ಆ್ಯಪ್ನಗರ

Sudeep: ತೆಲುಗು 'ಬಿಗ್ ಬಾಸ್' ಸ್ಪರ್ಧಿಗಳೊಂದಿಗೆ ಕನ್ನಡದಲ್ಲಿ ಮಾತನಾಡಿದ 'ಕಿಚ್ಚ' ಸುದೀಪ್!

'ಕಿಚ್ಚ' ಸುದೀಪ್ ನಟರಾಗಿ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶಾದ್ಯಂತ ಫೇಮಸ್. ಈಚೆಗೆ ಅವರು ತೆಲುಗು ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ ವೇದಿಕೆ ಮೇಲೆ ಸ್ಪರ್ಧಿಗಳೊಂದಿಗೆ ಕನ್ನಡದಲ್ಲಿ ಮಾತನಾಡಿದ್ದಾರೆ.

Vijaya Karnataka Web 29 Nov 2020, 7:04 pm
ನಟ 'ಕಿಚ್ಚ' ಸುದೀಪ್ ಅವರು ತೆಲುಗು 'ಬಿಗ್ ಬಾಸ್‌' ರಿಯಾಲಿಟಿ ಶೋಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಸದ್ಯ ಅವರು ಭಾಗವಹಿಸಿದ್ದ ಎಪಿಸೋಡ್ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದ್ದು, ಅದಕ್ಕೂ ಮೊದಲು ತೆಲುಗು ಬಿಗ್ ಬಾಸ್ ಶೋನಲ್ಲಿ ಸುದೀಪ್‌ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಒಂದು ಸಣ್ಣ ಝಲಕ್‌ನಂತೆ ಒಂದು ಪ್ರೋಮೋ ರಿಲೀಸ್ ಮಾಡಲಾಗಿದೆ. ಅದರಲ್ಲಿ ಅವರು ಸ್ಪರ್ಧಿಗಳೊಂದಿಗೆ ಕನ್ನಡದಲ್ಲಿ ಮಾತನಾಡಿದ್ದಾರೆ.
Vijaya Karnataka Web Sudeep


ಸ್ಪರ್ಧಿಗಳಿಗೆ ಶಾಕ್ ನೀಡಿದ ಕಿಚ್ಚ
ಎಂದಿನಂತೆ ವಾರಾಂತ್ಯದಲ್ಲಿ ನಿರೂಪಕ ನಾಗಾರ್ಜುನ ಜೊತೆಗೆ ಮಾತನಾಡಲು ತೆಲುಗು ಬಿಗ್ ಬಾಸ್‌ ಸ್ಪರ್ಧಿಗಳು ಕಾದಿದ್ದರು. ಆದರೆ ನಾಗ್ ಬದಲಾಗಿ, ಅಲ್ಲಿ ಸುದೀಪ್ ಎಂಟ್ರಿ ನೀಡುತ್ತಾರೆ. ಆಗ ಸ್ಪರ್ಧಿಗಳು ಶಾಕ್ ಆಗುತ್ತಾರೆ. ಜೊತೆಗೆ ಸುದೀಪ್‌ರನ್ನು ಸ್ಟೇಜ್ ಮೇಲೆ ನೋಡಿ ಸಿಕ್ಕಾಪಟ್ಟೆ ಖುಷಿಯಾಗುತ್ತಾರೆ. ಆನಂತರ 'ನಾಗ್ ಸರ್ ಎಲ್ಲಿ' ಎಂದು ಸುದೀಪ್‌ಗೆ ಅವರೆಲ್ಲ ಪ್ರಶ್ನೆ ಮಾಡುತ್ತಾರೆ. 'ಅವರು ಮನೆಗೆ ಹೋಗಿದ್ದಾರೆ. ಅವರು ಯಾಕೆ ಬರಬೇಕು ಎಂಬುದಕ್ಕೆ ಒಂದು ಕಾರಣ ನೀಡಿ' ಎಂದು ಸುದೀಪ್ ಕೇಳಿದಾಗ, 'ನಾವೆಲ್ಲರೂ ನಾಗಾರ್ಜುನ ಅವರನ್ನು ಪ್ರೀತಿ ಮಾಡುತ್ತೇವೆ' ಎಂದು ಸ್ಪರ್ಧಿಗಳು ಹೇಳುತ್ತಾರೆ. ಆಗ ವೇದಿಕೆ ಮೇಲೆ ನಾಗಾರ್ಜುನ ಕೂಡ ಆಗಮಿಸುತ್ತಾರೆ.

ಸ್ಪರ್ಧಿಗಳೊಂದಿಗೆ ಕನ್ನಡದಲ್ಲಿ ಮಾತನಾಡಿದ ಕಿಚ್ಚ
'ಸುದೀಪ್‌ ಜೊತೆ ಸ್ಪರ್ಧಿಗಳು ಕನ್ನಡದಲ್ಲಿ ಮಾತನಾಡುತ್ತಾರೆ' ಎಂದು ನಾಗಾರ್ಜುನ ಹೇಳಿದಾಗ, ಸ್ಪರ್ಧಿಯೊಬ್ಬರು, 'ಚೆನ್ನಾಗಿದ್ದೀರಾ ಸರ್' ಎಂದು ಸುದೀಪ್‌ಗೆ ಕೇಳಿದ್ದಾರೆ. ಇದೆಲ್ಲ ಪ್ರೋಮೋದಲ್ಲಿ ಸಖತ್ ಹೈಲೈಟ್ ಆಗಿದೆ. ಇದೇ ಮೊದಲ ಬಾರಿಗೆ ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಸಖತ್ ಥ್ರಿಲ್‌ ಆಗಿದ್ದು, ಸುದೀಪ್‌ ಇರುವ ಎಪಿಸೋಡ್‌ ನೋಡುವುದಕ್ಕೆ ಕಾತರದಿಂದ ಕಾದಿದ್ದಾರೆ.

'ಬಿಗ್ ಬಾಸ್' ವೇದಿಕೆ ಮೇಲೆ ಕಾಣಿಸಿಕೊಂಡ 'ಕಿಚ್ಚ' ಸುದೀಪ್‌! ಅಭಿಮಾನಿಗಳಿಗೆ ಇದು ಬಿಗ್‌ ಸರ್ಪ್ರೈಸ್!

ನಾಗ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದ ಕಿಚ್ಚ
ನಾಗಾರ್ಜುನ ಅವರ ಜೊತೆಗೆ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದ ಕಿಚ್ಚ ಸುದೀಪ್, 'ಬಿಗ್ ಬಾಸ್‌ ಶೋ ನಿರೂಪಣೆ ಮಾಡುವುದು ಯಾವಾಗಲೂ ಸ್ಪೆಷಲ್‌ ಫೀಲಿಂಗ್ ಆಗಿದೆ. ಇಂದು ತೆಲುಗು ಬಿಗ್ ಬಾಸ್‌ಗೆ ಅತಿಥಿಯಾಗಿ ಹೋಗಿದ್ದು, ಮತ್ತೊಂದು ವಿಶೇಷ ಫೀಲಿಂಗ್ ಆಗಿದೆ. ಎಂದೆಂದಿಗೂ ಆಕರ್ಷಕವಾಗಿರುವ ನಾಗಾರ್ಜುನ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಅದ್ಭುತವಾಗಿತ್ತು. ಜೊತೆಗೆ ಮನೆಯೊಳಗೆ ಇರುವ ಸ್ಪರ್ಧಿಗಳೊಂದಿಗೆ ಮಾತನಾಡಿದೆ' ಎಂದು ಬರೆದುಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ