ಆ್ಯಪ್ನಗರ

ಕನ್ನಡ ಬಿಗ್ ಬಾಸ್ ಸ್ಪರ್ಧಿ ಆ್ಯಂಡಿ ವಿರುದ್ಧ ದೂರು: ವಾಹಿನಿ ಏನನ್ನುತ್ತೆ?

ಬಿಗ್ ಬಾಸ್ ಮನೆಯ ಕಿರಿಕ್ ಪಾರ್ಟಿ ಆ್ಯಂಡ್ರೂ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಟಾಸ್ಕ್‌ನಲ್ಲಿ ಸ್ಪರ್ಧಿಗಳ ಕಣ್ಣಿಗೆ ಪರ್ಫ್ಯೂಮ್ ಮತ್ತು ರಿಪೆಲ್ಲೆಂಟ್‍ಗಳನ್ನು ಸ್ಪ್ರೇ ಮಾಡಿ ಹಾನಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರೇತರ ಸಂಸ್ಥೆಯೊಂದು ಬಿಡದಿ ಪೊಲೀಸ್ ಠಾಣೆಯಲ್ಲಿ ಆ್ಯಂಡಿ ವಿರುದ್ಧ ದೂರು ನೀಡಿದೆ.

Vijaya Karnataka Web 2 Jan 2019, 6:57 pm
ಒಂದಲ್ಲ ಒಂದು ಕಿರಿಕ್ ಮೂಲಕ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ಆ್ಯಂಡ್ರೂ ಜಯಪೌಲ್. ಈ ಹಿಂದೊಮ್ಮೆ ಟಾಸ್ಕ್ ಒಂದರಲ್ಲಿ ಶಾಕಾಹಾರಿಗಳಾಗಿದ್ದ ಜಯಶ್ರೀ ಮತ್ತು ಸೋನು ಪಾಟೀಲ್ ತಲೆ ಮೇಲೆ ಮೊಟ್ಟೆ ಹೊಡೆದು ಮನೆಯಲ್ಲಿ ರಾದ್ಧಾಂತ ಮಾಡಿಕೊಂಡಿದ್ದರು. ಇದೀಗ ಇನ್ನೊಂದು ರಂಪಾಟಕ್ಕೆ ಕಾರಣರಾಗಿದ್ದಾರೆ.
Vijaya Karnataka Web andy


ಇತ್ತೀಚೆಗೆ ನಡೆದ ಲಗ್ಜುರಿ ಬಜೆಟ್ ಟಾಸ್ಕ್ "ಸೂಪರ್ ಹೀರೋಸ್ Vs ಸೂಪರ್ ವಿಲನ್" ಭಾಗವಾಗಿ ಪರ್ಫ್ಯೂಮ್ ಮತ್ತು ರಿಪೆಲ್ಲೆಂಟ್‍ಗಳನ್ನು ಸ್ಪ್ರೇ ಮಾಡಿ ಸ್ಪರ್ಧಿಗಳ ಕಣ್ಣಿಗೆ ಆ್ಯಂಡಿ ಹಾನಿ ಮಾಡಿದ್ದಾರೆ. ಈ ಬಗ್ಗೆ ಸ್ಪರ್ಧಿಗಳು ಬಿಗ್ ಬಾಸ್‍ಗೂ ದೂರಿದ್ದರು. ಆದರೆ ಬಿಗ್ ಬಾಸ್ ಮೌನಕ್ಕೆ ಶರಣಾಗಿದ್ದ.

ಈ ಸಂಬಂಧ ಆಡುಗೋಡಿ ಫ್ಯೂಚರ್ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷ ರೊನಾಲ್ಡ್ ಎಂಬುವವರು ಬಿಡದಿ ಪೊಲೀಸ್ ಠಾಣೆಯಲ್ಲಿ ಆ್ಯಂಡಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಸ್ಪರ್ಧಿಗಳಿಗೆ ಆ್ಯಂಡಿ ಹಿಂಸೆ ನೀಡಿರುವ ಬಗ್ಗೆ ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ.

ವಾರಾಂತ್ಯದ ಕಾರ್ಯಕ್ರಮದಲ್ಲಿ ಆ್ಯಂಡಿಯನ್ನು ತರಾಟೆಗೆ ತೆಗೆದುಕೊಂಡಿದ್ದರು ಕಿಚ್ಚ ಸುದೀಪ್. ಬಳಿಕ ಕ್ಷಮೆಯಾಚಿಸಿದ್ದರು. ಶ್ರೀಸಾಮಾನ್ಯ ವಿಭಾಗದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆ್ಯಂಡಿ ಟ್ರಬಲ್ ಶೂಟರ್ ಎನ್ನಿಸಿಕೊಂಡಿದ್ದಾರೆ.

ವಾಹಿನಿ ಏನನ್ನುತ್ತೆ?
ಈ ಬಗ್ಗೆ ವಾಹಿನಿಯ ಬಿಝಿನೆಸ್ ಹೆಡ್ ಪರಮೇಶ್ವರ ಗುಂಡ್ಕರ್ ಮಾತನಾಡಿದ್ದು, "ಇತ್ತೀಚೆಗೆ ಬಿಗ್ ಬಾಸ್ ಸೆಟ್‌ಗೆ ಪೊಲೀಸರು ಭೇಟಿ ನೀಡಿದ್ದರು. ಅವರ ತನಿಖೆಗೆ ನಮ್ಮ ತಂಡ ಸಂಪೂರ್ಣ ಸಹಕರಿಸಿದೆ. ಮುಂದೆಯೂ ಸಹಕರಿಸುತ್ತೇವೆ" ಎಂದಿದ್ದಾರೆ. ಸದ್ಯಕ್ಕೆ ಆ್ಯಂಡಿ ವಿಚಾರವಾಗಿ ತನಿಖೆ ನಡೆಯುತ್ತಿದೆ. ಆ್ಯಂಡಿ ಪರಿಸ್ಥಿತಿ ಮುಂದೇನು ಎಂಬುದು ಪ್ರಶ್ನಾರ್ಥಕವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ