ಆ್ಯಪ್ನಗರ

Raksha Elimination: ಒಟ್ಟಿಗೆ ಇದ್ರೂ ಮನೆಯಲ್ಲಿ ಒಂಟಿಯಾಗಿದ್ದೆ ಎಂದ ರಕ್ಷಾ

ಮನೆಯಲ್ಲಿ ಎಲ್ಲರೂ ಮೈಂಡಲ್ಲಿ ಫಿಕ್ಸ್ ಆಗಿದ್ದರು. ನಾನು ಜಸ್ಟ್ ಈಗ ಬಂದಿದ್ದೀನಿ. ಬೇರೆಯವರನ್ನು ಬೇಗ ಬಿಟ್ಟುಕೊಡುತ್ತಿರಲಿಲ್ಲ. ನಾನು ಸುಲಭವಾಗಿ ಟಾರ್ಗೆಟ್ ಆದೆ ಅನ್ನಿಸುತ್ತದೆ. ಅಷ್ಟು ಚೆನ್ನಾಗಿ ಓಪನ್ ಅಪ್ ಆಗಲಿಲ್ಲ ಎಂದಿದ್ದಾರೆ.

Vijaya Karnataka Web 9 Dec 2019, 12:35 pm
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಕ್ಷಾ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ತಮ್ಮ 13 ದಿನಗಳ ಪಯಣ ಮುಗಿಸಿದ್ದಾರೆ. ಬಿಗ್ ಬಾಸ್ ಮನೆಗೆ ಕಿಶನ್ ಅವರ ಮಾಜಿ ಲವರ್ ಎಂಬಂತೆ ಸೀಕ್ರೆಟ್ ಟಾಸ್ಕ್ ಮೂಲಕ ಎಂಟ್ರಿಕೊಟ್ಟಿದ್ದ ರಕ್ಷಾ ತಮ್ಮ ಜರ್ನಿ ಮುಗಿಸಿದ್ದಾರೆ.
Vijaya Karnataka Web ರಕ್ಷಾ ಸೋಮಶೇಖರ್


ಈ ಬಾರಿ ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದರು. ಕ್ಯಾಪ್ಟನ್ ಆಗಿದ್ದ ರಾಜು ತಾಳಿಕೋಟೆ ಹೊರತುಪಡಿಸಿ ಉಳಿದೆಲ್ಲರೂ ನಾಮಿನೇಟ್ ಆಗಿದ್ದು ಕೊನೆಗೆ ಚೈತ್ರಾ ಕೋಟೂರ್ ಹಾಗೂ ರಕ್ಷಾ ನಡುವೆ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಬರುತ್ತಾರೆ ಎಂದು ಹೇಳಿ ಕೊನೆಗೆ ರಕ್ಷಾ ಹೆಸರನ್ನು ಪ್ರಸ್ತಾಪಿಸಿದರು.

ಮನೆಯ ಬಹುತೇಕ ಸದಸ್ಯರಿಗೆ ಚೈತ್ರಾ ಕೋಟೂರ್ ಮನೆಯಲ್ಲಿ ಇರೋದು ಇಷ್ಟವಿಲ್ಲ ಎಂಬುದು ಈ ವಾರ ಗೊತ್ತಾಗಿದೆ. ಬಹುತೇಕ ಎಲ್ಲರೂ ಚೈತ್ರಾ ಅವರನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ಬಯಸಿದರು.

ರಕ್ಷಾ ಅವರು ಮನೆಯಿಂದ ಹೊರಬರಬೇಕಾದರೆ ಚಂದನ್ ಆಚಾರ್‌ರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಮನೆಯಿಂದ ಹೊರಬಂದ ಬಳಿಕ ಬಹುಶಃ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನಾನು ಎಂಟ್ರಿ ಕೊಟ್ಟ ಕಾರಣ ಮನೆಯ ಸದಸ್ಯರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲವೇನೋ ಎಂದಿದ್ದಾರೆ.

ಬಿಗ್‌ ಬಾಸ್‌ನಲ್ಲಿ ವಾಸುಕಿ ವೈಭವ್ ಹಾಡನ್ನು ಹಾಡಲು ಸುದೀಪ್‌ಗೆ ಹೆಚ್ಚು ನೆರವಾದವರು ಇವರೇ ನೋಡಿ

ಮನೆಯಲ್ಲಿ ಎಲ್ಲರ ಜೊತೆಗೆ ಇದ್ದರೂ ಒಂಟಿಯಾಗಿದ್ದೆ. ಒಂದು ರೀತಿ ಅತ್ತಿದ್ದೀನಿ, ಡ್ಯಾನ್ಸ್ ಮಾಡಿದ್ದೀನಿ, ಜೈಲ್ ನಲ್ಲಿದ್ದೆ, ಹಾಡಿದ್ದೀನಿ ಈ ರೀತಿ ಎಲ್ಲಾ ರೀತಿಯ ಅನುಭವಗಳು ನನಗಾದವು ಎಂದಿದ್ದಾರೆ.

ಮನೆಯಲ್ಲಿ ಎಲ್ಲರೂ ಮೈಂಡಲ್ಲಿ ಫಿಕ್ಸ್ ಆಗಿದ್ದರು. ನಾನು ಜಸ್ಟ್ ಈಗ ಬಂದಿದ್ದೀನಿ. ಬೇರೆಯವರನ್ನು ಬೇಗ ಬಿಟ್ಟುಕೊಡುತ್ತಿರಲಿಲ್ಲ. ನಾನು ಸುಲಭವಾಗಿ ಟಾರ್ಗೆಟ್ ಆದೆ ಅನ್ನಿಸುತ್ತದೆ. ಅಷ್ಟು ಚೆನ್ನಾಗಿ ಓಪನ್ ಅಪ್ ಆಗಲಿಲ್ಲ ಎಂದಿದ್ದಾರೆ.

ಸತತ ಮೂರು ವಾರಗಳಿಂದ ಸುದೀಪ್ ಚಪ್ಪಾಳೆ ಯಾರಿಗೆ ಗೊತ್ತಾ?

ಮನೆಯಲ್ಲಿ ಅಡುಗೆ ಮಾಡುವುದು ಇಷ್ಟವಾಯಿತು. ವಾಸುಕಿ ಮತ್ತು ಕಿಶನ್ ನನಗೆ ಇಷ್ಟವಾದರು. ಚೈತ್ರಾ ಕೋಟೂರ್ ನನಗೆ ಇಷ್ಟವಾಗಲಿಲ್ಲ. ಮನೆಯಲ್ಲಿದ್ದಾಗ ಒಟ್ಟಿಗೆ ಇದ್ರೂನೂ ಒಂಟಿಯಾಗಿದ್ದೇನೆ ಎಂಬ ಭಾವ ಕಾಡುತ್ತಿತ್ತು ಎಂದಿದ್ದಾರೆ ರಕ್ಷಾ.

ಮುಂದಿನ ವಾರಗಳು ಇನ್ನಷ್ಟು ಕಠಿಣವಾಗಿರುತ್ತವೆ. ನೀವು ಮಾಡುವ ಸಣ್ಣ ತಪ್ಪು ನಿಮ್ಮನ್ನು ಮನೆಯ ನೀಲಿ ಬಣ್ಣದ ಗೇಟ್ ಬಳಿ ಬಂದು ನಿಲ್ಲಿಸುತ್ತದೆ ಎಂಬ ಎಚ್ಚರಿಕೆಯನ್ನೂ ಸುದೀಪ್ ಈ ಸಲ ಮನೆಯ ಸದಸ್ಯರಿಗೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ