ಆ್ಯಪ್ನಗರ

BBK9: ಬಿಗ್ ಬಾಸ್ ಕನ್ನಡ 9 ಶೋನಲ್ಲಿ ಪ್ರವೀಣರ ಜೊತೆ ನವೀನರು; ನಟ ಕಿಚ್ಚ ಸುದೀಪ್ ಏನಂತಾರೆ?

Bigg Boss Kannada Season 9 Show: ಸೆಪ್ಟೆಂಬರ್ 24 ಸಂಜೆ 6 ಗಂಟೆಗೆ ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಲಿದೆ. ನಟ ನಿರೂಪಕ ಕಿಚ್ಚ ಸುದೀಪ್ ಒಟ್ಟು ಹದಿನೆಂಟು ಜನರನ್ನು ಬಿಗ್ ಬಾಸ್ ಮನೆಯೊಳಕ್ಕೆ ಕಳುಹಿಸಿಕೊಡಲಿದ್ದಾರೆ. ನೂರು ದಿನಗಳ ಈ ಬಿಗ್ ಬಾಸ್ ಆಟ ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.ಈ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Authored byಪದ್ಮಶ್ರೀ ಭಟ್ | Vijaya Karnataka Web 23 Sep 2022, 1:49 pm
ಒಟಿಟಿ ಸೀಸನ್ ಮುಗಿದ ಬೆನ್ನಲ್ಲೇ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನ ಟಿವಿ ಸೀಸನ್ ಆರಂಭಗೊಳ್ಳುತ್ತಿದೆ. ಇದೇ ಶನಿವಾರ ಸಂಜೆ ಬಿಗ್ ಬಾಸ್ ಸೀಸನ್ 9 ರ ( Bigg Boss Kannada Season 9 ) ಮನೆಗೆ ಸದಸ್ಯರನ್ನು ಕಳಿಸಲು ಕಲರ್ಸ್ ಕನ್ನಡ ಚಾನೆಲ್ ಸಜ್ಜಾಗಿದೆ.
Vijaya Karnataka Web bbk9


ಸೆಪ್ಟೆಂಬರ್ 24 ಸಂಜೆ 6 ಗಂಟೆಗೆ ಆರಂಭವಾಗುವ ವರ್ಣರಂಜಿತ ಕಾರ್ಯಕ್ರಮದಲ್ಲಿ ನಟ ನಿರೂಪಕ ಕಿಚ್ಚ ಸುದೀಪ್ ಒಟ್ಟು ಹದಿನೆಂಟು ಜನರನ್ನು ಬಿಗ್ ಬಾಸ್ ಮನೆಯೊಳಕ್ಕೆ ಕಳುಹಿಸಿಕೊಡಲಿದ್ದಾರೆ. ನೂರು ದಿನಗಳ ಈ ಬಿಗ್ ಬಾಸ್ ಆಟ ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. 9ನೇ ಸೀಸನ್‌ನ ವಿಶೇಷವೇನೆಂದರೆ 9 ಹೊಸ ಸ್ಪರ್ಧಿಗಳ ಜೊತೆ 9 ಅನುಭವಿ ಸ್ಪರ್ಧಿಗಳೂ ಕಣದಲ್ಲಿರುತ್ತಾರೆ. ಇದನ್ನು ‘ಪ್ರವೀಣರು ಮತ್ತು ನವೀನರ ಹಣಾಹಣಿ’ ಎಂದು ಚಾನೆಲ್ ಬಣ್ಣಿಸಿದೆ.

BBK9: ಬಿಗ್ ಬಾಸ್ ಕನ್ನಡ 9 ಮನೆ ನೋಡಿ, ದೊಡ್ಮನೆಯಲ್ಲಿ ಈ ಜೋಡಿ ನೋಡಬೇಕು ಎಂದ ಪ್ರೇಕ್ಷಕರು

9 ಅನುಭವಿ ಸ್ಪರ್ಧಿಗಳ ಪಟ್ಟಿಯಲ್ಲಿ ಒಟಿಟಿ ಸೀಸನ್‌ನ ಟಾಪ್ 4 ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಹಾಗೂ ಸಾನ್ಯಾ ಅಯ್ಯರ್ ಅಂತೂ ಇರುತ್ತಾರೆ. ಜೊತೆಗೆ ಹಳೆಯ ಬಿಗ್ ಬಾಸ್ ಸೀಸನ್‌ಗಳಲ್ಲಿ ಆಡಿ ಜನಮೆಚ್ಚುಗೆ ಗಳಿಸಿದ ಐದು ಜನರೂ ಇರಲಿದ್ದಾರೆ. ಇವರ ಜೊತೆಗೆ ಮನೆ ಪ್ರವೇಶಿಸಲಿರುವ 9 ಜನ ನವೀನರು ಯಾರೆಂಬುದನ್ನು ಶನಿವಾರ ಸಂಜೆ ಪ್ರಸಾರವಾಗುವ ಆರಂಭಿಕ ಸಂಚಿಕೆಯನ್ನು ನೋಡಿಯೇ ತಿಳಿದುಕೊಳ್ಳಬೇಕು.

ಆ 9 ಹೊಸಬರು ಯಾರು ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ನಟಿ ಸಮೀಕ್ಷಾ, ಟೆನ್ನಿಸ್ ಕೃಷ್ಣ, ಚಂದ್ರಪ್ರಭಾ, ಅಮೂಲ್ಯಾ ಗೌಡ ಮುಂತಾದವರು ಈ ಸೀಸನ್‌ಗೆ ಎಂಟ್ರಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

BBk9: ಬಿಗ್ ಬಾಸ್ ಕನ್ನಡ ಸೀಸನ್ 9 ಶೋ ವಿಶೇಷತೆಗಳು; ಏನಿರತ್ತೆ? ಏನಿರಲ್ಲ?

"‘ಬಿಗ್ ಬಾಸ್ ಎನ್ನುವುದು ಮನಸ್ಸಿನ ಆಟ. ಮುಗ್ಧತೆ ಮತ್ತು ಅನುಭವ ಎರಡರ ಮುಖಾಮುಖಿ ಮನುಷ್ಯನೊಳಗಿನ ಇನ್ನಷ್ಟು ಮುಖಗಳನ್ನು ಹೊರತರಲಿದ್ದು, ಆಟಕ್ಕೆ ಹೊಸ ರಂಗು ಬರಲಿದೆ’ ಎಂದು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅಭಿಪ್ರಾಯಪಟ್ಟಿದ್ದಾರೆ.

‘ಈ ಸೀಸನ್ ಕುರಿತು ನನಗೆ ಕುತೂಹಲ ಹೆಚ್ಚಾಗಿದೆ. ಈ ಹೊಸ ಬಗೆಯ ಆಟದಲ್ಲಿ ಅನುಭವದಿಂದ ಅನುಕೂಲ ಹೆಚ್ಚೊ ಅನಾನುಕೂಲ ಹೆಚ್ಚೊ ಅಂತ ಹೇಳೋದು ಸುಲಭವಲ್ಲ’ ಎಂಬುದು ಶೋನ ರೂವಾರಿ ಕಿಚ್ಚ ಸುದೀಪ್ ಅನಿಸಿಕೆ.

BBK 9: ಬಿಗ್ ಬಾಸ್ ಕನ್ನಡ ಓಟಿಟಿ ಟಾಪ್ 4 ಸ್ಪರ್ಧಿಗಳು ಎಲ್ಲಿದ್ದಾರೆ? ಯಾಕೆ ಎಲ್ಲಿಯೂ ಕಾಣಿಸ್ತಿಲ್ಲ?

ಒಟ್ಟಿನಲ್ಲಿ ಒಟಿಟಿ ಸೀಸನ್ ಸಂಭ್ರಮ ಕರಗುವ ಮೊದಲೇ ಟಿವಿ ಸೀಸನ್ ಶುರುವಾಗುತ್ತಿರುವುದು ವೀಕ್ಷಕರಿಗೆ ಸಂಭ್ರಮದ ಸುದ್ದಿ. ಕಲರ್ಸ್ ಕನ್ನಡ ಚಾನೆಲ್ಲಿನಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸಂಚಿಕೆಗಳನ್ನು ವೂಟ್ ಸೆಲೆಕ್ಟ್‌ನಲ್ಲೂ ನೋಡಬಹುದು.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ