ಆ್ಯಪ್ನಗರ

ಬಿಗ್‌ ಬಾಸ್‌ ಮನೆಯೊಳಗೆ ಮತ್ತೆ ಕಾಣಿಸಿಕೊಂಡ ಭೂತ-ಪ್ರೇತ!

ಬಿಗ್‌ ಬಾಸ್ ಮನೆಯಲ್ಲಿ ತೀರಾ ವಿಚಿತ್ರ ಎಂಬಂತಹ ಘಟನೆಗಳು ನಡೆದಿವೆ. ಯಾಕೆ ಹೀಗಾಯಿತು ಎಂದು ತಲೆ ಕೆರೆದುಕೊಂಡವರಿಗೆ ಇಲ್ಲಿದೆ ಉತ್ತರ.

Vijaya Karnataka Web 12 Feb 2020, 4:46 pm
ಬಿಗ್‌ ಬಾಸ್ ಎಂದರೆ ಅಚ್ಚರಿಗಳ ತಾಣ. ಅಲ್ಲಿ ನಿಜಕ್ಕೂ ಏನು ನಡೆಯುತ್ತದೆ ಎಂಬುದನ್ನು ವೀಕ್ಷಕರು ಅಷ್ಟು ಸುಲಭವಾಗಿ ಊಹಿಸಲು ಸಾಧ್ಯವೇ ಇಲ್ಲ. ಕ್ಯಾಮರಾ ಕಣ್ಣಿಗೆ ಕಾಣುವುದು ಒಂದಷ್ಟಾದರೆ, ಕಾಣದೇ ಇರುವ ಸತ್ಯ ಸಾಕಷ್ಟು ಇರುತ್ತವೆ. ಇನ್ನು, ದೆವ್ವ ಭೂತಗಳೂ ಕಾಣಿಸಿಕೊಂಡ ಉದಾಹರಣೆಗಳಿವೆ. ಈಗ ಬಿಗ್‌ ಬಾಸ್ ಮನೆಯಲ್ಲಿ ಪ್ರೇತಾತ್ಮಗಳ ಓಡಾಟ ಅನುಭವಕ್ಕೆ ಬಂದಿದೆ. ಅದನ್ನು ಕಂಡು ಸ್ಪರ್ಧಿಗಳು ಬೆಚ್ಚಿ ಬಿದ್ದಿದ್ದಾರೆ! ತೀರಾ ವಿಚಿತ್ರ ಎಂಬಂತಹ ಘಟನೆಗಳು ನಡೆದಿವೆ. ಯಾಕೆ ಹೀಗಾಯಿತು ಎಂದು ತಲೆ ಕೆರೆದುಕೊಂಡವರಿಗೆ ಇಲ್ಲಿದೆ ಉತ್ತರ.
Vijaya Karnataka Web haunting experience in bigg boss hindi season 13
ಬಿಗ್‌ ಬಾಸ್‌ ಮನೆಯೊಳಗೆ ಮತ್ತೆ ಕಾಣಿಸಿಕೊಂಡ ಭೂತ-ಪ್ರೇತ!


​ಬೆಚ್ಚಿ ಬಿದ್ದ ಸ್ಪರ್ಧಿಗಳು!

ಬಿಗ್‌ ಬಾಸ್‌ ಮನೆಯೊಳಗೆ ದೆವ್ವ ಇದೆ ಎಂಬ ಸುದ್ದಿ ಕೇಳಿಬಂದಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೇ ಸ್ಪರ್ಧಿಗಳಿಗೆ ಹಾರರ್‌ ಅನುಭವ ಆಗಿದ್ದುಂಟು. ಕತ್ತಲೆಯಲ್ಲಿ ಏನೋ ಕಾಣಿಸಿತು ಎಂದು ಚೀರಿಕೊಂಡವರೂ ಇದ್ದಾರೆ. ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ, ಮನೆಯೊಳಗೆ ಬಂಧಿಯಾದ ಅವರಿಗೆ ಬೇರೆ ಯಾರೋ ಓಡಾಡುತ್ತಿದ್ದಾರೆ ಎಂಬಂತಹ ಫೀಲ್‌ ಕಾಡಿದೆ. ಆದರೆ ಈ ಬಾರಿ ನಿಜಕ್ಕೂ ಅವರ ಕಣ್ಣಿಗೆ ಕೆಲವು ವಿಚಿತ್ರ ಆಕೃತಿಗಳು ಪ್ರತ್ಯಕ್ಷ ಆಗಿವೆ. ಅದನ್ನು ಕಂಡು ಸ್ಪರ್ಧಿಗಳು ಬೆಚ್ಚಿ ಬಿದ್ದಿದ್ದಾರೆ! ನಿಜಕ್ಕೂ ಈ ಮನೆಯೊಳಗೆ ಏನು ನಡೆಯುತ್ತಿದೆ ಎಂಬುದು ಗೊತ್ತಾಗದೇ ಎಲ್ಲರೂ ಕಂಗಾಲಾಗಿದ್ದಾರೆ.

ಬಿಗ್ ಬಾಸ್ ಮನೆಯ ನನ್ನ ಮನದಾಳದ ಮಾತು - ಭಾಗ 3

​ವಿಚಿತ್ರ ಘಟನೆಗಳ ಹಿಂದೆ ಭೂತ?

ಹಿಂದಿ ಬಿಗ್‌ ಬಾಸ್‌ 13ನೇ ಸೀಸನ್‌ ಸದ್ಯ ಕೊನೇ ವಾರದಲ್ಲಿದೆ. ಈ ವೀಕೆಂಡ್‌ನಲ್ಲಿ ಫಿನಾಲೆ ಕೂಡ ನಡೆಯಲಿದೆ. ಪ್ರಸ್ತುತ 7 ಸ್ಪರ್ಧಿಗಳು ಮನೆಯೊಳಗೆ ಇದ್ದಾರೆ. ಆ ಪೈಕಿ ಇಬ್ಬರು ಮಿಡ್‌ ವೀಕ್‌ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಬರಲಿದ್ದಾರೆ. ಯಾರು ಎಮಿಲಿನೇಟ್‌ ಆಗುತ್ತಾರೆ ಎಂಬ ಗೊಂದಲ ಕಾಡುತ್ತಿದ್ದಾಗಲೇ ಅವರಿಗೆ ಭೂತದ ಕಾಟ ಶುರುವಾಗಿದೆ. ಏನೋ ವಿಚಿತ್ರ ಶಬ್ದ ಕೇಳಿಬಂದಿದೆ. ಇಟ್ಟಿದ್ದ ವಸ್ತುಗಳು ಇದ್ದಕ್ಕಿದ್ದಂತೆಯೇ ಕೆಳಗೆ ಬಿದ್ದಿವೆ. ನೋಡನೋಡುತ್ತಿದ್ದಂತೆಯೇ ಲೈಟ್ಸ್‌ ಆಫ್‌ ಆಗಿವೆ. ಅಷ್ಟೇ ಅಲ್ಲ. ವಿಚಿತ್ರವಾದ ಒಂದು ಗೊಂಬೆ ಕೂಡ ಪ್ರತ್ಯಕ್ಷ ಆಗಿದೆ. ಅದನ್ನು ನೋಡಿದ ಮೇಲೆ ಎಲ್ಲರ ಧೈರ್ಯ ಅಡಗಿಹೋಗಿದೆ!

ಬಿಗ್ ಬಾಸ್ ಮನೆಯಿಂದ ಬಂದಮೇಲೆ ಕುರಿ ಪ್ರತಾಪ್ ನಾಪತ್ತೆ; ಅದಕ್ಕೆ ಅಸಲಿ ಸತ್ಯ ಇಲ್ಲಿದೆ

​ವಿಕ್ಕಿ ಕೌಶಾಲ್‌ ಸೃಷ್ಟಿಸಿದ ಪ್ರೇತ!

ಬಿಗ್‌ ಬಾಸ್‌ ಮನೆಯೊಳಗೆ ಇಷ್ಟೆಲ್ಲ ನಡೆದಿರುವುದು ಒಂದು ಪ್ರೋಮೋ ಮೂಲಕ ಗೊತ್ತಾಗಿದೆ. ಕಲರ್ಸ್‌ ವಾಹಿನಿ ಹಂಚಿಕೊಂಡಿರುವ ಈ ಪ್ರೋಮೋನಲ್ಲಿ ಮನೆಯ ಸದಸ್ಯರು ಹೆದರಿಕೊಂಡಿರುವುದು ಸ್ಪಷ್ಟವಾಗಿದೆ. ಅಷ್ಟೇ ಅಲ್ಲ, ಈ ಎಲ್ಲ ವಿಚಿತ್ರ ಘಟನೆಗಳಿಗೆ ಕಾರಣವಾಗಿರುವುದು 'ಉರಿ' ಖ್ಯಾತಿಯ ನಟ ವಿಕ್ಕಿ ಕೌಶಾಲ್‌ ಎಂಬುದು ಇನ್ನೂ ಅಚ್ಚರಿಯ ವಿಚಾರ. ಅರೆರೆ, ವಿಕ್ಕಿ ಕೌಶಾಲ್‌ಗೂ ಮನೆಯೊಳಗಿನ ಭೂತ-ಪ್ರೇತಗಳಿಗೂ ಏನು ಸಂಬಂಧ ಎಂಬ ಅನುಮಾನ ಮೂಡುವುದು ಸಹಜ. ಅದಕ್ಕೆ ಕಾರಣ 'ಭೂತ್‌- ಪಾರ್ಟ್‌ ಒನ್‌: ದಿ ಹಾಂಟೆಡ್‌ ಶಿಪ್‌' ಸಿನಿಮಾ. ಅದರಲ್ಲಿ ವಿಕ್ಕಿ ಕೌಶಾಲ್‌ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಆ ಸಿನಿಮಾ ಪ್ರಚಾರದ ಸಲುವಾಗಿ ಅವರು ಬಿಗ್‌ ಬಾಸ್‌ ಮನೆಯೊಳಗೆ ಭೂತ ಚೇಷ್ಟೆ ಮಾಡಿದ್ದಾರೆ.

'ಶೈನ್ ಶೆಟ್ಟಿ ಗೆದ್ದಿದ್ದು ನನಗೆ ತುಂಬ ಖುಷಿಯಾಗಿದೆ' ಎಂದ ವಾಸುಕಿ ವೈಭವ್‌!

​ಭೂತ್‌- ಪಾರ್ಟ್‌ ಒನ್‌: ದಿ ಹಾಂಟೆಡ್‌ ಶಿಪ್‌

ದೊಡ್ಮನೆಯೊಳಗೆ ಸ್ಪರ್ಧಿಗಳೆಲ್ಲರೂ ಹೆದರಿ ಚೀರಿಕೊಳ್ಳುತ್ತಿದ್ದರೆ, ಅದನ್ನು ಕಂಡು ವಿಕ್ಕಿ ಕೌಶಾಲ್‌ ಎಂಜಾಯ್‌ ಮಾಡಿದ್ದಾರೆ. 'ಭೂತ್‌- ಪಾರ್ಟ್‌ ಒನ್‌: ದಿ ಹಾಂಟೆಡ್‌ ಶಿಪ್‌' ಸಿನಿಮಾದ ಪ್ರಚಾರಕ್ಕಾಗಿ ಅವರು ಬಿಗ್‌ಬಾಸ್‌ ಮನೆಯನ್ನು ಬಳಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಭಾನು ಪ್ರತಾಪ್‌ ಸಿಂಗ್‌ ನಿರ್ದೇಶನ ಮಾಡಿದ್ದು, ಕರಣ್‌ ಜೋಹರ್‌ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ವಿಕ್ಕಿ ಜೊತೆಗೆ ಭೂಮಿ ಪಡ್ನೇಕರ್‌, ಆಶುತೋಷ್‌ ರಾಣಾ ಮುಂತಾದವರು ನಟಿಸಿದ್ದಾರೆ. ಮುಂಬೈ ಸಮುದ್ರ ತೀರದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಫೆ. 21ರಂದು ವಿಶ್ವಾದ್ಯಂತ ತೆರೆಕಾಣಲಿದೆ.

'ಬಿಗ್ ಬಾಸ್' ಮನೆಯ ಬಗ್ಗೆ ನನ್ನ ಮನದಾಳದ ಮಾತು-ಭಾಗ 2

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ