ಆ್ಯಪ್ನಗರ

ಬಿಗ್‌ ಬಾಸ್‌ ಮನೆಯೊಳಗೆ ದೈಹಿಕ ಹಲ್ಲೆ ನಡೆಸಿ ಎಲಿಮಿನೇಟ್‌ ಆದ ಮಹಿಳಾ ಸ್ಪರ್ಧಿ! ಘಟನೆ ಹಿಂದಿನ ಅಸಲಿ ಕಹಾನಿ ಬಿಚ್ಚಿಟ್ಟ ನಟಿ!!

ಬಿಗ್‌ ಬಾಸ್‌ ನಿಯಮದ ಪ್ರಕಾರ ಯಾವ ಸದಸ್ಯರೂ ಇನೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವಂತಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದರೆ, ಕೂಡಲೇ ಅವರನ್ನು ಎಲಿಮಿನೇಟ್‌ ಮಾಡಲಾಗುತ್ತದೆ.

Vijaya Karnataka Web 20 Jan 2020, 8:04 pm
ಬಿಗ್‌ ಬಾಸ್‌ನಲ್ಲಿ ಯಾರೂ ನಿರೀಕ್ಷಿಸಿರದ ಘಟನೆ ನಡೆದೇ ಬಿಟ್ಟಿದೆ. ಸಹ ಸ್ಪರ್ಧಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ತಪ್ಪಿಗಾಗಿ ಮಹಿಳಾ ಸ್ಪರ್ಧಿಯನ್ನು ಮನೆಯಿಂದ ಹೊರಹಾಕಲಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ಹೋದ ಬಳಿಕ ಈ ಘಟನೆ ನಡೆದಿದೆ. ಬಿಗ್‌ ಬಾಸ್‌ ನಿಯಮದ ಪ್ರಕಾರ ಯಾವ ಸದಸ್ಯರೂ ಇನೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವಂತಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದರೆ, ಕೂಡಲೇ ಅವರನ್ನು ಎಲಿಮಿನೇಟ್‌ ಮಾಡಲಾಗುತ್ತದೆ. ಅಚ್ಚರಿ ಎಂದರೆ ಈ ಬೆಳವಣಿಗೆಯಲ್ಲಿ ಇಬ್ಬರನ್ನೂ ಮನೆಯಿಂದ ಹೊರಹಾಕಲಾಗಿದೆ!
Vijaya Karnataka Web madhurima assaults vishal in bigg boss house
ಬಿಗ್‌ ಬಾಸ್‌ ಮನೆಯೊಳಗೆ ದೈಹಿಕ ಹಲ್ಲೆ ನಡೆಸಿ ಎಲಿಮಿನೇಟ್‌ ಆದ ಮಹಿಳಾ ಸ್ಪರ್ಧಿ! ಘಟನೆ ಹಿಂದಿನ ಅಸಲಿ ಕಹಾನಿ ಬಿಚ್ಚಿಟ್ಟ ನಟಿ!!


​ಸಣ್ಣ ವಿಚಾರಕ್ಕೆ ಶುರುವಾದ ಜಗಳ

ಬಿಗ್‌ ಬಾಸ್‌ ಮನೆಯಲ್ಲಿ ಸಣ್ಣ ಪುಟ್ಟ ಜಗಳ ನಡೆಯುವುದು ಸಹಜ. ಆದರೆ ಆ ಯಾವ ವಿಷಯವೂ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಬಾರದು. ಇತ್ತೀಚೆಗೆ ಹಿಂದಿ ಬಿಗ್‌ ಬಾಸ್‌ ಸ್ಪರ್ಧಿಗಳಾದ ಮಧುರಿಮಾ ಮತ್ತು ವಿಶಾಲ್‌ ನಡುವೆ ಇಂಥದ್ದೇ ಜಗಳ ನಡೆಯಿತು. ಆದರೆ ಅದು ಅಷ್ಟಕ್ಕೇ ನಿಲ್ಲಲಿಲ್ಲ. ಪ್ರತಿ ವಾಗ್ವಾದದ ನಂತರವೂ ಅದು ವಿಕೋಪಕ್ಕೆ ಹೋಗತೊಡಗಿತು. ನೋಡನೋಡುತ್ತಿದ್ದಂತೆಯೇ ವಿಶಾಲ್‌ ಸಿಟ್ಟು ಹೆಚ್ಚಾಯಿತು. ಆಗ ಅವರು ಕೊಂಚ ಅತಿರೇಕದಿಂದಲೇ ವರ್ತಿಸಿದರು.

​ಮಧುರಿಮಾ ಮುಖಕ್ಕೆ ನೀರು ಎರಚಿದ ವಿಶಾಲ್‌

ಇನ್ನೇನು ಜಗಳ ತಣ್ಣಗಾಗಬಹುದು ಎಂದುಕೊಳ್ಳುತ್ತಿರುವಾಗಲೇ ವಿಶಾಲ್‌ ಸುಮ್ಮನಾಗಲಿಲ್ಲ. ಒಂದು ಬಾಟಲಿಯಲ್ಲಿ ನೀರು ಹಿಡಿದುಕೊಂಡು ಬಂದು ಮಧುರಿಮಾ ಅವರ ತಲೆ ಮೇಲೆ ಸುರಿಯಲು ಆರಂಭಿಸಿದರು. ಅವರಿಂದ ತಪ್ಪಿಸಿಕೊಳ್ಳಲು ಮಧುರಿಮಾ ಸಾಧ್ಯವಾದಷ್ಟು ಪ್ರಯತ್ನಿಸಿದರು. ಮತ್ತೆ ಅದನ್ನೇ ಮುಂದುವರಿಸಿದ ವಿಶಾಲ್‌ ನೇರವಾಗಿ ಮಧುರಿಮಾ ಮುಖಕ್ಕೆ ನೀರು ಸೋಕಿದರು. ಇದನ್ನು ಸಹಿಸಿಕೊಳ್ಳಲು ಮಧುರಿಮಾಗೆ ಸಾಧ್ಯವಾಗಲೇ ಇಲ್ಲ. ಇದರಿಂದ ಸಿಟ್ಟಿಗೆದ್ದ ಅವರು ದೈಹಿಕ ಹಲ್ಲೆಗೆ ಮುಂದಾದರು.

​ಸಿಟ್ಟಿಗೆದ್ದ ಮಧುರಿಮಾ ಅವರಿಂದ ಹಲ್ಲೆ!

ಇಷ್ಟೆಲ್ಲ ನಡೆಯುತ್ತಿದ್ದಂತೆಯೇ ಮಧುರಿಮಾ ಕೋಪ ನೆತ್ತಿಗೇರಿತು. ಮನೆಯ ಸದಸ್ಯರು ಎಷ್ಟೇ ಪ್ರಯತ್ನಿಸಿದರೂ ಅವರು ಸುಮ್ಮನಾಗಲೇ ಇಲ್ಲ. ಕೂಡಲೇ ಅಡುಗೆ ಮನೆಗೆ ತೆರಳಿ, ಅಲ್ಲಿ ಕೈಗೆ ಸಿಕ್ಕಿದ ಪಾತ್ರೆಯನ್ನು ತೆಗೆದುಕೊಂಡು ವಿಶಾಲ್‌ಗೆ ಮನ ಬಂದಂತೆ ಹೊಡೆದಿದ್ದಾರೆ. ಮನೆಯ ಸದಸ್ಯರೆಲ್ಲರೂ ತಕ್ಷಣ ಆಗಮಿಸಿ, ಇಬ್ಬರನ್ನೂ ದೂರಕ್ಕೆ ಎಳೆದುಕೊಂಡ ನಂತರವೇ ಗಲಾಟೆ ತಣ್ಣಗಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಪರಿಸ್ಥಿತಿ ಕೈ ಮೀರಿತ್ತು. ಸಹ ಸ್ಪರ್ಧಿಯ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಅವರು ಎಲಿಮಿನೇಟ್‌ ಆಗಲೇ ಬೇಕಾಯಿತು.

ಜೈಲು ಶಿಕ್ಷೆ ಬಳಿಕ ಎಲಿಮಿನೇಷನ್‌

ಇಂಥ ವರ್ತನೆ ತೋರಿದ್ದಕ್ಕಾಗಿ ಮಧುರಿಮಾ ಹಾಗೂ ವಿಶಾಲ್‌ಗೆ ಬಿಗ್‌ ಬಾಸ್‌ ಕಠಿಣ ಶಿಕ್ಷೆ ನೀಡಿದರು. ಬಿಗ್‌ ಬಾಸ್‌ ಮನೆಯೊಳಗೆ ಇರುವ ಜೈಲ್‌ ಸೆಟ್‌ನಲ್ಲಿ ಇಬ್ಬರನ್ನೂ ಇರಿಸಲಾಯಿತು. ನಂತರ ವಾರಾಂತ್ಯದ ಎಪಿಸೋಡ್‌ನಲ್ಲಿ ಕಾರ್ಯಕ್ರಮದ ನಿರೂಪಕ ಸಲ್ಮಾನ್‌ ಖಾನ್‌ ಈ ವಿಷಯ ತಿಳಿದು ಕೆಂಡಾಮಂಡಲವಾದರು. ಇಬ್ಬರನ್ನೂ ಬಿಗ್‌ ಬಾಸ್‌ ಮನೆಯಿಂದ ಹೊರ ಹಾಕಿದರು. ಅಚ್ಚರಿ ಎಂದರೆ, ಮಧುರಿಮಾ ಮತ್ತು ವಿಶಾಲ್‌ ಮಾಜಿ ಪ್ರೇಮಿಗಳು! ಆ ಕಾರಣದಿಂದಲೂ ಮನೆಯೊಳಗೆ ಇಬ್ಬರ ನಡುವೆ ಜಗಳ ಆಗುತ್ತಿತ್ತು.

ಯಾಕೆ ಹೀಗೆ ಮಾಡಿದರು ಮಧುರಿಮಾ?

ಮನೆಯಿಂದ ಹೊರಬಂದ ಬಳಿಕ ಈ ಘಟನೆ ಬಗ್ಗೆ ಮಧುರಿಮಾ ಪ್ರತಿಕ್ರಿಯೆ ನೀಡಿದ್ದಾರೆ. 'ಅವನು ತಮಾಷೆ ಮಾಡಿದಾಗ ನಾನು ಅದನ್ನು ನಗುನಗುತ್ತಾ ಸ್ವೀಕರಿಸುತ್ತಿದ್ದೆ. ಆದರೆ ನಾನು ತಮಾಷೆ ಮಾಡಿದರೆ ಅವನು ಸಿಟ್ಟಾಗುತ್ತಿದ್ದ. ಕೆಟ್ಟ ಪದಗಳಿಂದ ನನ್ನನ್ನು ಬಯ್ಯತ್ತಿದ್ದ. ಆ ಕಾರಣದಿಂದಲೇ ನಾನು ಈ ರೀತಿ ಮಾಡಬೇಕಾಯಿತು' ಎಂದು ಮಧುರಿಮಾ ವಿವರಣೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ