ಆ್ಯಪ್ನಗರ

'ಬಿಗ್ ಬಾಸ್' ವೇದಿಕೆ ಮೇಲೆ ಕಾಣಿಸಿಕೊಂಡ 'ಕಿಚ್ಚ' ಸುದೀಪ್‌! ಅಭಿಮಾನಿಗಳಿಗೆ ಇದು ಬಿಗ್‌ ಸರ್ಪ್ರೈಸ್!

'ಕಿಚ್ಚ' ಸುದೀಪ್ ನಟರಾಗಿ ಎಷ್ಟು ಫೇಮಸ್ಸೋ, ನಿರೂಪಕರಾಗಿಯೂ ಅಷ್ಟೇ ಫೇಮಸ್‌. ಅದಕ್ಕೆ ಸಾಕ್ಷಿ ಬಿಗ್ ಬಾಸ್! ಸದ್ಯ ಕೊರೊನಾದಿಂದ ಶೋ ಆರಂಭಗೊಂಡಿಲ್ಲ. ಆದರೆ, ಆ ಶೋ ಬಗ್ಗೆ ಒಂದು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

Vijaya Karnataka Web 28 Nov 2020, 9:25 pm
'ಕಿಚ್ಚ' ಸುದೀಪ್‌ ನಿರೂಪಣೆಯ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ದೊಡ್ಡ ಪ್ರಮಾಣದ ಪ್ರೇಕ್ಷಕ ವರ್ಗವೇ ಇದೆ. ಆದರೆ, ಈ ಬಾರಿ ಶೋ ಇನ್ನೂ ಆರಂಭಗೊಂಡಿಲ್ಲ. ಆದ್ದರಿಂದ ಬಿಗ್‌ ಬಾಸ್‌ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಬೇಸರ ಆಗಿರುವುದಂತೂ ಸುಳ್ಳಲ್ಲ. ಆದರೆ, ಶೋ ಶುರುವಾಗುವುದೇ ಇಲ್ಲ ಎಂದಲ್ಲ. ಆರಂಭಕ್ಕೆ ಈಗಾಗಲೇ ತಯಾರಿಗಳು ನಡೆದಿವೆ. ಆದರೆ, ಈ ಮಧ್ಯೆ ಸುದೀಪ್‌ ಮಾತ್ರ ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಹಾಗಂತ, ಕನ್ನಡದ 'ಬಿಗ್ ಬಾಸ್' ಶುರುವಾಯ್ತಾ ಎಂದುಕೊಳ್ಳಬೇಡಿ. ವಿಷಯ ಬೇರೆಯೇ ಇದೆ!
Vijaya Karnataka Web Kichcha Sudeep


ತೆಲುಗು ಬಿಗ್ ಬಾಸ್‌ ಶೋನಲ್ಲಿ ಕಿಚ್ಚ
ಆಗಸ್ಟ್‌ನಿಂದಲೇ ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 4 ಆರಂಭಗೊಂಡಿದೆ. ಜನಪ್ರಿಯ ನಟ ನಾಗಾರ್ಜುನ ಅದರ ನಿರೂಪಣೆ ಮಾಡುತ್ತಿದ್ದಾರೆ. ಈ ವಾರದ ವಿಶೇಷವೆಂದರೆ, ಸುದೀಪ್‌ ಈ ಶೋಗೆ ಅತಿಥಿಯಾಗಿ ವೇದಿಕೆ ಏರಿದ್ದಾರೆ. ಈ ಬಗ್ಗೆ ಸ್ವತಃ ಸುದೀಪ್ ಅವರೇ ಮಾಹಿತಿ ನೀಡಿದ್ದು, ನಾಗಾರ್ಜುನ ಜೊತೆಗೆ ಇರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ 'ಬಿಗ್ ಬಾಸ್' ತೆಲುಗು ಸೀಸನ್ 4ರಲ್ಲಿ ಭಾಗವಹಿಸಿದ್ದರ ಕುರಿತಾಗಿ ಬರೆದುಕೊಂಡಿದ್ದಾರೆ.

ನಾಗಾರ್ಜುನ ಜೊತೆಗೆ ಸುದೀಪ್‌
'ಬಿಗ್ ಬಾಸ್‌ ಶೋ ನಿರೂಪಣೆ ಮಾಡುವುದು ಯಾವಾಗಲೂ ಸ್ಪೆಷಲ್‌ ಫೀಲಿಂಗ್ ಆಗಿದೆ. ಇಂದು ತೆಲುಗು ಬಿಗ್ ಬಾಸ್‌ಗೆ ಅತಿಥಿಯಾಗಿ ಹೋಗಿದ್ದು, ಮತ್ತೊಂದು ವಿಶೇಷ ಫೀಲಿಂಗ್ ಆಗಿದೆ. ಎಂದೆಂದಿಗೂ ಆಕರ್ಷಕವಾಗಿರುವ ನಾಗಾರ್ಜುನ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಅದ್ಭುತವಾಗಿತ್ತು. ಜೊತೆಗೆ ಮನೆಯೊಳಗೆ ಇರುವ ಸ್ಪರ್ಧಿಗಳೊಂದಿಗೆ ಮಾತನಾಡಿದೆ' ಎಂದು ಬರೆದುಕೊಂಡಿರುವ ಸುದೀಪ್ ಅಂತಿಮವಾಗಿ ನಾಗಾರ್ಜುನ ಅವರಿಗೆ 'ಥ್ಯಾಂಕ್ಯೂ ಸರ್' ಎಂದಿದ್ದಾರೆ.

ಕನ್ನಡದಲ್ಲಿ ಶೀಘ್ರದಲ್ಲೇ ಬಿಗ್ ಬಾಸ್!
ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಇಷ್ಟು ಹೊತ್ತಿಗಾಗಲೇ 'ಬಿಗ್‌ ಬಾಸ್‌ ಕನ್ನಡ ಸೀಸನ್‌ 8' ಶುರುವಾಗಿರಬೇಕಿತ್ತು. ಆದರೆ ಕೊರೊನಾ ವೈರಸ್‌ ಹಾವಳಿ ಇರುವುದರಿಂದ ವಿಳಂಬ ಆಗಿದೆ. ಅಕ್ಕಪಕ್ಕದ ತೆಲುಗು, ತಮಿಳು ಹಾಗೂ ಹಿಂದಿ ಬಿಗ್ ಬಾಸ್‌ ಹೊಸ ಸೀಸನ್‌ಗಳು ಈಗಾಗಲೇ ಶುರುವಾಗಿ ಯಶಸ್ವಿಯಾಗಿ ಮುಂದುವರಿಯುತ್ತಿವೆ. ಸದ್ಯ ಕನ್ನಡದಲ್ಲೂ ಅದಕ್ಕಾಗಿ ಎಲ್ಲ ಪ್ರಯತ್ನಗಳು ಜಾರಿಯಲ್ಲಿವೆ. ಈ ವರ್ಷವಂತೂ ಶೋ ಆರಂಭವಾಗುವುದಿಲ್ಲ. ಬದಲಿಗೆ, 2021ರ ಜನವರಿಯಿಂದಲೇ ಸೀಸನ್‌ 8 ಪ್ರಸಾರವಾಗಲಿದೆ ಎಂಬ ಮಾಹಿತಿ ಇದೆ.

'ಬಿಗ್‌ ಬಾಸ್' ಕನ್ನಡ ಸೀಸನ್ 8ರ ಆರಂಭಕ್ಕೆ ಭರ್ಜರಿ ತಯಾರಿ! ಯಾವಾಗ ಶುರು ಈ 'ರಿಯಾಲಿಟಿ ಶೋ'?

ಪರಮ್‌ ಜೊತೆ ಸುದೀಪ್‌ ಮಾತುಕತೆ
ಕಲರ್ಸ್‌ ಕನ್ನಡ ವಾಹಿನಿಯ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌ ಬಿಗ್ ಬಾಸ್ ಶೋ ಕುರಿತು ಕಿಚ್ಚ ಸುದೀಪ್‌ ಜೊತೆ ಮಾತುಕತೆ ಮಾಡಿದ್ದಾರೆ. ಈಚೆಗೆ ಈ ಬಗ್ಗೆ ಇನ್‌ಸ್ಟಾಗ್ರಾಮ್‌ ಮೂಲಕ ಪರಮೇಶ್ವರ್‌ ಗುಂಡ್ಕಲ್‌ ಮಾಹಿತಿ ಹಂಚಿಕೊಂಡಿದ್ದರು. ಸುದೀಪ್‌ ಜೊತೆ ಚರ್ಚೆ ಮಾಡುತ್ತಿರುವ ಒಂದು ಫೋಟೋವನ್ನು ಅವರು ಶೇರ್‌ ಮಾಡಿಕೊಂಡು, 'ಬಿಗ್‌ ಬಾಸ್‌ ಕನ್ನಡ ಹೊಸ ಸೀಸನ್‌ ಕೆಲಸಗಳು ಪ್ರಗತಿಯಲ್ಲಿವೆ' ಎಂದು ಆ ಫೋಟೋಗೆ ಕ್ಯಾಪ್ಷನ್‌ ನೀಡಿದ್ದರು.

ಬಿಗ್ ಬಾಸ್‌ ಕನ್ನಡ ಸೀಸನ್ 7 ಮುಗಿದಮೇಲೆ ಅದರ ಸ್ಪರ್ಧಿಗಳ ಬದುಕು ಎಷ್ಟು ಬದಲಾಗಿದೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ