ಆ್ಯಪ್ನಗರ

'ಬಿಗ್ ಬಾಸ್‌ ಕನ್ನಡ ಸೀಸನ್‌ 7'ಗೆ ಎಂಟ್ರಿ ಕೊಡ್ತಾರಂತೆ ದರ್ಶನ್ ನಾಯಕಿ, ಪ್ರಖ್ಯಾತ ಹಾಸ್ಯ ನಟ

'ಬಿಗ್‌ಬಾಸ್‌ ಕನ್ನಡ ಸೀಸನ್ 7' ಕಾರ್ಯಕ್ರಮಕ್ಕೆ ಯಾರೆಲ್ಲ ಸ್ಪರ್ಧಿಗಳಾಗುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಿಗಿರಬಹುದು. ಈ ಬಗ್ಗೆ ಈಗ ಒಂದು ಮಾಹಿತಿ ಸಿಕ್ಕಿದೆ. ಬಿಗ್‌ಬಾಸ್‌ ಎಂಟ್ರಿ ನೀಡುವ ಒಂದು ಹಾಸ್ಯ ನಟ, ನಟಿಯ ಹೆಸರು ಕೇಳಿಬರುತ್ತಿದೆ.

Vijaya Karnataka Web 20 Sep 2019, 4:24 pm
'ಬಿಗ್ ಬಾಸ್ ಕನ್ನಡ ಸೀಸನ್ 7' ಅಕ್ಟೋಬರ್ 20ರಿಂದ ಶುರುವಾಗುತ್ತಿದೆ. ಆದರೆ ಸ್ಪರ್ಧಿಗಳಾರು ಎಂಬುದು ಬಹಿರಂಗವಾಗೋದಿಲ್ಲ. ಆದರೂ ಕೂಡ ಕೆಲವು ವ್ಯಕ್ತಿಗಳು ಬಿಗ್‌ಬಾಸ್ ಹೋಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದಾವುದು ಅಧಿಕೃತವಲ್ಲ. ಆದರೆ ಸಂಭಾವ್ಯ ಅಭ್ಯರ್ಥಿಗಳು ನೇಹಾ ಪಾಟೀಲ್, ಅಗ್ನಿ, ಶರ್ಮಿಳಾ ಮಾಂಡ್ರೆ, ಕುರಿ ಪ್ರತಾಪ ಎನ್ನಲಾಗುತ್ತಿದೆ. ಶರ್ಮಿಳಾ ಮಾಂಡ್ರೆ ಬಿಗ್‌ಬಾಸ್‌ಗೆ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶರ್ಮಿಳಾ ಮಾಂಡ್ರೆ 'ಸಜನಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಶರ್ಮಿಳಾ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ 'ಕೃಷ್ಣ', ದರ್ಶನ್ ಜೊತೆಗೆ 'ನವಗ್ರಹ', ರಮೇಶ್ ಅರವಿಂದ ಜೊತೆಗೆ 'ವೆಂಕಟ ಇನ್ ಸಂಕಟ' ಮತ್ತು 'ಸ್ವಯಂವರ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ 'ಧನ್ ಧನಾ ಧನ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 'ಮೈಸೂರು ಮಸಾಲಾ, ದ ಯುಎಫ್‌ಒ ಇನ್ಸಿಡೆಂಟ್' ಸಿನಿಮಾಗಳಲ್ಲಿ ಪ್ರಸ್ತುತ ಅವರು ಅಭಿನಯಿಸಿದ್ದಾರೆ. ಗಾಳಿಪಟ 2 ಚಿತ್ರದಲ್ಲೂ ಕೂಡ ಅವರು ಅಭಿನಯಿಸುತ್ತಾರೆ ಎನ್ನಲಾಗಿತ್ತು. ಜೊತೆಗೆ ಸತೀಶ್ ನೀನಾಸಂ ಜೊತೆಗೆ ಶರ್ಮಿಳಾ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಶರ್ಮಿಳಾ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಕೆಲಸಗಳ ಮಧ್ಯೆ ಶರ್ಮಿಳಾ ಬಿಗ್‌ಬಾಸ್‌ಗೆ ಬರುತ್ತಾರಾ ಎಂಬ ಪ್ರಶ್ನೆ ಕಾಡಿದೆ. ಬಂದರೂ ಜೀವನದಲ್ಲಿ ಸ್ವಲ್ಪ ಬದಲಾವಣೆ ಬೇಕು ಎಂದು ಬರಬಹುದು.
Vijaya Karnataka Web bigboss


'ಬಿಗ್‌ಬಾಸ್‌ ಕನ್ನಡ ಸೀಸನ್ 7'ಗೆ ಎಂಟ್ರಿ ಕೊಡಲಿರುವ ಕನ್ನಡದ ನಟಿ ಇವರೇನೆ!!!

ಕುರಿ ಪ್ರತಾಪ್ ಕನ್ನಡದ ಪ್ರಖ್ಯಾತ ಹಾಸ್ಯನಟರು. ಮೂವತ್ತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕುರಿ ಪ್ರತಾಪ್ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ಸಿನಿಮಾದಲ್ಲಿ ಕುರಿ ಪ್ರತಾಪ್ ಕಾಣಿಸಿಕೊಳ್ಳುತ್ತಿದ್ದಾರೆ. 'ಕುರಿಗಳು ಸರ್ ಕುರಿಗಳು, ಮಜಾ ಟಾಕೀಸ್' ಶೋಗಳಿಂದಾಗಿ ಕುರಿ ಪ್ರತಾಪ್ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಮಜಾ ಟಾಕೀಸ್ ಮುಕ್ತಾಯ ಹಂತಕ್ಕೆ ಬಂದಿದೆ. ಕೊನೆಯ ಎಪಿಸೋಡ್‌ ಶೂಟ್ ಕೂಡ ಆಗಿದೆ. ಹೀಗಾಗಿ ಪ್ರತಾಪ್ ಬಿಗ್‌ಬಾಸ್‌ಗೆ ಎಂಟ್ರಿ ಕೊಡಬಹುದು. ಆದರೆ 'ಯುವರತ್ನ' ಚಿತ್ರೀಕರಣ ಮುಗಿದಿಲ್ಲ. ಕುರಿ ಪ್ರತಾಪ್ ಅವರ ಪಾತ್ರದ ಶೂಟ್ ಮುಗಿದಿದ್ದರೆ ಅವರು ಬಿಗ್‌ಬಾಸ್‌ಗೆ ಎಂಟ್ರಿ ಕೊಡಬಹುದು.

'ಬಿಗ್‌ಬಾಸ್ ಕನ್ನಡ ಸೀಸನ್ 7'ರ ಸ್ಪರ್ಧಿ ಈ ನಿರೂಪಕ; ಯಾರಿವರು?
'ಬಿಗ್ ಬಾಸ್ ಕನ್ನಡ ಸೀಸನ್ 6' ಆಂಡ್ರ್ಯೂಗೆ ಕೂಡಿಬಂತು ಕಂಕಣ ಭಾಗ್ಯ; ಹುಡುಗಿ ಯಾರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ