ಆ್ಯಪ್ನಗರ

ಬಿಗ್‌ ಬಾಸ್‌ ಫಿನಾಲೆಗೂ ಬಾರದ ಈ ಸ್ಪರ್ಧಿಗೆ 10 ಲಕ್ಷ ರೂ. ನೀಡಿ ಕಣ್ಣೀರು ಹಾಕಿದ ಚಿರಂಜೀವಿ!

105 ದಿನಗಳ ಕಾಲ ನಡೆದ 'ಬಿಗ್‌ ಬಾಸ್‌ ತೆಲುಗು ಸೀಸನ್‌ 4' ಮುಕ್ತಾಯವಾಗಿದೆ. ಫಿನಾಲೆ ವೇದಿಕೆಯಲ್ಲಿ ಪ್ರೇಕ್ಷಕರಿಗೆ ಹಲವು ಅಚ್ಚರಿಗಳು ಕಾದಿದ್ದವು. ನಟ 'ಮೆಗಾ ಸ್ಟಾರ್‌' ಚಿರಂಜೀವಿ ಆಗಮನದಿಂದಾಗಿ ಇಡೀ ಕಾರ್ಯಕ್ರಮದ ರಂಗೇರಿತ್ತು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Vijaya Karnataka Web 21 Dec 2020, 2:02 pm
ಟಾಲಿವುಡ್‌ ನಟ 'ಮೆಗಾ ಸ್ಟಾರ್‌' ಚಿರಂಜೀವಿ ಅವರು 'ಬಿಗ್‌ ಬಾಸ್‌ ತೆಲುಗು ಸೀಸನ್‌ 4' ವೇದಿಕೆಗೆ ಬಂದಿದ್ದರಿಂದ ಕಿರುತೆರೆ ಪ್ರೇಕ್ಷಕರ ಆಸಕ್ತಿ ಕೆರಳಿತ್ತು. ವಿನ್ನರ್‌ಗೆ ಟ್ರೋಫಿ ನೀಡಲು ಬಂದಿದ್ದ ಚಿರಂಜೀವಿ, ಅದರ ಜೊತೆಗೆ ಒಂದು ಸರ್ಪ್ರೈಸ್‌ ಕೂಡ ನೀಡಿದರು. ಫಿನಾಲೆಗೆ ಎಂಟ್ರಿ ನೀಡದ ಸ್ಪರ್ಧಿಯೊಬ್ಬರಿಗೆ 10 ಲಕ್ಷ ರೂ. ನೀಡಿದ್ದಾರೆ ಚಿರು!
Vijaya Karnataka Web ಚಿರಂಜೀವಿ ಮೆಹಬೂಬ್‌ ಶೇಕ್‌


ಬಿಗ್‌ ಬಾಸ್‌ ನಿರೂಪಕ ಅಕ್ಕಿನೇನಿ ನಾಗಾರ್ಜುನ ಜೊತೆ ಚಿರಂಜೀವಿಗೆ ಉತ್ತಮ ಬಾಂಧವ್ಯ ಇದೆ. ಆ ಕಾರಣಕ್ಕಾಗಿಯೇ ಅವರು ಫಿನಾಲೆಗೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಈ ವೇಳೆ ಅವರಿಗೆ ಬಿಗ್‌ ಬಾಸ್‌ ಸ್ಪರ್ಧಿ ಮೆಹಬೂಬ್‌ ಶೇಕ್‌ ಬಗ್ಗೆ ಅನುಕಂಪ ಮೂಡಿದೆ. ಡ್ಯಾನ್ಸರ್‌, ಯೂಟ್ಯೂಬರ್‌ ಆಗಿ ಕಷ್ಟಪಡುತ್ತಿರುವ ಮೆಹಬೂಬ್‌ಗೆ ಚಿರು ಬರೋಬ್ಬರಿ 10 ಲಕ್ಷ ರೂ. ನೀಡಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣವಾಯಿತು.

ಇಷ್ಟು ದೊಡ್ಡ ಮೊತ್ತದ ಬಹುಮಾನ ನೀಡಿದ್ದೂ ಅಲ್ಲದೆ, ವೇದಿಕೆ ಮೇಲೆಯೇ ಚಿರು ಭಾವುಕರಾದರು. ಮೆಹಬೂಬ್‌ರನ್ನು ತಬ್ಬಿಕೊಂಡು ತಮ್ಮ ಹಳೇ ದಿನಗಳನ್ನು ನೆನಪು ಮಾಡಿಕೊಂಡರು. 'ನೀವು ತುಂಬ ಒಳ್ಳೆಯ ವ್ಯಕ್ತಿ. ವೃತ್ತಿಜೀವನದ ಆರಂಭದಲ್ಲಿ ನಾನು ಪಟ್ಟ ಕಷ್ಟಗಳೆಲ್ಲ ನೆನಪಾಗುವಂತೆ ನೀವು ಮಾಡಿದ್ದೀರಿ' ಎಂದು ಚಿರು ಹೇಳಿದರು. ಮೆಹಬೂಬ್‌ ಅವರ ಡಾನ್ಸ್‌ಗೆ ಚಿರು ಫಿದಾ ಆದರು.

also read: Bigg Boss 4 winner: ನಟ ಅಭಿಜಿತ್‌ಗೆ ಈ ಬಾರಿಯ 'ಬಿಗ್ ಬಾಸ್‌' ವಿನ್ನರ್ ಪಟ್ಟ!

ಚಿರಂಜೀವಿ ಅವರ ಈ ದೊಡ್ಡ ಗುಣ ನೋಡಿ ಮೆಹಬೂಬ್ ಭಾವುಕರಾದರು. ಮೆಗಾ ಸ್ಟಾರ್‌ಗೆ ಅವರು ಧನ್ಯವಾದ ತಿಳಿಸಿದರು. ಫೈನಲಿಸ್ಟ್‌ ಆಗಿರದಿದ್ದರೂ 'ಮೆಗಾ ಸ್ಟಾರ್‌' ಕಡೆಯಿಂದ 10 ಲಕ್ಷ ರೂ. ಪಡೆಯುವ ಮೂಲಕ ಮೆಹಬೂಬ್‌ ಲಕ್ಕಿ ಸ್ಪರ್ಧಿ ಎನಿಸಿಕೊಂಡಿದ್ದಾರೆ. 4ನೇ ಸೀಸನ್‌ನ ವಿನ್ನರ್‌ ಆಗಿ ನಟ ಅಭಿಜಿತ್‌ ಹೊರಹೊಮ್ಮಿದ್ದಾರೆ. ಅಖಿಲ್ ಮೊದಲ ರನ್ನರ್‌ ಅಪ್ ಆಗಿದ್ದಾರೆ.

also read: ಪರಪುರುಷರ ಸಹವಾಸದ ಕಾರಣಕ್ಕಾಗಿ ಪದೇಪದೇ ಸುದ್ದಿ ಆಗುತ್ತಿರುವ ಬಿಗ್‌ ಬಾಸ್‌ ಸ್ಪರ್ಧಿ ಪವಿತ್ರಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ