ಆ್ಯಪ್ನಗರ

ಗುಪ್ತಾಂಗ ಪದ ಬಳಕೆ ಹಿಂದಿದೆಯಂತೆ ಸ್ಟ್ರಾಟಜಿ! ದೀಪಿಕಾ ದಾಸ್ ಬಾಯಿಬಿಟ್ಟ ಅಸಲಿ ಸತ್ಯ!!

'ಬಿಗ್ ಬಾಸ್ ಕನ್ನಡ ಸೀಸನ್‌7'ರ 31ನೇ ಸಂಚಿಕೆಯಲ್ಲಿ ದೀಪಿಕಾ ದಾಸ್‌ ಟಾಸ್ಕ್‌ ಮಾಡುವಾಗ 'ಗುಪ್ತಾಂಗವನ್ನು ಮುಟ್ಟುವ ಹಾಗಿಲ್ಲ' ಎಂದು ಹೇಳಿದ್ದು ಚರ್ಚೆ ಆಗಿತ್ತು. ಇದೀಗ ಹಾಗೇ ಹೇಳಿದ್ದಕ್ಕೆ ಸ್ಪಷ್ಟನೆ ಸಿಕ್ಕಿದೆ.

Vijaya Karnataka Web 15 Nov 2019, 5:54 pm
'ಬಿಗ್‌ ಬಾಸ್ ಕನ್ನಡ ಸೀಸನ್‌ 7' ರಿಯಾಲಿಟಿ ಶೋ ದಿನ ಕಳೆದಂತೆ ರೋಚಕತೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ಇತ್ತೀಚಿಗೆ ನಡೆದ ಟಾಸ್ಕ್‌ವೊಂದು ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಕದನಕ್ಕೆ ಕಾರಣವಾಗಿತ್ತು. ಅದೇನೆಂದರೆ, ಕಿತ್ತಳೆ ಹಣ್ಣು ಸಂಗ್ರಹಿಸುವ ಆಟ! ಅದರಲ್ಲಿ ದೀಪಿಕಾ ದಾಸ್ ಅವರಿಂದ ಬಂದ 'ಗುಪ್ತಾಂಗವನ್ನು ಮುಟ್ಟುವ ಹಾಗಿಲ್ಲ' ಎಂಬ ಮಾತಿನಿಂದ ದೊಡ್ಡ ಚರ್ಚೆಯೇ ಶುರುವಾಗಿತ್ತು. ಇದೀಗ ಅವರು ಹಾಗೇ ಹೇಳಿದ್ದೇಕೆ? ಇಲ್ಲಿದೆ ಉತ್ತರ!
Vijaya Karnataka Web ದೀಪಿಕಾ ದಾಸ್‌


Episode 31 Highlights: ಗುಪ್ತಾಂಗವನ್ನು ಮುಟ್ಟೋ ಹಂಗಿಲ್ಲ ಎಂದು ಕಿರುಚಿದ ದೀಪಿಕಾ!

ಇತ್ತೀಚಿಗೆ 'ಕಿತ್ತಳೆ ಮಂಡಿ' ಟಾಸ್ಕ್‌ ಸಪ್ತಾಶ್ವ ಹಾಗೂ ಸಿಡಿಲು ತಂಡದ ನಡುವೆ ನಡೆಯಿತು. ಈ ಟಾಸ್ಕ್‌ನಲ್ಲಿ ಕಿತ್ತಳೆ ಹಣ್ಣುಗಳನ್ನು ಮಹಿಳಾ ಸ್ಪರ್ಧಿಗಳು ತಮ್ಮ ಟೀ-ಶರ್ಟ್‌ನಲ್ಲಿ ಬಚ್ಚಿಟ್ಟುಕೊಂಡಿದ್ದರು. 'ಹೆಣ್ಣು ಮಕ್ಕಳು ನೀವು ಆ ಜಾಗದಲ್ಲಿ ಬಚ್ಚಿಟ್ಟುಕೊಂಡು ಅಡ್ವಾಂಟೇಜ್ ತಗೊಳ್ತಿದ್ದೀರಾ' ಎಂದು ಆರ್‌ಜೆ ಪೃಥ್ವಿ ಹೇಳಿದ್ದರು. ಕಡೆಗೆ ದೀಪಿಕಾ ತನ್ನ ಟೀ ಶರ್ಟ್ ಒಳಗೆ ಬಚ್ಚಿಟ್ಟುಕೊಂಡಿದ್ದ ಕಿತ್ತಳೆ ಹಣ್ಣನ್ನು ಕುರಿ ಪ್ರತಾಪ್ ಕಿತ್ತುಕೊಳ್ಳಲು ಹೋದಾಗ, 'ಗುಪ್ತಾಂಗವನ್ನು ಮುಟ್ಟುವ ಹಾಗಿಲ್ಲ. ನಾವು ಹುಡುಗೀರು ಬಿಚ್ಚಿಕೊಂಡು ನಿಲ್ಲೋಕೆ ಬಂದಿಲ್ಲ ಇಲ್ಲಿ. ಟೀ-ಶರ್ಟ್ ಮುಟ್ಟಿದರೆ ನಾವು ಸುಮ್ಮನಿರಲ್ಲ. ಆ ರೀತಿ ಮಾಡಿದರೆ ನಮಗೆ ಈ ಆಟವೇ ಬೇಡ' ಎಂದು ದೀಪಿಕಾ ಹೇಳಿದ್ದರು. ಆದರೆ, ಇಂದಿನ ಸಂಚಿಕೆಯಲ್ಲಿ ಈ ಕುರಿತ ಚರ್ಚೆ ಆಗಿದೆ.

View this post on Instagram Happy Deepawali A post shared by Deepika Das (@deepika__das) on Oct 28, 2019 at 8:08am PDT

ಇಂದಿನ ಸಂಚಿಕೆಯಲ್ಲಿ ಮನೆ ಕೆಲವೊಂದು ವಿಚಾರಗಳ ಕುರಿತು ಚರ್ಚೆ ನಡೆದಿದೆ. ಅದರಲ್ಲಿ ಕಿತ್ತಳೆ ಹಣ್ಣಿನ ಸಂಗ್ರಹ ಕುರಿತು ಮತ್ತು ದೀಪಿಕಾ ಬಳಸಿದ ಮಾತಿನ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ. 'ಹೆಣ್ಣನ್ನು ಮುಟ್ಟಲ್ಲ ಎನ್ನುವ ಕಾರಣಕ್ಕೆ ನೀವು ಶರ್ಟ್ ಒಳಗೆ ಹಣ್ಣನ್ನು ಹಾಕಿ ಇಟ್ಟುಕೊಂಡಿದ್ದು ಎಷ್ಟು ಸರಿ' ಎಂದು ಹರೀಶ್ ರಾಜ್ ಕೇಳಿದ್ದಾರೆ. ಅದಕ್ಕೆ ದೀಪಿಕಾ ದಾಸ್‌, 'ಟಾಸ್ಕ್ ಗೆಲ್ಲಲು ನಾವು ಮಾಡಿದ ಸ್ಟ್ರಾಟಜಿ (ಕಾರ್ಯತಂತ್ರ) ಅದಾಗಿತ್ತು' ಎಂದಿದ್ದಾರೆ. ಸದ್ಯ ಇಂದಿನ ಸಂಚಿಕೆಯ ಈ ಪ್ರೋಮೋವನ್ನು ಕಲರ್ಸ್‌ ಕನ್ನಡ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ದೀಪಿಕಾ ಹೇಳಿರುವ ಮಾತಿಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ