ ನಿಮ್ಮ ಆಟಿಟ್ಯೂಡ್ ಬದಲಾಯಿಸಿಕೊಳ್ಳಿ ಎಂದಿದ್ದಾರೆ. ಚಂದನ್ ಮಾತು ಭೂಮಿಗೆ ಇಷ್ಟವಾಗಿಲ್ಲ. ಸುಮ್ಮನೇ ಚಂದನ್ ತನ್ನನ್ನು ಕೆಣಕುತ್ತಿದ್ದಾರೆ ಎಂದು ಭೂಮಿ ಅವರು ದೀಪಿಕಾ ದಾಸ್, ಕುರಿ ಪ್ರತಾಪ್ ಬಳಿ ಆರೋಪ ಮಾಡಿದ್ದಾರೆ. ಭೂಮಿ ಮತ್ತು ಚಂದನ್ ನಡುವೆ ಒಂದು ಹಂತದ ಚಕಮಕಿ ಕಳೆದ ಎಪಿಸೋಡ್‌ನಲ್ಲಿ ನಡೆದಿದೆ.

Bigg Boss Kannada 7 Elimination: ಕಣ್ಣೀರುಡುತ್ತಲೇ ಹೊರಬಂದ ದುನಿಯಾ ರಶ್ಮಿ

ಸುಜಾತಾ ಮತ್ತು ಚಂದನ್ ನಡುವಿನ ಮನಸ್ತಾಪ

ಚಂದನ್ ಡಬಲ್ ಗೇಮ್ ಆಡುತ್ತಿದ್ದಾರೆ ಎಂಬ ಕಾರಣ ನೀಡಿ ಸುಜಾತಾ ಅವರನ್ನು ಎಲಿಮಿನೇಶನ್‌ನಲ್ಲಿ ನಾಮಿನೇಟ್‌ ಮಾಡಿದ್ದಾರೆ. ಊಟ-ತಿಂಡಿ ವಿಚಾರದಲ್ಲೂ ಸುಜಾತಾ ಭೇದ-ಭಾವ ಮಾಡುತ್ತಾರೆ ಎಂದು ಸುದೀಪ್ ಬಳಿ ಚಂದನ್ ಆರೋಪ ಮಾಡಿದ್ದರು. ಇದು ಸುಜಾತಾಗೆ ಸಿಟ್ಟು ತರಿಸಿತ್ತು.
Episode 23 Highlights: ಯಾಮಾರಿದ ಆರ್‌ಜೆ ಪೃಥ್ವಿ; ಅಡುಗೆ ಮನೆಯಲ್ಲಿ ಬೆಚ್ಚಿಬಿದ್ದ ವಾಸುಕಿ ವೈಭವ್

ಚಂದನ್ ಅಭಿನಯದ ಹಾಡು ರಿಲೀಸ್
ಚಂದನ್ ಆಚಾರ್ ಅಭಿನಯದ 'ಮಂಗಳವಾರ ರಜಾದಿನ' ಚಿತ್ರದ ಮೊದಲ ವಿಡಿಯೋ ಹಾಡು ನವೆಂಬರ್ 8ರಂದು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆ ಆಗಲಿದೆ. ಚಂದನ್ ಜೊತೆಗೆ ಲಾಸ್ಯಾ ನಾಗರಾಜ್, ನಂದನ್ ರಾಜ್, ರಜನಿಕಾಂತ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಇದನ್ನು ಬರೆದವರು ಯುವಿನ್, ಅಷ್ಟೇ ಅಲ್ಲದೆ ಈ ಹಾಡಿಗೆ ಕೊರಿಯೋಗ್ರಫಿ ಕೂಡ ಮಾಡಿದ್ದಾರೆ. ಈ ಹಾಡು ಹಾಡಿದವರು ನವೀನ್ ಸಜ್ಜು. ಈ ಹಾಡಿನಲ್ಲಿ ವಿಶೇಷವಾದ ಕಾರೊಂದನ್ನು ಬಳಸಿಕೊಳ್ಳಲಾಗಿದೆ. ಈ ಚಿತ್ರಕ್ಕೆ ತ್ರಿವರ್ಗ ಫಿಲಮ್ಸ್ ಲಾಂಛನದವರು ಹಣ ಹೂಡಿದ್ದಾರೆ. ಕ್ಷೌರಿಕನ ಪಾತ್ರದಲ್ಲಿ ಚಂದನ್ ಆಚಾರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿನಾಲ್ಕು ಹಾಡುಗಳಿದೆ. ಪ್ರಜೋತ್ ಡೇಸಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್, ಯುವಿನ್, ಯೋಗರಾಜ್ ಭಟ್ ಹಾಡುಗಳನ್ನು ಬರೆದಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಧು ತುಂಬಕೆರೆ ಸಂಕಲನ ಮಾಡಿದ್ದಾರೆ. ಋತ್ವಿಕ್ ಮುರಳೀಧರ್ ಹಿನ್ನಲೆ ಸಂಗೀತ ಈ ಚಿತ್ರಕ್ಕಿದೆ.
ನಗಿಸುವ ಕರಿಯಪ್ಪನಿಂದ ಜನ ಖುಷ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ