ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಕಳೆದ ವಾರ ಅಶ್ಲೀಲ ಸನ್ನೆ ತೋರಿಸಿ ಎಲ್ಲರ ಕಣ್ಣಲ್ಲೂ ಸಣ್ಣವರಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಕುರಿತು ಸಾಕಷ್ಟು ಚರ್ಚೆಯಾಯ್ತು. ಸಾಕಷ್ಟು ಜನರು ಚಕ್ರವರ್ತಿ ಚಂದ್ರಚೂಡ್ರನ್ನು ಮನೆಯಿಂದ ಹೊರಹಾಕಬೇಕು ಎಂದು ಆಗ್ರಹಿಸಿದ್ದರು. ನಟ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಏನು ಹೇಳ್ತಾರೆ ಎಂಬ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ.
ಜಾಣತನದಿಂದ ಮಾತು ಶುರು ಮಾಡಿದ ಸುದೀಪ್
ಕಾರ್ಯಕ್ರಮ ಆರಂಭಿಸುವಾಗಲೇ ಚಕ್ರವರ್ತಿ ಚಂದ್ರಚೂಡ್ರ ನಡವಳಿಕೆ ಬಗ್ಗೆ ಮಾತನಾಡಬೇಕಿದೆ ಎಂದು ಸುದೀಪ್ ಹೇಳಿದ್ದಾರೆ. ಅದರಂತೆಯೇ ಕೈಯ್ಯಲ್ಲಿರುವ 5 ಬೆರಳುಗಳನ್ನು ಯಾವುದ್ಯಾವುದಕ್ಕೆ ಉಪಯೋಗಿಸಲಾಗುತ್ತಿದೆ ಎಂಬುದನ್ನು ಸ್ಪರ್ಧಿಗಳ ಬಾಯಲ್ಲಿಯೇ ಸುದೀಪ್ ಹೇಳಿಸಿದ್ದಾರೆ. ಆಗಲೇ ಸುದೀಪ್ ತಾನು ಮಾಡಿದ ಸನ್ನೆಯ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ ಎಂಬುದು ಚಕ್ರವರ್ತಿಗೆ ಅರಿವಿಗೆ ಬಂದಿದ್ದು, ಮುಖದಲ್ಲಿಯೇ ವ್ಯಕ್ತವಾಗುತ್ತಿತ್ತು. BBK8: 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ಹತ್ತಿರ ಇರುವಾಗ ದಿವ್ಯಾ ಉರುಡುಗಗೆ ಸಿಕ್ತು 'ಬಿಗ್' ಚಾನ್ಸ್!
ಈ ಸನ್ನೆ ತೋರಿಸಿದಾಗ ಕೆನ್ನೆಗೆ ಹೊಡೆಯುವಷ್ಟು ಸಿಟ್ಟು ಬರುವುದು
ಕರ್ನಾಟಕದಲ್ಲಿನ ತಾಯಂದಿರು ಈ ಕಾರ್ಯಕ್ರಮವನ್ನು ನೋಡುತ್ತಿದ್ದಾರೆ. ನೀವು ಎತ್ತಿದ ಬೆರಳಿನ ಅರ್ಥವೇನು ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರ ನೀಡಿದ ಚಕ್ರವರ್ತಿ ಚಂದ್ರಚೂಡ್, 'ಕೋಪದಲ್ಲಿ ಬಳಸಿದೆ, ತಪ್ಪಾಯ್ತು' ಎಂದಿದ್ದಾರೆ, ಆಮೇಲೆ ಮತ್ತೆ ಮುಂದುವರಿದು "5 ಬೆರಳುಗಳು ಪಂಚಭೂತಗಳಿದ್ದ ಹಾಗೆ. ಮಧ್ಯದ ಬೆರಳು ಬ್ಯಾಲನ್ಸ್ ಮಾಡುವುದು ಎಂದರ್ಥ" ಎಂದಿದ್ದಾರೆ. ಕಿಚ್ಚ ಸುದೀಪ್ ಮರು ಪ್ರಶ್ನೆಗೆ ಚಕ್ರವರ್ತಿ ಸಿಟ್ಟಿನಲ್ಲಿ ಹಾಗೆ ಮಾಡಿದೆ, ಯಾರ ಮನೆಯ ಹೆಣ್ಣುಮಕ್ಕಳಿಗೆ ಈ ಸನ್ನೆ ತೋರಿಸಿದರೂ ಕೂಡ ಕೆನ್ನೆಗೆ ಹೊಡೆಯಬಹುದೆನ್ನುವಷ್ಟು ಸಿಟ್ಟು ಬರುತ್ತದೆ" ಎಂದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಈ ವಾರ ಶಮಂತ್ ಗೌಡ ಔಟ್? ಪ್ರಶ್ನೆ ಹುಟ್ಟುಹಾಕಿದ ಆ ಒಂದು ಫೋಟೋ
ವ್ಯಕ್ತಿತ್ವ ಹಾಳುಮಾಡಿಕೊಳ್ಳಬೇಡಿ: ಸುದೀಪ್
ಕಿಚ್ಚ ಸುದೀಪ್ ಅವರು ಚಕ್ರವರ್ತಿ ಚಂದ್ರಚೂಡ್ಗೆ ಕಿವಿ ಹಿಂಡಿದ್ದು, "ಯಾರದ್ದೇ ಮನೆಯ ಹೆಣ್ಣುಮಕ್ಕಳಿಗೆ ಈ ತರ ಆದರೆ ಏನು ಮಾಡಬೇಕು? ಎಂಥಹ ದುರ್ಬಲನಾದರೂ ಕೂಡ ಕೆನ್ನೆಗೆ ಬಾರಿಸಬೇಕು ಎಂದೆನಿಸುತ್ತದೆ. ಪ್ರಿಯಾಂಕಾ ಕೂಡ ಬಿಗ್ ಬಾಸ್ ಮನೆಯ ಹೆಣ್ಣು ಮಗಳು. ನೀವು ಒಂದು ಬಾರಿ ಅಲ್ಲದೆ ಅನೇಕ ಬಾರಿ ಆ ಸನ್ನೆ ತೋರಿಸಿದ್ದೀರಿ. ನಿಮ್ಮ ವ್ಯಕ್ತಿತ್ವವನ್ನು ಇಲ್ಲಿ ಹಾಳುಮಾಡಿಕೊಳ್ಳಬೇಡಿ" ಎಂದು ಗರಂ ಆಗಿ ತಿಳಿ ಹೇಳಿದ್ದಾರೆ.
ಜಾಣತನದಿಂದ ಮಾತು ಶುರು ಮಾಡಿದ ಸುದೀಪ್
ಕಾರ್ಯಕ್ರಮ ಆರಂಭಿಸುವಾಗಲೇ ಚಕ್ರವರ್ತಿ ಚಂದ್ರಚೂಡ್ರ ನಡವಳಿಕೆ ಬಗ್ಗೆ ಮಾತನಾಡಬೇಕಿದೆ ಎಂದು ಸುದೀಪ್ ಹೇಳಿದ್ದಾರೆ. ಅದರಂತೆಯೇ ಕೈಯ್ಯಲ್ಲಿರುವ 5 ಬೆರಳುಗಳನ್ನು ಯಾವುದ್ಯಾವುದಕ್ಕೆ ಉಪಯೋಗಿಸಲಾಗುತ್ತಿದೆ ಎಂಬುದನ್ನು ಸ್ಪರ್ಧಿಗಳ ಬಾಯಲ್ಲಿಯೇ ಸುದೀಪ್ ಹೇಳಿಸಿದ್ದಾರೆ. ಆಗಲೇ ಸುದೀಪ್ ತಾನು ಮಾಡಿದ ಸನ್ನೆಯ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ ಎಂಬುದು ಚಕ್ರವರ್ತಿಗೆ ಅರಿವಿಗೆ ಬಂದಿದ್ದು, ಮುಖದಲ್ಲಿಯೇ ವ್ಯಕ್ತವಾಗುತ್ತಿತ್ತು.
ಈ ಸನ್ನೆ ತೋರಿಸಿದಾಗ ಕೆನ್ನೆಗೆ ಹೊಡೆಯುವಷ್ಟು ಸಿಟ್ಟು ಬರುವುದು
ಕರ್ನಾಟಕದಲ್ಲಿನ ತಾಯಂದಿರು ಈ ಕಾರ್ಯಕ್ರಮವನ್ನು ನೋಡುತ್ತಿದ್ದಾರೆ. ನೀವು ಎತ್ತಿದ ಬೆರಳಿನ ಅರ್ಥವೇನು ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರ ನೀಡಿದ ಚಕ್ರವರ್ತಿ ಚಂದ್ರಚೂಡ್, 'ಕೋಪದಲ್ಲಿ ಬಳಸಿದೆ, ತಪ್ಪಾಯ್ತು' ಎಂದಿದ್ದಾರೆ, ಆಮೇಲೆ ಮತ್ತೆ ಮುಂದುವರಿದು "5 ಬೆರಳುಗಳು ಪಂಚಭೂತಗಳಿದ್ದ ಹಾಗೆ. ಮಧ್ಯದ ಬೆರಳು ಬ್ಯಾಲನ್ಸ್ ಮಾಡುವುದು ಎಂದರ್ಥ" ಎಂದಿದ್ದಾರೆ. ಕಿಚ್ಚ ಸುದೀಪ್ ಮರು ಪ್ರಶ್ನೆಗೆ ಚಕ್ರವರ್ತಿ ಸಿಟ್ಟಿನಲ್ಲಿ ಹಾಗೆ ಮಾಡಿದೆ, ಯಾರ ಮನೆಯ ಹೆಣ್ಣುಮಕ್ಕಳಿಗೆ ಈ ಸನ್ನೆ ತೋರಿಸಿದರೂ ಕೂಡ ಕೆನ್ನೆಗೆ ಹೊಡೆಯಬಹುದೆನ್ನುವಷ್ಟು ಸಿಟ್ಟು ಬರುತ್ತದೆ" ಎಂದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಈ ವಾರ ಶಮಂತ್ ಗೌಡ ಔಟ್? ಪ್ರಶ್ನೆ ಹುಟ್ಟುಹಾಕಿದ ಆ ಒಂದು ಫೋಟೋ
ವ್ಯಕ್ತಿತ್ವ ಹಾಳುಮಾಡಿಕೊಳ್ಳಬೇಡಿ: ಸುದೀಪ್
ಕಿಚ್ಚ ಸುದೀಪ್ ಅವರು ಚಕ್ರವರ್ತಿ ಚಂದ್ರಚೂಡ್ಗೆ ಕಿವಿ ಹಿಂಡಿದ್ದು, "ಯಾರದ್ದೇ ಮನೆಯ ಹೆಣ್ಣುಮಕ್ಕಳಿಗೆ ಈ ತರ ಆದರೆ ಏನು ಮಾಡಬೇಕು? ಎಂಥಹ ದುರ್ಬಲನಾದರೂ ಕೂಡ ಕೆನ್ನೆಗೆ ಬಾರಿಸಬೇಕು ಎಂದೆನಿಸುತ್ತದೆ. ಪ್ರಿಯಾಂಕಾ ಕೂಡ ಬಿಗ್ ಬಾಸ್ ಮನೆಯ ಹೆಣ್ಣು ಮಗಳು. ನೀವು ಒಂದು ಬಾರಿ ಅಲ್ಲದೆ ಅನೇಕ ಬಾರಿ ಆ ಸನ್ನೆ ತೋರಿಸಿದ್ದೀರಿ. ನಿಮ್ಮ ವ್ಯಕ್ತಿತ್ವವನ್ನು ಇಲ್ಲಿ ಹಾಳುಮಾಡಿಕೊಳ್ಳಬೇಡಿ" ಎಂದು ಗರಂ ಆಗಿ ತಿಳಿ ಹೇಳಿದ್ದಾರೆ.