ಆ್ಯಪ್ನಗರ

BBK OTT: ನನ್ನಲ್ಲಿ ‘ದೇವಿ’ ಇದ್ದಾಳೆ ಎಂದಿದ್ದ ಸಾನ್ಯ ಅಯ್ಯರ್ ಬಗ್ಗೆ ಸೋಮಣ್ಣ ಮಾಚಿಮಾಡ ವ್ಯಂಗ್ಯ!

ಸಾನ್ಯ ಅಯ್ಯರ್ ಅವರನ್ನ ‘ಬಿಗ್ ಬಾಸ್’ ಸ್ಪರ್ಧಿಗಳು ಆಡಿಕೊಂಡು ನಕ್ಕಿದ್ದಾರೆ. ಸಾನ್ಯ ಅಯ್ಯರ್ ಬಗ್ಗೆ ಸೋಮಣ್ಣ ಮಾಚಿಮಾಡ ವ್ಯಂಗ್ಯವಾಡಿದ್ದಾರೆ.

Authored byಹರ್ಷಿತಾ ಎನ್ | Vijaya Karnataka Web 22 Aug 2022, 11:49 am

ಹೈಲೈಟ್ಸ್‌:

  • ‘ಐ ಫೆಲ್ಟ್ ದೇವಿ ಇನ್ ಮಿ’ ಅಂತ ಹೇಳಿದ್ದ ಸಾನ್ಯ ಅಯ್ಯರ್
  • ಬೆಳ್ಳಗಿರೋದೆಲ್ಲಾ ಹಾಲಲ್ಲ ಎಂದ ಸೋಮಣ್ಣ ಮಾಚಿಮಾಡ
  • ಸಾನ್ಯ ಅಯ್ಯರ್ ಬಗ್ಗೆ ಸೋಮಣ್ಣ ಮಾಚಿಮಾಡ ವ್ಯಂಗ್ಯ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web let her take my pain also says somanna machimada on sanya iyer in bigg boss kannada ott 1
BBK OTT: ನನ್ನಲ್ಲಿ ‘ದೇವಿ’ ಇದ್ದಾಳೆ ಎಂದಿದ್ದ ಸಾನ್ಯ ಅಯ್ಯರ್ ಬಗ್ಗೆ ಸೋಮಣ್ಣ ಮಾಚಿಮಾಡ ವ್ಯಂಗ್ಯ!
ಅದು ವಾರದ ಹಿಂದಿನ ಘಟನೆ… ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ಮೊದಲ ಕ್ಯಾಪ್ಟೆನ್ಸಿ ಟಾಸ್ಕ್ ಚಾಲ್ತಿಯಲ್ಲಿತ್ತು. ಕ್ಯಾಪ್ಟನ್ ರೇಸ್‌ನಲ್ಲಿ ನಟ ಅರ್ಜುನ್ ರಮೇಶ್ ಕೂಡ ಇದ್ದರು. ಟಾಸ್ಕ್ ವೇಳೆ ಅರ್ಜುನ್ ರಮೇಶ್ ಅವರ ಭುಜಕ್ಕೆ ಪೆಟ್ಟು ಬಿತ್ತು. ಆಗ ನೋವಿನಿಂದ ಕೂತಿದ್ದ ಅರ್ಜುನ್ ರಮೇಶ್ ಮೇಲೆ ಕೈ ಇಟ್ಟು, ‘’ಎರಡು ದಿನದಲ್ಲಿ ಸರಿ ಹೋಗುತ್ತೆ’’ ಅಂತ ಸಾನ್ಯ ಅಯ್ಯರ್ ಹೇಳಿದ್ದರು. ಜೊತೆಗೆ, ‘’ಐ ಫೆಲ್ಟ್ ದೇವಿ ಇನ್ ಮಿ’’ ಎಂದಿದ್ದರು ಸಾನ್ಯ ಅಯ್ಯರ್.
ಈಗ ಇದೇ ಘಟನೆ ಬಗ್ಗೆ ‘ಬಿಗ್ ಬಾಸ್’ ಮನೆಯಲ್ಲಿ ಚರ್ಚೆ ನಡೆದಿದೆ. ಸಾನ್ಯ ಅಯ್ಯರ್ ಅವರನ್ನ ‘ಬಿಗ್ ಬಾಸ್’ ಸ್ಪರ್ಧಿಗಳು ಆಡಿಕೊಂಡು ನಕ್ಕಿದ್ದಾರೆ. ಸಾನ್ಯ ಅಯ್ಯರ್ ಬಗ್ಗೆ ಸೋಮಣ್ಣ ಮಾಚಿಮಾಡ ವ್ಯಂಗ್ಯವಾಡಿದ್ದಾರೆ.

Saanya Iyer: ಮಲತಂದೆ ಮಾಡಿದ ಕೀಳು ಕೆಲಸದ ಬಗ್ಗೆ ಕಣ್ಣೀರು ಹಾಕುತ್ತಾ ಬಾಯ್ಬಿಟ್ಟ ಸಾನ್ಯ ಅಯ್ಯರ್
ಅರ್ಜುನ್ ರಮೇಶ್‌ಗೆ ಪೆಟ್ಟು ಬಿದ್ದಾಗ…
ಭುಜಕ್ಕೆ ಪೆಟ್ಟು ಬಿದ್ದು ಅರ್ಜುನ್ ರಮೇಶ್ ಕೂತಿದ್ದಾಗ.. ಅವರ ತಲೆ ಮೇಲೆ ಕೈ ಇಟ್ಟು ಕಣ್ಣೀರು ಸುರಿಸುತ್ತಿದ್ದರು ಸಾನ್ಯ ಅಯ್ಯರ್. ಆಗ, ‘’ಸಾನ್ಯ ಅಯ್ಯರ್ ಹೀಲಿಂಗ್ ಮಾಡ್ತಿದ್ದಾರೆ. ಸಾನ್ಯ ಅಳ್ತಿಲ್ಲ. ಹೀಲಿಂಗ್ ಮಾಡ್ತಿದ್ದಾರೆ, ನೋವನ್ನು ತೆಗೆದುಕೊಳ್ಳುತ್ತಿದ್ದಾರೆ’’ ಅಂತ ಉದಯ್ ಸೂರ್ಯ ಹೇಳಿದ್ದರು. ಈ ವೇಳೆ ಸಾನ್ಯ ಅಯ್ಯರ್ ಕಣ್ಣೀರಿಡುತ್ತಿದ್ದ ಅರಿವಾಗಿ ಅರ್ಜುನ್ ರಮೇಶ್ ಕೂಡ ಭಾವುಕರಾಗಿದ್ದರು.

ಇದೇ ಸಮಯದಲ್ಲಿ ಬಾತ್‌ರೂಮ್ ಏರಿಯಾಗೆ ಬಂದ ಸಾನ್ಯ ಅಯ್ಯರ್ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಹಾಗೇ, ಕಿರಣ್ ಯೋಗೇಶ್ವರ್ ಬಳಿ ಮಾತನಾಡುತ್ತಾ, ‘’ಅವರ (ಅರ್ಜುನ್ ರಮೇಶ್) ಎನರ್ಜಿ ನನ್ನ ದೇಹದಲ್ಲಿದೆ. ನಾನು ಎನರ್ಜಿ ಕೊಡಬೇಕಾದರೆ, ನಾನು ಅಳ್ತಿರ್ಲಿಲ್ಲ. ಎನರ್ಜಿ ಅಳು ಮೂಲಕ ಹೊರಗೆ ಬರುತ್ತಿತ್ತು. ಹೈ ವೈಬರೇಟ್ ಆಗುತ್ತಿರುವಾಗ ಅಳು ಬರುತ್ತೆ. I felt her in me. Her ಅಂದ್ರೆ.. ನಾನು ಎನರ್ಜಿ ಕೊಡಬೇಕಾದರೆ, ಐ ಫೆಲ್ಟ್ ‘ದೇವಿ’ ಇನ್ ಮಿ. Still in me. ಅದಕ್ಕೆ ನನಗೆ ಹೀಗೆ ಆಗುತ್ತಿದೆ. Unusual energy ಅಷ್ಟೇ’’ ಎಂದಿದ್ದರು ಸಾನ್ಯ ಅಯ್ಯರ್.

ಬಳಿಕ, ಅರ್ಜುನ್ ರಮೇಶ್ ಕೂತಿದ್ದ ಜಾಗಕ್ಕೆ ಬಂದು, ‘’ನಾನು ಅಳ್ತಿಲ್ಲ. ಟ್ರಸ್ಟ್ ಮಿ’’ ಅಂತ ಹೇಳುತ್ತಾ… ‘’ನಿಮಗೆ ಬ್ಲ್ಯೂ ಔರಾ ಇದೆ. ಶಿವನ ಔರಾ ಇದೆ. ಎರಡು ದಿನದಲ್ಲಿ ನೋವು ಪಕ್ಕಾ ಕಮ್ಮಿ ಆಗುತ್ತೆ’’ ಎಂದು ಸಾನ್ಯ ಅಯ್ಯರ್ ಹೇಳಿದರು. ಆಗ, ‘’ಕಮ್ಮಿ ಆಗದೇ ಹೋದರೂ, ನಿನಗೋಸ್ಕರ ಆಡುತ್ತೇನೆ’’ ಎಂದಿದ್ದರು ಅರ್ಜುನ್ ರಮೇಶ್.

BBK OTT: ‘ನಿನ್ನ ಕಾಲಿಗೆ ಬಿದ್ದು ಬಹಿರಂಗವಾಗಿ ಕ್ಷಮೆ ಕೇಳ್ತೀನಿ’: ಎರಡನೇ ಮದುವೆ ವಿಚಾರಕ್ಕೆ ಮೊದಲ ಪತ್ನಿ ಬಗ್ಗೆ ನಟ ಅರ್ಜುನ್ ರಮೇಶ್ ಮಾತು!
ಈಗ ಅರ್ಜುನ್ ರಮೇಶ್ ಹೇಳಿದ್ದೇನು?
ವಾರದ ಹಿಂದೆ ನಡೆದಿದ್ದ ಘಟನೆಯ ಬಗ್ಗೆ ಮಾತನಾಡುತ್ತಾ ‘’ಒಬ್ಬರು ಇಲ್ಲಿ ದೇವರು ಬರುತ್ತೆ ಅಂತಾರೆ. ಇನ್ನೊಬ್ಬರು ದೇವರ ಜೊತೆ ಮಾತನಾಡ್ತೀನಿ ಅಂತಾರೆ’’ ಎನ್ನುತ್ತಾ ಅರ್ಜುನ್ ರಮೇಶ್ ನಗುತ್ತಿದ್ದರು. ಈ ವೇಳೆ ಸೋಮಣ್ಣ ಮಾಚಿಮಾಡ ಏನಂದರು ಗೊತ್ತಾ?

BBK OTT: ವಿಚ್ಛೇದನ ಪಡೆದಿದ್ದರೂ ಅವಳ ಬಿಟ್ಟು ಬದುಕೋಕೆ ಆಗ್ತಿಲ್ಲ: ಕಣ್ಣೀರು ಹಾಕಿದ ಸೋಮಣ್ಣ ಮಾಚಿಮಾಡ!
ಸೋಮಣ್ಣ ಮಾಚಿಮಾಡ ವ್ಯಂಗ್ಯ
‘’ಅವತ್ತು… ನಿಮ್ಮನ್ನ (ಅರ್ಜುನ್ ರಮೇಶ್) ಹಿಡ್ಕೊಂಡು ಅವರಿಗೆ (ಸಾನ್ಯ ಅಯ್ಯರ್) ಕಣ್ಣೀರು ಬಂದುಬಿಡ್ತು. ಆಗ ಅವರು ಒಂದು ಮಾತು ಹೇಳಿದ್ದರು… ಏನೂ ಆಗಲ್ಲ 2 ದಿನಕ್ಕೆ ಎಲ್ಲಾ ಸರಿ ಹೋಗುತ್ತೆ ಅಂತ.. ಡಾಕ್ಟರ್ ಬಂದರೂ ಎರಡು ದಿನಕ್ಕೆ ವಾಸಿ ಆಗಲಿಲ್ಲ. ಅಯ್ಯೋ ಸ್ವಾಮಿ…’’

‘’ಎಲ್ಲಾ ಪೇನ್‌ನ ಎಳ್ಕೊಂಡ್ರಂತೆ.. ಫುಲ್ ಪೇನ್.. ನನಗೂ ಎಲ್ಲಾ ಕಡೆ ಪೇನ್ ಇದೆ. ದಯವಿಟ್ಟು ಎಳ್ಕೊಳ್ಳಿ.. ನಾನೂ ಪೇಮೆಂಟ್ ಕೊಡ್ತೀನಿ’’ ಎಂದು ಸೋಮಣ್ಣ ಮಾಚಿಮಾಡ ಹೇಳಿದರು. ಆಗ, ‘’ಅದೊಂದು ವಿದ್ಯೆ ಇದೆ’’ ಎಂದು ಅಕ್ಷತಾ ಹೇಳಿದಾಗ, ‘’ಇರಬಹುದು. ಆದರೆ, ಅದನ್ನ ಮಾಡಿಬಿಟ್ಟು ಸುಮ್ಮನೆ ಆಗಿಬಿಡಬೇಕು. ಆದರೆ, ಸ್ಟೇಟ್‌ಮೆಂಟ್ ಮಾಡಬಾರದು… 2 ದಿನದಲ್ಲಿ ಸರಿ ಹೋಗುತ್ತೆ ಅಂತ. ಕಣ್ಣೀರು ಹಾಕಿದ ತಕ್ಷಣ ಎಲ್ಲರೂ ಏನೂ ಇಂಪ್ರೆಸ್ ಆಗಲ್ಲ. ಬೆಳ್ಳಗಿರೋದೆಲ್ಲಾ ಹಾಲು ಅಲ್ಲ. ನನಗೆ ತುಂಬಾ ಚೆನ್ನಾಗಿ ಗೊತ್ತು’’ ಎಂದರು ಸೋಮಣ್ಣ ಮಾಚಿಮಾಡ. ಈ ಸಮಯದಲ್ಲಿ ಚೈತ್ರಾ, ಜಯಶ್ರೀ ಆರಾಧ್ಯ ನಗುತ್ತಿದ್ದರು.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ