ಆ್ಯಪ್ನಗರ

ಬಿಗ್ ಬಾಸ್ ಮನೆಯಲ್ಲಿ ನಾವು ಗೆಲ್ಲುವುದಿಲ್ಲ ಎಂದು ತೀರ್ಮಾನಿಸಿಕೊಂಡ 'ಆ' ಇಬ್ಬರು!

ಬಿಗ್ ಬಾಸ್ ಸೀಸನ್ 7ಕ್ಕೆ ಅಂತಿಮ ಪರದೆ ಎಳೆಯುವ ದಿನಗಳು ಸಮೀಪಿಸುತ್ತಿವೆ. ಈಗಾಗಲೆ ವಾಸುಕಿ ವೈಭವ್ 'ಟಿಕೆಟ್ ಟು ಫಿನಾಲೆ' ಟಾಸ್ಕ್ ಗೆಲ್ಲುವ ಮೂಲಕ ನೇರವಾಗಿ ಫೈನಲ್ ಅಂಗಳಕ್ಕೆ ತಲುಪಲಿದ್ದಾರೆ. ಇನ್ನೆರಡು ವಾರಗಳಲ್ಲಿ ಬಿಗ್ ಬಾಸ್ 7ನೇ ಸೀಸನ್ ಮುಗಿಯಲಿದೆ.

Vijaya Karnataka Web 24 Jan 2020, 2:52 pm
ಬಿಗ್ ಬಾಸ್ ಸೀಸನ್ 7ಕ್ಕೆ ಅಂತಿಮ ಪರದೆ ಎಳೆಯುವ ದಿನಗಳು ಸಮೀಪಿಸುತ್ತಿವೆ. ಈಗಾಗಲೆ ವಾಸುಕಿ ವೈಭವ್ 'ಟಿಕೆಟ್ ಟು ಫಿನಾಲೆ' ಟಾಸ್ಕ್ ಗೆಲ್ಲುವ ಮೂಲಕ ನೇರವಾಗಿ ಫೈನಲ್ ಅಂಗಳಕ್ಕೆ ತಲುಪಲಿದ್ದಾರೆ. ಇನ್ನೆರಡು ವಾರಗಳಲ್ಲಿ ಬಿಗ್ ಬಾಸ್ 7ನೇ ಸೀಸನ್ ಮುಗಿಯಲಿದೆ.
Vijaya Karnataka Web priyanka shivanna bhoomi shetty who decides wouldnt winbigg boss
ಬಿಗ್ ಬಾಸ್ ಮನೆಯಲ್ಲಿ ನಾವು ಗೆಲ್ಲುವುದಿಲ್ಲ ಎಂದು ತೀರ್ಮಾನಿಸಿಕೊಂಡ 'ಆ' ಇಬ್ಬರು!


ಇದೇ ಸಂದರ್ಭದಲ್ಲಿ ಪ್ರಿಯಾಂಕಾ ಶಿವಣ್ಣ ಹಾಗೂ ಭೂಮಿ ಶೆಟ್ಟಿ ನಡುವೆ ತಮಾಷೆ ಪ್ರಸಂಗವೊಂದು Unseen ಕಥೆಗಳಲ್ಲಿ ಗಮನಸೆಳೆದಿದೆ. ಭೂಮಿ ಶೆಟ್ಟಿ ಹಾಗೂ ಪ್ರಿಯಾಂಕಾ ಶಿವಣ್ಣ ಡೈನಿಂಗ್ ಟೇಬಲ್ ಮೇಲೆ ಮಲಗಿ ಒಬ್ಬರಿಗೊಬ್ಬರು ಮಾತಿನಲ್ಲೇ ರೇಗಿಸಿಕೊಳ್ಳುತ್ತಿದ್ದರು. ಜನ ನಿನಗೆ ವೋಟ್ ಹಾಕಬೇಕು ಎಂದರೆ ಯಾಕೆ ಎಂಬುದಕ್ಕೆ ಕಾರಣಗಳನ್ನು ಈ ಕೂಡಲೆ ನೀಡಬೇಕು ಎಂದು ಪ್ರಿಯಾಂಕಾ ತಮಾಷೆಗೆ ಕೇಳುತ್ತಾ, ಈ ಮನೆಯಲ್ಲಿ ಸ್ಪರ್ಧಿಗಳೇ ಇಲ್ಲವೇ, ಎಲ್ಲರೂ ಎಲಿಮಿನೇಟ್ ಆಗಿ ಹೋಗಿದ್ದಾರೆಯೇ ಎಂದು ಮಾತನಾಡುತ್ತಿದ್ದರು.

ಇದು ನಮ್ಮದೇ ಮನೆ ಎಂದ ಭೂಮಿ ಶೆಟ್ಟಿ

ಟಾಸ್ಕ್ ಮುಗಿದ ಬಳಿಕ ಎಲ್ಲರೂ ಮನೆಯ ಹೊರಗೆ ಇದ್ದರು. ಇದನ್ನೇ ಉದ್ದೇಶಿಸಿ ಪ್ರಿಯಾಂಕಾ, ಅಲ್ಲಿ ನೋಡು ಒಮ್ಮೆ ಯಾರು ಮನೆಯಲ್ಲಿ ಇಲ್ಲ. ಟಾಪ್ ಟೂ ನಾವಿಬ್ಬರೇ. ಕೊನೆಯಲ್ಲಿ ಉಳಿಯುವುದು ನಾವಿಬ್ಬರೇ ಎಂದರು. ಇದಕ್ಕೆ ಧ್ವನಿಗೂಡಿಸಿದ ಭೂಮಿ, ನಮ್ಮದೇ ಈ ಮನೆ ಎಂದರು. ಇವರಿಬ್ಬರ ಮಾತುಕತೆ ಹೇಗಿತ್ತೆಂದರೆ ಒಬ್ಬರಿಗೊಬ್ಬರು ಕಾಲೆಳೆದಂತಿತ್ತು. ಆದರೂ ಇವರ ಬಾಯಿಂದ ಸತ್ಯವೊಂದು ಹೊರಬಿತ್ತು.

ಈ ಮನೆಯಲ್ಲಿ ನಾವಿಬ್ಬರೇ ಟಾಪ್ 2 ಎಂದ ಭೂಮಿ, ಪ್ರಿಯಾಂಕಾ

ನಾವಿಬ್ಬರೂ ಈ ಮನೆಯಲ್ಲಿ ಟಾಪ್ 2 ಎಂದಾಗ ನಡುವೆ ಬಾಯಿ ಹಾಕಿದ ಪ್ರಿಯಾಂಕಾ ಆದರೆ ಭೂಮಿಗೆ ಗೆಲ್ಲುವ ಅವಶ್ಯಕತೆ ಇಲ್ಲ, ನಾನೇ ಗೆಲ್ಲುತ್ತೇನೆ ಎಂಬಂತೆ ಹೇಳಿದರು. ನನಗೆ 50 ಲಕ್ಷ ರೂಪಾಯಿ ಗೆಲ್ಲುವ ಆಸೆ ಇಲ್ಲ ಎಂದಾಗ, ಹಾಗಿದ್ದರೆ ನನಗೆ ಕೊನೆಯವರೆಗೂ ಬಿಗ್ ಬಾಸ್‍ನಲ್ಲಿ ಉಳಿಯಬೇಕು ಎಂದು ಹೇಳಿಲ್ಲವೇ. ಬಾ ದೇವರ ಮುಂದೆ ಕರ್ಪೂರ ಹಚ್ಚಿ ಹೇಳು ಎಂದೆಲ್ಲಾ ಭೂಮಿಯನ್ನು ರೇಗಿಸಿದರು.

ಕೊನೆಗೆ ನಾವಿಬ್ಬರೂ ಗೆಲ್ಲುವುದಿಲ್ಲ ಎಂದು ಬಿಟ್ಟರು ಪ್ರಿಯಾಂಕಾ

ಕೊನೆಯ ವಾರ ತಲುಪಬೇಕು ಎಂದು ನಾನು ಹೇಳಿದ್ದೆ ಎಂದಾಗ, ಮಳ್ಳಿ ತರಹ ಮಾತನಾಡುತ್ತೀಯ ಈಗ. ಆರಂಭದಲ್ಲೇ ನಾನು ಹೇಳಿದ್ದೆ ನೂರು ದಿನ ಉಳಿಯಬೇಕು ಅಂತ. ಬಳಿಕ ಎರಡು ವಾರ ಮುಂದೂಡಿದಾಗಲೂ ಇರುತ್ತೇನೆ ಎಂದು ಹೇಳಿದ್ದೆ ಎಂದರು ಭೂಮಿ. ಕೊನೆಯವರೆಗೂ ಇರುತ್ತೀಯ ನೀನು ಆದರೆ ಗೆಲ್ಲುವುದು ನೀನಲ್ಲ ಎಂದು ಪ್ರಿಯಾಂಕಾ ಹೇಳಿದಾಗ, ಒಬ್ಬ ಗೆಳತಿಯಾಗಿ ಈ ರೀತಿ ಹೇಳುವುದು ಸರಿಯೇ ಎಂದು ಭೂಮಿ ಕೇಳಿದರು. ಕೊನೆಗೆ ಪ್ರಿಯಾಂಕಾ ಒಂದು ಮಾತು ಹೇಳಿದರು ಅದೇನೆಂದರೆ, ಒಂದು ವಿಚಾರ ಏನು ಎಂದರೆ ನಾವಿಬ್ಬರೂ ಗೆಲ್ಲುವುದಿಲ್ಲ ಎಂದು ಹೇಳಿ ತಮ್ಮ ಮಾತುಕತೆಗೆ ಅಂತ್ಯ ಹಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ