ಆ್ಯಪ್ನಗರ

Rakhi Sawant: ಪತಿ ಆದಿಲ್‌ಗೆ ಶಿಕ್ಷೆ ಕೊಡಿಸಲು ಮೈಸೂರಿಗೆ ಬರುತ್ತಿರುವ ರಾಖಿ ಸಾವಂತ್; ನಟಿ ಶೆರ್ಲಿನ್ ಚೋಪ್ರಾ ಸಾಥ್

'ಬಿಗ್ ಬಾಸ್' ಖ್ಯಾತಿಯ ರಾಖಿ ಸಾವಂತ್ ಅವರು ನಟಿ ಶೆರ್ಲಿನ್ ಚೋಪ್ರಾ ಜೊತೆಗೆ ಮೈಸೂರಿಗೆ ಬರಲಿದ್ದಾರೆ. ಆದಿಲ್ ಖಾನ್ ಮೈಸೂರಿನವರಾಗಿದ್ದು, ಅಲ್ಲಿರುವ ಇರಾನಿಯನ್ ಹುಡುಗಿ ಮೇಲೆ ಅತ್ಯಾಚಾರ ಮಾಡಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ ಹುಡುಗಿಗೆ ಬೆಂಬಲ ನೀಡಲು ರಾಖಿ ಸಾವಂತ್, ಶೆರ್ಲಿನ್ ಚೋಪ್ರಾ ಅವರು ಮೈಸೂರಿಗೆ ಬರಲಿದ್ದಾರಂತೆ.

Authored byಪದ್ಮಶ್ರೀ ಭಟ್ | TIMESOFINDIA.COM 22 Feb 2023, 2:09 pm

ಹೈಲೈಟ್ಸ್‌:

  • ಮೈಸೂರಿಗೆ ಬರಲಿರುವ ರಾಖಿ ಸಾವಂತ್, ಶೆರ್ಲಿನ್ ಚೋಪ್ರಾ
  • ರಾಖಿ ಸಾವಂತ್ ಪತಿ ಆದಿಲ್ ಖಾನ್ ವಿರುದ್ಧ ದೂರು ದಾಖಲಾಗಿದೆ
  • ಆದಿಲ್ ವಿರುದ್ಧ ದೂರು ನೀಡಿದ ಇರಾನಿಯನ್ ಹುಡುಗಿಯನ್ನು ಬೆಂಬಲಿಸಲು ರಾಖಿ, ಶೆರ್ಲಿನ್ ರೆಡಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web rakhi sawant
ರಾಖಿ ಸಾವಂತ್ ಅವರ ( Rakhi Sawant ) ಪತಿ ಆದಿಲ್ ಖಾನ್ ವಿರುದ್ಧ ಮೈಸೂರಿನಲ್ಲಿ ಕೂಡ ಎಫ್‌ಐಆರ್ ದಾಖಲಾಗಿದೆ. ಕೆಲ ದಿನಗಳಿಂದ ರಾಖಿ ಅವರು ಮೈಸೂರಿಗೆ ಬರ್ತೀನಿ, ಮಾವನ ಮನೆ ನೋಡಬೇಕು ಎಂದೆಲ್ಲ ಹೇಳುತ್ತಿದ್ದರು. ಆದರೆ ಆದಿಲ್‌ನಿಂದ ಸಮಸ್ಯೆಗೊಳಗಾದ ಇರಾನಿಯನ್ ಮಹಿಳೆಗೆ ಬೆಂಬಲ ನೀಡಲು ಶೆರ್ಲಿನ್ ಚೋಪ್ರಾ, ರಾಖಿ ಆವಂತ್ ಅವರು ಮೈಸೂರಿಗೆ ಬರುತ್ತಿದ್ದಾರಂತೆ.
ಮೈಸೂರಿನಲ್ಲಿ ಇರಾನ್ ವಿದ್ಯಾರ್ಥಿನಿ ಮೇಲೆ ಆದಿಲ್ ಅವರು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡಾಕ್ಟರ್ ಆಫ್ ಫಾರ್ಮಸಿ ಮಾಡಲು 5 ವರ್ಷಗಳ ಹಿಂದೆ ಇರಾನ್‌ನಿಂದ ಮೈಸೂರಿಗೆ ಬಂದ ವಿದ್ಯಾರ್ಥಿನಿಯನ್ನು ಆದಿಲ್ ಪರಿಚಯ ಮಾಡಿಕೊಂಡಿದ್ದರು. ಆಮೇಲೆ ಪ್ರೀತಿಯ ನಾಟಕ ಮಾಡಿ, ಮದುವೆ ಆಗ್ತೀನಿ ಅಂತ ಕೂಡ ಹೇಳಿದ್ದಾರೆ. ವಿವಿ ಪುರಂನಲ್ಲಿರುವ ಅಪಾರ್ಟ್‌ಮೆಂಟ್ ಆದಿಲ್ ಅವರು ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ, ಈಗ ಈ ವಿಚಾರವಾಗಿ ಮೈಸೂರಿನ ವಿವಿ ಪುರಂನಲ್ಲಿ ಆದಿಲ್ ವಿರುದ್ಧ ಕೇಸ್ ದಾಖಲಾಗಿದೆ.

ಜೈಲಿನಲ್ಲಿದ್ದುಕೊಂಡು ರಾಖಿ ಸಾವಂತ್‌ಗೆ ಬೆದರಿಕೆ ಹಾಕಿದ ಆದಿಲ್ ಖಾನ್?

ಈಗ ಈ ಇರಾನಿಯನ್ ಹುಡುಗಿಯನ್ನು ಬೆಂಬಲಿಸುವ ಸಲುವಾಗಿ ಶೆರ್ಲಿನ್ ಚೋಪ್ರಾ, ರಾಖಿ ಸಾವಂತ್ ಅವರು ಮೈಸೂರಿಗೆ ಬರುತ್ತಿದ್ದಾರಂತೆ. ಈ ಹಿಂದೆ ಮಾಧ್ಯಮದ ಜೊತೆ ಮಾತನಾಡಿದ್ದ ರಾಖಿ ಸಾವಂತ್ ಅವರು, "ನಾನು ಆದಿಲ್‌ಗೋಸ್ಕರ ಮೈಸೂರಿಗೆ ಬಂದು ಅಲ್ಲಿನ ಹೋಟೆಲ್‌ನಲ್ಲಿ ಒಂದೆರಡು ದಿನ ಇದ್ದೆ. ಆದಿಲ್ ಮನೆಯವರು ನನ್ನ ಒಪ್ಪಿಕೊಳ್ಳಲಿ ಎನ್ನುವ ಆಸೆಯಿಂದ ನಾನು ಮೈಸೂರಿಗೆ ಬಂದಿದ್ದೆ.ಆಮೇಲೆ ಮುಂಬೈಗೆ ಬಂದೆ. ಆದಿಲ್ ಯಾವತ್ತೂ ಅವನ ಮನೆಯನ್ನು ತೋರಿಸಿಲ್ಲ. ನಾನು ಎಷ್ಟು ಫೋನ್ ಮಾಡಿದರೂ ಅವರ ತಂದೆ-ತಾಯಿ ಫೋನ್ ರಿಸೀವ್ ಮಾಡ್ತಿಲ್ಲ. ಮಗನನ್ನು ನೋಡೋಣ ಅಂತ ಅವರು ಮುಂಬೈಗೂ ಬಂದಿಲ್ಲ. ನನಗೆ ನನ್ನ ಮಾವನ ಮನೆ ನೋಡಬೇಕು. ನಾನು ಶೀಘ್ರದಲ್ಲಿಯೇ ಮೈಸೂರಿನ ಮಾವನ ಮನೆಗೆ ನುಗ್ತೀನಿ" ಎಂದು ಹೇಳಿದ್ದರು.

ಬಿಗ್ ಬಾಸ್ 14 ಶೋ ನಂತರದಲ್ಲಿ ಆದಿಲ್ ಖಾನ್ ಹಾಗೂ ರಾಖಿ ಸಾವಂತ್ ಅವರು ಭೇಟಿ ಆಗಿದ್ದರು. ಆರಂಭದಲ್ಲಿ ರಾಖಿಗೆ ಆದಿಲ್ ಅವರು ದುಬಾರಿ ಕಾರ್ ನೀಡಿದ್ದರಂತೆ. ಮೊದಲು ಆದಿಲ್ ನಾನು ರಾಖಿ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಇವರಿಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಅದಾದ ನಂತರದಲ್ಲಿ ರಾಖಿ ಹೋದಲ್ಲಿ ಬಂದಲ್ಲೆಲ್ಲ ಆದಿಲ್ ಅವರ ಜೊತೆಯೇ ಇರುತ್ತಿದ್ದರು. ದುಬೈನಲ್ಲಿ ರಾಖಿಗೆ ಆದಿಲ್ ಫ್ಲ್ಯಾಟ್‌ವೊಂದನ್ನು ಕೊಡಿಸಿದ್ದಾರೆ ಎಂದು ಹೇಳಲಾಗಿತ್ತು. ಅದಾದ ನಂತರದಲ್ಲಿ ರಾಖಿ ಹುಟ್ಟುಹಬ್ಬವನ್ನು ಕೂಡ ಅದ್ದೂರಿಯಾಗಿ ಆಚರಿಸಲಾಗಿತ್ತು.

ಆದಿಲ್ ಖಾನ್ ತಂದೆ-ತಾಯಿ ನನ್ನ ಫೋನ್ ರಿಸೀವ್ ಮಾಡ್ತಿಲ್ಲ: ರಾಖಿ ಸಾವಂತ್

"ಈಗ ಆದಿಲ್ ನನಗೆ ಮೋಸ ಮಾಡಿದ್ದಾನೆ, ನನ್ನಿಂದ ಹಣ ದೋಚಿದ್ದಾನೆ. ಚಿಕಿತ್ಸೆಗೆ ಹಣ ಕೊಡದೆ ಅವನು ನನ್ನ ತಾಯಿಯನ್ನು ಕೊಂದಿದ್ದಾನೆ. ನನಗೆ ಅವನು ಹೊಡೆದಿದ್ದಾನೆ. ನಾನು ಯಾವುದೇ ಕಾರಣಕ್ಕೂ ಅವನನ್ನು ಕ್ಷಮಿಸೋದಿಲ್ಲ, ವಿಚ್ಛೇದನವನ್ನು ಕೊಡೋದಿಲ್ಲ. ಆದಿಲ್‌ಗೆ ಈಗಾಗಲೇ ಮದುವೆಯಾಗಿರೋದು ಗೊತ್ತಾಗಿದೆ, ಅಷ್ಟೇ ಅಲ್ಲ. ನಿವೇದಿತಾ ಎನ್ನುವ ಹುಡುಗಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಮಗು ಕೊಡೋದು ಬಿಟ್ಟು ಬೇರೆಯವರಿಗೆ ಮಗು ಕೊಡ್ತಿದ್ದಾನೆ" ಎಂದು ರಾಖಿ ಸಾವಂತ್ ಅವರು ಮಾಧ್ಯಮದ ಜೊತೆ ಅಳಲನ್ನು ತೋಡಿಕೊಂಡಿದ್ದರು.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ