ಆ್ಯಪ್ನಗರ

ಚಂದನ್ ಆಚಾರ್ ಹೆಣ್ಮಕ್ಕಳ ಒಳಉಡುಪನ್ನು ಬಾವುಟ ಮಾಡ್ಕೊಂಡ್ರಾ?

ಈ ವಾರ ನಡೆದ ಗಂಧರ್ವ ಮತ್ತು ರಾಕ್ಷಸರ ಟಾಸ್ಕ್ ಬಗ್ಗೆ ಸುದೀಪ್ ಬಹಳಷ್ಟು ಪ್ರಶ್ನೆಗಳನ್ನು ಕೇಳಿದರು. ಈ ಮನೆಯಲ್ಲಿ ನಿಜವಾದ ರಾಕ್ಷಸ ಗುಣ ಯಾರಲ್ಲಿದೆ, ಇನ್ಯಾರಲ್ಲಿ ಗಂಧರ್ವ ಗುಣ ಎಂದು ಕೇಳಿದರು. ಇದಕ್ಕೆ ಒಬ್ಬೊಬ್ಬರು ಒಂದೊಂದು ಹೆಸರು ಸೂಚಿಸಿದರು. ಇವರೆಲ್ಲಾ ಕಥೆ ಕೇಳಿ ಕೊನೆಗೆ ಒಂದು ಮಾತನ್ನು ಹೇಳಿದರು. ಗಂಧರ್ವರ ತಹರ ಆಡಿ ಸೋಲೋದ್ರಲ್ಲಿ ಅರ್ಥ ಇಲ್ಲ, ರಾಕ್ಷಸರ ತರಹ ಆಡಿ ಗೆಲ್ಲೋದ್ರಲ್ಲೂ ಅರ್ಥ ಇಲ್ಲ ಎಂಬ ಬುದ್ಧಿಮಾತನ್ನು ಮನೆಯ ಸ್ಪರ್ಧಿಗಳಿಗೆ ಸುದೀಪ್ ತಿಳಿಸಿದರು. ಈ ವಾರ ಭೂಮಿ ಶೆಟ್ಟಿ, ಶೈನ್ ಶೆಟ್ಟಿ, ವಾಸುಕಿ ವೈಭವ್, ಕಿಶನ್, ರಾಜು ತಾಳಿಕೋಟೆ, ಚೈತ್ರಾ ಕೋಟೂರ್ ಹಾಗೂ ಚಂದನ್ ಆಚಾರ್ ನಾಮಿನೇಟ್ ಆಗಿದ್ದರು. ಈ ವಾರದ ಕಥೆ ಕಿಚ್ಚನ್ ಜೊತೆಯಲ್ಲಿ ನಾಲ್ಕು ಮಂದಿ ಸೇಫ್ ಆಗಿದ್ದು ಉಳಿದವರ ಭವಿಷ್ಯ ಭಾನುವಾರ ರಾತ್ರಿ ಗೊತ್ತಾಗಲಿದೆ. ರಾಜು ತಾಳಿಕೋಟೆ, ಚಂದನ್ ಆಚಾರ್ ಹಾಗೂ ಚೈತ್ರಾ ಕೋಟೂರ್ ಈ ಮೂವರಲ್ಲಿ ಒಬ್ಬರು ಮನೆಯಿಂದ ಹೊರಹೋಗಲಿದ್ದಾರೆ. ಇದಕ್ಕೂ ಮುನ್ನ ಕಿಚ್ಚನ ಪಂಚಾಯಿತಿಯಲ್ಲಿ ಹಲವಾರು ವಿಷಯಗಳು ಪ್ರಸ್ತಾಪವಾದವು. ಮುಖ್ಯವಾಗಿ ಟಾಸ್ಕ್‌ನಲ್ಲಿ ದೀಪಿಕಾ ದಾಸ್ ಬಳಸಿದ್ದ ಒಂದು ಮಾತಿನ ಬಗ್ಗೆ ಸ್ಪಷ್ಟನೆ ನೀಡಲಾಯಿತು.

Vijaya Karnataka Web 15 Dec 2019, 12:13 pm
ಈ ವಾರ ನಡೆದ ಗಂಧರ್ವ ಮತ್ತು ರಾಕ್ಷಸರ ಟಾಸ್ಕ್ ಬಗ್ಗೆ ಸುದೀಪ್ ಬಹಳಷ್ಟು ಪ್ರಶ್ನೆಗಳನ್ನು ಕೇಳಿದರು. ಈ ಮನೆಯಲ್ಲಿ ನಿಜವಾದ ರಾಕ್ಷಸ ಗುಣ ಯಾರಲ್ಲಿದೆ, ಇನ್ಯಾರಲ್ಲಿ ಗಂಧರ್ವ ಗುಣ ಎಂದು ಕೇಳಿದರು. ಇದಕ್ಕೆ ಒಬ್ಬೊಬ್ಬರು ಒಂದೊಂದು ಹೆಸರು ಸೂಚಿಸಿದರು. ಇವರೆಲ್ಲಾ ಕಥೆ ಕೇಳಿ ಕೊನೆಗೆ ಒಂದು ಮಾತನ್ನು ಹೇಳಿದರು. ಗಂಧರ್ವರ ತಹರ ಆಡಿ ಸೋಲೋದ್ರಲ್ಲಿ ಅರ್ಥ ಇಲ್ಲ, ರಾಕ್ಷಸರ ತರಹ ಆಡಿ ಗೆಲ್ಲೋದ್ರಲ್ಲೂ ಅರ್ಥ ಇಲ್ಲ ಎಂಬ ಬುದ್ಧಿಮಾತನ್ನು ಮನೆಯ ಸ್ಪರ್ಧಿಗಳಿಗೆ ಸುದೀಪ್ ತಿಳಿಸಿದರು. ಈ ವಾರ ಭೂಮಿ ಶೆಟ್ಟಿ, ಶೈನ್ ಶೆಟ್ಟಿ, ವಾಸುಕಿ ವೈಭವ್, ಕಿಶನ್, ರಾಜು ತಾಳಿಕೋಟೆ, ಚೈತ್ರಾ ಕೋಟೂರ್ ಹಾಗೂ ಚಂದನ್ ಆಚಾರ್ ನಾಮಿನೇಟ್ ಆಗಿದ್ದರು. ಈ ವಾರದ ಕಥೆ ಕಿಚ್ಚನ್ ಜೊತೆಯಲ್ಲಿ ನಾಲ್ಕು ಮಂದಿ ಸೇಫ್ ಆಗಿದ್ದು ಉಳಿದವರ ಭವಿಷ್ಯ ಭಾನುವಾರ ರಾತ್ರಿ ಗೊತ್ತಾಗಲಿದೆ. ರಾಜು ತಾಳಿಕೋಟೆ, ಚಂದನ್ ಆಚಾರ್ ಹಾಗೂ ಚೈತ್ರಾ ಕೋಟೂರ್ ಈ ಮೂವರಲ್ಲಿ ಒಬ್ಬರು ಮನೆಯಿಂದ ಹೊರಹೋಗಲಿದ್ದಾರೆ. ಇದಕ್ಕೂ ಮುನ್ನ ಕಿಚ್ಚನ ಪಂಚಾಯಿತಿಯಲ್ಲಿ ಹಲವಾರು ವಿಷಯಗಳು ಪ್ರಸ್ತಾಪವಾದವು. ಮುಖ್ಯವಾಗಿ ಟಾಸ್ಕ್‌ನಲ್ಲಿ ದೀಪಿಕಾ ದಾಸ್ ಬಳಸಿದ್ದ ಒಂದು ಮಾತಿನ ಬಗ್ಗೆ ಸ್ಪಷ್ಟನೆ ನೀಡಲಾಯಿತು.
Vijaya Karnataka Web deepika das damaging statement on chandan achar vaarada kathe kichchan jothe highlights
ಚಂದನ್ ಆಚಾರ್ ಹೆಣ್ಮಕ್ಕಳ ಒಳಉಡುಪನ್ನು ಬಾವುಟ ಮಾಡ್ಕೊಂಡ್ರಾ?


ಈ ಮನೆಯಲ್ಲಿ ಯಾರೂ ಗಂಧರ್ವರಿಲ್ಲ ಎಂದ ಚಂದನ್

ನಿಮ್ಮ ಪ್ರಕಾರ ನಿಜವಾದ ಗಂಧರ್ವರು ಯಾರು? ಎಂಬ ಪ್ರಶ್ನೆಗೆ ಚಂದನ್ ಆಚಾರ್ ಮಾತನಾಡುತ್ತಾ, ಈ ಮನೆಯಲ್ಲಿ ಯಾರೂ ಗಂಧರ್ವರಿಲ್ಲ. ಆದರೆ ದೀಪಿಕಾ ಅವರಲ್ಲಿ ರಾಕ್ಷಸ ಇದ್ದಾನೆ. ಅವರಲ್ಲಿ ಇಗೋ ಪ್ರಾಬ್ಲಂ ಜಾಸ್ತಿ ಇದೆ ಎಂದರು ಚಂದನ್.

ಹೆಣ್ಮಕ್ಕಳ ಒಳಉಡುಪನ್ನು ಬಾವುಟ ಮಾಡ್ಕೊಂಡ್ರಾ?

ಚಂದನ್ ಆಚಾರ್ ಬಗ್ಗೆ ಒಂದು ಹೇಳಿಕೆ ನೀಡ್ತೀರ, ಇದರ ಬಗ್ಗೆ ವಿವರಣೆ ಬೇಕಾಗುತ್ತದೆ ಎಂದು ಮಾತು ಆರಂಭಿಸಿದ ಕಿಚ್ಚ, ಹೆಣ್ಮಕ್ಕಳ ಒಳಉಡುಪನ್ನು ಬಾವುಟ ಮಾಡಿಕೊಂಡ್ರು ಅಂತ ಚಂದನ್ ಆಚಾರ್ ಬಗ್ಗೆ ಬರುತ್ತದೆ. ಎಲ್ಲಿ ನೋಡಿದ್ರಿ ತಾವು ಎಂದು ಪ್ರಶ್ನಿಸಿದರು.

ಸುಖಾ ಸುಮ್ಮನೆ ದೀಪಿಕಾ ನೀಡಿದ್ದ ಹೇಳಿಕೆಗೆ ಕಿಚ್ಚ ಕ್ಲಾಸ್

ಅದು ಮಾತಿಗೆ ಬಂದದ್ದು, ಸುಮ್ಮನೆ ಹೇಳಿದ್ದು ಅಂದಿದ್ದಾರೆ, ಆಮೇಲೆ ಕ್ಯಾಮೆರಾ ಮುಂದೆ ಅಥವಾ ಚಂದನ್ ಆಚಾರ್‌ಗೆ ಹೇಳಬೇಕಿತ್ತು. ಯಾಕೆಂದರೆ ನಿಮ್ಮ ಮಾತಿನಲ್ಲಿ ಸತ್ಯ ಇಲ್ಲ ಎಂದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವೇ ಹೋಗುತ್ತದೆ. ವ್ಯಕ್ತಿತ್ವಕ್ಕೆ ಡ್ಯಾಮೇಜ್ ಆಗುತ್ತದೆ ಎಂಬ ಕಾರಣಕ್ಕೆ ಕೇಳಿದೆ. ಆ ರೀತಿ ನಡೆದಿಲ್ಲ ಎಂದು ಲೈಟ್ ಆಗಿ ದೀಪಿಕಾಗೆ ಕ್ಲಾಸ್ ತೆಗೆದುಕೊಂಡರು ಸುದೀಪ್.

ಈ ವಾರ ಯಾರಿಗೂ ಸಿಗಲಿಲ್ಲ ಕಿಚ್ಚನ ಚಪ್ಪಾಳೆ

ಈ ವಾರ ಒಳ್ಳೆಯ ಟಾಸ್ಕ್ ಸಿಕ್ಕಿತ್ತು. ಅದನ್ನು ಇನ್ನಷ್ಟು ಚೆನ್ನಾಗಿ ಆಡಬಹುದಿತ್ತು. ಆದರೆ ಎಲ್ಲರೂ ಅದನ್ನು ಅಷ್ಟು ಚೆನ್ನಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದೀರಿ ಎಂದೇ ಹೇಳಿದರು. ಹಾಗಾಗಿ ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೂ ಇಲ್ಲ ಎಂದರು.

ಕಿಚ್ಚ ಹೇಳಿದ ಒಂದು ಕತ್ತೆಯ ಕಥೆ

ಈ ನಡುವೆ ಕಿಚ್ಚ ಒಂದು ಕಥೆಯನ್ನೂ ಹೇಳಿದರು, ಒಂದು ಮರಕ್ಕೆ ಕತ್ತೆಯನ್ನು ಕಟ್ಟಿಹಾಕಿದ್ದರಂತೆ. ಕಟ್ಟಾಕಿದ್ದ ಕತ್ತೆಯನ್ನು ರಾಕ್ಷಸನೊಬ್ಬ ಬಿಚ್ಚುತ್ತಾನೆ. ಕತ್ತೆ ಏನು ಮಾಡುತ್ತೆ ಅಂದ್ರೆ ಗದ್ದೆಯನ್ನು ಹಾಳು ಮಾಡುತ್ತದೆ. ಅದನ್ನು ನೋಡಿದ ಗದ್ದೆಯ ಯಜಮಾನ, ರೈತನ ಹೆಂಡತಿ ಕತ್ತೆಯನ್ನು ಬಂದೂಕಿನಲ್ಲಿ ಸಾಯಿಸುತ್ತಾರೆ.

ರಾಕ್ಷಸ ಮಾಡಿದ ಒಂದು ತಪ್ಪಿನಿಂದಾದ ಎಡವಟ್ಟು

ಈ ವಿಚಾರ ತಿಳಿದ ಗೊತ್ತಾದ ತಕ್ಷಣ ಕತ್ತೆಯ ಯಜಮಾನ ಇದ್ನಲ್ಲ ಅವನು ಏನು ಮಾಡ್ತಾನೆ ಅಂದ್ರೆ, ಅವನು ಒಂದು ಬಂದೂಕು ತರ್ತಾನೆ. ಈ ಮನೆಗೆ ನುಗ್ಗಿ ರೈತನ ಹೆಂಡತಿಯನ್ನು ಸಾಯಿಸುತ್ತಾನೆ. ಇದನ್ನು ನೋಡಿದ ರೈತ ಅಯ್ಯೋ ನನ್ನ ಹೆಂಡತಿಯನ್ನು ಸಾಯಿಸಿದನಾ ಇವನು, ಕತ್ತೆಯನ್ನು ಸಾಯಿಸಿದ್ದಕ್ಕೆ ಅಂತ ಹೇಳಿ ಕತ್ತೆ ಯಜಮಾನನ್ನೂ ಸಾಯಿಸುತ್ತಾನೆ. ಈಗ ಉಳಿದುಕೊಂಡಿರುವುದು ಕತ್ತೆ ಯಜಮಾನನ ಹೆಂಡತಿ.

ಕತ್ತೆಯ ಕಥೆಯ ಮೂಲಕ ಮನೆಮಂದಿಯ ಕಣ್ಣು ತೆರೆಸಿದ ಕಿಚ್ಚ

ಅವಳು ಎರಡು ಗಂಡು ಮಕ್ಕಳನ್ನು ಕರೆದು ಹೇಳುತ್ತಾಳೆ. ಆ ಮೆನೆಗೆ ಹೋಗಿ ಮಕ್ಕಳಾ, ಅಲ್ಲಿ ಇರೋರನ್ನು ಬಿಡಬೇಡಿ, ಸಾಯಿಸಿ ಬಿಟ್ಟು ಬನ್ನಿ ಅಂತ. ಆ ಮಕ್ಕಳು ಹೋಗಿ ರೈತನ ಮನೆಗೆ ಬೆಂಕಿ ಇಟ್ಟು ಬರುತ್ತಾರೆ. ಆದರೆ ಆ ರೈತ ಸತ್ತಿರಲ್ಲ. ಆ ರೈತ ವಾಪಸ್ ಬಂದು ಇವರೆನ್ನಲ್ಲ ಸಾಯಿಸುತ್ತಾನೆ. ಈಗ ಕೊನೆಗೆ ಉಳಿದುಕೊಂಡಿರುವವನು ರೈತ ಮಾತ್ರ.

ಬಹುತೇಕ ಈ ವಾರದ ಟಾಸ್ಕ್ ಕಿಚ್ಚನ ಕಥೆಯಂತೆಯೇ ಇತ್ತು

ಆ ರೈತ ವಾಪಸ್ ಹೋಗಬೇಕಾದರೆ ಆ ರಾಕ್ಷಸ ಸಿಗ್ತಾನಂತೆ. ರಾಕ್ಷಸನನ್ನು ಕೇಳ್ತಾನಂತೆ ಇವನು, ಏನು ತಪ್ಪು ಮಾಡಿದ್ದೆ ಅಂತ ಇದನ್ನೆಲ್ಲಾ ನೀನು ಮಾಡಿದೆ ಅಂತ. ಅಯ್ಯೋ ಮಗನೆ ನಾನು ಮಾಡಿದ್ದು ಬರೀ ಕತ್ತೆಯನ್ನು ಬಿಚ್ಚಿದ್ದು ಅಷ್ಟೇ. ಬಿಚ್ಚಿ ಬಿಟ್ಟು ಒಳ್ಳೆಯವನಾಗಿ ಕತ್ತೆ ಬಿಚ್ಚಿದೆ. ಮಿಕ್ಕಿದ್ದೆಲ್ಲಾ ನೀವೆ ಮಾಡಿಕೊಂಡಿದ್ದು ಎಂದರು. ಬಹುತೇಕ ಈ ವಾರ ಇದೇ ಕಥೆ ರೀತಿ ಇತ್ತು ಎಂಬುದನ್ನು ಸೂಚ್ಯವಾಗಿ ಹೇಳಿದರು ಕಿಚ್ಚ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ