ಆ್ಯಪ್ನಗರ

ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಮಿಡ್ ವೀಕ್ ಎಲಿಮಿನೇಷನ್ ಪುಕಪುಕ!

ಈ ವಾರ ಇಬ್ಬರು ಮನೆಯಿಂದ ಹೊರಹೋಗುತ್ತಾರೆ ಎಂದೇ ಬಿಗ್ ಬಾಸ್ ವೀಕ್ಷಕರು ಭಾವಿಸಿದ್ದರು. ಆದರೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಮನೆಗೆ ಮಂದಿಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಭಾನುವಾರ ಒಬ್ಬರು ಎಲಿಮಿನೇಟ್ ಆಗಲಿದ್ದು, ಫಿನಾಲೆ ವಾರದಲ್ಲಿ ಮಿಡ್ ವೀಕ್ ಎಲಿಮಿನೇಷನ್ ಇರುತ್ತದೆ ಎಂದಿದ್ದಾರೆ.

ಮಿಡ್ ವೀಕಲ್ಲಿ ಎಲಿಮಿನೇಟ್ ಆಗುವವರು ಕಿಚ್ಚನ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಅವರು ಏನಿದ್ದರೂ ಫಿನಾಲೆ ದಿನ ಸುದೀಪ್ ಜೊತೆಗೆ ಮಾತನಾಡಲಿದ್ದಾರೆ. ಒಟ್ಟಾರೆ ಮುಂದಿನ ವಾರ ನಡುರಾತ್ರಿಯಲ್ಲಿ ಬೇಕಾದರೂ ಒಬ್ಬರು ಮನೆಯಿಂದ ಯಾವುದೇ ಕ್ಷಣದಲ್ಲಿ ನಾಪತ್ತೆಯಾಗಲಿದ್ದಾರೆ.

ಉಳಿದ ಐದು ಮಂದಿ ಫಿನಾಲೆ ತಲುಪಲಿದ್ದು ಅಂತಿಮವಾಗಿ 50 ಲಕ್ಷ ರೂಪಾಯಿ ಒಬ್ಬರಿಗೆ ಸಿಗಲಿದೆ. ಈ ವಾರ ಟಿಕೆಟ್ ಟು ಫಿನಾಲೆ ಗೆಲ್ಲುವ ಮೂಲಕ ವಾಸುಕಿ ವೈಭವ್ ನೇರವಾಗಿ ಫೈನಲ್ ತಲುಪಿದ್ದಾರೆ. ಉಳಿದ ಆರು ಮಂದಿಯಾದ ಶೈನ್ ಶೆಟ್ಟಿ, ಕುರಿ ಪ್ರತಾಪ್, ಹರೀಶ್ ರಾಜ್, ದೀಪಿಕಾ ದಾಸ್, ಪ್ರಿಯಾಂಕಾ ಹಾಗೂ ಭೂಟಿ ಶೆಟ್ಟಿ ನಾಮಿನೇಟ್ ಆಗಿದ್ದರು. ಶನಿವಾರ ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ಸೇಫ್ ಆಗಿದ್ದಾರೆ. ಉಳಿದವರ ಭವಿಷ್ಯ ಭಾನುವಾರ ಇತ್ಯರ್ಥವಾಗಲಿದೆ.

Vijaya Karnataka Web 26 Jan 2020, 9:39 am
ಈ ವಾರ ಇಬ್ಬರು ಮನೆಯಿಂದ ಹೊರಹೋಗುತ್ತಾರೆ ಎಂದೇ ಬಿಗ್ ಬಾಸ್ ವೀಕ್ಷಕರು ಭಾವಿಸಿದ್ದರು. ಆದರೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಮನೆಗೆ ಮಂದಿಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಭಾನುವಾರ ಒಬ್ಬರು ಎಲಿಮಿನೇಟ್ ಆಗಲಿದ್ದು, ಫಿನಾಲೆ ವಾರದಲ್ಲಿ ಮಿಡ್ ವೀಕ್ ಎಲಿಮಿನೇಷನ್ ಇರುತ್ತದೆ ಎಂದಿದ್ದಾರೆ.
Vijaya Karnataka Web mid week elimination fear starts in bigg boss house varada kathe kicchan jothe highlights
ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಮಿಡ್ ವೀಕ್ ಎಲಿಮಿನೇಷನ್ ಪುಕಪುಕ!


ಮಿಡ್ ವೀಕಲ್ಲಿ ಎಲಿಮಿನೇಟ್ ಆಗುವವರು ಕಿಚ್ಚನ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಅವರು ಏನಿದ್ದರೂ ಫಿನಾಲೆ ದಿನ ಸುದೀಪ್ ಜೊತೆಗೆ ಮಾತನಾಡಲಿದ್ದಾರೆ. ಒಟ್ಟಾರೆ ಮುಂದಿನ ವಾರ ನಡುರಾತ್ರಿಯಲ್ಲಿ ಬೇಕಾದರೂ ಒಬ್ಬರು ಮನೆಯಿಂದ ಯಾವುದೇ ಕ್ಷಣದಲ್ಲಿ ನಾಪತ್ತೆಯಾಗಲಿದ್ದಾರೆ.

ಉಳಿದ ಐದು ಮಂದಿ ಫಿನಾಲೆ ತಲುಪಲಿದ್ದು ಅಂತಿಮವಾಗಿ 50 ಲಕ್ಷ ರೂಪಾಯಿ ಒಬ್ಬರಿಗೆ ಸಿಗಲಿದೆ. ಈ ವಾರ ಟಿಕೆಟ್ ಟು ಫಿನಾಲೆ ಗೆಲ್ಲುವ ಮೂಲಕ ವಾಸುಕಿ ವೈಭವ್ ನೇರವಾಗಿ ಫೈನಲ್ ತಲುಪಿದ್ದಾರೆ. ಉಳಿದ ಆರು ಮಂದಿಯಾದ ಶೈನ್ ಶೆಟ್ಟಿ, ಕುರಿ ಪ್ರತಾಪ್, ಹರೀಶ್ ರಾಜ್, ದೀಪಿಕಾ ದಾಸ್, ಪ್ರಿಯಾಂಕಾ ಹಾಗೂ ಭೂಟಿ ಶೆಟ್ಟಿ ನಾಮಿನೇಟ್ ಆಗಿದ್ದರು. ಶನಿವಾರ ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ಸೇಫ್ ಆಗಿದ್ದಾರೆ. ಉಳಿದವರ ಭವಿಷ್ಯ ಭಾನುವಾರ ಇತ್ಯರ್ಥವಾಗಲಿದೆ.

ವಾಸುಕಿಗೆ ವೈಭವ್‍ಗೆ ಈ ಸೀಸನ್‍ನ ಕೊನೆಯ ಕಿಚ್ಚನ ಚಪ್ಪಾಳೆ

ಅದೇ ರೀತಿ ವಾರದ ಕಿಚ್ಚನ ಚಪ್ಪಾಳೆ ವಾಸುಕಿ ವೈಭವ್‌ಗೆ ಸಿಕ್ಕಿದೆ. ಇದು ಈ ಸೀಸನ್‌ನ ಕೊನೆಯ ಚಪ್ಪಾಳೆ. ಕಳೆದ ಸಲ ಜರ್ಕಿನ್ ಕೊಟ್ಟಿದ್ದ ಸುದೀಪ್ ಈ ವಾರ ಇನ್ನೊಂದು ಸರ್‌ಪ್ರೈಸ್ ಇರುತ್ತದೆ ಎಂದು ಮನೆ ಮಂದಿಗೆ ಹೇಳಿದ್ದರು. ಅದರಂತೆ ವಾಸುಕಿ ವೈಭವ್‌ಗೆ ಆಕರ್ಷಕವಾದ ಬೆಲ್ಟ್ ಒಂದು ವಾಸುಕಿಗೆ ಸಿಕ್ಕಿದೆ. ಇದಕ್ಕೂ ಮುನ್ನ ಮನೆಯ ಸದಸ್ಯರು ಕಿಚ್ಚನ ಚಪ್ಪಾಳೆ ಬಗ್ಗೆ ಮಾತನಾಡಿದರು. ಕಿಚ್ಚನ ಚಪ್ಪಾಳೆ ಸಿಕ್ಕಿದರೆ ಸಾಕು ನಾವು ಬಿಗ್ ಬಾಸ್ ಗೆದ್ದಂತೆ. ಕಿಚ್ಚನ ಚಪ್ಪಾಳೆ ಸಿಕ್ಕ ಮರುದಿನವೇ ನಾವು ಮನೆಯಿಂದ ಹೊರಹೋದರೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ ಎಂದು ಕುರಿ ಪ್ರತಾಪ್ ಹೇಳಿದರು.

ಕಿಚ್ಚನ ಚಪ್ಪಾಳೆ ಸಾಕು, ಗೆದ್ದಷ್ಟೇ ಖುಷಿ ಎಂದ ಮನೆಮಂದಿ

ನೀನು ಬಿಗ್ ಬಾಸ್ ಗೆಲ್ಲದಿದ್ದರೂ ಪರವಾಗಿಲ್ಲ, ಆದರೆ ಕಿಚ್ಚನ ಚಪ್ಪಾಳೆ ತಗೋ ಸಾಕು ಎಂದು ತನ್ನ ತಾಯಿ ಹೇಳಿದ್ದನ್ನು ಪ್ರಿಯಾಂಕಾ ನೆನಪಿದರು. ನಿಮ್ಮ ಚಪ್ಪಾಳೆ ನಮ್ಮ ಪಾಲಿಗೆ ಪೆಟ್ರೋಲ್ ಹಾಗೋದಾಗ ಫುಲ್ ಟ್ಯಾಂಕ್ ತುಂಬಿಸಿ ಇನ್ನು ಮುಂದಕ್ಕೆ ಹೋಗು ಎಂಬಂತಿರುತ್ತದೆ ಎಂದರು ವಾಸುಕಿ. ಪ್ರತಿ ವಾರ ನಾವೇ ಕಳಪೆ ಅತ್ಯುತ್ತಮ ಅಂತ ಮಾರ್ಕ್ಸ್ ಕೊಟ್ಟುಕೊಳ್ಳುತ್ತೇವೆ. ಆದರೆ ನಮಗೆ ಗುರುಗಳ ಸ್ಥಾನದಲ್ಲಿ ನಿಂತು ಪ್ರತಿವಾರ ನಮ್ಮ ತಪ್ಪುಗಳನ್ನು ತಿದ್ದಿ ತೀಡಿ ನೀವು ನೀಡುವ ಚಪ್ಪಾಳೆ ನಮ್ಮ ಪಾಲಿಗೆ ಅತ್ಯಮೂಲ್ಯ ಎಂದು ಮನೆಯ ಸದಸ್ಯರು ಹೇಳಿದರು. ಇದಕ್ಕೆ ಸುದೀಪ್ ಸಹ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದರು.

ಈ ವಾರ ಪ್ರಿಯಾಂಕಾ ಶಿವಣ್ಣ ಎಲಿಮಿನೇಟ್ ಆಗ್ತಾರಾ?

ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಎಂದು ಮನೆ ಮಂದಿಯನ್ನು ಸುದೀಪ್ ಕೇಳಿದಾಗ ಪ್ರಿಯಾಂಕಾ ಹೆಸರು ಕೇಳಿಬಂದಿದೆ. ಆರಂಭದಲ್ಲಿ ಇದ್ದ ಜೋಶ್, ಎನರ್ಜಿ ಈಗ ಕಾಣುತ್ತಿಲ್ಲ. ಅವರಿಗೆ ಒಳ್ಳೆ ಅವಕಾಶಗಳು ಇದ್ದವು ಬಳಸಿಕೊಳ್ಳಬಹುದಾಗಿತ್ತು. ಆದರೆ ಅದ್ಯಾವುದನ್ನೂ ಅವರು ಮಾಡಲಿಲ್ಲ ಎಂದು ಕಾರಣಗಳನ್ನು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ