ಆ್ಯಪ್ನಗರ

'ಆ ವ್ಯಕ್ತಿ' ಬಿಗ್‌ಬಾಸ್‌ನಲ್ಲಿ ಇರಲಿ ಎಂದು ಸ್ವತಃ ಸುದೀಪ್‌ ಸೂಚಿಸಿದ್ದರಂತೆ! ಯಾರು ಗೊತ್ತಾ ಸ್ಪರ್ಧಿ?

ಬಿಗ್‌ಬಾಸ್‌ಗೆ ಎಂಟ್ರಿ ನೀಡಬೇಕು ಎಂಬುದು ಬಹುತೇಕರ ಕನಸಾಗಿದೆ. ಶೋ ಸಾರಥಿ ಸುದೀಪ್ ಅವರಿಗೂ ಸಾಕಷ್ಟು ಜನ ಕರೆ ಮಾಡಿ, ಶೋನಲ್ಲಿ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳುತ್ತಿರುತ್ತಾರೆ. ಆದರೆ, ಸುದೀಪ್‌ ಒಬ್ಬರನ್ನು ಬಿಟ್ಟು, ಬೇರೆ ಯಾರಿಗೂ ಇದುವರೆಗೂ ರೆಫರ್ ಮಾಡಿಯೇ ಇಲ್ಲವಂತೆ!

Vijaya Karnataka Web 11 Oct 2019, 5:35 pm
ಬಿಗ್‌ಬಾಸ್‌ ಸೀಸನ್ 7 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ರಿಯಾಲಿಟಿ ಶೋ ಆರಂಭವಾಗಲಿದೆ ಎಂದಾಗಲೇ ಅನೇಕರು ಸ್ಪರ್ಧಿಗಳಾಗುವ ಬಯಕೆ ತೋಡಿಕೊಂಡಿದ್ದರು. ಸಾಕಷ್ಟು ಜನ ಬಿಗ್‌ಬಾಸ್ ಮನೆಗೆ ಹೋಗೋದಕ್ಕೆ ಹಾತೊರೆಯುತ್ತಿರುತ್ತಾರೆ ಅನ್ನೋದು ಕೂಡ ಸತ್ಯ. ಆದರೆ, ಸ್ವತಃ ಕಿಚ್ಚ ಸುದೀಪ್ ಒಬ್ಬ ಸ್ಪರ್ಧಿಯನ್ನು ಮನೆಗೆ ಕಳಿಸುವಂತೆ 'ಬಿಗ್‌ಬಾಸ್' ತಂಡಕ್ಕೆ ಸೂಚಿಸಿದ್ದರಂತೆ!
Vijaya Karnataka Web WhatsApp Image 2019-10-11 at 5.24.04 PM.

'ಬಿಗ್‌ಬಾಸ್‌ ಕನ್ನಡ ಸೀಸನ್ 7'ಗೆ ಎಂಟ್ರಿ ಕೊಡಲಿರುವ ಕನ್ನಡದ ನಟಿ ಇವರೇನೆ!!!
ಹೌದು, ಏಳು ಸೀಸನ್‌ಗಳಾಗಿದ್ದರೂ, ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಸುದೀಪ್‌ ಯಾವತ್ತೂ ಎಂಟ್ರಿ ಆಗಿರಲಿಲ್ಲವಂತೆ. ಆದರೆ, ಒಂದು ಸೀಸನ್‌ನಲ್ಲಿ ಮಾತ್ರ ಕ್ರಿಕೆಟರ್ ಎನ್‌.ಸಿ. ಅಯ್ಯಪ್ಪ ಅವರನ್ನು ಮನೆಯೊಳಗೆ ಕಳಿಸುವಂತೆ ಹೇಳಿದ್ದರಂತೆ ಸುದೀಪ್‌. ಶೋ ಆರಂಭವಾಗುವುದಕ್ಕೂ ಮೊದಲೇ ಅನೇಕ ರಾಜಕಾರಣಿಗಳು, ಸ್ನೇಹಿತರು ಸುದೀಪ್‌ಗೆ ಕರೆಮಾಡಿ, 'ನಮ್ಮ ಕಡೆಯವರೊಬ್ಬರು ಬಿಗ್‌ಬಾಸ್ ಮನೆಗೆ ಹೋಗೋಕೆ ಆಸಕ್ತಿ ಹೊಂದಿದ್ದಾರೆ, ರೆಫರ್ ಮಾಡಿ' ಎಂದೆಲ್ಲ ಹೇಳಿದ್ದಾರಂತೆ. ಆದರೆ, ಯಾವಾಗಲೂ ಅದಕ್ಕೆ ಸುದೀಪ್‌ ಸ್ಪಂದಿಸಲಿಲ್ಲವಂತೆ.
ಅಯ್ಯಪ್ಪ ಆಯ್ಕೆಗೂ ಕಾರಣವಿದೆ!
ಬಿಗ್‌ಬಾಸ್‌ ಸೀಸನ್ 3ರಲ್ಲಿ ಒಬ್ಬ ಸ್ಪರ್ಧಿ ಅಚಾನಕ್ ಆಗಿ ಬಿಗ್‌ಬಾಸ್ ಮನೆಗೆ ಬರಲಿಕ್ಕೆ ಆಗಲಿಲ್ಲವಂತೆ. ಆಗ ಸ್ವತಃ ಸುದೀಪ್ ಅವರೇ, ಬಿಗ್‌ಬಾಸ್ ಮನೆಯಲ್ಲಿ ಒಬ್ಬ ಕ್ರೀಡಾ ಕ್ಷೇತ್ರದ ವ್ಯಕ್ತಿ ಇರಲಿ ಎಂಬ ಕಾರಣಕ್ಕೆ ಎನ್.ಸಿ. ಅಯ್ಯಪ್ಪ ಅವರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದರಂತೆ. ಕರ್ನಾಟಕ ರಣಜಿ ತಂಡದಲ್ಲಿ ಆಟಗಾರನಾಗಿದ್ದ ಅಯ್ಯಪ್ಪ, ಖ್ಯಾತ ನಟಿ ಪ್ರೇಮಾ ಅವರ ಸಹೋದರ ಕೂಡ ಹೌದು.
ಹುಚ್ಚ ವೆಂಕಟ್ ಮನಸ್ಥಿತಿಯ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ಕೊಟ್ಟುಬಿಟ್ರು ಕಿಚ್ಚ ಸುದೀಪ್
ಈ ಬಾರಿ ಜೋರಾಗಿದೆ ನಿರೀಕ್ಷೆ! ಈ ಸಲದ ಬಿಗ್‌ ಮನೆಗೆ ಯಾರೆಲ್ಲ ಹೋಗಲಿದ್ದಾರೆ ಎಂ ಬ ನಿರೀಕ್ಷೆ ಜೋರಾಗಿದೆ. ಈಗಾಗಲೇ ಸಂಭಾವ್ಯ ಪಟ್ಟಿಯಲ್ಲಿ ಕುರಿ ಪ್ರತಾಪ್, ವಾಸುಕಿ ವೈಭವ್, ಸುಜಾತಾ, ದೀಪಿಕಾ ದಾಸ್, ಶೈನ್ ಶೆಟ್ಟಿ, ರಂಜನಿ ರಾಘವನ್, ವಿಜೆ ಅಗ್ನಿ, ದುನಿಯಾ ರಶ್ಮಿ ಮುಂತಾದವರ ಹೆಸರು ಚಾಲ್ತಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ