ಆ್ಯಪ್ನಗರ

"ಬಿಗ್ ಬಾಸ್‌ನಲ್ಲಿ ಪಾಲಿಟಿಕ್ಸ್ ಇತ್ತು"; ಜೈ ಜಗದೀಶ್ ಸಂದರ್ಶನದಲ್ಲಿ ಹೇಳಿದ್ದೇನು?

ಜೈ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಬಂದಮೇಲೆ ಸಂದರ್ಶನವನ್ನು ನೀಡಿದ್ದಾರೆ. ಆಗ ಅವರು ಕೆಲವೊಂದಿಷ್ಟು ಮಹತ್ವದ ವಿಷಯಗಳ ಬಗ್ಗೆ ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ಹಾಗಿದ್ದರೆ ಅವರು ಹೇಳಿದ್ದೇನು?

Vijaya Karnataka Web 18 Nov 2019, 4:31 pm
'ಬಿಗ್ ಬಾಸ್ ಕನ್ನಡ ಸೀಸನ್ 7'ರಲ್ಲಿ 5ನೇ ವಾರ ಜೈ ಜಗದೀಶ್ ಮನೆಯಿಂದ ಹೊರಬಂದಿದ್ದಾರೆ. ಅವರು ಬಿಗ್ ಬಾಸ್ ಜರ್ನಿಯ ಬಗ್ಗೆ ಕೆಲವೊಂದಿಷ್ಟು ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ, ಏನದು?
Vijaya Karnataka Web jai jagadish speaks about bigg boss journey
"ಬಿಗ್ ಬಾಸ್‌ನಲ್ಲಿ ಪಾಲಿಟಿಕ್ಸ್ ಇತ್ತು"; ಜೈ ಜಗದೀಶ್ ಸಂದರ್ಶನದಲ್ಲಿ ಹೇಳಿದ್ದೇನು?


ಮನೆಯಲ್ಲಿ ಸೀನಿಯರ್-ಜ್ಯೂನಿಯರ್ ಗ್ರೂಪ್ ಆಗಿದೆ ಅಂತ ನಿಮಗನಿಸುತ್ತಾ? ನೀವ್ ಎರಡೂ ಗ್ರೂಪ್‌ಗಳ ಜೊತೆ ಬಾಂಡ್ ಆಗೋಕಾಗಲಿಲ್ಲ ಅನ್ಸುತ್ತಾ?
ಗ್ರೂಪ್ ಇರೋದು ನಿಜ. ಸೀನಿಯರ್ಸ್ ಮತ್ತು ಜ್ಯೂನಿಯರ್ಸ್‌ ಮೆಂಟಾಲಿಟಿ ಇರತ್ತೆ. ನಮ್ಮ ವಿಷಯಗಳು ಗಂಭೀರವಾಗಿರುತ್ತವೆ, ಆದರೆ ಜ್ಯೂನಿಯರ್ ಮಾತುಗಳು ತುಂಬ ಸಿಲ್ಲಿ ಸಿಲ್ಲಿಯಾಗಿ, ಕಾಮಿಡಿಯಾಗಿರುತ್ತವೆ. ಟಾಸ್ಕ್ ಅಂತ ಬಂದಾಗ ತುಂಬ ಅಗ್ರೆಸ್ಸಿವ್ ಆಗಿ ಆಡಿ ಮುಖ-ಮೂತಿ ಒಡೆದುಕೊಳ್ಳುತ್ತಾರೆ. ನಮ್ಮ ಜೊತೆ ಚೆನ್ನಾಗಿದ್ದವರು ಹಿಂದುಗಡೆ ಏನು ಬೇಕಾದರೂ ಮಾತನಾಡಿಕೊಳ್ಳುತ್ತಾರೆ.

ಬಿಗ್ ಬಾಸ್ ವೇದಿಕೆಯಲ್ಲಿ ಜೈ ಜಗದೀಶ್ ಮೊದಲ ಮಗಳು ಅರ್ಪಿತಾ, ಪತ್ನಿ ವಿಜಯಲಕ್ಷ್ಮೀ ಸಿಂಗ್ ಹೇಳಿದ್ದೇನು?

ವಾಪಸ್ ಮನೆಗೆ ಹೋದಾಗ ಏನನ್ನು ತುಂಬ ಮಿಸ್ ಮಾಡಿಕೊಳ್ತೀರಾ? ಮಿಸ್ ಮಾಡಿಕೊಂಡಾಗ ಏನು ಮಾಡ್ತೀರಾ?

ನನ್ನ ಮನೆ, ಶೂಟಿಂಗ್, ತೋಟ, ನಾಲ್ಕು ಜನ ಮಕ್ಕಳು, ಪತ್ನಿಯನ್ನು ಮಿಸ್ ಮಾಡಿಕೊಂಡೆ. ಬಿಗ್ ಬಾಸ್ ಮನೆಗೆ ಹೋಗುವುದು ನನ್ನ ಆಯ್ಕೆಯಾಗಿತ್ತು. ತುಂಬ ವಿಷಯಗಳನ್ನು ಇಲ್ಲಿ ಕಲಿತೆ. ಸುಜಾತಾ ಅವರು ನನಗೆ ಸಹೋದರಿ ಥರ ಇದ್ದರು.

ಬಿಗ್ ಬಾಸ್ ಅನುಭವ ಹೇಗಿತ್ತು?
ಪಾಲಿಟಿಕ್ಸ್ ಇತ್ತು. ಬಿಗ್ ಬಾಸ್ ಎಲಿಮಿನೇಶನ್‌ಗೆ ಯಾರು ಯಾರನ್ನು ಆಯ್ಕೆ ಮಾಡ್ತೀವಿ ಅಂತ ನೇರವಾಗಿ ಹೇಳಬೇಕು. ಇದರಿಂದಾಗಿ ಕೆಲವರಿಗೆ ಬೇಜಾರಾಗುತ್ತದೆ. ನಾವೇನಾದರೂ ನಾಮಿನೇಟ್ ಮಾಡಿದ್ರೆ ಅವರು ಬೇಸರಗೊಂಡು ಗ್ರೂಪ್ ಮಾಡಿಕೊಂಡು ನಮ್ಮನ್ನು ಆಚೆಗೆ ಕಳಿಸೋಕೆ ಪ್ಲ್ಯಾನ್ ಮಾಡುತ್ತೇವೆ.
ಜೈ ಜಗದೀಶ್ ಕುರಿತು ಮೊದಲ ಪತ್ನಿಯ ಮಗಳು ಏನು ಹೇಳಿದ್ದಾರೆ ಗೊತ್ತಾ?

ಯಾವ ಡಿಪಾರ್ಟ್‌ಮೆಂಟ್ ಮ್ಯಾನೇಜ್ ಮಾಡೋದು ತುಂಬ ಕಷ್ಟ? ಸೇಬಿನ ಘಟನೆ ನಡೆದ ನಂತರ ಕಿಚನ್ ಡಿಪಾರ್ಟ್‌ಮೆಂಟ್ ಬೇಡ ಅನ್ನಿಸ್ತಾ?
ಅಡುಗೆಮನೆ ಕ್ಲೀನಿಂಗ್ ಮಾಡೋದು ತುಂಬ ಕಷ್ಟ. ಬಿಗ್ ಬಾಸ್ ಮನೆಯಲ್ಲಿ ಕೊಡುವ ಪದಾರ್ಥಗಳನ್ನು ಬಳಸಿ ಊಟ-ತಿಂಡಿ ಪೂರೈಸಿಕೊಳ್ಳಬೇಕು. ಇದು ಕಷ್ಟಕರವಾದ ಕೆಲಸ. ಮಂಗಳೂರಿನ ಹುಡುಗಿ ಮೀನು ಫ್ರೈ ಬೇಕೇ ಬೇಕು ಅಂತ ಹಠ ಹಿಡಿದಳು. ಅವಳು ಮೀನು ಫ್ರೈ ತಿಂದ ನಂತರದಲ್ಲಿ ನಾವು ನಿದ್ದೆ ಮಾಡಬೇಕಿತ್ತು, ಆಗ 2ಗಂಟೆ ಸಮಯ

ಜೈ ಜಗದೀಶ್ ಮೊದಲನೇ ಪತ್ನಿ, ಮಗಳು ಯಾರು ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ಯಾರು ಗೆಲ್ಲಬೇಕು?

ವಾಸುಕಿ ವೈಭವ್ ಒಳ್ಳೆಯ ತಂತ್ರಜ್ಞ ಮತ್ತು ಪ್ರತಿಭೆ ಹೊಂದಿದವರು. ಗೆದ್ದರೆ ಅವರು ಜೀವನದಲ್ಲಿ ಇನ್ನೇನಾದರೂ ಸಾಧಿಸಬಹುದು
ಚಂದನ್ ಒಳ್ಳೆಯ ಹುಡುಗ, ಬಡತನದಿಂದ ಬಂದವನು. ಅವನಿಗೆ ಬಿಗ್ ಬಾಸ್‌ನಿಂದ ಗೆದ್ದ ಹಣ ಜೀವನಕ್ಕೆ ಸಹಾಯವಾಗಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ