ಆ್ಯಪ್ನಗರ

ಬಿಗ್‌ ಬಾಸ್‌ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ರವಿ ಬೆಳಗೆರೆ! ಕಾರಣವೇನು ಗೊತ್ತಾ?

ಮೊದಲ ದಿನವೇ ಬಿಗ್‌ ಬಾಸ್ ಮನೆಯಿಂದ ಹೊರಬಂದಿದ್ದಕ್ಕಾಗಿ ಸಖತ್ ಸುದ್ದಿಯಾಗಿದ್ದ ಪತ್ರಕರ್ತ ರವಿ ಬೆಳಗೆರೆ, ಈಗ ಮನೆಯೊಳಗೆ ಬಿಕ್ಕಿ ಬಿಕ್ಕಿ ಅತ್ತಿದ್ಧಾರೆ. ಅವರು ಆ ರೀತಿ ಅತ್ತಿದ್ದಕ್ಕೂ ಕಾರಣವಿದೆ!

Vijaya Karnataka Web 17 Oct 2019, 1:42 pm
'ಬಿಗ್‌ ಬಾಸ್‌' ರಿಯಾಲಿಟಿ ಶೋ ದಿನಕಳೆದಂತೆ ರೋಚಕತೆ ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳು ಅಸಲಿ ಮುಖ ನಿಧಾನಕ್ಕೆ ಪರಿಚಯಗೊಳ್ಳುತ್ತಿದೆ. ಇನ್ನು, ರವಿ ಬೆಳಗೆರೆ ಶೋನ ಹೈಲೈಟ್ ಆಗಿದ್ದಾರೆ. ಮೊದಲ ದಿನವೇ ಅವರು ಶೋನಿಂದ ಹೊರಬಿದ್ದರು ಎಂಬ ಸುದ್ದಿ ಸದ್ದು ಮಾಡಿತ್ತು. ಅನಾರೋಗ್ಯದಿಂದಾಗಿ ಅವರು ಮನೆಯಿಂದ ಹೊರಬಂದಿದ್ದರು. ಇದೀಗ ಅವರು ಮನೆಯೊಳಗೇ ಇದ್ದಾರೆ. ಆದರೆ, ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ!!
Vijaya Karnataka Web ravi belagere

ಬಿಗ್ ಬಾಸ್ ಮನೆಗೆ ರವಿ ಬೆಳಗೆರೆ ರೀ ಎಂಟ್ರಿ; ನಡೆದಿದ್ದೇ ಒಂದು, ಸುದ್ದಿಯಾಗಿದ್ದು ಇನ್ನೊಂದು
ಮನೆಯೊಳಗೆ ಹಿರಿಯಣ್ಣನಂತಿರುವ ರವಿ ಬೆಳಗೆರೆ ಎಲ್ಲ ಸ್ಪರ್ಧಿಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಕಣ್ಣೀರು ಹಾಕುವುದಕ್ಕೆ ಕಾರಣ, ಅಮ್ಮ! ಹೌದು, ತಮ್ಮ ತಾಯಿಯನ್ನು ನೆನೆದು ಮನೆಯೊಳಗೆ ಅವರು ಕಣ್ಣೀರು ಹಾಕಿದ್ದಾರೆ. 'ನಮ್ಮ ಅಮ್ಮ ಇಲ್ಲ ಕಣ್ರೀ.. ಒಂದು ದಿವಸಕ್ಕಾದ್ರು ಅವಳು ಬಂದು ನೋಡಿದ್ರೆ ಸಾಕಿತ್ತು..' ಎಂದು ಹೇಳುತ್ತಲೇ ರವಿ ಕಣ್ಣೀರಾಗಿದ್ದಾರೆ. ಅವರ ಸಂಕಟವನ್ನು ಕಂಡ ಉಳಿದ ಸ್ಪರ್ಧಿಗಳ ಕಣ್ಣಂಚಲ್ಲೂ ನೀರು ತುಂಬಿಕೊಂಡಿತ್ತು.
ಅಂದಹಾಗೆ, ಈ ಎಪಿಸೋಡ್ ಇಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ರವಿ ಜತೆಗೆ ಇತರೆ ಸ್ಪರ್ಧಿಗಳಾದ ಚಂದನಾ, ಕಿಶನ್‌ ಕೂಡ ಅವರ ತಾಯಂದಿರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇನ್ನು, ಈ ವಾರ ಕುರಿ ಪ್ರತಾಪ್, ಗುರುಲಿಂಗ ಸ್ವಾಮೀಜಿ, ರಾಜು ತಾಳಿಕೋಟೆ, ಚೈತ್ರಾ ವಾಸುದೇವನ್, ಚೈತ್ರಾ ಕೊಟ್ಟೂರ್ ನಾಮಿನೇಷನ್ ಆಗಿದ್ದಾರೆ. ಇದರ ಜತೆಗೆ ರವಿ ಬೆಳಗೆರೆ ಅವರನ್ನು ಬಿಗ್‌ ಬಾಸ್ ಮನೆಯ ಅತಿಥಿ ಎಂದು ಪರಗಣಿಸಲಾಗಿದೆ. ಯಾಕೆಂದರೆ, ಅವರು ಒಂದು ಬಾರಿ ಮನೆಯಿಂದ ಹೊರಗೆ ಹೋಗಿ ಬಂದಿದ್ದರಿಂದ ಅವರನ್ನು ಸ್ಪರ್ಧಿ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ