ಬಿಗ್ ಬಾಸ್ ಕನ್ನಡ ಆರನೇ ಸೀಸನ್ ಮುಕ್ತಾಯ ಹಂತಕ್ಕೆ ಬಂದಿದೆ. ಭಾನುವಾರ ರಾತ್ರಿ 8ಕ್ಕೆ ಆರಂಭವಾಗಲಿರುವ ಗ್ರ್ಯಾಂಡ್ ಫಿನಾಲೆ ರಾತ್ರಿ ಸುಮಾರು 11-12ರ ಹೊತ್ತಿಗೆ ಮುಗಿಯಲಿದೆ. ಈ ಬಾರಿ ಅಂತಿಮ ಹಣಾಹಣಿಯಲ್ಲಿ ಶಶಿ ಕುಮಾರ್, ನವೀನ್ ಸಜ್ಜು ಹಾಗೂ ಕವಿತಾ ಗೌಡ ಇದ್ದಾರೆ. ಈ ಮೂವರಲ್ಲಿ ವಿನ್ನರ್ ಯಾರು ರನ್ನರ್ ಅಪ್ ಯಾರು ಎಂಬುದು ಗೊತ್ತಾಗಬೇಕಾದರೆ ಕೆಲವು ಗಂಟೆ ಕಾಯಲೇಬೇಕು.
ಒಟ್ಟು 97 ದಿನಗಳ ಕಾಲ ನಡೆದ ಶೋನಲ್ಲಿ ಕೆಲವೊಂದು ಮರಯಲಾಗದ ಘಟನೆಗಳು ನಡೆದಿವೆ. ಒಂದು ಮನೆ ಎಂದ ಮೇಲೆ ಗಲಾಟೆ, ಜಗಳ, ಮನಸ್ತಾಪ, ಮುನಿಸು, ಗುಂಪುಗಾರಿಕೆ...ಹೀಗೆ ಎಲ್ಲದಕ್ಕೂ ಬಿಗ್ ಬಾಸ್ ಮನೆ ವೇದಿಕೆಯಾಯಿತು. ಇಲ್ಲಿವೆ ನೋಡಿ ಮನೆಯಲ್ಲಿ ನಡೆದ ಕೆಲವು ಘಟನೆಗಳು.
ಬಿಗ್ ಮನೆಗೆ ಕಳೆ ತಂದ ಕುಟುಂಬ ಸದಸ್ಯರು
ಬಿಗ್ ಮನೆಗೆ ಮೊದಲಿಗೆ ಎಂಟ್ರಿ ಕೊಟ್ಟವರು ನವೀನ್ ತಾಯಿ ಸುಮಿತ್ರಾ. ಬಂದ ಸಮಯದಿಂದಲೂ ಎಲ್ಲರೊಂದಿಗೆ ಅತ್ಯಂತ ಆತ್ಮೀಯವಾಗಿ ಇದ್ದ ಸುಮಿತ್ರಾ ಲವಲವಿಕೆಯಿದ್ದ ಇದ್ದರು. ತಾಯಿಯ ಮೇಲಿನ ಹಾಡು ಹಾಡಿ ನವೀನ್ ಎಲ್ಲರ ಕಣ್ಣಿನಲ್ಲೂ ನೀರು ತರಿಸಿದರು.
ನಂತರ ಬೆಳ್ಳಿ ಮೂಡಿತೋ ಹಾಡನ್ನು ಸುಮಿತ್ರಾ ಅವರು ಸ್ಪರ್ಧಿಗಳೊಂದಿಗೆ ಹಾಡಿ ಸಂಭ್ರಮಿಸಿದರು. ನಂತರ ಬಿಗ್ ಮನೆಗೆ ಎಂಟ್ರಿಕೊಟ್ಟವರು ಶಶಿ ಸಹೋದರ ಸತೀಶ್ ಮತ್ತು ಧ್ರುವ.
ಮಗುವಿನ ಜತೆ ಎಲ್ಲರೂ ಮುದ್ದಾಡಿದರು. ಶಶಿ ಮಾತ್ರ ಮಗುವನ್ನು ಎತ್ತಿಕೊಂಡೇ ಇದ್ದುದು ಇಬ್ಬರ ನಡುವಿನ ಸಂಬಂಧಕ್ಕೆ ಸಾಕ್ಷಿಯಾಗಿತ್ತು. ನಂತರ ಮನೆಗೆ ಬಂದವರು ಅಕ್ಷತಾ ತಾಯಿ ಅಂಬುಜಮ್ಮ. ಸ್ವಲ್ಪ ಹೊತ್ತು ಆಟ ಆಡಿಸಿದ ನಂತರ ಬಿಗ್ ಮನೆಗೆ ಬಂದು ಮಗಳನ್ನು ತಬ್ಬಿಕೊಂಡು ಅತ್ತರು ಅಂಬುಜಮ್ಮ. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
ಸೂಪರ್ ಟಾಸ್ಕ್ ಸೂಪರ್ ಸ್ಪರ್ಧೆ
ಬಿಗ್ಬಾಸ್ ಲಕ್ಸುರಿ ಟಾಸ್ಕ್ ನೀಡಿದರು. ಕಾರು ಇರುವ ಜಾಗದ ಗೇಟ್ ಬೀಗ ತೆಗೆಯುವ ಟಾಸ್ಕ್ ನೀಡಲಾಗಿತ್ತು. ಅದರಂತೆ ಇಬ್ಬಿಬ್ಬರನ್ನು ಜೋಡಿ ಮಾಡಲಾಗಿತ್ತು. ಆಂಡಿ-ರಾಕೇಶ್, ಶಶಿ-ಅಕ್ಷತಾ, ನವೀನ್-ರಶ್ಮಿ, ಧನರಾಜ್-ಕವತಾ ಜೋಡಿಯಾಗಿದ್ದರು. ಇದರ ಪ್ರಕಾರ ಈಜುಕೊಳದ ಒಳಗೆ ಇರುವ ಕೀಯನ್ನು ಒಬ್ಬರು ತೆಗೆದುಕೊಟ್ಟು ಮತ್ತೊಬ್ಬರು ಅದರಿಂದ ಬಾಕ್ಸ್ ತೆಗೆಯಬೇಕಾಯಿತು. ಅದರಲ್ಲಿರುವ ಬಾಕ್ಸ್ನಲ್ಲಿರುವ ಕೀಯಿಂದ ಗೇಟ್ ತೆಗೆದುಕೊಳ್ಳಬೇಕಾಯಿತು. ಈ ಟಾಸ್ಕ್ನಲ್ಲಿ ಧನರಾಜ್-ಕವಿತಾ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿದರು. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
ಬಿಗ್ ಮನೆಗೆ ಎಂಟ್ರಿ ಕೊಟ್ಟ ಸುದೀಪ್
ಹೆಚ್ಚಾಗಿ ಸ್ಪರ್ಧಿಗಳಿಗೆ ಖುಷ್ ಆಗಿದ್ದು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದು ಸುದೀಪ್ ಅವರಿಂದ. ಮನೆಯಲ್ಲಿ ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿದ್ದಾಗ ಸುದೀಪ್ ಎಂಟ್ರಿ ಕೊಟ್ಟರು.
ಇದರಿಂದ ಮನೆಯಲ್ಲಿದ್ದ ಎಲ್ಲರೂ ಥ್ರಿಲ್ ಆದರು. ಸುದೀಪ್ರನ್ನು ತಬ್ಬಿಕೊಂಡು ತಮ್ಮದೇ ಆದ ಶೈಲಿಯಲ್ಲಿ ಮೆಚ್ಚಿಸಲು ಮುಂದಾದರು. ಕಂಪ್ಲೀಟ್ ಡೀಟೇಲ್ಸ್.
ಬಿಗ್ ಬಾಸ್ ಮನೆಯಲ್ಲಿ ಎರಡು ವಿಕೆಟ್ ಪತನ
ಡಬಲ್ ಎಲಿಮಿನೇಷನ್ ಮೂಲಕ ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ಶಾಕ್ ನೀಡಿದ್ದಾರೆ. ಒಗ್ಗರಣೆ ಡಬ್ಬಿ ಮುರಳಿ ಹಾಗೂ ವೈಲ್ಡ್ಕಾರ್ಡ್ ಎಂಟ್ರಿ ಮೂಲಕ ಮನೆಗೆ ಅಡಿಯಿಟ್ಟಿದ್ದ ಜೀವಿತಾ ಈ ಸಲ ಮನೆಯಿಂದ ಹೊರಬಿದ್ದರು. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
ಅಂಬಿಗಾಗಿ ಕಂಬನಿ ಮಿಡಿದ ಸ್ಪರ್ಧಿಗಳು
ರೆಬೆಲ್ ಸ್ಟಾರ್ ನೆನಪಿನಲ್ಲಿ ಬಿಗ್ ವೇದಿಕೆಯಲ್ಲಿ ನಮನ. ಒಂದು ನಿಮಿಷ ಮೌನವನ್ನಾಚರಿಸಿ ಸ್ಪರ್ಧಿಗಳು ಅಂಬಿಗೆ ತಮ್ಮದೇ ರೀತಿಯಲ್ಲಿ ಗೌರವ ಸಲ್ಲಿಸಿದರು. ನಂತರ ಬಿಗ್ಬಾಸ್ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ವೊಂದನ್ನು ನೀಡಲಾಯಿತು. ಅಂಬಿಗೆ ಅಂತಿಮ ನಮನ ಸಲ್ಲಿಸಲು ಸೂಚಿಸಲಾಯಿತು. ಇದಕ್ಕಾಗಿ ಸ್ಪರ್ಧಿಗಳೆಲ್ಲರೂ ಅಂಬಿ ಅವರ ಚಿತ್ರದ ಗೀತೆಗಳು, ನೃತ್ಯವನ್ನು ಅಭ್ಯಾಸ ಮಾಡಿ ತಮ್ಮದೇ ರೀತಿಯಲ್ಲಿ ಪ್ರದರ್ಶನ ನೀಡಿದರು. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
ಹಾವಿನ ದ್ವೇಷ ಟಾಸ್ಕ್ನಲ್ಲಿ ಮಾತಿನ ಚಕಮಕಿಯ ರೋಷ
ಎವಿ ರವಿ ಹಾಗೂ ಆನಂದ್ಗೆ ಬಿಗ್ ಬಾಸ್ ಕೆಲವು ಸವಾಲುಗಳನ್ನು ನೀಡಿದರು. ಆದರೆ ಹಾವಿನ ದ್ವೇಷ ಆಟದಲ್ಲಿ ಆಟಕ್ಕಿಂತ ಸ್ಪರ್ಧಿಗಳ ನಡುವಿನ ಚರ್ಚೆಗೆ ಹೆಚ್ಚು ಒತ್ತು ನೀಡಿದಂತಿತ್ತು. ರಶ್ಮಿ ಮತ್ತು ಜಯಶ್ರಿ, ಕವಿತಾ ನಡುವೆ ಮೊಟ್ಟೆಯ ವಿಷಯವಾಗಿ ಭಾರಿ ಮಾತಿನ ಚಕಮಕಿಯೂ ನಡೆಯಿತು. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
ಮೊದಲನೇ ವಾರ ಮನೆಯಿಂದ ರಕ್ಷಿತಾ ಔಟ್!
ಮೊದಲ ವಾರ ಮನೆಯಿಂದ ಮೊದಲ ಎಲಿಮಿನೇಟರ್ ಆಗಿ ರಕ್ಷಿತಾ ಹೊರಹೋಗುತ್ತಿದ್ದಾರೆ ಎಂದು ಸುದೀಪ್ ಘೋಷಿಸಿದರು, ಇದರೊಂದಿಗೆ ಆನಂದ್ ಉಳಿದುಕೊಂಡಿದ್ದು, ಧೋನಿ ಫ್ಯಾನ್ ಎಂದು ಹೇಳಿಕೊಂಡಿದ್ದ ರಕ್ಷಿತಾ ಮನೆಯಿಂದ ಹೊರಹೋಗುತ್ತಿದ್ದಾರೆ. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
Also Read: Bigg Boss 6 Winner Prize: ವಿನ್ನರ್ಗೆಷ್ಟು, ರನ್ನರ್ಗೆಷ್ಟು ಸಿಗುತ್ತೆ?
ಒಟ್ಟು 97 ದಿನಗಳ ಕಾಲ ನಡೆದ ಶೋನಲ್ಲಿ ಕೆಲವೊಂದು ಮರಯಲಾಗದ ಘಟನೆಗಳು ನಡೆದಿವೆ. ಒಂದು ಮನೆ ಎಂದ ಮೇಲೆ ಗಲಾಟೆ, ಜಗಳ, ಮನಸ್ತಾಪ, ಮುನಿಸು, ಗುಂಪುಗಾರಿಕೆ...ಹೀಗೆ ಎಲ್ಲದಕ್ಕೂ ಬಿಗ್ ಬಾಸ್ ಮನೆ ವೇದಿಕೆಯಾಯಿತು. ಇಲ್ಲಿವೆ ನೋಡಿ ಮನೆಯಲ್ಲಿ ನಡೆದ ಕೆಲವು ಘಟನೆಗಳು.
ಬಿಗ್ ಮನೆಗೆ ಕಳೆ ತಂದ ಕುಟುಂಬ ಸದಸ್ಯರು
ಬಿಗ್ ಮನೆಗೆ ಮೊದಲಿಗೆ ಎಂಟ್ರಿ ಕೊಟ್ಟವರು ನವೀನ್ ತಾಯಿ ಸುಮಿತ್ರಾ. ಬಂದ ಸಮಯದಿಂದಲೂ ಎಲ್ಲರೊಂದಿಗೆ ಅತ್ಯಂತ ಆತ್ಮೀಯವಾಗಿ ಇದ್ದ ಸುಮಿತ್ರಾ ಲವಲವಿಕೆಯಿದ್ದ ಇದ್ದರು. ತಾಯಿಯ ಮೇಲಿನ ಹಾಡು ಹಾಡಿ ನವೀನ್ ಎಲ್ಲರ ಕಣ್ಣಿನಲ್ಲೂ ನೀರು ತರಿಸಿದರು.
ನಂತರ ಬೆಳ್ಳಿ ಮೂಡಿತೋ ಹಾಡನ್ನು ಸುಮಿತ್ರಾ ಅವರು ಸ್ಪರ್ಧಿಗಳೊಂದಿಗೆ ಹಾಡಿ ಸಂಭ್ರಮಿಸಿದರು. ನಂತರ ಬಿಗ್ ಮನೆಗೆ ಎಂಟ್ರಿಕೊಟ್ಟವರು ಶಶಿ ಸಹೋದರ ಸತೀಶ್ ಮತ್ತು ಧ್ರುವ.
ಮಗುವಿನ ಜತೆ ಎಲ್ಲರೂ ಮುದ್ದಾಡಿದರು. ಶಶಿ ಮಾತ್ರ ಮಗುವನ್ನು ಎತ್ತಿಕೊಂಡೇ ಇದ್ದುದು ಇಬ್ಬರ ನಡುವಿನ ಸಂಬಂಧಕ್ಕೆ ಸಾಕ್ಷಿಯಾಗಿತ್ತು. ನಂತರ ಮನೆಗೆ ಬಂದವರು ಅಕ್ಷತಾ ತಾಯಿ ಅಂಬುಜಮ್ಮ. ಸ್ವಲ್ಪ ಹೊತ್ತು ಆಟ ಆಡಿಸಿದ ನಂತರ ಬಿಗ್ ಮನೆಗೆ ಬಂದು ಮಗಳನ್ನು ತಬ್ಬಿಕೊಂಡು ಅತ್ತರು ಅಂಬುಜಮ್ಮ. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
ಸೂಪರ್ ಟಾಸ್ಕ್ ಸೂಪರ್ ಸ್ಪರ್ಧೆ
ಬಿಗ್ಬಾಸ್ ಲಕ್ಸುರಿ ಟಾಸ್ಕ್ ನೀಡಿದರು. ಕಾರು ಇರುವ ಜಾಗದ ಗೇಟ್ ಬೀಗ ತೆಗೆಯುವ ಟಾಸ್ಕ್ ನೀಡಲಾಗಿತ್ತು. ಅದರಂತೆ ಇಬ್ಬಿಬ್ಬರನ್ನು ಜೋಡಿ ಮಾಡಲಾಗಿತ್ತು. ಆಂಡಿ-ರಾಕೇಶ್, ಶಶಿ-ಅಕ್ಷತಾ, ನವೀನ್-ರಶ್ಮಿ, ಧನರಾಜ್-ಕವತಾ ಜೋಡಿಯಾಗಿದ್ದರು. ಇದರ ಪ್ರಕಾರ ಈಜುಕೊಳದ ಒಳಗೆ ಇರುವ ಕೀಯನ್ನು ಒಬ್ಬರು ತೆಗೆದುಕೊಟ್ಟು ಮತ್ತೊಬ್ಬರು ಅದರಿಂದ ಬಾಕ್ಸ್ ತೆಗೆಯಬೇಕಾಯಿತು. ಅದರಲ್ಲಿರುವ ಬಾಕ್ಸ್ನಲ್ಲಿರುವ ಕೀಯಿಂದ ಗೇಟ್ ತೆಗೆದುಕೊಳ್ಳಬೇಕಾಯಿತು. ಈ ಟಾಸ್ಕ್ನಲ್ಲಿ ಧನರಾಜ್-ಕವಿತಾ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿದರು. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
ಬಿಗ್ ಮನೆಗೆ ಎಂಟ್ರಿ ಕೊಟ್ಟ ಸುದೀಪ್
ಹೆಚ್ಚಾಗಿ ಸ್ಪರ್ಧಿಗಳಿಗೆ ಖುಷ್ ಆಗಿದ್ದು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದು ಸುದೀಪ್ ಅವರಿಂದ. ಮನೆಯಲ್ಲಿ ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿದ್ದಾಗ ಸುದೀಪ್ ಎಂಟ್ರಿ ಕೊಟ್ಟರು.
ಇದರಿಂದ ಮನೆಯಲ್ಲಿದ್ದ ಎಲ್ಲರೂ ಥ್ರಿಲ್ ಆದರು. ಸುದೀಪ್ರನ್ನು ತಬ್ಬಿಕೊಂಡು ತಮ್ಮದೇ ಆದ ಶೈಲಿಯಲ್ಲಿ ಮೆಚ್ಚಿಸಲು ಮುಂದಾದರು. ಕಂಪ್ಲೀಟ್ ಡೀಟೇಲ್ಸ್.
ಬಿಗ್ ಬಾಸ್ ಮನೆಯಲ್ಲಿ ಎರಡು ವಿಕೆಟ್ ಪತನ
ಡಬಲ್ ಎಲಿಮಿನೇಷನ್ ಮೂಲಕ ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ಶಾಕ್ ನೀಡಿದ್ದಾರೆ. ಒಗ್ಗರಣೆ ಡಬ್ಬಿ ಮುರಳಿ ಹಾಗೂ ವೈಲ್ಡ್ಕಾರ್ಡ್ ಎಂಟ್ರಿ ಮೂಲಕ ಮನೆಗೆ ಅಡಿಯಿಟ್ಟಿದ್ದ ಜೀವಿತಾ ಈ ಸಲ ಮನೆಯಿಂದ ಹೊರಬಿದ್ದರು. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
ಅಂಬಿಗಾಗಿ ಕಂಬನಿ ಮಿಡಿದ ಸ್ಪರ್ಧಿಗಳು
ರೆಬೆಲ್ ಸ್ಟಾರ್ ನೆನಪಿನಲ್ಲಿ ಬಿಗ್ ವೇದಿಕೆಯಲ್ಲಿ ನಮನ. ಒಂದು ನಿಮಿಷ ಮೌನವನ್ನಾಚರಿಸಿ ಸ್ಪರ್ಧಿಗಳು ಅಂಬಿಗೆ ತಮ್ಮದೇ ರೀತಿಯಲ್ಲಿ ಗೌರವ ಸಲ್ಲಿಸಿದರು. ನಂತರ ಬಿಗ್ಬಾಸ್ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ವೊಂದನ್ನು ನೀಡಲಾಯಿತು. ಅಂಬಿಗೆ ಅಂತಿಮ ನಮನ ಸಲ್ಲಿಸಲು ಸೂಚಿಸಲಾಯಿತು. ಇದಕ್ಕಾಗಿ ಸ್ಪರ್ಧಿಗಳೆಲ್ಲರೂ ಅಂಬಿ ಅವರ ಚಿತ್ರದ ಗೀತೆಗಳು, ನೃತ್ಯವನ್ನು ಅಭ್ಯಾಸ ಮಾಡಿ ತಮ್ಮದೇ ರೀತಿಯಲ್ಲಿ ಪ್ರದರ್ಶನ ನೀಡಿದರು. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
ಹಾವಿನ ದ್ವೇಷ ಟಾಸ್ಕ್ನಲ್ಲಿ ಮಾತಿನ ಚಕಮಕಿಯ ರೋಷ
ಎವಿ ರವಿ ಹಾಗೂ ಆನಂದ್ಗೆ ಬಿಗ್ ಬಾಸ್ ಕೆಲವು ಸವಾಲುಗಳನ್ನು ನೀಡಿದರು. ಆದರೆ ಹಾವಿನ ದ್ವೇಷ ಆಟದಲ್ಲಿ ಆಟಕ್ಕಿಂತ ಸ್ಪರ್ಧಿಗಳ ನಡುವಿನ ಚರ್ಚೆಗೆ ಹೆಚ್ಚು ಒತ್ತು ನೀಡಿದಂತಿತ್ತು. ರಶ್ಮಿ ಮತ್ತು ಜಯಶ್ರಿ, ಕವಿತಾ ನಡುವೆ ಮೊಟ್ಟೆಯ ವಿಷಯವಾಗಿ ಭಾರಿ ಮಾತಿನ ಚಕಮಕಿಯೂ ನಡೆಯಿತು. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
ಮೊದಲನೇ ವಾರ ಮನೆಯಿಂದ ರಕ್ಷಿತಾ ಔಟ್!
ಮೊದಲ ವಾರ ಮನೆಯಿಂದ ಮೊದಲ ಎಲಿಮಿನೇಟರ್ ಆಗಿ ರಕ್ಷಿತಾ ಹೊರಹೋಗುತ್ತಿದ್ದಾರೆ ಎಂದು ಸುದೀಪ್ ಘೋಷಿಸಿದರು, ಇದರೊಂದಿಗೆ ಆನಂದ್ ಉಳಿದುಕೊಂಡಿದ್ದು, ಧೋನಿ ಫ್ಯಾನ್ ಎಂದು ಹೇಳಿಕೊಂಡಿದ್ದ ರಕ್ಷಿತಾ ಮನೆಯಿಂದ ಹೊರಹೋಗುತ್ತಿದ್ದಾರೆ. ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
Also Read: Bigg Boss 6 Winner Prize: ವಿನ್ನರ್ಗೆಷ್ಟು, ರನ್ನರ್ಗೆಷ್ಟು ಸಿಗುತ್ತೆ?