ಆ್ಯಪ್ನಗರ

ಬಿಗ್ ಬಾಸ್ ಮನೆಯಲ್ಲಿ ಕಿಶನ್ ಪ್ರತ್ಯಕ್ಷ; ದೀಪಿಕಾ ದಾಸ್ ಜೊತೆ ಸ್ವಿಮ್ಮಿಂಗ್!

ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲು ಬಾರಿಗೆ ಹೊಸ ಪ್ರಯೋಗ ಒಂದನ್ನು ಮಾಡಲಾಗಿದೆ. ಶೋ ಆರಂಭದ ದಿನಗಳಲ್ಲಿ ಇಪ್ಪತ್ತು ಮಂದಿಯಿಂದ ತುಂಬಿ ತುಳುಕುತ್ತಿದ್ದ ಬಿಗ್ ಬಾಸ್ ಮನೆ ಈಗ ಬಣಬಣ ಎನ್ನುತ್ತಿದೆ. ಫಿನಾಲೆಗೆ ಇನ್ನು ಕೇವಲ ಒಂದೇ ಒಂದು ವಾರ ಇದ್ದು ಮನೆಮಂದಿ ಹೇಗಾದರೂ ಮಾಡಿ ಇನ್ನೊಂದು ವಾರ ತಳ್ಳಿಬಿಟ್ಟರೆ ಸಾಕು ಎಂಬಂತೆ ಕಾಯುತ್ತಿದ್ದಾರೆ.

Vijaya Karnataka Web 27 Jan 2020, 6:02 pm
ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲು ಬಾರಿಗೆ ಹೊಸ ಪ್ರಯೋಗ ಒಂದನ್ನು ಮಾಡಲಾಗಿದೆ. ಶೋ ಆರಂಭದ ದಿನಗಳಲ್ಲಿ ಇಪ್ಪತ್ತು ಮಂದಿಯಿಂದ ತುಂಬಿ ತುಳುಕುತ್ತಿದ್ದ ಬಿಗ್ ಬಾಸ್ ಮನೆ ಈಗ ಬಣಬಣ ಎನ್ನುತ್ತಿದೆ. ಫಿನಾಲೆಗೆ ಇನ್ನು ಕೇವಲ ಒಂದೇ ಒಂದು ವಾರ ಇದ್ದು ಮನೆಮಂದಿ ಹೇಗಾದರೂ ಮಾಡಿ ಇನ್ನೊಂದು ವಾರ ತಳ್ಳಿಬಿಟ್ಟರೆ ಸಾಕು ಎಂಬಂತೆ ಕಾಯುತ್ತಿದ್ದಾರೆ.
Vijaya Karnataka Web kishen bilagali in bigg boss house jumps swimming pool with deepika das
ಬಿಗ್ ಬಾಸ್ ಮನೆಯಲ್ಲಿ ಕಿಶನ್ ಪ್ರತ್ಯಕ್ಷ; ದೀಪಿಕಾ ದಾಸ್ ಜೊತೆ ಸ್ವಿಮ್ಮಿಂಗ್!


ಈ ಹೊತ್ತಲ್ಲೇ ಮನೆ ಮಂದಿಗೆ ಬಿಗ್ ಬಾಸ್ ಅಚ್ಚರಿಯೊಂದನ್ನು ನೀಡಿದ್ದಾರೆ. ಮರಳಿ ಬಿಗ್ ಬಾಸ್ ಗೂಡಿಗೆ ಎಲ್ಲ ಹಕ್ಕಿಗಳು ಬಂದಿವೆ. ಎಲಿಮಿನೇಟ್ ಆಗಿ ಹೋಗಿದ್ದ ಎಲ್ಲರೂ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಕಿಶನ್ ಬಿಳಗಲಿ ಬಿಗ್ ಬಾಸ್ ಮನೆಗೆ ಅಡಿಯಿಟ್ಟಿದ್ದು ಎಲ್ಲರ ಜೊತೆಗೂ ಆಡಿ ಕುಣಿದಿದ್ದಾರೆ. ಅಷ್ಟೇ ಅಲ್ಲ ದೀಪಿಕಾ ದಾಸ್‌ರನ್ನು ಕರೆದೊಯ್ದು ಈಜುಕೊಳಕ್ಕೆ ಜಿಗಿದಿದ್ದಾರೆ. ಒಟ್ಟಾರೆ ಆರಂಭದ ದಿನ ಇದ್ದ ಸಂಭ್ರಮ ಮತ್ತೊಮ್ಮೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದೆ.

ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಟ್ ಆದ ಸದಸ್ಯರು

ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ. ಈ ಹಿಂದಿನ ಸೀಸನ್‌ಗಳಲ್ಲಿ ಎಲಿಮಿನೇಟ್ ಆದ ಅಷ್ಟೂ ಮಂದಿ ಮನೆಗೆ ಮತ್ತೊಮ್ಮೆ ಬಂದಿರಲಿಲ್ಲ. ಆದರೆ ಇದೇ ಮೊದಲ ಸಲ ಎಲ್ಲರೂ ಮತ್ತೆ ರೀ ಎಂಟ್ರಿ ನೀಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಬಿಗ್ ಬಾಸ್ ವೇದಿಕೆ ಮೇಲೆ ಅಪ್ಪನ ನೆನೆದು ಭಾವುಕರಾದ ಪ್ರಿಯಾಂಕಾ

ದೀಪಿಕಾ ಜೊತೆ ಕಿಶನ್ ಬಿಳಗಲಿ ಈಜಾಟ

ಇನ್ನೊಂದು ವಿಶೇಷ ಎಂದರೆ ಕಿಶನ್ ಬಿಳಗಲಿ ಅವರು ಸಿಕ್ಕಿದ್ದೇ ಚಾನ್ಸ್ ಎಂಬಂತೆ ಮತ್ತೊಮ್ಮೆ ದೀಪಿಕಾ ದಾಸ್ ಜೊತೆಗೆ ಈಜುಕೊಳಕ್ಕೆ ಜಿಗಿದಿರುವ ವಿಡಿಯೋ ಸಹ ಗಮನಸೆಳೆದಿದೆ. ಸೋಮವಾರ ರಾತ್ರಿ ಇದೆಲ್ಲವನ್ನೂ ಕಿರುತೆರೆ ವೀಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇದ್ದು ಮನೆ ಮಂದಿ ಆತಂತಕದಲ್ಲೇ ಇದ್ದಾರೆ.

ಮಿಡ್ ವೀಕ್ ಎಲಿಮಿನೇಷನ್? ಯಾರಿಗೆ ಗೇಟ್ ಪಾಸ್

ಫಿನಾಲೆ ವಾರದಲ್ಲಿ ಮಿಡ್ ವೀಕ್ ಎಲಿಮಿನೇಷನ್ ಮೂಲಕ ಮನೆಯಿಂದ ಯಾರು ಹೋಗಲಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ವಾಸುಕಿ ವೈಭವ್ ಟಿಕೆಟ್ ಟು ಫಿನಾಲೆ ಗೆದ್ದಿದ್ದು ನೇರವಾಗಿ ಫಿನಾಲೆ ಹಂತದ ತನಕ ಇರುತ್ತಾರೆ. ಉಳಿದ ಐದು ಮಂದಿಯಲ್ಲಿ ಅಂದರೆ ಶೈನ್ ಶೆಟ್ಟಿ, ಕುರಿ ಪ್ರತಾಪ್, ದೀಪಿಕಾ ದಾಸ್, ಹರೀಶ್ ರಾಜ್ ಹಾಗೂ ಭೂಮಿ ಶೆಟ್ಟಿ ಯಾರು ಹೊರಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ