ಆ್ಯಪ್ನಗರ

ಬಿಗ್ ಬಾಸ್ ಮನೆಯಿಂದ 15ನೇ ವಾರ ಹೊರಬಿದ್ದ ಆ ಪ್ರಬಲ ಸ್ಪರ್ಧಿ ಯಾರು?

'ಬಿಗ್ ಬಾಸ್ ಕನ್ನಡ ಸೀಸನ್ 7'ರ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಫೆಬ್ರವರಿ 2ರಂದು ಈ ಬಾರಿಯ ಬಿಗ್ ಬಾಸ್‌ನ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಬಿಗ್ ಬಾಸ್ 7ನೇ ಸೀಸನ್‌ನ 15ನೇ ವಾರದ ಎಲಿಮಿನೇಶನ್‌ ನಡೆದಿದೆ. ಇಂದು ಅಧಿಕೃತವಾಗಿ ಬಿಗ್ ಮನೆಯಿಂದ ಹೊರಬಿದ್ದವರು ಯಾರು ಎಂದು ತಿಳಿಯಲಿದೆ. ವಾಸುಕಿ ವೈಭವ್, ಶೈನ್ ಶೆಟ್ಟಿ, ಕುರಿ ಪ್ರತಾಪ್ ಈಗಾಗಲೇ ಫಿನಾಲೆಗೆ ಆಯ್ಕೆಯಾಗಿದ್ದಾರೆ.

Vijaya Karnataka Web 26 Jan 2020, 1:14 pm
'ಬಿಗ್ ಬಾಸ್ ಕನ್ನಡ ಸೀಸನ್ 7'ರ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಫೆಬ್ರವರಿ 2ರಂದು ಈ ಬಾರಿಯ ಬಿಗ್ ಬಾಸ್‌ನ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಬಿಗ್ ಬಾಸ್ 7ನೇ ಸೀಸನ್‌ನ 15ನೇ ವಾರದ ಎಲಿಮಿನೇಶನ್‌ ನಡೆದಿದೆ. ಇಂದು ಅಧಿಕೃತವಾಗಿ ಬಿಗ್ ಮನೆಯಿಂದ ಹೊರಬಿದ್ದವರು ಯಾರು ಎಂದು ತಿಳಿಯಲಿದೆ. ವಾಸುಕಿ ವೈಭವ್, ಶೈನ್ ಶೆಟ್ಟಿ, ಕುರಿ ಪ್ರತಾಪ್ ಈಗಾಗಲೇ ಫಿನಾಲೆಗೆ ಆಯ್ಕೆಯಾಗಿದ್ದಾರೆ.
Vijaya Karnataka Web priyanka is eliminated from bigg boss kannada season 7 fifteenth week elimination
ಬಿಗ್ ಬಾಸ್ ಮನೆಯಿಂದ 15ನೇ ವಾರ ಹೊರಬಿದ್ದ ಆ ಪ್ರಬಲ ಸ್ಪರ್ಧಿ ಯಾರು?


15ನೇ ವಾರಕ್ಕೆ ಪ್ರಿಯಾಂಕಾ ಶಿವಣ್ಣ ಔಟ್

ಭೂಮಿ ಶೆಟ್ಟಿ, ದೀಪಿಕಾ ದಾಸ್, ಪ್ರಿಯಾಂಕಾ, ಹರೀಶ್ ರಾಜ್ ಈ ನಾಲ್ವರಲ್ಲಿ ಪ್ರಿಯಾಂಕಾ ಈ ವಾರ ಎಲಿಮಿನೇಟ್ ಆಗಿದ್ದಾರೆ. 105 ದಿನಗಳ ಕಾಲ ಪ್ರಿಯಾಂಕಾ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದರು. ಸಾಮಾನ್ಯ ಜ್ಞಾನ, ಮಾತು, ಮೇಕಪ್ ವಿಚಾರಕ್ಕೆ ಪ್ರಿಯಾಂಕಾ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಅಷ್ಟೇ ಅಲ್ಲದೆ ಹೊರಗಡೆಯಲ್ಲಿ ಪ್ರಿಯಾಂಕಾ ಹೇಗಿದ್ದಾರೋ ಹಾಗೆ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಎಂಬುದು ಹಲವರ ಅಭಿಪ್ರಾಯ. ಕುರಿ ಪ್ರತಾಪ್ ಅವರು ಪ್ರಿಯಾಂಕಾಗೆ ಒಳ್ಳೆಯ ಸ್ನೇಹಿತರಾಗಿದ್ದರು. ಭೂಮಿ ಶೆಟ್ಟಿ ಜೊತೆಗೆ ಪ್ರಿಯಾಂಕಾಗೆ ಒಳ್ಳೆಯ ಬಾಂಧವ್ಯ ಇತ್ತು. ಕಳೆದ ಬಾರಿ ಪ್ರಿಯಾಂಕಾ ಕಿಚ್ಚನ ಚಪ್ಪಾಳೆಯನ್ನು ದಕ್ಕಿಸಿಕೊಂಡು ಸುದೀಪ್‌ರಿಂದ ಜಾಕೆಟ್‌ನ್ನು ಪಡೆದುಕೊಂಡಿದ್ದರು.

ಬಿಗ್ ಬಾಸ್ ಟ್ರೋಫಿ ಗೆಲ್ಲೋರು ಯಾರು?

ಕಳೆದ ವಾರ ನಡೆದ ಡಬಲ್ ಎಲಿಮಿನೇಶನ್‌ನಲ್ಲಿ ಕಿಶನ್ ಬಿಳಗಲಿ, ಚಂದನ್ ಆಚಾರ್ ಬಿಗ್ ಬಾಸ್ ಆಟದಿಂದ ಹೊರಗೆ ಬಂದಿದ್ದರು. ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ, ಹರೀಶ್ ರಾಜ್ ಈ ಮೂವರಲ್ಲಿ ಒಬ್ಬರು ಈ ವಾರದಲ್ಲೇ ನಡೆಯುವ ಮಿಡ್ ವೀಕ್ ಎಲಿಮಿನೇಶನ್‌ನಲ್ಲಿ ಔಟ್ ಆಗಲಿದ್ದಾರೆ. ಅಲ್ಲಿಗೆ ಫಿನಾಲೆಯಲ್ಲಿ 5 ಸ್ಪರ್ಧಿಗಳು ಇದ್ದಂತಾಗುತ್ತದೆ. ಕುರಿ ಪ್ರತಾಪ್, ವಾಸುಕಿ ವೈಭವ್ಮ ಶೈನ್ ಶೆಟ್ಟಿ ಈ ಮೂವರು ಬಿಗ್ ಬಾಸ್ ಮನೆಯ ಪ್ರಬಲ ಸ್ಪರ್ಧಿಗಳು. ಹೀಗಾಗಿ ಇವರಲ್ಲಿ ಯಾರು ಬಿಗ್ ಬಾಸ್ ಟ್ರೋಫಿ ಗೆಲ್ಲಲಿದ್ದಾರೆ ಎಂಬುದು ಕೂಡ ತುಂಬ ಕುತೂಹಲವನ್ನುಂಟು ಮಾಡಿದೆ. ಅದರ ಜೊತೆಗೆ ಇನ್ನುಳಿದ ಸದಸ್ಯರನ್ನು ಕೂಡ ಮರೆಯುವಂತಿಲ್ಲ. ಬಿಗ್ ಬಾಸ್ ಗೆಲ್ಲುವವರು 50 ಲಕ್ಷ ರೂಪಾಯಿಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಸೀಸನ್‌ಲ್ಲಿ ಕೊನೆಯದಾಗಿ ಕಿಚ್ಚನ ಚಪ್ಪಾಳೆ ವಾಸುಕಿ ವೈಭವ್‌ಗೆ ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ